ಸುದ್ದಿ 

ಜಮೀನಿಗೆ ಅಕ್ರಮ ಪ್ರವೇಶ, ಹಲ್ಲೆ – ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು, ಜುಲೈ 29:ಸರ್ಜಾಪುರ ಹೋಬಳಿ, ಹಲಹಳ್ಳಿ ಗ್ರಾಮದಲ್ಲಿ ಜಮೀನಿನ ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿ ಉಂಟಾದ ಜಗಳವು ಹಲ್ಲೆಗೆ reason ಆಗಿ, ಪೋಲೀಸ್ ಠಾಣೆಗೆ ದೂರು ನೀಡಿದ ಘಟನೆ ಬೆಳಕಿಗೆ ಬಂದಿದೆ. ಬಾಬು ಅವರ ಹೇಳಿಕೆಯಂತೆ, ಅವರು ಸರ್ವೆ ನಂ.71 ರಲ್ಲಿ ಇರುವ 29 ಗುಂಟೆ ಜಮೀನನ್ನು ದಿನಾಂಕ 03/06/2024 ರಂದು ಕುಸುಮಾ ಆರ್ ಶೆಟ್ಟಿ ಎಂಬುವವರಿಂದ ಖರೀದಿಸಿದ್ದರು. ಈ ಜಮೀನಿಗೆ ಭೂ ಪರಿವರ್ತನೆಯನ್ನೂ ಮಾನ ಜಿಲ್ಲಾಧಿಕಾರಿಗಳಿಂದ 24/05/2024 ರಂದು ಪಡೆದು, ಸುತ್ತಲೂ ಕಾಂಪೌಂಡ್ ಗೋಡೆಯನ್ನೂ ಕಟ್ಟಿಸಿದ್ದಾಗಿ ತಿಳಿಸಿದ್ದಾರೆ. ಆದರೆ ದಿನಾಂಕ 26/07/2025 ರಂದು ಮಧ್ಯಾಹ್ನ 2:30 ಗಂಟೆ ಸುಮಾರಿಗೆ, ಬಾಬು ಅವರ ಅಣ್ಣನ ಮಗ ವಿನೋದ್ ಅವರಿಂದ ಫೋನ್ ಕರೆ ಬಂದಿದ್ದು, “ಯಾರೋ 5-6 ಜನರು ಜಮೀನಿಗೆ ಬಂದು ಕಾಂಪೌಂಡ್ ಗೋಡೆಯನ್ನು ಒಡೆಯುತ್ತಿದ್ದಾರೆ” ಎಂಬ ಮಾಹಿತಿ ನೀಡಿದ್ದಾನೆ. ಬಾಬು ಅವರು ಸ್ಥಳಕ್ಕೆ ತಕ್ಷಣ ತೆರಳಿದಾಗ, ಗೌರಮ್ಮ, ಆಕೆಯ…

ಮುಂದೆ ಓದಿ..
ಸುದ್ದಿ 

ಜಮೀನು ವಿವಾದ ಹಿನ್ನೆಲೆ ಗಲಾಟೆ: ನ್ಯಾಯಾಲಯದ ತಡೆಯಾಜ್ಞೆ ಇರುವ ಜಾಗದಲ್ಲಿ ಜೆ.ಸಿ.ಬಿ. ಕೆಲಸ – ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ

