ಸುದ್ದಿ 

ಪಾನಿಪುರಿ ಅಂಗಡಿಯ ಬಳಿ ಯುವಕನಿಗೆ ಮಾರಣಾಂತಿಕ ಹಲ್ಲೆ: ಜಮೀನಿನ ವೈಷಮ್ಯವೇ ಕಾರಣ

Taluknewsmedia.com

ಬೆಂಗಳೂರು, ಜುಲೈ 29:2025
ನಗರದ ಬಾಗಲೂರು ಕಾಲೋನಿಯಲ್ಲಿ ಜಮೀನಿನ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ಮೂವರು ವಿರುದ್ಧ ಬಾಗಲೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಶಿವಕುಮಾರ್ ಅವರು ಮತ್ತು ಅವರ ಸ್ನೇಹಿತರು ಜುಲೈ 26 ರಂದು ಸಂಜೆ 7:45ರ ಸಮಯದಲ್ಲಿ ಬಾಗಲೂರು ಕಾಲೋನಿಯ ಪಾನಿಪುರಿ ಅಂಗಡಿಯಲ್ಲಿ ನಿಂತು ತಿಂಡಿಗೆ ತೊಡಗಿದ್ದಾಗ, ಮುನಿಕೃಷ್ಣ, ವೆಂಕಟೇಶ್ ಮತ್ತು ಮತ್ತೊಬ್ಬ ಆರೋಪಿಯು ಹಿಂಭಾಗದಿಂದ ಬಂದು ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿಂದ ತಲೆ ಮತ್ತು ಕೈಕಾಲಿಗೆ ಬಾರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಸ್ಥಳೀಯ ಧನಂಜಯ ಎಂಬುವವರು ತಕ್ಷಣ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೆಚ್ಚಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗಳ ತೀವ್ರತೆ ಹೆಚ್ಚಿದ್ದರಿಂದ ಅವರು ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಮನೆಗೆ ಮರಳಿದ್ದಾರೆ.

ಘಟನೆಯ ಮುಂದುವರಿದ ಭಾಗವಾಗಿ, ಇದೇ ದಿನದ ಬೆಳಗ್ಗೆ ಯುವಕನ ತಮ್ಮ ಕಿರಣ್ ಕುಮಾರ್ ಮತ್ತು ಸಂಬಂಧಿಕರು ಆರೋಪಿಗಳ ಬಳಿ ಸಮಾಧಾನ ಕೇಳಲು ಹೋದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ಮಾತನಾಡಿ ಪ್ರಾಣಹಾನಿಯ ಬೆದರಿಕೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲೂರು ಪೊಲೀಸರು ಐಪಿಸಿ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Related posts