ಸುದ್ದಿ 

ಹೊನ್ನೇನಹಳ್ಳಿ ಮಹಿಳೆಗೆ ಅಂಗಡಿ ಮಾಲೀಕರಿಂದ ಲೈಂಗಿಕ ಕಿರುಕುಳ – ಪ್ರಕರಣ ದಾಖಲೆ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ 23 ಆಗಸ್ಟ್ 2025ಹೊನ್ನೇನಹಳ್ಳಿಯ ಜರ್ ಸೆರಾಮಿಕ್ ಟೈಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅಂಗಡಿ ಮಾಲೀಕರಾದ ರವಿ ಅಗರ್ವಾಲ್ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಕವಿತಾ ಅವರ ದೂರಿನ ಪ್ರಕಾರ, ಆರೋಪಿಯು ಹಲವು ತಿಂಗಳುಗಳಿಂದ ಅವಳನ್ನು ಅಂಗಡಿಯ ಕ್ಯಾಬಿನ್‌ಗೆ ಕರೆಯಿಸಿ ಅಸಭ್ಯ ವರ್ತನೆ ಮಾಡುತ್ತಿದ್ದನು. ತನ್ನ XUV ಕಾರಿನಲ್ಲಿ ಕೂರಿಸಿಕೊಂಡು ಮನೆ ಹತ್ತಿರಕ್ಕೆ ಕರೆದುಕೊಂಡು ಹೋಗಿ ಶಾರೀರಿಕ ಕಿರುಕುಳ ನೀಡುತ್ತಿದ್ದನೆಂದು ದೂರಿನಲ್ಲಿ ಹೇಳಲಾಗಿದೆ. “ನಿನ್ನ ಗಂಡ ಬಿಕಾರಿ, ನನ್ನ ಬಳಿ 50–60 ಕೋಟಿ ಇದೆ, ನನಗೆ ಏನೂ ಮಾಡಲು ಯಾರಿಗೂ ಸಾಧ್ಯವಿಲ್ಲ” ಎಂದು ಅವಳಿಗೆ ಬೆದರಿಕೆ ಹಾಕುತ್ತಿದ್ದನೆಂದು ಆರೋಪವಿದೆ. ಇದಲ್ಲದೆ, “ನೀನು ತಿರುಪತಿಗೆ ಬರಬೇಕು, ಇಲ್ಲವಾದರೆ ನಿನ್ನ ಗಂಡ ಮತ್ತು ಮಗುವನ್ನು ಕೊಲೆ ಮಾಡಿಸುತ್ತೇನೆ” ಎಂದು ಬೆದರಿಸಿ ಅವಳನ್ನು ತಿರುಪತಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ ಘಟನೆ ದೂರುನಲ್ಲಿದೆ.…

ಮುಂದೆ ಓದಿ..
ಸುದ್ದಿ 

ಎಂ.ಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ

Taluknewsmedia.com

Taluknewsmedia.comಬೆಂಗಳೂರು 23 ಆಗಸ್ಟ್ 2025ಯಲಹಂಕ ಎಂ.ಎಸ್ ಪಾಳ್ಯ ಮುಖ್ಯರಸ್ತೆಯ ಆಯೇಶಾ ಹೋಟೆಲ್ ಹತ್ತಿರ ಅಮೆಜಾನ್ ಗೂಡ್ಸ್ ವಾಹನದ ಚಾಲಕನ ಮೇಲೆ ಬೈಕ್ ಸವಾರ ಮತ್ತು ಅವನ ಸ್ನೇಹಿತರಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸರ ಮಾಹಿತಿಯ ಪ್ರಕಾರ, ಸಂಜಯ್ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ಟಾಟಾ ವಿನೋ ವಾಹನ (ನಂ. KA 04 S 1990) ಚಾಲನೆ ಮಾಡುತ್ತಾನೆ. ಬೆಳಿಗ್ಗೆ ಸುಮಾರು 8.45ಕ್ಕೆ ಯಲಹಂಕದ ಕಡೆಗೆ ತೆರಳುತ್ತಿದ್ದಾಗ, ಸುಮಾರು 9.10ರ ಸುಮಾರಿಗೆ ಆಯೇಶಾ ಹೋಟೆಲ್ ಹತ್ತಿರ ಕೆಎ 01 ಎಸ್ 7128 ನಂಬರಿನ ಬೈಕ್ ಸವಾರ ಏಕಾಏಕಿ ರಸ್ತೆ ಮಧ್ಯಕ್ಕೆ ಬಂದಿದ್ದಾನೆ. ಸಂಜಯ್ ಅವರು ತಕ್ಷಣ ಬ್ರೇಕ್ ಹಾಕಿ ಹಾರ್ನ್ ಹಾಕಿದ ಹಿನ್ನೆಲೆಯಲ್ಲಿ ಬೈಕ್ ಸವಾರ ಕೋಪಗೊಂಡು ಅವಾಚ್ಯ ಪದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಮೂಗಿಗೆ ಹೊಡೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಸ್ಥಳಕ್ಕೆ…

ಮುಂದೆ ಓದಿ..
ಸುದ್ದಿ 

ಕೊಡಿಗೆಹಳ್ಳಿ ವೇಶ್ಯಾವಾಟಿಕೆ ದಂಧೆ – ಮಹಿಳಾ ಸಂರಕ್ಷಣಾ ದಳದ ದಾಳಿ

Taluknewsmedia.com

Taluknewsmedia.com ಬೆಂಗಳೂರು:23 ಆಗಸ್ಟ್ 2025ಬೆಂಗಳೂರು ನಗರದ ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚುವಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿಯಾಗಿದೆ. 2025ರ ಆಗಸ್ಟ್ 22ರಂದು ಸಂಜೆ 5.15ರ ಸುಮಾರಿಗೆ, ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಕೊಡುಗೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಪ್ರೈ ಅವರು ನೀಡಿದ ಮಾಹಿತಿಯ ಮೇರೆಗೆ, ಕೊಡಿಗೆಹಳ್ಳಿಯ ವಿದ್ಯಾರಣ್ಯಪುರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಯಿತು. ಪದ್ಮಾ (ಲೇಟ್ ಹೇಮಂತ್ ಕುಮಾರ್), ನಿವಾಸಿ – ನಂ.118, ವಿದ್ಯಾರಣ್ಯಪುರ, ಬೆಂಗಳೂರು, ಅವರು ತಮ್ಮ ಮನೆಯನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆಂದು ಪತ್ತೆಯಾಗಿದೆ. ತನಿಖೆಯ ಪ್ರಕಾರ, ಅವರು ತಮ್ಮ ಮೊಬೈಲ್ ನಂಬರ್ 87929 79435 ಮುಖಾಂತರ ಗಿರಾಕಿಗಳನ್ನು ಸಂಪರ್ಕಿಸಿ, ಹೆಚ್ಚಿನ ಹಣ ಪಡೆದು ಸ್ಥಳೀಯ ಹಾಗೂ ಹೊರರಾಜ್ಯದ ಮಹಿಳೆಯರನ್ನು ಪುಸಲಾಯಿಸಿ, ಅಕ್ರಮ ವೇಶ್ಯಾವಾಟಿಕೆಗೆ ಒದಗಿಸುತ್ತಿದ್ದರು. ಅವರ ವಿರುದ್ಧ ಐಟಿಪಿ ಕಾಯ್ದೆ ಕಲಂ 3, 4, 5 ಹಾಗೂ…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನ ಸಹಕಾರನಗರದಲ್ಲಿ 34 ವರ್ಷದ ವ್ಯಕ್ತಿ ಕಾಣೆ

Taluknewsmedia.com

Taluknewsmedia.comಬೆಂಗಳೂರು 23 ಆಗಸ್ಟ್ 2025ಸಹಕಾರನಗರದಲ್ಲಿ 34 ವರ್ಷದ ಕೃಪ ಎಂಬ ವ್ಯಕ್ತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕುಟುಂಬದವರ ಮಾಹಿತಿಯಂತೆ, ಆಗಸ್ಟ್ 19, 2025 ರಂದು ಮಧ್ಯಾಹ್ನ 12 ಗಂಟೆಗೆ ಗಾರೆ ಕೆಲಸಕ್ಕಾಗಿ ಸಹಕಾರನಗರಕ್ಕೆ ತೆರಳಿದ ಕೃಪ ಅವರು ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಕೈ ತಾಗಿದ್ದು, ಆಕೆ 112 ತುರ್ತು ಸೇವೆಗೆ ಕರೆ ಮಾಡಿ ದೂರು ನೀಡಿದರು. ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಂದು ವಿಚಾರಣೆ ನಡೆಸುತ್ತಿದ್ದಾಗ ಭಯಗೊಂಡ ಕೃಪ ಓಡಿ ಹೋಗಿದ್ದು, ನಂತರ ಮನೆಗೆ ಮರಳಲಿಲ್ಲ. ಹಲವೆಡೆ ಹುಡುಕಿದರೂ ಅವರ ಪತ್ತೆಯಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಕೃಪ ಅವರ ಲಕ್ಷಣಗಳು: ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, 5 ಅಡಿ ಎತ್ತರ. ಅವರು ಕನ್ನಡ, ತೆಲುಗು ಹಾಗೂ ತಮಿಳು ಮಾತನಾಡಲು ಬಲ್ಲವರು. ಕಾಣೆಯಾಗುವ ವೇಳೆ ಪರ್ಪಲ್ ಬಣ್ಣದ ಶರ್ಟ್ ಮತ್ತು ಗ್ರೇ ಬಣ್ಣದ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹೂಡಿಕೆ ಮೋಸ – ಯುವಕನಿಗೆ ರೂ.2.53 ಲಕ್ಷ ನಷ್ಟ

Taluknewsmedia.com

Taluknewsmedia.comಬೆಂಗಳೂರು:23 ಆಗಸ್ಟ್ 2025ಆನ್‌ಲೈನ್‌ನಲ್ಲಿ ಸುಲಭ ಲಾಭದಾಸೆ ಜಾಹೀರಾತಿಗೆ ಮರುಳಾದ ಯುವಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ವರದಿಯಾಗಿದೆ. ಶಶಿಕುಮಾರ್ ಅವರ ಹೇಳಿಕೆಯ ಪ್ರಕಾರ, 21-08-2025 ರಂದು http://hot.mkprosty/epromotions ಎಂಬ ಲಿಂಕ್ ಮೂಲಕ “ಹೂಡಿಕೆ ಮಾಡಿದರೆ 30% ಲಾಭ ದೊರೆಯುತ್ತದೆ” ಎಂಬ ಜಾಹೀರಾತನ್ನು ನೋಡಿ ನಂಬಿ, ತನ್ನ ICICI ಬ್ಯಾಂಕ್, SBI ಬ್ಯಾಂಕ್ ಮತ್ತು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಗಳಿಂದ ಒಟ್ಟು ರೂ.2,53,000/- ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ನಂತರ ಯಾವುದೇ ಲಾಭ ನೀಡದೆ ಹಣ ವಾಪಸು ಕೊಡದೇ ತಲೆಮರೆಸಿಕೊಂಡ ಆರೋಪಿಗಳ ವಿರುದ್ಧ ಶಶಿಕುಮಾರ್ ಅವರು ಕೊಡುಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆನ್‌ಲೈನ್ ಹೂಡಿಕೆ ಮೋಸದ ಕುರಿತು ತನಿಖೆ ಕೈಗೊಂಡಿದ್ದಾರೆ

ಮುಂದೆ ಓದಿ..
ಸುದ್ದಿ 

ಶಾಂತಿನಿಕೇತನ ಶಾಲಾ ವಿದ್ಯಾರ್ಥಿ ಕಾಣೆ –ಕೊಡುಗೆಹಳ್ಳಿ ಪೊಲೀಸರಲ್ಲಿ ದೂರು

Taluknewsmedia.com

Taluknewsmedia.comಬೆಂಗಳೂರು 23 ಆಗಸ್ಟ್ 2025ಕಾಳೀಗ ಜಾಜರಾಗಿ ನಿವಾಸಿ ಮಲ್ಲಯ್ಯ ಅವರ 13 ವರ್ಷದ ಮಗ ಯುವರಾಜ ಕಾಣೆಯಾಗಿರುವ ಘಟನೆ ನಡೆದಿದೆ. ಯುವರಾಜನು ಭದ್ರಪ್ಪ ಲೇಔಟ್‌ನ ಶಾಂತಿನಿಕೇತನ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದು, 21-08-2025 ರಂದು ಬೆಳಿಗ್ಗೆ 7.45ಕ್ಕೆ ಸೈಕಲ್‌ನಲ್ಲಿ ಶಾಲೆಗೆ ತೆರಳಿದ್ದ. ಆದರೆ ಸಂಜೆ ಮನೆಗೆ ಮರಳದೆ, ಪೋಷಕರು ಹುಡುಕಾಟ ನಡೆಸಿದಾಗ ಮನೆಯ ಪಕ್ಕದ ರಸ್ತೆಯಲ್ಲಿ ಅವನ ಸೈಕಲ್ ಮತ್ತು ಶಾಲಾ ಬ್ಯಾಗ್ ಸಿಕ್ಕಿವೆ. ಸ್ನೇಹಿತರು, ಆಟದ ಮೈದಾನ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದರೂ ಬಾಲಕನ ಪತ್ತೆಯಾಗಿಲ್ಲ. ಕಾಣೆಯಾಗುವ ಸಮಯದಲ್ಲಿ ಅವನು ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ-ನೀಲಿ ಮಿಶ್ರಿತ ಶಾಲಾ ಸಮವಸ್ತ್ರ ಧರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕೊಡುಗೆಹಳ್ಳಿ ಪೊಲೀಸರು ಯುವರಾಜನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ

