ಸುದ್ದಿ 

ಹಿರಿಯ ನಾಗರಿಕೆಗೆ ಹಲ್ಲೆ, ಮನೆಯಿಂದ ಹೊರಹಾಕಲು ಬೆದರಿಕೆ – ಐವರು ವಿರುದ್ಧ ಕ್ರಿಮಿನಲ್ ದೂರು

Taluknewsmedia.com

ಬೆಂಗಳೂರು ಜುಲೈ 5 2015

ಬೆಂಗಳೂರು ನಗರದ ನಿವಾಸಿಯಾದ ಶ್ರೀಮತಿ ಸುಶೀಲ.ಟಿ (69) ಹಾಗೂ ಅವರ ಪುತ್ರಿಯ ವಿರುದ್ಧ ಏಕಕಾಲದಲ್ಲಿ ಹಲ್ಲೆ, ಬೆದರಿಕೆ, ಅತಿಕ್ರಮ ಪ್ರವೇಶ ಹಾಗೂ ಆಭರಣ ಕಳ್ಳತನ ನಡೆದಿರುವ ಬಗ್ಗೆ ಗಂಭೀರ ದೂರು ಚಿಕ್ಕಜಾಲ ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಐವರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿ ಪ್ರಕರಣಕ್ಕೆ ಗಂಭೀರ ತಿರುವು ದೊರೆತಿದೆ.

ದೂರುದಾರೆಯ ಹೇಳಿಕೆಯ ಪ್ರಕಾರ, ದಿ.30 ಏಪ್ರಿಲ್ 2025ರಂದು ರಾಧಾಕೃಷ್ಣ, ಆಶಾಲತಾ, ಲಕ್ಷ್ಮೀನಾರಾಯಣ ಕತ್ರಗುಡ್ಡ, ಮೋನ ಲಕ್ಷ್ಮೀನಾರಾಯಣ ಕತ್ರಗುಡ್ಡ ಹಾಗೂ ರವಿ ಎಂಬವರು ಅವರ ನಿವಾಸದೊಳಗೆ ಜಬರ್ ದಾಳಿ ಮಾಡಿ, ಶ್ರೀಮತಿ ಸುಶೀಲರನ್ನು ತಳ್ಳಿದ್ದಾರೆ. ಇದರಿಂದಾಗಿ ತಲೆಗೆ ತೀವ್ರ ಗಾಯವಾದಂತಾಗಿದೆ. ಇದರ ಜೊತೆಗೆ, ಮನೆಯ ಕಾರಿಗೂ ಹಾನಿಯಾಗಿದೆ.

ಅವರ ಮನೆಯ ಹೊರಗೆ ನಿಂತುಕೊಂಡು, ಬಾಗಿಲು ತೆಗೆಯಲು ಒತ್ತಾಯಿಸುತ್ತಾ, ಬೈಗುಳ ಹಾಗೂ ಬೆದರಿಕೆ ಹಾಕಿದ್ದಾರೆ. ಮನೆ ಖಾಲಿ ಮಾಡಬೇಕೆಂದು ಜವಾಬ್ದಾರಿಯುತ ರೀತಿ ತೀವ್ರ ಒತ್ತಡ ಹಾಕಲಾಗಿದೆ. ಈ ಪ್ರಕರಣದಲ್ಲಿ ಕಮ್ಯೂನಿಟಿ ಸದಸ್ಯರಾದ ಕಿರಣ್ ಕುಮಾರ್, ಅಬ್ರಾಹಂ ತರಾಕಾನ್ ಮತ್ತು ಹೇಮದೀಪಕ್ ಅವರು ಆರೋಪಿಗಳಿಗೆ ಮನೆಗೆ ಪ್ರವೇಶಿಸಲು ಸಹಕಾರ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅದರ ಜೊತೆಗೆ, ಮನೆ ಮಾಲೀಕೆಯಾದ ಶ್ರೀಮತಿ ಮಾಧುರ್ಯ ಅವರಿಗೆ ಬಾಡಿಗೆ ವಿಸ್ತರಣೆಗಾಗಿ ಸಲ್ಲಿಸಿದ ಇ-ಮೇಲ್ ಅರ್ಜಿ ನಿರ್ಲಕ್ಷಿತಗೊಂಡಿದ್ದು, ಬದಲಿಗೆ 13 ಏಪ್ರಿಲ್ 2025 ರಂದು, ಕಿರಣ್ ಕುಮಾರ್, ಮೈತ್ರಿಯಿ ವೆಂಕಟೇಶ್, ಮ್ಯಾನೇಜರ್ ಬಾಬ್ರಾಜ್ ಹಾಗೂ ಸೆಕ್ಯುರಿಟಿ ಸಿಬ್ಬಂದಿ ಸೇರಿ ದೂರುದಾರರಿಗೆ ಬೈಗುಳ ಹಾಕಿರುವುದಾಗಿ ಆರೋಪಿಸಲಾಗಿದೆ. ಅವರು ಜಾಗತಿಕ ನಿಗಾವಣೆಯಂತೆ ಸಿಸಿಟಿವಿ ಮೂಲಕ ಹಿಂಬಾಲನೆ ನಡೆಸಿದರೂ ಎಂದು ದೂರಿನಲ್ಲಿ ಹೇಳಲಾಗಿದೆ.

ಅಷ್ಟೆ ಅಲ್ಲದೇ, 27 ಜೂನ್ 2025 ರಂದು ದೇವರಾಜ್ ಎಂಬ ಗಾರ್ಡನರ್ ಯಾವುದೇ ಅನುಮತಿ ಇಲ್ಲದೇ ಮನೆಯ ದಕ್ಷಿಣ ಭಾಗ ಪ್ರವೇಶಿಸಿದ್ದಾನೆ. ನಂತರ, 28 ಜೂನ್ ರಂದು ಮನೆಯ ಟೇಬಲ್ ಮೇಲೆ ಇಟ್ಟಿದ್ದ ಎರಡು ಬಂಗಾರದ ಬಳೆಗಳಲ್ಲಿ ಒಂದು ಕಾಣೆಯಾಗಿರುವುದರಿಂದ ದೇವರಾಜ್ ಹಾಗೂ ಇತರರ ಮೇಲೆ ಕಳ್ಳತನದ ಶಂಕೆ ವ್ಯಕ�

Related posts