ಸುದ್ದಿ 

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳಿಂದ ವಿಶೇಷ ಶೋಧನೆ – ನಿಷೇಧಿತ ವಸ್ತುಗಳ ಪತ್ತೆ!

Taluknewsmedia.com

ಬೆಂಗಳೂರು, ಜೂನ್ 19:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 16-06-2025 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷ ಶೋಧನಾ ಕಾರ್ಯಾಚರಣೆ ನಡೆಯಿತು. ಉಪ ಪೊಲೀಸ್ ಆಯುಕ್ತ (ಅಪರಾಧ-2) ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.

ಶೋಧನೆಯ ವೇಳೆ ಪತ್ತೆಯಾದ ವಸ್ತುಗಳು:

  1. ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ) PI ಕಿರಣ್ ಕುಮಾರ್ ಮತ್ತು ತಂಡವು ವಿಚಾರಣಾಧೀನ ಬಂಧಿಗಳು ತಂಗಿರುವ ಬ್ಯಾರಕ್ ನಂ.5/2ರಲ್ಲಿ ಶೋಧನೆ ನಡೆಸಿ ₹5,500 ನಗದು, ಕಸ್ತೂರಿ ಮೇತಿ ಸೊಪ್ಪು, ಬೆಂಕಿ ಪೊಟ್ಟಣ, SK ಬೀಡಿ ಪ್ಯಾಕೆಟ್‌ಗಳು, ಗಾಂಜಾ ಸೇದುವ ಕೊಳವೆಗಳು, ಚಾಕುಗಳು, ಗುಟ್ಕಾ ಪ್ಯಾಕೆಟ್‌ಗಳು ಮತ್ತು ಸುಣ್ಣದ ಡಬ್ಬಿಗಳನ್ನು ಪತ್ತೆಹಚ್ಚಿದ್ದಾರೆ.
  2. ವಿಶೇಷ ವಿಚಾರಣಾ ದಳ PI ಶಿವಕುಮಾರ್ ಹಾಗೂ PI ಶ್ರೀನಿವಾಸ ಜಿ.ಟಿ ನೇತೃತ್ವದ ತಂಡವು VIP ಸೆಕ್ಯೂರಿಟಿ ಬ್ಯಾರಕ್ ನಂ.2, ರೂಮ್ ನಂ.2ರಲ್ಲಿ ಸಜಾ ಬಂಧಿ ಮುಜೀಬ್ ನಿಂದ ₹15,680 ನಗದು, ತಂಬಾಕು ಪ್ಯಾಕೆಟ್‌ಗಳು, ಸಿಗರೇಟ್, ಡೈರಿ, ಚಾಕು, SK ಬೀಡಿ ಪ್ಯಾಕೆಟ್‌ಗಳು, ಜೈಲ್ ಕ್ಯಾಂಟೀನ್ ಟೋಕನ್‌ಗಳು ಮತ್ತು ಲೆಕ್ಕದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
  3. ಮಹಿಳಾ ಸಂರಕ್ಷಣಾ ದಳ PI ಚಂದ್ರಪ್ಪ ಬಾರ್ಕಿ ಅವರ ನೇತೃತ್ವದ ತಂಡವು ಸಜಾ ಬಂಧಿಗಳ ‘ಎ’ ಬ್ಯಾರಕ್‌ನಲ್ಲಿ ಟ್ರಿಮ್ಮರ್, ಚಾರ್ಜರ್‌ಗಳು, ಕತ್ತರಿ, ಕಬ್ಬಿಣದ ರಾಡ್, ಹರಿತವಾದ ಚಾಕುಗಳು, ಬೀಡಿಗಳು, ಲೈಟರ್, ಟೊಬಾಕೋ ಪ್ಯಾಕೆಟ್‌ಗಳನ್ನು ಪತ್ತೆಹಚ್ಚಿದೆ.
  4. ಆರ್ಥಿಕ ಅಪರಾಧ ದಳ ಎಸಿಪಿ ನಾಗರಾಜು ಅವರ ನೇತೃತ್ವದ ತಂಡವು ಬ್ಯಾರಕ್ ರೂಮ್ ನಂ. B1 ಮತ್ತು B2 ರಲ್ಲಿ ಶೋಧನೆ ನಡೆಸಿ, 6 ಚಾಕುಗಳು, ವಾಟರ್ ಹೀಟರ್, ಮೆಟಲ್ ಸ್ಟ್ರಿಂಗ್, ಗಾಂಜಾ ಕೊಳವೆಗಳು, ಗಾಂಜಾ ಫಿಲ್ಲರ್ ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಸಾಮಾನ್ಯವಾಗಿ ನಿಷೇಧಿತವಿರುವ ಈ ರೀತಿಯ ವಸ್ತುಗಳು ಕಾರಾಗೃಹದೊಳಗೆ ಇದ್ದು, ಅವುಗಳನ್ನು ಬಂಧಿಗಳು ಬಳಸುತ್ತಿರುವುದು ಗಂಭೀರ ವಿಚಾರವಾಗಿದೆ.

ಕಾರ್ಯಾಚರಣೆ ವೇಳೆ ಪತ್ತೆಯಾಗಿರುವ ಎಲ್ಲಾ ವಸ್ತುಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮಕ್ಕೆ ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related posts