ಸುದ್ದಿ 

ಬಾಗಲಕೋಟೆಯಿಂದ ಹೊರ ನಡೀರಿ – ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ DC ಆದೇಶ!

Taluknewsmedia.com

ಬಾಗಲಕೋಟೆಯಿಂದ ಹೊರ ನಡೀರಿ – ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ DC ಆದೇಶ!

ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ, ಅಶ್ಲೀಲ ಹಾಗೂ ವಿಭಜನೆ ಉಂಟುಮಾಡುವ ಭಾಷೆ ಬಳಕೆ ಆರೋಪದ ಹಿನ್ನೆಲೆಯಲ್ಲಿ ವಿವಾದಕ್ಕೆ ಒಳಗಾದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯ ವಿರುದ್ಧ ಮತ್ತೊಮ್ಮೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಈಗಾಗಲೇ ವಿಜಯಪುರ ಜಿಲ್ಲೆಗೆ 2 ತಿಂಗಳ ಕಾಲ ಪ್ರವೇಶ ನಿಷೇಧ ವಿಧಿಸಿದ್ದ ಆಡಳಿತ, ಇದೀಗ ಬಾಗಲಕೋಟೆ ಜಿಲ್ಲೆಯ ಸೀಮೆಯಿಂದ ಕೂಡ ಸ್ವಾಮೀಜಿಯನ್ನು ತೆರಳುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಕೇವಲ ಒಂದು ಗಂಟೆಯೊಳಗೆ ಮಠವನ್ನು ಖಾಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಡಿವೈಎಸ್‌ಪಿ ಗಜಾನನ ಸುತಾರ ಹಾಗೂ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರು ಸ್ವಾಮೀಜಿಗೆ ಅಧಿಕೃತ ನೋಟಿಸ್ ಹಸ್ತಾಂತರಿಸಿದ್ದಾರೆ.

ವಿಜಯಪುರ ಪ್ರವೇಶಕ್ಕೆ ನಿರ್ಬಂಧ ಹಿನ್ನಲೆಯಲ್ಲಿ ಸ್ವಾಮೀಜಿ ಈಗ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿಯ ಕನೇರಿ ಶಾಖಾ ಮಠದಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಆಡಳಿತದ ನೋಟಿಸ್ ಸ್ವೀಕರಿಸಿದ ಸ್ವಾಮೀಜಿ ಕೋಪೋದ್ರಿಕ್ತರಾಗಿದ್ದು ..

“ನಾನು ಹೋಗುವುದಿಲ್ಲ! ಬಂಧಿಸುವಂತಿದ್ದರೆ ಬಂಧಿಸಿ, ಜೈಲಿನಲ್ಲಿಟ್ಟುಕೊಳ್ಳಿ. ನನ್ನ ಧರ್ಮದ ವಿಷಯದಲ್ಲಿ ನನ್ನ ಧ್ವನಿ ನಿಲ್ಲುವುದಿಲ್ಲ. ಪರಿಣಾಮಗಳಿಗೆ ನೀವು ಜವಾಬ್ದಾರರು,” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸ್ಥಳದಲ್ಲಿ ಪೊಲೀಸರು ಮತ್ತು ಜಿಲ್ಲಾ ಆಡಳಿತ ಕಚೇರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾ ವಹಿಸಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಆಡಳಿತವು ಶಾಂತಿ ಭದ್ರತೆ ಕದಡುವ ಯಾವುದೇ ಚಟುವಟಿಕೆಗೆ ಶೂನ್ಯ ಸಹನೆ ನೀತಿಯನ್ನು ಅನುಸರಿಸಲು ತೀರ್ಮಾನಿಸಿದೆ.

Related posts