ರಾಜಕೀಯ ಸುದ್ದಿ 

“ಈ ‘ಬ್ರೆಕ್‌ಫಾಸ್ಟ್ ರಾಜಕೀಯ’ ಅನ್ನೋ ವಿಷಯವೇನು ಗೊತ್ತಾ? ಕೆಲವರಿಗೆ ಕುಲಗೆಟ್ಟ ಸಂಬಂಧಗಳನ್ನೂ, ಒಳಗಿನ ಗಲಾಟೆಯನ್ನೂ ಒಮ್ಮೆಯೇ ಸರಿಪಡಿಸಿಬಿಡುವಂಥ ..

Taluknewsmedia.com

“ಈ ‘ಬ್ರೆಕ್‌ಫಾಸ್ಟ್ ರಾಜಕೀಯ’ ಅನ್ನೋ ವಿಷಯವೇನು ಗೊತ್ತಾ? ಕೆಲವರಿಗೆ ಕುಲಗೆಟ್ಟ ಸಂಬಂಧಗಳನ್ನೂ, ಒಳಗಿನ ಗಲಾಟೆಯನ್ನೂ ಒಮ್ಮೆಯೇ ಸರಿಪಡಿಸಿಬಿಡುವಂಥ ಮಹಾ ತಂತ್ರ ಅಂತ ಭ್ರಮೆ. ಆದರೆ ಇದು ಕೇವಲ ಸಿನಿಮಾದ ಇಂಟರ್‌ವಲ್‌—ವಿರಾಮ ಮಾತ್ರ. ನಿಜ ಜೀವನದಲ್ಲಿ ಇದು ಒಬ್ಬ ಬೃಹತ್ ನಾಟಕ. ಈ ನಾಟಕದಿಂದ ಜನರಿಗೆ ಏನೂ ಪ್ರಯೋಜನವಾಗೋದಿಲ್ಲ. ಜನರಿಗೆ ನಾಟಕ ಬೇಕಾಗಿಲ್ಲ, ಅಭಿವೃದ್ಧಿ ಬೇಕು, ಸಮಸ್ಯೆಗಳ ಪರಿಹಾರ ಬೇಕು.

ನನ್ನ ವಾದವೇನೆಂದರೆ— ಕಾಂಗ್ರೆಸ್ ಇಂದು ದೇಶದಿಂದ ಮಾಯವಾಗೋ ಕಾಲ ಬಂದಿದೆ.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಯಾವ ತೀರ್ಮಾನವನ್ನು ತೆಗೆದುಕೊಳ್ಳಲು ಸಹ ಸ್ಥಿತಿಯಲ್ಲ. ವಿವೇಕರಹಿತ ನಾಯಕತ್ವದಡಿ ಈ ದೇಶವನ್ನು ಆಳೋ ಸಾಧ್ಯತೆಯೇ ಇಲ್ಲ. ಇನ್ನೊಂದು ಎರಡು–ಮೂರು ವರ್ಷಗಳಲ್ಲಿ ಕಾಂಗ್ರೆಸ್ ಹುಡುಕಿದ್ರೂ ಸಿಗೋದಿಲ್ಲ ಅನ್ನೋ ಪರಿಸ್ಥಿತಿ ಬರುತ್ತದೆ.

ಹೀಗಿದ್ದಾಗ ‘ಹೈಕಮಾಂಡ್ ತೀರ್ಮಾನ’ ಅಂತ ಹೇಳೋದು ಸುಳ್ಳು. ದಾವಣಗೆರೆಯಲ್ಲಿ ಎಚ್.ಸಿ. ಮಹಾದೇವಪ್ಪ ಅವರೇ ಹೇಳಿದ್ರು – ‘ಸಿದ್ದರಾಮಯ್ಯ ಅವರು ಐದು ವರ್ಷ ಅವಧಿ ಪೂರ್ಣಗೊಳಿಸುತ್ತಾರೆ’. ಹಾಗಿದ್ದಾಗ ಹೈಕಮಾಂಡ್ ಜನರಿಗೆ ಏನು ಹೇಳಲಿ?

ನಾವು ಹೇಳಿದಾಗ ‘ಕಾಂಗ್ರೆಸ್ ಸತ್ತಿದೆ’ ಅಂತ ಅವರು ಹೇಳಿದ್ರು ‘ವಿಪಕ್ಷ ಸತ್ತಿದೆ’. ಇದಕ್ಕೆ ಯಾವ ಅರ್ಥ?

ನಾನು ಕೇಳ್ಬೇಕು— ಏಳು ಕೋಟಿ ರೂಪಾಯಿ ಕದ್ದ ಪ್ರಕರಣದಲ್ಲಿ ಸಿಕ್ಕಿದವರನ್ನು ನೀವು ಜೈಲಿಗೆ ಕಳಿಸಿದ್ದೀರಾ? ಇಲ್ಲ! ಸಾಮಾನ್ಯ ಜನ ತಪ್ಪು ಮಾಡಿದ್ರೆ ಜೈಲು, ಕ್ರಮ—ಎಲ್ಲವನ್ನೂ ಜಾರಿ ಮಾಡ್ತೀರ. ಆದರೆ ಮುಖ್ಯಮಂತ್ರಿಯೇ 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದ ಪ್ರಕರಣದಲ್ಲಿ, ನಮ್ಮ ಪಕ್ಷ ಹೋರಾಟ ಮಾಡಿದಾಗ ಮಾತ್ರ ವಾಪಸ್ ಕೊಡಿಸಿದ್ದೀರಿ. ಯಾರನ್ನ ಅರೆಸ್ಟ್ ಮಾಡಿದ್ದೀರಿ?

187 ಕೋಟಿ ನಿಗಮ ಹಗರಣ—ನಾವು ಹಿಡಿದು ತೋರಿಸಿದಾಗ ಮಂತ್ರಿಗೆ ರಾಜೀನಾಮೆ ಕೊಡಿಸಿದ್ರಿ. ‘187 ಕೋಟಿ ಅಲ್ಲ, 87 ಕೋಟಿ’ ಅಂತ ಒಪ್ಪಿಕೊಂಡಿದ್ದೀರಲ್ಲ! ಇಷ್ಟು ಸತ್ಯ ನಿಮಗೆ ಗೊತ್ತಿದ್ದರೂ, ಒಂದು ಕಾನೂನು ನಿಮಗೆ, ಮತ್ತೊಂದು ಕಾನೂನು ಜನ ಸಾಮಾನ್ಯರಿಗೆ?

ಹೀಗಿದ್ದಾಗ ಪ್ರಜಾಪ್ರಭುತ್ವಕ್ಕೆ ನೀವು ಯಾವ ಬೆಲೆ ಕೊಟ್ಟಿದ್ದೀರಿ? ಸಂವಿಧಾನಕ್ಕೆ ನೀವು ಯಾವ ಗೌರವ ತೋರಿದ್ದೀರಿ? ಮಾತಿನಲ್ಲಿ ಮಾತ್ರ ‘ಸಂವಿಧಾನ, ಸಂವಿಧಾನ’—ಆದರೆ ಕುರ್ಚಿ, ಅಧಿಕಾರ, ಲಾಭ—ಇವುಗಳಿಗಾಗಿ ಎಲ್ಲಾ ಮಿತಿ ಮೀರುತ್ತಿದೀರ.

ಕಾನೂನು ಸರಿಯಾಗಿ ಜಾರಿಯಾಗಿದ್ದರೆ ಮೊದಲು ಮುಖ್ಯಮಂತ್ರಿಯೇ ಅರೆಸ್ಟ್ ಆಗಬೇಕಿತ್ತು, ಇಷ್ಟೋತ್ತಿಗೆ ಜೈಲಲ್ಲಿರಬೇಕಾಗಿತ್ತು.”

ಶ್ರೀ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್‌ ವಿಪಕ್ಷ ನಾಯಕರು.

Related posts