ಸುದ್ದಿ 

ಉದ್ಯೋಗದ ನಂಬಿಕೆ ಕಲ್ಪಿಸಿ ₹7 ಲಕ್ಷ ವಂಚನೆ – ಅಪರಿಚಿತ ವ್ಯಕ್ತಿಗೆ ಎಫ್‌ಐಆರ್

Taluknewsmedia.com

ಬೆಂಗಳೂರು, ಜುಲೈ 14:2025


ಉದ್ಯೋಗ ನೀಡುವ ನೆಪದಲ್ಲಿ ನಂಬಿಕೆ ಹುಟ್ಟುಹಾಕಿ ಒಟ್ಟು ₹7,00,000 ನಗದು ವಂಚಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ವಿದ್ಯಾರಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬೆಲೆಗ್ರಾಮ ನಲೆ ಮೂಲದ ಯುವಕನೊಬ್ಬನು ಕೆಲಸ ಹುಡುಕುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಮಿಷನ್ ಆಧಾರಿತ ಉದ್ಯೋಗ ನೀಡುತ್ತೇನೆಂದು ಹೇಳಿ ಪರಿಚಯಕ್ಕೆ ಬಂದಿದ್ದಾರೆ. ಮೊದಲ ಹಂತದಲ್ಲಿ ₹20,000, ನಂತರ ₹10,000, ₹5,00,000 ಮತ್ತು ₹13,50,000 ರಷ್ಟು ಹಣವನ್ನು ಹಂತ ಹಂತವಾಗಿ ಹೂಡಿಕೆಗೆ ರೂಪದಲ್ಲಿ ನೀಡಲಾಗಿದೆ.

ಹೀಗಿರುವಾಗ, ಹೆಚ್ಚಿನ ಲಾಭದ ನಂಬಿಕೆ ಉಂಟುಮಾಡಿದ ವ್ಯಕ್ತಿಯು, “ಹೂಡಿದ ಹಣವನ್ನು ಹಿಂದಕ್ಕೆ ಪಡೆಯಬೇಕಾದರೆ ₹2,00,000 ಸೆಕ್ಯುರಿಟಿ ಡಿಪಾಸಿಟ್ ನೀಡಿ” ಎಂದು ಬೇಡಿಕೆ ಇಟ್ಟಿದ್ದಾನೆ. ಪೀಡಿತರು ಅದರಂತೆ ಸೆಕ್ಯುರಿಟಿ ಡಿಪಾಸಿಟ್ ರೂಪದಲ್ಲಿ ಹಣ ನೀಡಿದರೂ ಸಹ, ಯಾವುದೇ ಹಣವನ್ನು ಮರಳಿಸದೆ ನಾಪತ್ತೆಯಾಗಿದ್ದಾನೆ.

ಒಟ್ಟು ₹7 ಲಕ್ಷದ ವಂಚನೆ ನಡೆದಿರುವ ಈ ಸಂಬಂಧ ಪೀಡಿತರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಆರೋಪಿಯ ಗುರುತು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.

Related posts