Taluknewsmedia.com

Taluknewsmedia.comತಿಪ್ಪಸಂದ್ರ, ಜುಲೈ 29:ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ತಿಪ್ಪಸಂದ್ರ ಗ್ರಾಮದ ಸರ್ವೆ ನಂಬರ್ 71 ರಲ್ಲಿನ 3.24 ಎಕರೆ ಜಮೀನಿಗೆ ಸಂಬಂಧಿಸಿದ ಖಾತೆಯ ವಿವಾದ ಪ್ರಕರಣ ಮತ್ತೊಮ್ಮೆ ಗಂಭೀರ ತಿರುವು ಪಡೆದಿದೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ಭಾಗಹಕ್ಕಿಗಾಗಿ ರತ್ನಮ್ಮನವರ ಕುಟುಂಬ ಆನೇಕಲ್ ಸಿವಿಲ್ ನ್ಯಾಯಾಲಯದಲ್ಲಿ OS ನಂ. 498/2025 ಮೂಲಕ ದಾವೆ ಹೂಡಿದ್ದು, ತಡೆಯಾಜ್ಞೆ ಪಡೆಯಲಾಗಿತ್ತು. ರತ್ನಮ್ಮನವರು ನೀಡಿದ ಮಾಹಿತಿಯಂತೆ, ಈ ಜಮೀನಿಗೆ ಸಂಬಂಧಿಸಿದಂತೆ ತಿಗಳಚೌಡದೇನಹಳ್ಳಿಯ ಟಿ.ವಿ. ಬಾಬು, ತಿಪ್ಪಸಂದ್ರದ ಸುರೇಶ್ ಹಾಗೂ ಇತರರು, ಬಿಲ್ವರ್ ವಿವೇಕ್ ಗಾರ್ಗ್ ಪರವಾಗಿ ತಕರಾರು ತಂದು, ದಿನಾಂಕ 26-07-2025 ರಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಜಮೀನಿಗೆ ಜೆ.ಸಿ.ಬಿ. ಯಂತ್ರಗಳನ್ನು ತಂದು ಜಮೀನನ್ನು ಸಮಕರಿಸುತ್ತಿದ್ದರು. ಈ ದೃಶ್ಯವನ್ನು ನೋಡಿ ಪ್ರಶ್ನಿಸಿದಾಗ ಟಿ.ವಿ. ಬಾಬು ಅವರು ಬಾಯಿಗೆ ಬಂದಂತೆ ನಿಂದಿಸಿ, ಕೈಗಳಿಂದ ಹಲ್ಲೆ ಮಾಡಿ, ಎಳೆದಾಡಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ,…

ಮುಂದೆ ಓದಿ..
ಸುದ್ದಿ 

ಮದುವೆ ರದ್ದಾದ ನಿರಾಶೆಯಲ್ಲಿ ಯುವತಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಆನೇಕಲ್, ಜುಲೈ 30:ಮದುವೆ ರದ್ದಾದ ಘಟನೆಗೆ ಮನನೊಂದು ಯುವತಿ ಮನೆ ಬಿಟ್ಟು ಕಾಣೆಯಾಗಿರುವ ಘಟನೆ ಆನೇಕಲ್ ಟೌನ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆನೇಕಲ್ ಟೌನ್‌ ಪೊಲೀಸ್ ಠಾಣೆಯಲ್ಲಿ ಪತ್ತೆಹಚ್ಚುವಿಕೆಗೆ ದೂರು ದಾಖಲಾಗಿದೆ. ಕೆ.ಎಸ್.ಆರ್.ಟಿ.ಸಿ ಕಾಲೋನಿಯ ಸ್ವಪ್ನ ಮಾರ್ಕೆಟ್ ಬಳಿಯ ನಿವಾಸಿಯಾದ ಮಹದೇವ ಬಿನ್ ನಾಗರಾಜು ಅವರು ನೀಡಿದ ದೂರಿನ ಪ್ರಕಾರ, ತನ್ನ ಅಕ್ಕ ಮಹಾದೇವಿ (ವಯಸ್ಸು: 29) ಕಳೆದ ನಾಲ್ಕು ತಿಂಗಳ ಹಿಂದೆ ತಮ್ಮ ಪೋಷಕರ ಸಮ್ಮುಖದಲ್ಲಿ ಆನೇಕಲ್ ನಿವಾಸಿಯೊಬ್ಬರೊಂದಿಗೆ ನಿಶ್ಚಿತಾರ್ಥಗೊಂಡಿದ್ದರು. ಆದರೆ ಹಲವಾರು ಕಾರಣಗಳಿಂದಾಗಿ ದಿನಾಂಕ 25-07-2025 ರಂದು ಮದುವೆ ರದ್ದಾಗಿತ್ತು. ಈ ವಿಚಾರದಿಂದ ಮಾನಸಿಕವಾಗಿ ಬೇಸತ್ತಿದ್ದ ಅವರು 27-07-2025 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯವರಿಲ್ಲದ ಸಮಯದಲ್ಲಿ ತನ್ನ ಬಟ್ಟೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು, ಮನೆ ಬಿಟ್ಟು ಹೊರಟಿದ್ದಾರೆ. ಆಕೆ ಕೆಎ-51 ಹೆಚ್ ಕೆ-8915 ಸಂಖ್ಯೆಯ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದು, ಒಂದು…

