ಸಿನೆಮಾ ಸುದ್ದಿ 

“ಬ್ರ್ಯಾಟ್” ಟ್ರೇಲರ್ ಬಿಡುಗಡೆ – ಕಿಚ್ಚ ಸುದೀಪ್ ಅನಾವರಣ, ಶಶಾಂಕ್ ನಿರ್ದೇಶನ – ಡಾರ್ಲಿಂಗ್ ಕೃಷ್ಣ ಮುಖ್ಯಭೂಮಿಕೆಯಲ್ಲಿ!

Taluknewsmedia.com

“ಬ್ರ್ಯಾಟ್” ಟ್ರೇಲರ್ ಬಿಡುಗಡೆ – ಕಿಚ್ಚ ಸುದೀಪ್ ಅನಾವರಣ, ಶಶಾಂಕ್ ನಿರ್ದೇಶನ – ಡಾರ್ಲಿಂಗ್ ಕೃಷ್ಣ ಮುಖ್ಯಭೂಮಿಕೆಯಲ್ಲಿ!

ಡಾಲ್ಫಿನ್ ಎಂಟರ್ಟೈನ್ಮೆಂಟ್‌ನ ಅಡಿಯಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ಅವರ ನಿರ್ದೇಶನದಲ್ಲಿ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ “ಬ್ರ್ಯಾಟ್” ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಈ ಟ್ರೇಲರ್ ಅನ್ನು ನಟ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಲಾಂಛನಗೊಳಿಸಿದರು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುದೀಪ್, “ಶಶಾಂಕ್ ಒಬ್ಬ ಪ್ರತಿಭಾವಂತ ಕಥೆಗಾರ ಹಾಗೂ ದೃಢ ನಿರ್ದೇಶಕ. ಅವರ ಸಿನಿಮಾಗಳು ಯಾವಾಗಲೂ ಹೊಸ ಪ್ರಯೋಗಗಳನ್ನು ಒಳಗೊಂಡಿರುತ್ತವೆ. ಕೃಷ್ಣ ಕೂಡ ಶ್ರೇಷ್ಠ ನಟ. ಇವರಿಬ್ಬರ ‘ಕೌಸಲ್ಯ ಸುಪ್ರಜ ರಾಮ’ ಚಿತ್ರ ದೊಡ್ಡ ಹಿಟ್ ಆಗಿತ್ತು. ಅದೇ ಯಶಸ್ಸು ‘ಬ್ರ್ಯಾಟ್’ಗೂ ದೊರೆಯಲಿ ಎಂದು ಹಾರೈಸುತ್ತೇನೆ” ಎಂದರು.

ನಟ ಡಾರ್ಲಿಂಗ್ ಕೃಷ್ಣ ಮಾತನಾಡುತ್ತಾ, “ನನಗೆ ಹಾಗೂ ಸುದೀಪ್ ಸರ್‌ರಿಗೆ ಒಳ್ಳೆಯ ಸಂಬಂಧವಿದೆ. ನಮ್ಮ ಹಿಂದಿನ ಚಿತ್ರ ‘ಕೌಸಲ್ಯ ಸುಪ್ರಜ ರಾಮ’ ಟ್ರೇಲರ್‌ನನ್ನೂ ಸುದೀಪ್ ಅವರೆ ಬಿಡುಗಡೆ ಮಾಡಿದ್ದರು. ಅದು ದೊಡ್ಡ ಯಶಸ್ಸು ಕಂಡಿತ್ತು. ಈ ಬಾರಿ ಕೂಡ ‘ಬ್ರ್ಯಾಟ್’ ಟ್ರೇಲರ್ ಅವರನ್ನುಂದೇ ಬಿಡುಗಡೆ ಮಾಡಲಾಗಿದೆ ಎಂಬುದು ನನಗೆ ವಿಶೇಷ ಕ್ಷಣ. ಶಶಾಂಕ್ ಸರ್ ಹಲವಾರು ಕಥೆಗಳನ್ನು ಕೇಳಿಸಿದ್ರು, ಆದರೆ ಈ ಕಥೆ ನನಗೆ ತಕ್ಷಣವೇ ಇಷ್ಟವಾಯಿತು. ಅರ್ಜುನ್ ಜನ್ಯ ಅವರ ಸಂಗೀತ, ಟ್ರೇಲರ್ ಮತ್ತು ಹಾಡುಗಳಿಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಬಂದಿದೆ. ಈ ಅಕ್ಟೋಬರ್ 31ರಂದು ಚಿತ್ರ ಬಿಡುಗಡೆಯಾಗುತ್ತಿದೆ — ಎಲ್ಲರೂ ಚಿತ್ರಮಂದಿರದಲ್ಲೇ ನೋಡಿ ಪ್ರೋತ್ಸಾಹ ನೀಡಿ” ಎಂದರು.

ನಿರ್ದೇಶಕ ಶಶಾಂಕ್ ಹೇಳಿದರು: “ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡಿದ್ದೇವೆ. ಟೀಸರ್ ಮತ್ತು ಹಾಡುಗಳನ್ನು ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಟ್ರೇಲರ್ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಗೊಳಿಸಲಾಗಿದೆ; ಶೀಘ್ರದಲ್ಲೇ ಇತರೆ ಭಾಷೆಗಳ ಟ್ರೇಲರ್‌ಗಳನ್ನೂ ಅನಾವರಣ ಮಾಡಲಿದ್ದೇವೆ. ಚಿತ್ರತಂಡದ ಶ್ರಮದಿಂದ ‘ಬ್ರ್ಯಾಟ್’ ಒಂದು ಮನರಂಜನೀಯ ಹಾಗೂ ಭಾವಪೂರ್ಣ ಚಿತ್ರವಾಗಿ ಮೂಡಿಬಂದಿದೆ.”

ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರು ಹೇಳಿದರು: “ಕ್ರಿಕೆಟ್ ಹಿನ್ನಲೆಯ ಚಿತ್ರವಾದ ‘ಬ್ರ್ಯಾಟ್’ ಟ್ರೇಲರ್ ಅನ್ನು ಕ್ರಿಕೆಟ್ ಪ್ರೇಮಿ ಮತ್ತು ಪ್ರತಿಭಾವಂತ ನಟ ಸುದೀಪ್ ಅವರಿಂದ ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ. ನಾಯಕ ಕೃಷ್ಣ ಕೂಡ ಒಳ್ಳೆಯ ಕ್ರಿಕೆಟ್ ಆಟಗಾರ. ಶಶಾಂಕ್ ಅವರ ನಿರ್ದೇಶನದಲ್ಲಿ ಸಿನಿಮಾ ಅತ್ಯುತ್ತಮವಾಗಿ ಮೂಡಿದೆ. ಅಕ್ಟೋಬರ್ 31ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಬಂದು ಪ್ರೋತ್ಸಾಹ ನೀಡಬೇಕು.”

ನಾಯಕಿ ಮನಿಶಾ ಕಂದಕೂರ್ ತಮ್ಮ ಪಾತ್ರ ಹಾಗೂ ಚಿತ್ರ ಅನುಭವಗಳ ಬಗ್ಗೆ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ನಟ ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಆನಂದ್ ಆಡಿಯೋ ಆನಂದ್, ಗಾಯಕ ಬಾಳು ಬೆಳಗುಂದಿ, ಗಾಯಕಿ ಲಹರಿ, ನಿರ್ಮಾಪಕರ ಸಹೋದರ ಬದರಿನಾಥ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Related posts