ಸುದ್ದಿ 

ಗದಗ ಜಿಲ್ಲೆಯಲ್ಲಿ ದಿಗ್ಭ್ರಮೆ ಉಂಟಮಾಡಿದ ದಾರುಣ ಘಟನೆದಕ್ಷ ಪೊಲೀಸ್ ಅಧಿಕಾರಿ ಪಂಚಾಕ್ಷರಿ ಸಾಲಿಮಠ ಸ್ಮರಣಾರ್ಥ ಶ್ರದ್ದಾಂಜಲಿ

Taluknewsmedia.com

ಗದಗ ಜಿಲ್ಲೆಯಲ್ಲಿ ದಿಗ್ಭ್ರಮೆ ಉಂಟಮಾಡಿದ ದಾರುಣ ಘಟನೆ
ದಕ್ಷ ಪೊಲೀಸ್ ಅಧಿಕಾರಿ ಪಂಚಾಕ್ಷರಿ ಸಾಲಿಮಠ ಸ್ಮರಣಾರ್ಥ ಶ್ರದ್ದಾಂಜಲಿ

ಗದಗ ಜಿಲ್ಲೆಯ ಅಣ್ಣಿಗೇರಿ ಬಳಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಜ್ಯದ ದಕ್ಷ ಹಾಗೂ ಕರ್ತವ್ಯನಿಷ್ಠ ಸಿ.ಪಿ.ಐ ಅಧಿಕಾರಿ ಶ್ರೀ ಪಂಚಾಕ್ಷರಿ ಸಾಲಿಮಠ ಅವರು ದುರ್ಮರಣ ಹೊಂದಿರುವ ಘಟನೆ ಸಾರ್ವಜನಿಕರಲ್ಲಿ ಬೇಸರ ಮತ್ತು ದುಃಖಕ್ಕೆ ಕಾರಣವಾಗಿದೆ.

ಘಟನೆಯ ವೇಳೆ ಸಾಲಿಮಠ ಅವರ ಕಾರಿಗೆ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದು ಭಾರೀ ಹಾನಿಗೊಳಗಾಗಿದೆ. ಗಂಭೀರ ಗಾಯಗಳಾಗುವುದರೊಂದಿಗೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಅಪಘಾತದ ನಿಖರ ಕಾರಣವನ್ನು ತಿಳಿದುಕೊಳ್ಳುವ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಮ್ಮ ನಿಷ್ಠೆ, ಶಿಸ್ತಿನ ಕಾರ್ಯಪಟುತೆಗೆ ಹೆಸರುವಾಸಿಯಾಗಿದ್ದ ಸಾಲಿಮಠ ಅವರ ಅಕಾಲಿಕ ನಿಧನ ಇಲಾಖೆಗೆ ಮಾತ್ರವಲ್ಲ, ಸಾರ್ವಜನಿಕ ಜೀವನಕ್ಕೂ ಭಾರೀ ನಷ್ಟವಾಗಿದೆ. ಅವರ ಸೇವಾ ಮನೋಭಾವ, ಸರಳತೆ ಹಾಗೂ ಜನಸಾಮಾನ್ಯರ ಸಮಸ್ಯೆಗಳೊಂದಿಗೆ ಪಾಲುಗೊಳ್ಳುತ್ತಿದ್ದ ಗುಣಗಳು ಜನಮನ ಗೆದ್ದಿದ್ದವು.

ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಅನೇಕರು ಪ್ರಾರ್ಥನೆ ಸಲ್ಲಿಸುತ್ತಿದ್ದು, ಸಹೋದ್ಯೋಗಿಗಳು ಮತ್ತು ಸಾರ್ವಜನಿಕರು ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

Related posts