ಬೆಂಗಳೂರಿನ ಹೃದಯವಿದ್ರಾವಕ ಘಟನೆ: ವೃದ್ಧ ದಂಪತಿಗಳ ಸಾವಿನ ಕರಾಳ ಸತ್ಯ ಮತ್ತು ನಾವು ಕಲಿಯಬೇಕಾದ ಪಾಠಗಳು…
ಬೆಂಗಳೂರಿನ ಹೃದಯವಿದ್ರಾವಕ ಘಟನೆ: ವೃದ್ಧ ದಂಪತಿಗಳ ಸಾವಿನ ಕರಾಳ ಸತ್ಯ ಮತ್ತು ನಾವು ಕಲಿಯಬೇಕಾದ ಪಾಠಗಳು… ಜೀವನದ ಸಂಧ್ಯಾಕಾಲ ಎನ್ನುವುದು ಸುದೀರ್ಘ ಪಯಣದ ಬಳಿಕ ದಕ್ಕುವ ವಿಶ್ರಾಂತಿ ತಾಣವಾಗಬೇಕು. ಸವೆಸಿದ ಹಾದಿಯ ಸುಂದರ ನೆನಪುಗಳು ಮತ್ತು ಪ್ರೀತಿಪಾತ್ರರ ಸಾಂಗತ್ಯದಲ್ಲಿ ನೆಮ್ಮದಿಯ ಉಸಿರು ಬಿಡಬೇಕಾದ ವಯಸ್ಸದು. ಆದರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಘಂಟಾನಾದದಂತೆ ಕೇಳಿಸುತ್ತಿದೆ. ಇದು ಕೇವಲ ಒಂದು ಕ್ರೈಂ ಸುದ್ದಿಯಲ್ಲ; ಬದಲಾಗಿ ನಮ್ಮ ಕಣ್ಣಮುಂದೆಯೇ ಕಮರಿಹೋಗುತ್ತಿರುವ ಮಾನವೀಯ ಸಂಬಂಧಗಳ ಮತ್ತು ವೃದ್ಧಾಪ್ಯದ ಅಸಹಾಯಕತೆಯ ಕರಾಳ ಮುಖದ ಅನಾವರಣ. ಈ ದುರಂತಕ್ಕೆ ಬಲಿಯಾದವರು ಬಿಹಾರ ಮೂಲದ ಸುಮಿತ್ರಾ ಪ್ರಸಾದ್ (77) ಹಾಗೂ ಶಿವಾನಂದಂ ಪ್ರಸಾದ್ (83). ಇವರಿಬ್ಬರೂ ವಯೋಸಹಜವಾಗಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸುಮಿತ್ರಾ ಪ್ರಸಾದ್ ಅವರಿಗೆ ಕಣ್ಣಿನ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿದ್ದವು. ಒಬ್ಬ ಮನುಷ್ಯನಿಗೆ…
ಮುಂದೆ ಓದಿ..
