ಸ್ವತ್ತಿನ ವಿವಾದದಲ್ಲಿ ಬೆದರಿಕೆ – ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು, ಜುಲೈ 19:2025
ನಗರದ ಉಪನಗರದಲ್ಲೊಂದು ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಭಾರೀ ಗಂಭೀರತೆಯ ಕಡೆಗೆ ತಿರುಗಿದ್ದು, ಈ ಪ್ರಕರಣದಲ್ಲಿ ಮೂರು ಮಂದಿ ಆರೋಪಿಗಳ ವಿರುದ್ಧ ಬೆದರಿಕೆ ಹಾಗೂ ಸ್ವತ್ತಿಗೆ ಸಂಬಂಧಿಸಿದ ಕಳಪೆ ಚಟುವಟಿಕೆ ನಡೆಸಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.
ಸಾಕಮ್ಮ ವರದಿಯ ಪ್ರಕಾರ, 50 x 31 ಅಡಿ ಅಳತೆಯ (ಒಟ್ಟು 1550 ಚದರ ಅಡಿ) ನಿವೇಶನವನ್ನು ಅವರು ತಮ್ಮ ಪುತ್ರ ಯಲಪ್ರಾರವರಿಂದ 2023ರ ಜನವರಿ 11ರಂದು ಹಕ್ಕು ಬಿಡುಗಡೆ ಪತ್ರದ ಮೂಲಕ ಪಡೆದಿದ್ದರು. ತಮ್ಮ ಸ್ವತ್ತನ್ನು ಆರೈಕೆ ಮಾಡಲು ದೂರುದಾರರು ಆಗಾಗ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, 2024ರಿಂದ ಯಾರೋ ಅಪರಿಚಿತರು “ಲೋಕಾಯುಕ್ತದಲ್ಲಿ ಪ್ರಕರಣ ಬಾಕಿಯಿದೆ” ಎಂಬ ಸೂಚನೆ ಇರುವ ಬೋರ್ಡ್ ಅನ್ನು ಅಲ್ಲಿ ಸ್ಥಾಪಿಸಿದ್ದರು.
ಹೆಚ್ಚಿನ ತನಿಖೆಯಲ್ಲಿ, ಈ ಬೋರ್ಡ್ ಆರೋಪಿ ಹರೀಶ್ ಕುಮಾರ್ ಎಂಬವರಿಂದ ಹಾಕಲಾಗಿದೆ ಎಂಬ ಮಾಹಿತಿ ಸಂಬಂಧಿಕರು ಹಾಗೂ ಸ್ಥಳೀಯರಿಂದ ದೂರುದಾರರಿಗೆ ತಿಳಿದುಬಂದಿದೆ. ದಿನಾಂಕ 21/04/2025ರಂದು ದೂರುದಾರರು ಮತ್ತು ಅವರ ಸಂಬಂಧಿಕರು ಸ್ಥಳಕ್ಕೆ ತೆರಳಿದಾಗ ಆರೋಪಿಗಳಿಗೆ ವಿಚಾರಣೆ ಮಾಡಿದ ಸಂದರ್ಭದಲ್ಲಿ, ಆತನಿಂದ ಕತ್ತಿ ಮತ್ತು ಚೂರಿಯಿಂದ ಕೊಲೆಮಾಡುವುದಾಗಿ ಜೀವ ಬೆದರಿಕೆ ಬಂದಿದೆ.
ಇದೇ ರೀತಿಯಲ್ಲಿ, 10/05/2025 ರಂದು ಮತ್ತೆ ಸ್ವತ್ತಿಗೆ ಸಂಬಂಧಿಸಿದ ಬೋರ್ಡ್ ಅಳವಡಿಸಲ್ಪಟ್ಟಿದ್ದು ಕಂಡುಬಂದಿದೆ. ದೂರುದಾರರು ಸ್ವತ್ತನ್ನು ಮಾರಲು ಪ್ರಯತ್ನಿಸಿದಾಗ ಆರೋಪಿಗಳು ಖರೀದಿದಾರರಿಗೆ ಬೆದರಿಕೆ ಹಾಕಿ, ‘ಲೋಕಾಯುಕ್ತದಲ್ಲಿ ಪ್ರಕರಣವಿದೆ’, ‘ಖರೀದಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ’, ಮತ್ತು ‘ನಮಗೆ ಕಮಿಷನ್ ನೀಡಬೇಕು’ ಎಂದು ಒತ್ತಡ ಹೇರಿದ್ದಾರೆ ಎಂಬ ಆರೋಪ ಇದೆ.
ಈ ಪ್ರಕರಣದ ಬಗ್ಗೆ ಕಾನೂನು ಕ್ರಮ ಜರಗಿಸಲು ಸಾಕಮ್ಮ ನ್ಯಾಯಾಲಯದ ಮೊರೆ ಹೋಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ಪ್ರಾರಂಭಿಸಿದ್ದಾರೆ. ಆರೋಪಿಗಳಿಗೆ ಎದುರಾಗಿ IPC ಸೆಕ್ಷನ್ಗಳಡಿ ಕೇಸ್ ದಾಖಲಾಗಿದೆ.

