ಕಂಬದಹಳ್ಳಿಯಲ್ಲಿ ಅಕ್ರಮ ಜಾನುವಾರು ಸಾಗಾಣಿಕೆ ಪತ್ತೆ: ಮೂರು ಮಂದಿ ವಿರುದ್ಧ ಪ್ರಕರಣ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ, ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಹಿಂದ್ರಾ ಬೊಲೆರೂ ಮ್ಯಾಕ್ಸ್ ಪಿಕಪ್ ಗೂಡ್ಸ್ ವಾಹನವೊಂದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ.ಮಾರುತಿ ಪಿಎಸ್ಐ ಅವರು ಸ್ಥಳೀಯ ಬಾತ್ಮಿದಾರರಿಂದ ಪಡೆದ ಮಾಹಿತಿಯಂತೆ, ಮಹೀಂದ್ರ ಬೊಲೆರೊ ಮ್ಯಾಕ್ಸ್ ಪಿಕಪ್ (ನಂ. ಕೆಎ-53 ಎಬಿ-6149) ವಾಹನದಲ್ಲಿ ಜಾನುವಾರುಗಳನ್ನು ತುಂಬಿಕೊಂಡು ಶ್ರವಣಬೆಳಗೊಳದ ದಾರಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಕೇಶವೇಗೌಡ, ಪರಶುರಾಮ್ ರಾಥೋಡ್ ಮತ್ತು ಚಾಲಕ ಶೇಷಗಿರಿಯವರ ಸಹಾಯದಿಂದ ತಪಾಸಣೆಗೆ ಮುಂದಾದಾಗ, ಆರೋಪಿಗಳು ವಾಹನ ನಿಲ್ಲಿಸಿ ಓಡಲು ಯತ್ನಿಸಿದರು. ಆದರೆ ಅವರನ್ನು ಸ್ಥಳದಲ್ಲಿಯೇ ಬಂಧಿಸಲಾಯಿತು.ವಾಹನದ ಹಿಂಭಾಗವನ್ನು ಪರಿಶೀಲಿಸಿದಾಗ, 03 ಎಮ್ಮೆಗಳು, 01 ಎಮ್ಮೆ ಕರು, 01 ಹೆಚ್.ಎಫ್ ಹಸು ಮತ್ತು 01 ಜೆರ್ಸಿ ಹಸು, ಒಟ್ಟು 06 ಜಾನುವಾರುಗಳು ಕ್ರೂರವಾಗಿ ತುಂಬಲಾಗಿದ್ದು, ಆಹಾರ ಮತ್ತು ನೀರಿಲ್ಲದ ಸ್ಥಿತಿಯಲ್ಲಿ ಪತ್ತೆಯಾದವು.ಬಂಧಿತರು:ಮಧು.ಎನ್ (35), ಡ್ರೈವರ್, ಜನ್ಮಾಘಟ್ಟ, ಕೋಲಾರ ಜಿಲ್ಲೆಮಂಜುನಾಥ.ಡಿ (35), ವ್ಯವಸಾಯ, ಕಂಬದಹಳ್ಳಿ, ಮಂಡ್ಯ ಜಿಲ್ಲೆವಾಹನ ಮಾಲೀಕ: ಮೂರುಳಿ.ವಿ, ಲಕ್ಕೂರು, ಕೋಲಾರ ಜಿಲ್ಲೆಅವರು ಜಾನುವಾರುಗಳನ್ನು ಕಂಬದಹಳ್ಳಿ, ಹೊನ್ನಾವರ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಖರೀದಿಸಿ ಬೆಂಗಳೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದಂತೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಈ ಸಾರಿಗೆಗೆ ಯಾವುದೇ ಸರಕಾರದ ಪರವಾನಿಗೆ ಅಥವಾ ಪಶುವೈದ್ಯರ ಪ್ರಮಾಣಪತ್ರವಿಲ್ಲ ಎಂದು ತಿಳಿಸಿದ್ದಾರೆ.ಪೊಲೀಸರು ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಕರ್ನಾಟಕ ಜಾನುವಾರು ಜಬ್ದಿ ಮತ್ತು ಸಂರಕ್ಷಣಾ ಕಾಯ್ದೆ 2020, ಪ್ರಾಣಿಧ್ವಂಸ ತಡೆ ಕಾಯ್ದೆ 1960, ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.
ವರದಿ : ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

