ಆನೇಕಲ್ನ ಯುವತಿಯ ನಾಪತ್ತೆ: ಪವನ್ ಎಂಬಾತನ ಮೇಲೆ ಅಪಹರಣದ ಅನುಮಾನ
ಆನೇಕಲ್ ಟೌನ್ನ ತಿಗಳರ ಬೀದಿಯ ನಿವಾಸಿಯಾದ ಶ್ರೀಮತಿ ಉಮಾ ಕೋಂ ಮಾದೇಶ್ ಅವರು ತಮ್ಮ ಮಗಳಾದ 19 ವರ್ಷದ ಚೈತ್ರ ಅವರು ನಾಪತ್ತೆಯಾಗಿರುವ ಕುರಿತು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚೈತ್ರ ಅವರು ಆನೇಕಲ್ನಲ್ಲಿಯೇ ಮಹೇಂದ್ರ ನೂರಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.
ಜುಲೈ 25 ರಂದು ಮಧ್ಯಾಹ್ನ ಸುಮಾರು 3ರಿಂದ 4 ಗಂಟೆಯ ಸಮಯದಲ್ಲಿ ಅವರು ಕೆಲಸದಲ್ಲಿ ನಿರತರಾಗಿದ್ದ ವೇಳೆ ಪಕ್ಕದ ಮನೆಯವರಾದ ಗಣೇಶ್ ಅವರು ಫೋನಿನಲ್ಲಿ ಸಂಪರ್ಕಿಸಿ, ಚೈತ್ರ ಅವರು ಯಾರೋ ಚಿರಪರಿಚಿತನೊಂದಿಗೆ ಕಂಪನಿಯ ಹತ್ತಿರ ಮಾತನಾಡುತ್ತಿರುವುದಾಗಿ ತಿಳಿಸಿದ್ದಾರೆ.
ಅದೇ ದಿನ ಸಂಜೆ 7 ಗಂಟೆಗೆ ಮನೆಗೆ ಬಂದ ಉಮಾ ಅವರು ಮಗಳನ್ನು ವಿಚಾರಿಸಿದಾಗ ಯಾವುದೇ ಸ್ಪಷ್ಟತೆ ದೊರಕಲಿಲ್ಲ. ರಾತ್ರಿ ಸುಮಾರು 9 ಗಂಟೆಗೆ ಚೈತ್ರ ಅವರು ಮನೆಯಿಂದ ಯಾವುದೇ ಮಾಹಿತಿ ನೀಡದೆ ಹೊರ ಹೋಗಿದ್ದು, ನಂತರ ಮನೆಗೆ ಮರಳಿಲ್ಲ.
ಬೇರೆಬೇರೆ ಕಡೆ ಹುಡುಕಿದರೂ ಸುಳಿವು ಸಿಗದ ಕಾರಣ, ಮಹೇಂದ್ರ ಕಂಪನಿಯೊಂದಿಗಿನ ಪರಿಚಿತನಾದ ಪವನ್ ಎಂಬಾತನ ಫೋನ್ ಸಂಖ್ಯೆಯನ್ನು ಪಡೆದು ಸಂಪರ್ಕಿಸಿದಾಗ, ಪವನ್ “ನಾನು ನಿಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದೇನೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪವನ್ ಎಂಬಾತ ಚೈತ್ರ ಅವರ ನಾಪತ್ತೆಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿರ್ಯಾದಿದಾರರು ಮನವಿ ಮಾಡಿದ್ದಾರೆ. ಆನೇಕಲ್ ಪೋಲಿಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ಯುವತಿಯ ವಿವರಗಳು: ಚೈತ್ರ (ವಯಸ್ಸು: 19), ಎತ್ತರ: 4.5 ಅಡಿ, ಮೈಬಣ್ಣ: ಗೋದಿ, ಉಡುಪು: ಕೆಂಪು-ಕಪ್ಪು ಬಣ್ಣದ ಡ್ರೆಸ್, ಭಾಷೆ: ಕನ್ನಡ ಹಾಗೂ ತೆಲುಗು ಮಾತನಾಡುತ್ತಾರೆ.

