ಕಾಲೇಜಿಗೆ ಹೋದ 17 ವರ್ಷದ ವಿದ್ಯಾರ್ಥಿನಿ ಕಾಣೆ: ಆತಂಕದಲ್ಲಿ ಪೋಷಕರು
ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿ ನಿವಾಸಿ ಗಂಗಮ್ಮ ನಾಗರಾಜು ದಂಪತಿಯ ಹಿರಿಯ ಮಗಳು ಅಮೂಲ್ಯ (17), ಜುಲೈ 24 ರಂದು ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರಟು ಮರಳದೇ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಪೋಷಕರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಮೂಲ್ಯ ಚಂದಾಪುರದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ 1ನೇ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಯಾವಾಗಲೂ ಮಾಮೂಲಿಯಾಗಿ ಕಾಲೇಜಿಗೆ ತೆರಳಿ ವಾಪಸ್ಸು ಬರುತ್ತಿದ್ದ ಅಮೂಲ್ಯ, ಆ ದಿನ ಸಂಜೆ ಮನೆಗೆ ಬರಲಿಲ್ಲ. ಸಂಜೆ ವೇಳೆಗೆ ಕಾದರೂ ಮಗಳು ಮನೆಗೆ ಬರದೇ ಇರುವುದರಿಂದ ಪೋಷಕರು ಆತಂಕಗೊಂಡು ಕಾಲೇಜಿಗೆ ಹಾಗೂ ಆಕೆಯ ಸ್ನೇಹಿತರಿಗೆ ಸಂಪರ್ಕಿಸಿದಾಗ, ಕಾಲೇಜು ಮುಗಿಸಿ ಮಧ್ಯಾಹ್ನ 3:30ರ ಸುಮಾರಿಗೆ ಹೊರಟಿದ್ದಳು ಹಾಗೂ ಸ್ನೇಹಿತರು ಹೇಳಿದಂತೆ ಅನೇಕಲ್ಗೆ ಸಂಜೆ 4:30ರ ವೇಳೆಗೆ ಬಂದಿದ್ದಾಳೆ ಎಂಬ ಮಾಹಿತಿ ದೊರೆತಿದೆ.
ಆದರೆ ಆ ಸಮಯದಿಂದ ಮಗಳು ಎಲ್ಲಿ ಹೋಗಿದಾಳೆ ಎಂಬುದರ ಬಗ್ಗೆ ಯಾವುದೇ ಪತ್ತೆಯಾಗಿಲ್ಲ. ಪೋಷಕರು ಸಂಬಂಧಿಕರ ಮನೆಗಳು, ಸ್ನೇಹಿತರು ಸೇರಿದಂತೆ ಎಲ್ಲೆಡೆ ಹುಡುಕಿದರೂ ಅಮೂಲ್ಯೆಯು ಕಾಣೆಯಾಗಿರುವುದು ದೃಢಪಟ್ಟಿದೆ.
ಕಾಣೆಯಾದ ಅಮೂಲ್ಯೆಯ ಶಾರೀರಿಕ ಲಕ್ಷಣಗಳು:
ವಯಸ್ಸು: 17 ವರ್ಷ 7 ತಿಂಗಳು (ಹುಟ್ಟಿದ ದಿನಾಂಕ: 13/12/2007)
ಎತ್ತರ: 5 ಅಡಿ
ಮೈಬಣ್ಣ: ಗೋಧಿ
ಮುಖ: ಗುಂಡು
ಕೂದಲು: ಕಪ್ಪು
ಕಣ್ಣು: ಕಪ್ಪು
ಮಾತನಾಡುವ ಭಾಷೆಗಳು: ಕನ್ನಡ, ತಮಿಳು, ಇಂಗ್ಲಿಷ್, ತೆಲುಗು
ಧರಿಸಿದ್ದ ಬಟ್ಟೆಗಳು: ಕಪ್ಪು ಟಾಪ್, ಬಿಳಿ ಲೆಗ್ನಿಂಗ್ಸ್ ಪ್ಯಾಂಟ್, ಪಿಂಕ್ ಬಣ್ಣದ ಸೈಟರ್

