ಕಾಂಗ್ರೆಸ್ ಸರ್ಕಾರದಲ್ಲೂ ‘ಕಮಿಷನ್ ರಾಜ’ ಮುಂದುವರಿಕೆ? ಗುತ್ತಿಗೆದಾರರಿಂದ ಭಾರೀ ಆರೋಪ
ಕಾಂಗ್ರೆಸ್ ಸರ್ಕಾರದಲ್ಲೂ ‘ಕಮಿಷನ್ ರಾಜ’ ಮುಂದುವರಿಕೆ? ಗುತ್ತಿಗೆದಾರರಿಂದ ಭಾರೀ ಆರೋಪ
ಕಳೆದ ಬಾರಿಯ ಬಿಜೆಪಿ ಸರ್ಕಾರದ ಕಾಲದಲ್ಲಿ ನಡೆದಿದ್ದ “ಶೇ. 40 ಕಮಿಷನ್” ವಿವಾದ ಇದೀಗ ಮತ್ತೆ ಜೀವಂತವಾಗಿದೆ. ಆದರೆ ಈ ಬಾರಿ ಗುರಿ ಕಾಂಗ್ರೆಸ್ ಸರ್ಕಾರ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಗುತ್ತಿಗೆದಾರರು ಮತ್ತೆ ಗಂಭೀರ ಆರೋಪ ಮಾಡಿದ್ದಾರೆ — ಸರ್ಕಾರದ ವಸತಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿಗಳ ಅನುಮೋದನೆ, ಬಿಲ್ ರಿಲೀಸ್ ಹಾಗೂ ತಾಂತ್ರಿಕ ಅನುಮತಿ ಪಡೆಯಲು ಅಧಿಕಾರಿಗಳು ಶೇ.40 ರಷ್ಟು ಕಮಿಷನ್ ಬೇಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಂಜುನಾಥ್ ಅವರು ವಸತಿ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಸ್ಲಂ ಬೋರ್ಡ್ನ ಟೆಕ್ನಿಕಲ್ ಅಡ್ವೈಸರ್ ಬಾಲರಾಜ್ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿತು.
ಆದರೆ ಆ ಆರೋಪಗಳು ತಣ್ಣಗಾಗುವುದಕ್ಕೂ ಮುನ್ನ, ಇದೇ ಗುತ್ತಿಗೆದಾರರ ತಂಡ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕುಮಾರ ಪಾರ್ಕ್ನ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಬಾಕಿ ಬಿಲ್ಗಳ ಬಿಡುಗಡೆ ಮತ್ತು ಕಾಮಗಾರಿಗಳ ಅನುಮೋದನೆ ಕುರಿತಾಗಿ ಚರ್ಚೆ ನಡೆಸಿದೆ.
ಡಿಕೆಶಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಭೇಟಿಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರೂ, ಆ ಭೇಟಿಯಲ್ಲಿ ಕಮಿಷನ್ ಆರೋಪಗಳ ಕುರಿತ ಚರ್ಚೆ ನಡೆದದೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.
ರಾಜ್ಯದಲ್ಲಿ ಗುತ್ತಿಗೆದಾರರ ಸಂಘದಿಂದಲೇ ಸರ್ಕಾರದ ವಿರುದ್ಧ ಮರುಮರು ಬರುವ ಕಮಿಷನ್ ಆರೋಪಗಳು, ಸರ್ಕಾರದ ಪಾರದರ್ಶಕತೆ ಮತ್ತು ನೀತಿನಿಷ್ಠೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ.