ಮುಂದೆ ಓದಿ..
ಸುದ್ದಿ 

ಮಾರುತಿ ನಗರದಲ್ಲಿ ದಾರುಣ ಅಪಘಾತ – 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ

Taluknewsmedia.com

Taluknewsmedia.comಬೆಂಗಳೂರು 22 ಆಗಸ್ಟ್ 2025ಬೆಂಗಳೂರು: 21.08.2025 ರಂದು ಬೆಳಿಗ್ಗೆ ಸುಮಾರು 8:20 ಗಂಟೆಗೆ ಮಾರುತಿ ನಗರ, ಕೋಗಿಲು ಮುಖ್ಯ ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ದಾರುಣ ರಸ್ತೆ ಅಪಘಾತ ಸಂಭವಿಸಿದೆ. ಯಲಹಂಕ ಸಂಚಾರಿ ಪೊಲೀಸರ ಪ್ರಕಾರ, ತನ್ನಿ ಕೃಷ್ಣ (10) ಹಾಗೂ ಕೃತಿ ಕೃಪಾ (5) ಎಂಬ ಇಬ್ಬರು ಮಕ್ಕಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಪೋಷಕರು ರಸ್ತೆ ಮೇಲೆ ಸಾಗುತ್ತಿದ್ದರು. ಈ ವೇಳೆ ಕೋಗಿಲು ಕ್ರಾಸ್ ದಿಕ್ಕಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಬಿ.ಎಂ.ಟಿ.ಸಿ ಬಸ್ (ನಂಬರ್ KA-57-F-5375) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ಬಸ್ ಚಕ್ರವು ತನ್ನಿ ಕೃಷ್ಣ ಅವರ ತಲೆಯ ಮೇಲೆ ಹಾದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಸ್ಥಳೀಯರು ಮತ್ತು ಯಲಹಂಕ ಸಂಚಾರಿ ಪೊಲೀಸರು ತಕ್ಷಣ ನೆರವಿಗೆ ಧಾವಿಸಿದರೂ ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಅಪಘಾತಕ್ಕೆ ಕಾರಣನಾದ…

ಮುಂದೆ ಓದಿ..
ಸುದ್ದಿ 

ಯಮಹಾ ಬೈಕ್ ಕಳ್ಳತನ: ಕೇರಳಕ್ಕೆ ಹೋದ ಮಾಲೀಕ ವಾಪಸ್ಸು ಬಂದಾಗ ವಾಹನ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು:22 ಆಗಸ್ಟ್ 2025ಯಲಹಂಕ ಕಟ್ಟಿಗೆನಹಳ್ಳಿ ಎಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ವರದಿಯಾಗಿದೆ. ಅರುಣ್ ಸಿ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ತಮ್ಮ Yamaha FZS ಬೈಕ್‌ (ನಂಬರ KA51-C-89295) ಅನ್ನು ಮನೆಯ ಬಳಿ ನಿಲ್ಲಿಸಿ, 01/07/2025 ರಂದು ತಮ್ಮ ಸ್ವಂತ ಊರಾದ ಕೇರಳಕ್ಕೆ ತೆರಳಿದ್ದರು. 21/08/2025 ಬೆಳಿಗ್ಗೆ 9.00 ಗಂಟೆಗೆ ವಾಪಸ್ಸು ಬಂದಾಗ ಬೈಕ್ ಸ್ಥಳದಲ್ಲಿಲ್ಲವೆಂದು ಗಮನಿಸಿದ ಅವರು ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ ವಾಹನ ಪತ್ತೆಯಾಗದ ಕಾರಣ ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಮಾಲೀಕರು ಸುಮಾರು ₹20,000 ನಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೈಕ್ ಕಳ್ಳತನಕ್ಕೆ ಸಂಬಂಧಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಾಹನದ ಸುಳಿವು ತಿಳಿದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಮುಂದೆ ಓದಿ..
ಸುದ್ದಿ 

ಘೋರ ರಸ್ತೆ ಅಪಘಾತದಲ್ಲಿ ಯುವತಿಯ ದುರ್ಮರಣ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ 22 ಆಗಸ್ಟ್ 2025ದೊಡ್ಡಬಳ್ಳಾಪುರ ಬಾಷೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನಿವಾಸಿ ಜಯಶ್ರೀ ಬಿ.ಆರ್ (22) ಅವರು ದುರಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಜಯಶ್ರೀ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನದಂತೆ 21 ಆಗಸ್ಟ್ ಬೆಳಿಗ್ಗೆ 8 ಗಂಟೆಗೆ ಮನೆತನಕ್ಕೆ ತಿಳಿಸಿ KA51-X-6439 ನಂಬರಿನ ಟಿವಿಎಸ್ ವೆಗೋ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೊರಟಿದ್ದರು. ಬೆಳಿಗ್ಗೆ ಸುಮಾರು 8:30ಕ್ಕೆ ಮಾರಸಂದ್ರ ಗ್ರಾಮದ ಎಸ್.ಎಂ.ಎಸ್ ಬಾರ್ & ರೆಸ್ಟೋರೆಂಟ್ ಮುಂಭಾಗ ಬೆಂಗಳೂರು–ದೊಡ್ಡಬಳ್ಳಾಪುರ ರಸ್ತೆಯಲ್ಲಿ, KA02-AF-9951 ನಂಬರಿನ ಟಾಟಾ ಟಿಪ್ಪರ್ ಲಾರಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿದ ಪರಿಣಾಮ ಜಯಶ್ರೀ ಅವರ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಜಯಶ್ರೀ ಬಿದ್ದು, ಲಾರಿಯ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಘಟನೆಯ ಕುರಿತು ಮಾಹಿತಿ ದೊರೆತ ತಕ್ಷಣ ಜಯಶ್ರೀ ಅವರ ತಂದೆ-ತಾಯಿ ಸ್ಥಳಕ್ಕೆ ಬಂದು ಪರಿಶೀಲಿಸಿ ರಾಜಾನುಕುಂಟೆ…

ಮುಂದೆ ಓದಿ..
ಸುದ್ದಿ 

ಸಂಪಿಗೆಹಳ ಪೊಲೀಸ್ ಠಾಣೆ – ಎಂ.ಡಿ.ಎಂ.ಎ ವಶಪಡಿಕೆ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು 22 ಆಗಸ್ಟ್ 2022ದಿನಾಂಕ 21-08-2025 ಮಧ್ಯರಾತ್ರಿ, ಸಂಪಿಗೆಹಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ರವರ ನೇತೃತ್ವದಲ್ಲಿ, ಥಣಿಸಂದ್ರದ ಅಲಿ ಮಸೀದಿ ಹತ್ತಿರದ ಕಾರ್ ಗ್ಯಾರೇಜ್‌ನಲ್ಲಿ ದಾಳಿ ನಡೆಸಲಾಯಿತು. ಮಾಹಿತಿ ಆಧಾರವಾಗಿ, ಗ್ಯಾರೇಜ್‌ನಲ್ಲಿ ಒಬ್ಬ ವ್ಯಕ್ತಿ ಎಂ.ಡಿ.ಎಂ.ಎ ಮಾದಕ ವಸ್ತು ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕಾಯುತ್ತಿದ್ದನೆಂಬ ಸುಳಿವು ಪೊಲೀಸರಿಗೆ ದೊರಕಿತ್ತು. ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ ವೇಳೆ, ಆರೋಪಿ ಸೈಯ್ಯದ್ ಜಾವೀದ್ ಅಲಿಯಾಸ್ ಬೆಂಡ್ ಜಾವೀದ್ (34 ವರ್ಷ) ಬಂಧಿತನಾಗಿದ್ದು, ಅವನಿಂದ ಸುಮಾರು 13 ಗ್ರಾಂ ಎಂ.ಡಿ.ಎಂ.ಎ, ಒಂದು ತೂಕದ ಯಂತ್ರ ಹಾಗೂ ಚಾಕು ವಶಪಡಿಸಿಕೊಳ್ಳಲಾಗಿದೆ. ಸೋಕೊ ತಂಡದಿಂದ ವಶಪಡಿಸಿದ ವಸ್ತು ಎಂ.ಡಿ.ಎಂ.ಎ ಆಗಿರುವುದು ಖಚಿತಪಡಿಸಲಾಯಿತು. ಆರೋಪಿಯ ವಿರುದ್ಧ ಸಂಬಂಧಿತ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಮುಂದೆ ಓದಿ..