ಜೆ.ಪಿ. ನಗರದಲ್ಲಿ ತಂದೆ-ಮಗನ ವಾಗ್ವಾದ ಬಳಿಕ ಮಗ ಕಾಣೆಯಾದ ಪ್ರಕರಣ
ಬೆಂಗಳೂರು, ಆಗಸ್ಟ್: 11 2025
ನಗರದ ಜೆ.ಪಿ. ನಗರದಲ್ಲಿ ಕುಟುಂಬದ ಅಂತರಿಕ ವಿಚಾರದಿಂದ ತಂದೆ-ಮಗನ ನಡುವೆ ನಡೆದ ವಾಗ್ವಾದದ ನಂತರ ಮಗ ಕಾಣೆಯಾದ ಘಟನೆ ಆತಂಕ ಹುಟ್ಟಿಸಿದೆ.
ಯಲಹಂಕ ಉಪನಗರ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ದೂರುದಾರ ವೆಂಕಟೇಶ್ ಹಾಗೂ ಅವರ ಮಗ ಕಿಶೋರ್ ನಡುವೆ ಆಗಸ್ಟ್ 8ರಂದು ಅಂಜಿನಯ್ಯ ದೇವಾಸ್ಥಾನ ಹತ್ತಿರ ಇರುವ ಮನೆಯಲ್ಲಿ ಕುಟುಂಬ ಸಂಬಂಧಿತ ವಿಚಾರವಾಗಿ ಮಾತಿನ ತಕರಾರು ಉಂಟಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮಧ್ಯಾಹ್ನ ಸುಮಾರು 3 ಗಂಟೆಗೆ ಕಿಶೋರ್ ಮನೆಯಿಂದ ಹೊರಟಿದ್ದಾನೆ. ನಂತರ ಆತ ಮನೆಗೆ ಮರಳದೆ ಇರುವುದರಿಂದ ಕುಟುಂಬದಲ್ಲಿ ಆತಂಕ ಉಂಟಾಗಿದೆ.
ಘಟನೆಯ ಬಗ್ಗೆ ವೆಂಕಟೇಶ್ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಕಾಣೆಯಾದ ಕಿಶೋರ್ ಅವರನ್ನು ಪತ್ತೆಹಚ್ಚಲು ಹುಡುಕಾಟ ಆರಂಭಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಕಿಶೋರ್ ಅವರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಠಾಣೆಯನ್ನು ಸಂಪರ್ಕಿಸುವಂತೆ ವಿನಂತಿ ಮಾಡಿದ್ದಾರೆ.

