ಸುದ್ದಿ 

ಎರಡು ದಿನಗಳ ಬಳಿಕವೂ ಪತ್ತೆಯಾಗದ ಗೃಹಿಣಿಯ ಸಾವು ಪ್ರಕರಣದ ಆರೋಪಿಗಳು — ಕುಟುಂಬದ ಕಣ್ಣೀರಿನಲ್ಲಿ ತೇಲುತ್ತಿರುವ ತೀರ್ಥಹಳ್ಳಿ ಗ್ರಾಮ

Taluknewsmedia.com

ಎರಡು ದಿನಗಳ ಬಳಿಕವೂ ಪತ್ತೆಯಾಗದ ಗೃಹಿಣಿಯ ಸಾವು ಪ್ರಕರಣದ ಆರೋಪಿಗಳು — ಕುಟುಂಬದ ಕಣ್ಣೀರಿನಲ್ಲಿ ತೇಲುತ್ತಿರುವ ತೀರ್ಥಹಳ್ಳಿ ಗ್ರಾಮ

ಶಿವಮೊಗ್ಗ: ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗೃಹಿಣಿಯ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಬಂದಿದೆ. ಕಳೆನಾಶಕ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಕಳೆದುಕೊಂಡ ಪೂಜಾ (30) ಎಂಬ ಮಹಿಳೆಯ ಸಾವು ಪ್ರಕರಣದ ಆರೋಪಿಗಳು — ಪತಿ ಶರತ್, ಅತ್ತೆ, ಮಾವ ಮತ್ತು ನಾದಿನಿ — ಇಬ್ಬರು ದಿನ ಕಳೆದರೂ ಇನ್ನೂ ಪೊಲೀಸರ ಬಲೆಗೆ ಸಿಕ್ಕಿಲ್ಲ.

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಹತ್ತಿರದ ಶಂಕರಳ್ಳಿ ಈಶ್ವರಪ್ಪ ಅವರ ಪುತ್ರಿ ಪೂಜಾಳಿಗೆ, ಮೂರು ವರ್ಷಗಳ ಹಿಂದೆ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬುವನೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಗಂಡು ಮಗು ಇದೆ. ಆದರೆ ಮದುವೆಯ ಬಳಿಕ ಪೂಜಾಳಿಗೆ ಗಂಡ ಹಾಗೂ ಅತ್ತೆಮಾವಂದಿರಿಂದ ನಿರಂತರ ಕಿರುಕುಳ ಎದುರಾಗುತ್ತಿತ್ತು ಎನ್ನಲಾಗಿದೆ.

ಈ ನೊಂದ ಜೀವನದಿಂದ ಬೇಸತ್ತ ಪೂಜಾ ಕೆಲ ದಿನಗಳ ಹಿಂದೆ ತಾಯಿ ಮನೆಗೆ ಬಂದು ತಾನು ಅನುಭವಿಸುತ್ತಿರುವ ನೋವಿನ ಕಥೆಯನ್ನು ಹೇಳಿಕೊಂಡಿದ್ದಳು. ಆದರೆ ತವರು ಮನೆಯವರು ಎಲ್ಲವೂ ಸರಿಯಾಗುತ್ತದೆ ಎಂದು ಧೈರ್ಯ ನೀಡಿ ವಾಪಸ್ ಗಂಡನ ಮನೆಗೆ ಕಳುಹಿಸಿದ್ದರು. ಕೆಲವು ದಿನಗಳಲ್ಲೇ ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಳು.

ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಪೂಜಾ ಕೊನೆಯುಸಿರೆಳೆದಿದ್ದಾಳೆ. ಈಗ ಆಕೆಯ ಚಿಕ್ಕ ಮಗುವಿನ ಕಣ್ಣೀರಿನಲ್ಲಿ ಸಂಪೂರ್ಣ ಕುಟುಂಬವೇ ಮುಳುಗಿದೆ.

ಈ ನಡುವೆ, ಪೂಜಾ ಸಾವಿನ ನಂತರ ಪತಿ ಶರತ್ ಹಾಗೂ ಆತನ ತಂದೆ, ತಾಯಿ ಮತ್ತು ಸಹೋದರಿ ಎಲ್ಲರೂ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಇಬ್ಬರು ದಿನ ಕಳೆದರೂ ಆರೋಪಿಗಳ ಪತ್ತೆಯಾಗಿ ಇಲ್ಲದೆ, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಗ್ರಾಮಸ್ಥರು ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪೂಜಾಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸ್ ಇಲಾಖೆ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದೆ.

Related posts