ಹುಬ್ಬಳ್ಳಿಯಲ್ಲಿ ಯುವಕನಿಂದ ಗಾಂಜಾ ಸೇವನೆ.
ಸಾರ್ವಜನಿಕ ಸ್ಥಳದಲ್ಲಿ ಕೃತ್ಯಹುಬ್ಬಳ್ಳಿ, ಜೂನ್ 17:
ನಗರದ ನವನಗರದಲ್ಲಿರುವ ಕೆ.ಎಸ್.ಎಲ್.ಯು ರಸ್ತೆಯ ಹತ್ತಿರ ಇಂದು ಬೆಳಿಗ್ಗೆ ಸುಮಾರು 10:40ರ ಹೊತ್ತಿಗೆ ನಡೆದ ಘಟನೆದಲ್ಲಿ 19 ವರ್ಷದ ಯುವಕನೊಬ್ಬನು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವೇಳೆ ಹಿಡಿದಿಟ್ಟುಕೊಳ್ಳಲಾಗಿದೆ.ಆರೋಪಿತನನ್ನು ವಿನಾಯಕ ಜಗದೀಶ ಹಿರೇಮಠ ಎಂದು ಗುರುತಿಸಲಾಗಿದ್ದು, ಉಣಕಲ್ ಕ್ರಾಸ್, ದಾನಮ್ಮನ ಗುಡಿ ಹತ್ತಿರವಿರುವ ಸಂಜೀವಿನಿ ಪಾನ ಶಾಪ್ ಹತ್ತಿರ ಗ್ಯಾರೇಜಿನಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾನೆ.
ಈತನಿಂದ ಗಾಂಜಾ ಎಂಬ ನಿಷೇಧಿತ ಮಾದಕ ವಸ್ತು ಪತ್ತೆಯಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

