ಮಾನವೀಯತೆ ಮರೆತ ಮಗ: ಬೆಳಗಾವಿಯ ಈ ಘಟನೆ ನಮಗೆ ಕಲಿಸುವ ಪಾಠಗಳೇನು?…
ಮಾನವೀಯತೆ ಮರೆತ ಮಗ: ಬೆಳಗಾವಿಯ ಈ ಘಟನೆ ನಮಗೆ ಕಲಿಸುವ ಪಾಠಗಳೇನು?… ಭಾರತೀಯ ಸಂಸ್ಕೃತಿಯಲ್ಲಿ ಹೆತ್ತ ತಾಯಿಗೆ ದೈವದ ಸ್ಥಾನವಿದೆ; ಅವಳು ಮಮತೆಯ ಒರತೆ, ಸಹನೆಯ ಸಾಕಾರ ಮೂರ್ತಿ. ತಾಯಿ ಮತ್ತು ಮಗನ ನಡುವಿನ ಪವಿತ್ರ ಸಂಬಂಧವನ್ನು ನಿಸ್ವಾರ್ಥ ಪ್ರೇಮಕ್ಕೆ ಅತ್ಯುತ್ತಮ ಉದಾಹರಣೆ ಎಂದು ನಾವು ಬಿಂಬಿಸುತ್ತೇವೆ. ಆದರೆ, ಇಂದು ನಾವು ಕಾಣುತ್ತಿರುವ ಸಮಾಜವು ಭೌತಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ, ನೈತಿಕವಾಗಿ ಅಧಃಪತನದತ್ತ ಸಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ನಡೆದ ಇತ್ತೀಚಿನ ಘಟನೆಯು ನೈತಿಕ ಅದಃಪತನದ ತುತ್ತತುದಿಯನ್ನು ತಲುಪಿದ್ದು, ನೈತಿಕ ಪ್ರಜ್ಞೆಯುಳ್ಳ ಯಾರನ್ನಾದರೂ ನಡುಗಿಸುವಂತಿದೆ. ಈ ಘಟನೆಯ ಹಿನ್ನೆಲೆಯು ಕ್ರೌರ್ಯದ ಪರಾಕಾಷ್ಠೆಯನ್ನು ಬಿಂಬಿಸುತ್ತದೆ. ರಾಮದುರ್ಗ ತಾಲೂಕಿನ ಸಾಲೊಳ್ಳಿ ಗ್ರಾಮದ ಕಮಲಮ್ಮ ಕಟ್ಟಿ ಎಂಬ ವೃದ್ಧೆ, ತಾನು ಹೆತ್ತು ಹೊತ್ತು ಬೆಳೆಸಿದ ಮಗನಿಂದಲೇ ಅನ್ಯಾಯಕ್ಕೊಳಗಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯನ್ನು ಆಕೆಯ ಪುತ್ರ ಸಂತೋಷ್…
ಮುಂದೆ ಓದಿ..
