ಸುದ್ದಿ 

ಎಸ್ಟಿಆರ್‌ಆರ್‌ ರಾಷ್ಟ್ರೀಯ ಹೆದ್ದಾರಿ ಯೋಜನೆ: 2021ರಿಂದ ಭೂಮುಕ್ತಾಯ ಸಿಕ್ಕಿಲ್ಲ — ರೈತರ ಕಣ್ಣೀರನ್ನು ಒರೆಸಲು ಕೇಂದ್ರಕ್ಕೆ ಮನವಿ

Taluknewsmedia.com

ಎಸ್ಟಿಆರ್‌ಆರ್‌ ರಾಷ್ಟ್ರೀಯ ಹೆದ್ದಾರಿ ಯೋಜನೆ: 2021ರಿಂದ ಭೂಮುಕ್ತಾಯ ಸಿಕ್ಕಿಲ್ಲ — ರೈತರ ಕಣ್ಣೀರನ್ನು ಒರೆಸಲು ಕೇಂದ್ರಕ್ಕೆ ಮನವಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ, ರಾಮನಗರ, ಆನೇಕಲ್ ಮತ್ತು ಹರಳಹಳ್ಳಿ ಮಾರ್ಗವಾಗಿ ಸಾಗುವ ಗ್ರೀನ್‌ಫೀಲ್ಡ್ ಎಸ್ಟಿಆರ್‌ಆರ್‌ (Satellite Town Ring Road) ರಾಷ್ಟ್ರೀಯ ಹೆದ್ದಾರಿ ಯೋಜನೆಯ ಭೂಸ್ವಾಧೀನ ಸಂಬಂಧ ರೈತರು ಇನ್ನೂ ಪರಿಹಾರ ಪಡೆಯದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.
2021ರಲ್ಲಿ 2,200 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದರೂ, ಇದುವರೆಗೆ ರೈತರಿಗೆ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ಈ ಕುರಿತು ಸಂಸದರು ಸಂಸತ್‌ ಸಭೆಯಲ್ಲಿ ವಿಷಯ ಎತ್ತಿ ರೈತರ ನೋವನ್ನು ವಿವರಿಸಿದ್ದಾರೆ.

“ರೈತರು ಕಣ್ಣೀರಿನಲ್ಲಿ… ತಕ್ಷಣ ಪರಿಹಾರ ಬಿಡುಗಡೆ ಮಾಡಿ” — ಸಂಸದರ ಒತ್ತಾಯ…

ಸಂಸದರು ಮಾತನಾಡುತ್ತಾ,..
“ಭೂಮಿ ಪಡೆದು ಮೂರು ವರ್ಷಗಳು ಕಳೆದರೂ ರೈತರಿಗೆ ಒಂದು ರೂಪಾಯಿ ಪರಿಹಾರವೂ ಸಿಕ್ಕಿಲ್ಲ. ಜನರು ಸಂಕಷ್ಟದಲ್ಲಿ, ಕಣ್ಣೀರಿನಲ್ಲಿ ಇದ್ದಾರೆ. ರಸ್ತೆ ಸಾರಿಗೆ ಸಚಿವಾಲಯ ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯ ತಕ್ಷಣ ಕ್ರಮ ಕೈಗೊಂಡು ಈ ಯೋಜನೆಗೆ ಅನುಮೋದನೆ ನೀಡಿ, ರೈತರಿಗೆ ಪರಿಹಾರ ಹಂಚಿಕೆ ನಡೆಸಬೇಕು” ಎಂದು ಮನವಿ ಮಾಡಿದರು.
ಎಸ್ಟಿಆರ್‌ಆರ್‌ ಯೋಜನೆ ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ ಅತ್ಯಂತ ಪ್ರಮುಖ ಅಭಿವೃದ್ಧಿ ಯೋಜನೆ ಎಂಬುದಾಗಿ ಅವರು ತಿಳಿಸಿದರು.

ರೈತರ ನಿರೀಕ್ಷೆಗೆ ಬ್ರೇಕ್ ಹಾಕಿರುವ ವಿಳಂಬ
2021ರಲ್ಲಿ ಸ್ವಾಧೀನಗೊಂಡ ಭೂಮಿ – 2,200 ಎಕರೆ
ಪರಿಹಾರ ಬಿಡುಗಡೆ – ಇದುವರೆಗೆ ಶೂನ್ಯ
ರೈತರ ಜೀವನ, ಕೃಷಿ ಮತ್ತು ಮರುಸ್ಥಾಪನೆ — ಸಂಕಷ್ಟದಲ್ಲಿ ಕೇಂದ್ರದ ತಕ್ಷಣದ ಹಸ್ತಕ್ಷೇಪಕ್ಕೆ ಬೇಡಿಕೆ
ರಸ್ತೆ ಸಾರಿಗೆ ಇಲಾಖೆಯಲ್ಲಿದ್ದ ಕಡತಗಳು ಅನುಮೋದನೆಗಾಗಿ ಕಾಯುತ್ತಿವೆ ಎಂದು ಮಾಹಿತಿ ನೀಡಿದ ಅವರು, ಯೋಜನೆಯ ವಿಳಂಬದಿಂದ ರೈತರ ಮನೆಯ ಆರ್ಥಿಕತೆ ಕುಂಠಿತವಾಗಿದ್ದು, ತಕ್ಷಣ ಪರಿಹಾರ ನೀಡದೇ ಇದ್ದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಸಿದರು.

  • ಡಾ. ಸಿ.ಎನ್. ಮಂಜುನಾಥ್ .ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರು.

Related posts