ಸುದ್ದಿ 

ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ: ಹೆತ್ತ ತಾಯಿಯನ್ನೇ ಕತ್ತು ಸಿಳ್ಳಿದ ಪಾಪಿ ಮಗ!ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ

Taluknewsmedia.com

ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ: ಹೆತ್ತ ತಾಯಿಯನ್ನೇ ಕತ್ತು ಸಿಳ್ಳಿದ ಪಾಪಿ ಮಗ!

ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದ ಈ ಘಟನೆ ಮಾನವೀಯತೆಯ ಮಿತಿಯನ್ನು ಮೀರಿ ಸಮಾಜವನ್ನು ಬೆಚ್ಚಿಬೀಳಿಸಿದೆ. ಕುಡಿತದ ವ್ಯಸನದಲ್ಲಿದ್ದ ವೆಂಕಟೇಶ ಎಂಬ ಕಿರಾತಕ ಮಗ, ಕ್ಷುಲ್ಲಕ ಕಾರಣಕ್ಕಾಗಿ ತನ್ನ ತಾಯಿಯ ಜೀವವನ್ನೇ ಕಸಿದುಕೊಂಡಿದ್ದಾನೆ.

ಮಾಹಿತಿಯ ಪ್ರಕಾರ, ಕುಡಿದ ಮತ್ತಲ್ಲೇ ತಾಯಿ ಶ್ಯಾವಕ್ಕ (58) ಅವರನ್ನು ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುಳಿದು, ನಂತರ ಕತ್ತು ಸಿಳ್ಳಿ ಕೊಲೆಗೈದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಶ್ಯಾವಕ್ಕ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ತಾಯಿ ಹಣ ಕೊಡಲಿಲ್ಲ ಎನ್ನುವುದೇ ಈ ಹೀನ ಕೃತ್ಯದ ಹಿನ್ನೆಲೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಾಗ ಕುಡಿತದ ವಿಷಯಕ್ಕೆ ತಾಯಿ–ಮಗನ ನಡುವೆ ಜಗಳಗಳು ನಡೆಯುತ್ತಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.

ಘಟನೆಯ ಬಳಿಕ ಪಾಪಿ ಮಗ ವೆಂಕಟೇಶ ಪರಾರಿಯಾಗಿದ್ದಾನೆ. ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

👉 ಮೃತರು: ಶ್ಯಾವಕ್ಕ (58)
👉 ಆರೋಪಿ: ವೆಂಕಟೇಶ (ಮಗ)
👉 ಸ್ಥಳ: ತುಳಸಿಗೇರಿ ಗ್ರಾಮ, ಬಾಗಲಕೋಟೆ ತಾಲೂಕು
👉 ಪರಿಸ್ಥಿತಿ: ಹಣ ಮತ್ತು ಕುಡಿತದ ವಿಚಾರದಲ್ಲಿ ನಡೆದ ತಾಯಿ–ಮಗ ಕಲಹ ಕೊಲೆಯಾಗಿ ಬದಲಾಯಿತು

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related posts