ಸುದ್ದಿ 

ಆದಿಚುಂಚನಗಿರಿ ಬೆಟ್ಟದ ಪಾದದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ದಾಳಿ: 15 ಮಂದಿ ಬಂಧನ, ₹43,000 ನಗದು ವಶ

Taluknewsmedia.com

ಮಂಡ್ಯ ಜಿಲ್ಲೆಯ ಬೆಳ್ಳೂರು ಹೋಬಳಿಯ ಆದಿಚುಂಚನಗಿರಿ ಬೆಟ್ಟದ ಕೆಳಭಾಗದಲ್ಲಿ ನಡೆದ ಅಕ್ರಮ ಇಸ್ಪೀಟ್ ಜೂಜಾಟ ದಾಳಿಯಲ್ಲಿ 15 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.ಲಭಿಸಿದ ಖಚಿತ ಮಾಹಿತಿಯ ಮೇಲೆ ಬೆಳ್ಳೂರು ಟೌನ್ ಠಾಣೆಯ ಪಿಎಸ್‌ಐ ರವಿಕುಮಾರ್ ವೈ ಏನ್ ಅವರ ನೇತೃತ್ವದಲ್ಲಿ ತಂಡವೇ ಸ್ಥಳಕ್ಕೆ ದಾಳಿ ನಡೆಸಿತು. ದಾಳಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 15 ಮಂದಿ ಗಂಡಸರು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು.ದಾಳಿಯಲ್ಲಿ ಒಟ್ಟು ₹43,000 ನಗದು ಹಾಗೂ 52 ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ತಾಟು ಜಪ್ತಿ ಮಾಡಲಾಗಿದೆ. ಬಂಧಿತರಲ್ಲಿ ಕೆಲವರು ಆಟೋ ಚಾಲಕರು, ಕಾರು ಚಾಲಕರು, ವ್ಯಾಪಾರಸ್ಥರು ಹಾಗೂ ಕೃಷಿಕರು ಇದ್ದಾರೆ. ಬಂಧಿತರು ಚನ್ನಪಟ್ಟಣ, ರಾಮನಗರ ಮತ್ತು ಮಂಡ್ಯದಿಂದ ಬಂದಿದ್ದು, ಸ್ಥಳೀಯರಂತೆ “ನಾಮಕರಣ ಕಾರ್ಯಕ್ರಮಕ್ಕೆ ಆಗಮಿಸಿದ್ದೆವು” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.ಬಂಧಿತರ ಹೆಸರುಗಳು ಮತ್ತು ವಯಸ್ಸುಗಳು:1. ಉಮೇಶ್ (57), ಕುವೆಂಪುನಗರ2. ಪ್ರಮೋದ್ (38), ಮಂಡ್ಯ3. ಪವನ್ (27), ಮಳೂರು4. ವಿಜಯ (39), ಚನ್ನಪಟ್ಟಣ5. ವೆಂಕಟೇಶ್ (49), ಚನ್ನಪಟ್ಟಣ6. ಪ್ರಕಾಶ್ (54), ತಿಟ್ಟ ಮಾರನಹಳ್ಳಿ7. ಕಿರಣ್‌ಕುಮಾರ್ (ವಯಸ್ಸು ಲಭ್ಯವಿಲ್ಲ), ಚನ್ನಪಟ್ಟಣ8. ಸುಧೀರ್ ಸಿಂಗ್ (44), ಚನ್ನಪಟ್ಟಣ9. ಮಂಜು (48), ಚನ್ನಪಟ್ಟಣ10. ಚಂದ್ರೇಗೌಡ (45), ಆರೂರು11. ಮಂಜುನಾಥ್ (50), ಆರೂರು12. ಬಂಧುಗೌಡ (44), ಕೋಠಮಾರನಹಳ್ಳಿ13. ಶ್ರೀಕಂಠ (33), ತಿಟ್ಟಮಾರನಹಳ್ಳಿ14. ವಿನಯ್ (26), ಯಲಚಿಪಾಳ್ಯ15. ಅನಿಲ್ ಕುಮಾರ್ (41), ಚನ್ನಪಟ್ಟಣಪತ್ತೆಯಾದ ವಸ್ತುಗಳು:ನಗದು ಹಣ: ₹43,000ಇಸ್ಪೀಟ್ ಎಲೆಗಳು: 52ಪ್ಲಾಸ್ಟಿಕ್ ತಾಟು (ಜೂಜಾಟದ ಪರಿಕರ)ಬಂಧಿತರಿಂದ ಯಾವುದೇ ರೀತಿಯ ಪರವಾನಗಿ ಪತ್ರಗಳಿಲ್ಲದಿರುವುದನ್ನು ದೃಢಪಡಿಸಿದ್ದು, ಈ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆ (ಸೆಕ್ಷನ್ 87 K.P.Act) ಅಡಿಯಲ್ಲಿ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಸ್‌ಐ ವರದಿಯಲ್ಲಿ ತಿಳಿಸಿದ್ದಾರೆ.ಸ್ಥಳದಲ್ಲಿ ಪಂಚರುಗಳ ಸಮಕ್ಷಮದಲ್ಲಿ ಮಹಜರ್ ಪ್ರಕ್ರಿಯೆ ನಡೆಯಿದ್ದು, ಬಂಧಿತರನ್ನು ಠಾಣೆಗೆ ಕರೆತಂದು ತನಿಖೆ ಮುಂದುವರಿಸಲಾಗಿದೆ.

ವರದಿ : ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

Related posts