ಕೊಡಿಗೇಹಳ್ಳಿಯಿಂದ ನಾಪತ್ತೆಯಾಗಿರುವ ವ್ಯಕ್ತಿಯ ಹುಡುಕಾಟಕ್ಕೆ ಕುಟುಂಬದಿಂದ ಮನವಿ
ಬೆಂಗಳೂರು, ಜುಲೈ 21 – 2025
ಕುಟುಂಬದ ಸದಸ್ಯರ ಪ್ರಕಾರ, ಕೊಡಿಗೇಹಳ್ಳಿಯಲ್ಲಿ ವಾಸವಾಗಿದ್ದ 39 ವರ್ಷದ ನಾಗರಾಜ್ ಎಂಬವರು ಕಳೆದ ಜುಲೈ 17 ರಂದು ರಾತ್ರಿ 10 ಗಂಟೆ ಸಮಯದಲ್ಲಿ ಮನೆಬಿಟ್ಟು ಹೊರಟ್ಟಿದ ನಂತರ ಮರಳಿ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ದೊಡ್ಡಪ್ಪ ಕೊಡುಗೆಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಅರುಣ್ ಕುಮಾರ್ ಅವರ ಪ್ರಕಾರ, ನಾಗರಾಜ್ ತಮ್ಮ ಮಗ ವರುಣ್ ರಾಜ್ (17 ವರ್ಷ) ಜೊತೆ ಕಳೆದ ಒಂದು ವರ್ಷದಿಂದ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಗೌರಿ ಅವರು ಮಗಳು ಗಾಯತ್ರಿಯೊಂದಿಗೆ ಕಳೆದ ಮೂರು ತಿಂಗಳಿಂದ ಬೊಮ್ಮನಹಳ್ಳಿಯಲ್ಲಿರುವ ತಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದರು. ಈ ಮಧ್ಯೆ, ಕುಟುಂಬದಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು.
ದಿನಾಂಕ ಜುಲೈ 18 ರಂದು, ವರುಣ್ ರಾಜ್ ತಮ್ಮ ದೊಡ್ಡಪ್ಪನಿಗೆ ಫೋನ್ ಮಾಡಿ, “ಅಪ್ಪ, ನಿನ್ನೆ ರಾತ್ರಿ ಫೋನ್ ನಲಿ ಮಾತನಾಡಿಕೊಂಡು ಹೊರಟ್ಟಿದ ನಂತರ ವಾಪಸ್ಸು ಬಂದಿಲ್ಲ, ಫೋನ್ ಕೂಡ ಸ್ವಿಚ್ ಆಫ್ ಆಗಿದೆ,” ಎಂದು ತಿಳಿಸಿದ್ದಾರೆ. ಸಂಬಂಧಿಕರು ಎಲ್ಲಾ ಕಡೆ ಹುಡುಕಿದರೂ ಅವರು ಪತ್ತೆಯಾಗಿಲ್ಲ.
ನಾಪತ್ತೆಯಾದ ವ್ಯಕ್ತಿಯ ವೈಶಿಷ್ಟ್ಯಗಳು:
ಎತ್ತರ: 5.5 ಅಡಿ
ಮೈಬಣ್ಣ: ಕಪ್ಪು
ಮುಖ: ಕೋಲು ಮುಖ
ಶರೀರ: ಸಾಧಾರಣ ಮೈಕಟ್ಟು
ಭಾಷಾ ಪ್ರಾಬಲ್ಯ: ಕನ್ನಡ, ಹಿಂದಿ, ತೆಲುಗು, ತಮಿಳು
ಬಟ್ಟೆ: ನೀಲಿ ಜೀನ್ಸ್ ಪ್ಯಾಂಟ್, ಬಿಳಿ ಶರ್ಟ್, ಬ್ರೌನ್ ಜರ್ಕಿನ್
ಯಾರಾದರೂ ನಾಗರಾಜ್ ಕುರಿತು ಯಾವುದೇ ಮಾಹಿತಿ ಹೊಂದಿದ್ದರೆ, ದಯವಿಟ್ಟು ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 8277274446 ಈ ಸಂಖ್ಯೆಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

