ಸುದ್ದಿ 

ಮಳ್ಳಿಕೊಪ್ಪಲು ಗ್ರಾಮದಲ್ಲಿ ಜಮೀನಿನ ವಿವಾದದಿಂದ ಹಲ್ಲೆ: ದಂಪತಿಗೆ ಗಾಯ

Taluknewsmedia.com

ನಾಗಮಂಗಲ ತಾಲ್ಲೂಕಿನ ಮಳ್ಳಿಕೊಪ್ಪಲು ಗ್ರಾಮದಲ್ಲಿ ಜಮೀನಿನ ಹಕ್ಕು ಸಂಬಂಧಿಸಿದ ವಿಚಾರದಿಂದ ಉಂಟಾದ ವಿವಾದ ಹಲ್ಲೆಗೆ ದಾರಿ ತೋರಿದೆ. ಈ ಘಟನೆಯಲ್ಲಿ ದಂಪತಿಗೆ ಗಾಯಗಳಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶೀಲಮ್ಮ ಅವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಅದರ ಪ್ರಕಾರ ಅವರು ದೇವಲಾಪುರ ಹೋಬಳಿಯ ಮಳ್ಳಿಕೊಪ್ಪಲು ಗ್ರಾಮದಲ್ಲಿರುವ ಸರ್ವೇ ನಂ. 56 ರಲ್ಲಿನ ಸುಮಾರು 1 ಎಕರೆ 32 ಕುಂಟೆ ಜಮೀನನ್ನು ತಮ್ಮ ಮಗ ಅನಿಲ್ ಕುಮಾರ್ ಎಂ.ವಿ. ಅವರ ಹೆಸರಿನಲ್ಲಿ ಬಿ.ಪಿ. ಪ್ರಕಾಶ ಬಿನ್ ಪುಟ್ಟಪರವರಿಂದ ಜನರಲ್ ಪವರ್ ಆಫ್ ಅಟಾರ್ನಿಯ ಮೂಲಕ ಪಡೆದಿದ್ದು, ಕುಟುಂಬ ಸಮೇತ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು.

ಶೀಲಮ್ಮ ಪ್ರಕಾರ,(ಕೋಂ ಶ್ರೀನಿವಾಸ), ಚಿಕ್ಕತಾಯಮ್ಮ (ಕೋಂ ವೆಂಕಟೇಶ), ಶ್ರೀನಿವಾಸ (ಕೋಂ ವೆಂಕಟೇಶ), ಜಯಮ್ಮ (ಕೋಂ ಗಂಗರಸಯ್ಯ), ಶಾರದಾ (ಕೋಂ ಅರಸೇಗೌಡ) ಮತ್ತು ತೇಜಸ್ ಗೌಡ (ಬಿನ್ ಅರಸೇಗೌಡ) ಎಂಬವರು ತಮ್ಮ ಹಸು ಮತ್ತು ಎಮ್ಮೆಗಳನ್ನು ಅವರ ಜಮೀನಿಗೆ ಬಿಡುತ್ತಿದ್ದಾಗಿ ದೂರಿದ್ದಾರೆ. ಇದರಿಂದ ಜಮೀನಿನಲ್ಲಿ ಬೆಳೆದ ಜೋಳ ಮತ್ತು ಈರುಳ್ಳಿ ಬೆಳೆಗಳಿಗೆ ಹಾನಿಯಾಗುತ್ತಿತ್ತು.ಇದರ ಬಗ್ಗೆ ಪ್ರಶ್ನಿಸಿದಾಗ, ಶೀಲಮ್ಮ ಪತಿ ವೆಂಕಟೇಶ್ ಅವರನ್ನು ಜಮೀನಿಗೆ ಎಮ್ಮೆಗಳನ್ನು ಬಿಡಲು ಕಾರಣವೇನು ಎಂದು ಕೇಳಿದಾಗ ಆರೋಪಿತರು ಅಪ್ರಾಚ್ಯವಾಗಿ ಮಾತನಾಡಿ, “ಈ ಜಮೀನು ನಮಗೆ ಸೇರಬೇಕು” ಎಂದು ಬೈದು ಬೆದರಿಕೆ ನೀಡಿದ್ದು, ಬಳಿಕ ಶ್ರೀನಿವಾಸ ಎಂಬವರು ವೆಂಕಟೇಶ್ ಅವರನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದು, ಇತರರು ಪೀಡಿತೆಯನ್ನು ಹಿಡಿದು ಎಳೆದಾಡಿದ್ದಾರೆ.

ಘಟನೆಯ ನಂತರ, ಗಾಯಗೊಂಡ ದಂಪತಿಗಳು ಏಸಿಗಿರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದ್ದು, ತಡವಾಗಿ ಮನೆಗೆ ಹಿಂತಿರುಗಿದ ನಂತರ ತಮ್ಮ ಮಗನಿಗೆ ವಿಷಯ ತಿಳಿಸಿ ದೂರು ನೀಡಿದ್ದಾರೆ.ಸ್ಥಳೀಯ ಪೊಲೀಸರು ಶೀಲಮ್ಮ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ : ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

Related posts