ಸುದ್ದಿ 

ಹೊಸ ಬಿಸಿನೆಸ್ ಹೆಸರಲ್ಲಿ 47 ಲಕ್ಷ ರೂ. ಹಣಕ್ಕಾಗಿ ಮೋಸ – ವ್ಯಕ್ತಿಯಿಂದ ಮೂರು ಮಂದಿ ವಿರುದ್ಧ ಪೊಲೀಸ್ ದೂರು

Taluknewsmedia.com

ಹೊಸ ಬಿಸಿನೆಸ್ ಹೆಸರಲ್ಲಿ 47 ಲಕ್ಷ ರೂ. ಹಣಕ್ಕಾಗಿ ಮೋಸ – ವ್ಯಕ್ತಿಯಿಂದ ಮೂರು ಮಂದಿ ವಿರುದ್ಧ ಪೊಲೀಸ್ ದೂರು

ಬೆಂಗಳೂರು, ಜೂನ್ 27 – ಹೊಸ ವ್ಯವಹಾರ ಆರಂಭಿಸಲು ಹಣವಿತ್ತು ಎಂದು ನಂಬಿಸಿ 47 ಲಕ್ಷ ರೂಪಾಯಿಗಳ ನಗದು ಪಡೆದು, ಹಣ ಹಿಂದಿರುಗಿಸದೆ ಮೋಸ ಮಾಡಿದ ಆರೋಪದಡಿ ಬೆಂಗಳೂರಿನ ಚಿಕ್ಕಜಾಲದಲ್ಲಿ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ನಾಗೇಂದ್ರ ಭಜಂತ್ರಿ ಅವರು ಕುಟುಂಬ ಸಮೇತ ನಗರದಲ್ಲಿ ವಾಸವಿದ್ದು, ತಮ್ಮ ಸ್ನೇಹಿತರಾದ ರಾಮಬಾಬು ಹಾಗೂ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಆತ್ಮೀಯ ಸಂಪರ್ಕ ಹೊಂದಿದ್ದರು. ಉದ್ಯಮ ಸಂಬಂಧಿತವಾಗಿ ಆಗಾಗ್ಗೆ ಹಣದ ವ್ಯವಹಾರವಾಗುತ್ತಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

2024ರ ಜುಲೈ 24ರಂದು, ನಗರದ ಗೋಲ್ಡ್ ಪಿಂಚ್ ಹೋಟೆಲ್ ಹತ್ತಿರ ನಾಗೇಂದ್ರ ಭಜಂತ್ರಿ ಅವರನ್ನು ಭೇಟಿಯಾದ ಆರೋಪಿಗಳು ಹೊಸ ಬಿಸಿನೆಸ್ ಪ್ರಾರಂಭಿಸುತ್ತಿರುವುದಾಗಿ ಹೇಳಿ , 47 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ ಎಂದು ನಂಬಿಸಿ ಹಣ ಪಡೆದುಕೊಂಡರು. ಅವರು ಒಂದು ವಾರದೊಳಗೆ ಹಣವನ್ನು ವಾಪಸ್ಸು ನೀಡುತ್ತೇವೆ ಎಂದು ಭರವಸೆ ನೀಡಿದ್ದರು.

ಆದರೆ, ಹಣ ಪಡೆದ ಬಳಿಕ ಆರೋಪಿಗಳು ಯಾವುದೇ ಹಣ ವಾಪಸ್ಸು ನೀಡದೇ, ನಾಗೇಂದ್ರ ಭಜಂತ್ರಿ ನಿರಂತರವಾಗಿ ತೊಡಕುಗೊಳಿಸುತ್ತಿದ್ದಾರೆ. ತಮ್ಮನ್ನು ನಂಬಿಸಿ ಹಣ ಪಡೆದು ಮೋಸ ಮಾಡಿದ ಈ ಮೂವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಚಿಕ್ಕಜಾಲ ಪೊಲೀಸರು ಪ್ರಾಥಮಿಕ ತನಿಖೆ ಪ್ರಾರಂಭಿಸಿದ್ದಾರೆ.

Related posts