ಮೆಟ್ರೋ ವಿಳಂಬಕ್ಕೆ ಭ್ರಷ್ಟಾಚಾರವೇ ಕಾರಣ: ಜೀವನ್ ಎಲ್
Taluknewsmedia.comನಗರದಲ್ಲಿ ಮೆಟ್ರೋ ಯೋಜನೆಗಳು ನಿರಂತರವಾಗಿ ವಿಳಂಬಕ್ಕೆ ಒಳಗಾಗುತ್ತಿದ್ದು, ಅದರ ಹಿಂದಿನ ಕಾರಣ ಭ್ರಷ್ಟಾಚಾರ ಮತ್ತು ಅಕ್ರಮಗಳೇ ಎಂದು ಜೀವನ್ ಎಲ್. ಆರೋಪಿಸಿದ್ದಾರೆ. ಅವರು ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಪಶ್ಚಿಮ ಜಿಲ್ಲೆಯ ಉಸ್ತುವಾರಿ ಹುದ್ದೆ ವಹಿಸಿಕೊಂಡಿದ್ದಾರೆ.ಇತ್ತೀಚೆಗೆ ಬಿಎಂಪಿಆರ್ಸಿಎಲ್ (BMRCL) ಹಳದಿ ಮಾರ್ಗದ ಕಾರ್ಯಾರಂಭವನ್ನು ಆಗಸ್ಟ್ನಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದ್ದು, ಅದೂ ಕೂಡ ಪದೇ ಪದೇ ಮುಂದೂಡುತ್ತಲೇ ಬಂದಿದೆ. ಈ ಹಂತದ ವಿಳಂಬ ಕೇವಲ ಹೊಸ ಮಾರ್ಗಗಳಿಗೆ ಮಾತ್ರವಲ್ಲದೆ, ಇತಿಹಾಸದಲ್ಲಿಯೆ ಎಲ್ಲ ಮಾರ್ಗಗಳಿಗೂ ಅನ್ವಯಿಸುತ್ತದೆ.“ಮೆಟ್ರೋ ಕಾಮಗಾರಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ಹಾಗೂ ಅಕ್ರಮಗಳು ವ್ಯಾಪಕವಾಗಿ ನಡೆದಿವೆ. ಇವುಗಳನ್ನು ತಡೆದಿಲ್ಲದಿದ್ದರೆ, ಮತ್ತಷ್ಟು ವರ್ಷಗಳ ಕಾಲ ಈ ದುಃಸ್ಥಿತಿ ಮುಂದುವರೆಯಲಿದೆ,” ಎಂದು ಅವರು ಹೇಳಿದರು.ಜೀವನ್ ಎಲ್. ಆರೋಪಿಸಿದ್ದೇನೆಂದರೆ, ಸರ್ಕಾರ ಹಾಗೂ ವಿರೋಧ ಪಕ್ಷ ಕ್ಷುಲ್ಲುಕ ರಾಜಕಾರಣದಲ್ಲಿ ತೊಡಗಿಕೊಂಡಿದ್ದು, ನಿಜವಾದ ಸಮಸ್ಯೆಗಳತ್ತ ಮುಖಮಾಡುತ್ತಿಲ್ಲ. ಬಿಎಂಪಿಆರ್ಸಿಎಲ್ ಈಗವರೆಗೆ ಯಾವುದೇ ಕಾಮಗಾರಿಯನ್ನು ಘೋಷಿತ ಸಮಯಕ್ಕೆ ಮುಕ್ತಾಯಗೊಳಿಸಿಲ್ಲ. ಪ್ರಸ್ತುತ…
ಮುಂದೆ ಓದಿ..