ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಮತ್ತು ಕರ್ನಾಟಕ ಭೀಮ ರಕ್ಷಕ ಸಂಘಟನೆ..
ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಮತ್ತು ಕರ್ನಾಟಕ ಭೀಮ ರಕ್ಷಕ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ರಾಜಾ ಲಖಮಗೌಡ ಜಲಾಶಯದಿಂದ ಹುಬ್ಬಳ್ಳಿ – ಧಾರವಾಡ ನಗರಗಳಿಗೆ ಕೈಗಾರಿಕಾ ಉದ್ಯಮಕ್ಕೆ ನೀರು ಒಯ್ಯುವ ಪ್ರಕ್ರಿಯೆಯನ್ನು ಬಂದ ಮಾಡಬೇಕು ಎಂದು ಹಿಡಕಲ ಡ್ಯಾಂ ನಲ್ಲಿ ನಿರಂತರ ಹೋರಾಟ ನಿಲ್ಲದು ಎಂದು ಹೋರಾಟ ಮುಂದುವರೇಸೀದರು ಮತ್ತು ಈ ಜಲಾಶಯ ನೀರು ಇಲ್ಲಿನ ಸಾರ್ವಜನಿಕರಿಗೆ ಕುಡಿಯಲು , ದನಕರುಗಳಿಗೆ ಮತ್ತು ಕೃಷಿ ಭೂಮಿಗಳಿಗೆ ನೀರು ಸಮರ್ಪವಾಗಿ ದೊರಕುತ್ತಿಲ್ಲ ಹಿಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇಲ್ಲಿನ ಜನತೆಯ ಬಗ್ಗೆ ವಿಚಾರ ಬಿಟ್ಟು ಬೇರೆ ಜಿಲ್ಲೆಗೆ ನೀರು ಪೂರೈಸುವದು ಎಷ್ಟರಮಟ್ಟಿಗೆ ಸೂಕ್ತ, ಮತ್ತು ನಮ್ಮ ಬೆಳಗಾವಿ ಜಿಲ್ಲೆ ರೈತರು , ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಮಗೆ ಆಪತ್ತು ತಪ್ಪಿದ್ದಲ್ಲ ಮತ್ತು ಈ ಯೋಜನೆ ಪೂರ್ಣಗೊಂಡಲ್ಲಿ ಜಲಾಶಯದಲ್ಲಿ ನೀರು ಹೆಚ್ಚು ಕಡಿಮೆ 3 ತಿಂಗಳು ಮಾತ್ರ ಇರಬಹುದು ನಂತರ ಜಲಾಶಯ ಬತ್ತಿ ಹೋಗುವದು ನಿಶ್ಚಿತ ಅವಾಗ ನೀರಿಗಾಗಿ ಹಾಹಾಕಾರ ಉದ್ಭವವಾಗುವದು ಈ ಪರಿಸ್ಥಿತಿ ಅನುಭವಸುದಕ್ಕಿಂತ ನಾವೆಲ್ಲರೂ ಈವಾಗ್ಲೇ ಹೋರಾಟ ಮಾಡದಿದ್ದರೆ ಬರುವ ದಿನಮಾಣಗಳಲ್ಲಿ ಸಾಕಷ್ಟು ತೊಂದರೆಗೊಳಾಗುವ ಸಾಧ್ಯತೆ ಇದೆ ಎಂದು ಎಲ್ಲ ಮುಖಂಡರು ಹೇಳಿದರು.