ಮುಂದೆ ಓದಿ..
ಸುದ್ದಿ 

ಪೀಣ್ಯದಲ್ಲಿ BMTC ಬಸ್ ಡಿಕ್ಕಿ: 21 ವರ್ಷದ ಯುವಕ ಸ್ಥಳದಲ್ಲೇ ದುರ್ಮರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 29 (ಮಂಗಳವಾರ): ಪೀಣ್ಯ ಎನ್.ಟಿ.ಟಿ.ಎಫ್ ರಸ್ತೆ ಬಳಿ ಮಂಗಳವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದೇವಿಂದ್ರಪ್ಪ (21) ಎಂಬ ಯುವಕ ಬೈಕ್ ಸಮೇತ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ದೇವಿಂದ್ರಪ್ಪ, ಪೀಣ್ಯ ಪ್ರದೇಶದ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ಅವನು ದಿನಾಂಕ 29-07-2025 ರಂದು ಬೆಳಗ್ಗೆ 8.00 ಗಂಟೆಗೆ ತನ್ನ ಬೈಕ್ (ಸೈಂಡರ್ ಬೈಕ್ ನಂ: KA-33-EA-8498) ಮೂಲಕ ಗಾರೆ ಕೆಲಸಕ್ಕೆ ಹೋಗಿದ್ದನು. ಆದರೆ ಕೆಲವೇ ಹೊತ್ತಿನಲ್ಲಿ ಪೀಣ್ಯ ಸಂಚಾರ ಪೊಲೀಸರು ಫೋನ್ ಮೂಲಕ ಅಪಘಾತದ ಮಾಹಿತಿ ನೀಡಿ ಪೋಷಕರನ್ನು ಘಟನಾ ಸ್ಥಳಕ್ಕೆ ಕರೆಯಿದರು. ತಂದೆ ಮೈಲಾರಿ ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ, ದೇವಿಂದ್ರಪ್ಪನು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢಪಟ್ಟಿತು. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಪೀಣ್ಯ ಎನ್.ಟಿ.ಟಿ.ಎಫ್ ರಸ್ತೆ ಮೇಲೆ ಟಿ.ವಿ.ಎಸ್ ಕ್ರಾಸ್ ಕಡೆಗೆ ಸಾಗುತ್ತಿದ್ದ ದೇವಿಂದ್ರಪ್ಪನ ಬೈಕಿಗೆ BMTC…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಮನೆಯ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳ್ಳತನ – ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು ಜುಲೈ 31: 2025ನಗರದ NMIG-B ವಸತಿ ಪ್ರದೇಶದ ನಿವಾಸಿಯಾಗಿರುವ ವ್ಯಕ್ತಿಯೊಬ್ಬರ ಬೃಹತ್ ಮೊತ್ತದ ಬುಲೆಟ್ ಬೈಕ್ (Bullet Classic 350 EFI) ಕಳ್ಳತನಗೊಂಡ ಘಟನೆ ನಡೆದಿದ್ದು, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರರ ಪ್ರಕಾರ, ಅವರು ತಮ್ಮ ದ್ವಿಚಕ್ರ ವಾಹನವನ್ನು ದಿನಾಂಕ 20.04.2025 ರಂದು ರಾತ್ರಿ 10.00 ಗಂಟೆಗೆ ಮನೆ ಎದುರು ನಿಲ್ಲಿಸಿದ್ದರು. ಆದರೆ, ಮರುದಿನ ಬೆಳಿಗ್ಗೆ 21.04.2025 ರಂದು 6.30ರ ವೇಳೆಗೆ ನೋಡಿದಾಗ, ