ದತ್ತಪೀಠವು ಹಿಂದೂಗಳ ಮಹತ್ವದ ಶ್ರದ್ಧಾಕೇಂದ್ರ. ಈ ಪವಿತ್ರ ಸ್ಥಳಕ್ಕಾಗಿ ನಾವು ಸುದೀರ್ಘಕಾಲದಿಂದ ನಿರಂತರ ಹೋರಾಟವನ್ನು ನಡೆಸುತ್ತಿದ್ದೇವೆ.
ದತ್ತಪೀಠವು ಹಿಂದೂಗಳ ಮಹತ್ವದ ಶ್ರದ್ಧಾಕೇಂದ್ರ. ಈ ಪವಿತ್ರ ಸ್ಥಳಕ್ಕಾಗಿ ನಾವು ಸುದೀರ್ಘಕಾಲದಿಂದ ನಿರಂತರ ಹೋರಾಟವನ್ನು ನಡೆಸುತ್ತಿದ್ದೇವೆ. ಈ ಹೋರಾಟದಿಂದ ಹಲವಾರು ಬದಲಾವಣೆಗಳು ಕಂಡುಬಂದಿವೆ. ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಇದ್ದಂತೆ, ದತ್ತಪೀಠದಲ್ಲೂ ಕೂಡ ಅದೇ ರೀತಿಯ ಪೂಜೆ-ಪರಂಪರೆಗಳು ಜರುಗಬೇಕು. ದತ್ತಾತ್ರೇಯರ ಪಾದುಕೆಗೆ ಮುಕ್ತ ದರ್ಶನದ ಅವಕಾಶ ಕಲ್ಪಿಸಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಇದು ಸರ್ಕಾರಕ್ಕೆ ನಮ್ಮ ಸ್ಪಷ್ಟವಾದ ಆಗ್ರಹ.
ಇನ್ನೊಂದು ವಿಚಾರವೆಂದರೆ, ಡಿಕೆ ಶಿವಕುಮಾರ್ ಅವರು ಡೆಹಲಿಗೆ ತೆರಳಿರುವುದು ಮತ್ತು ಕೆಲವು ಬಿಜೆಪಿ ನಾಯಕರು ಹೈಕಮಾಂಡ್ ಭೇಟಿ ಮಾಡಲು ಡೆಹಲಿಯಲ್ಲೇ ತಂಗಿರುವುದು. ನಾವು ವಿರೋಧ ಪಕ್ಷವಾಗಿ ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡುವುದು ತಪ್ಪಲ್ಲ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಆಡಳಿತದ ಜವಾಬ್ದಾರಿ ಹೊಂದಿರುವವರು ಜನರ ಸಮಸ್ಯೆಗಳನ್ನು ಕೇಳದೇ, ತಮ್ಮ ಕುರ್ಚಿಯನ್ನು ಉಳಿಸಲು ಮತ್ತು ಪರಸ್ಪರ ಅಧಿಕಾರಕ್ಕಾಗಿ ಓಡಾಟ ನಡೆಸುತ್ತಿರುವುದು ರಾಜ್ಯದಲ್ಲಿ ಆಡಳಿತ ಶೂನ್ಯವಾಗಿದೆ ಎನ್ನುವ ಭಾವನೆಯನ್ನು ಮೂಡಿಸಿದೆ.
ರಾಜ್ಯದಲ್ಲಿ ಇಂದು ಆಡಳಿತ ಎನ್ನುವ ಭರವಸೆ ಕಾಣುತ್ತಿಲ್ಲ. ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ, ರೈತರ ಹೋರಾಟಕ್ಕೆ ಸ್ಪಂದನೆ ಇಲ್ಲ, ನಿರುದ್ಯೋಗಿ ಯುವಕರ ಧ್ವನಿಯನ್ನು ಕೇಳುವುದಿಲ್ಲ, ಬೆಳೆ ಪರಿಹಾರ ದೊರಕುತ್ತಿಲ್ಲ. ಎಲ್ಲದಕ್ಕೂ ಮೇಲೆ, ಸರ್ಕಾರದ ಒಳಗಿರುವ ನಾಯಕರು ಪರಸ್ಪರ ವಿಶ್ವಾಸ ಕಳೆದುಕೊಂಡಿರುವುದು ಇನ್ನೂ ದೊಡ್ಡ ಸಮಸ್ಯೆ.
ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಪರಿಹಾರವಲ್ಲ. ಈ ಸರ್ಕಾರ ವಿಸರ್ಜನೆಗೊಂಡು ಮುಂದಿನ ಚುನಾವಣೆಗೆ ರಾಜ್ಯ ಹರಿದಾಡುವುದು ಒಳಿತು ಎನ್ನುವುದು ನನ್ನ ಅಭಿಪ್ರಾಯ.

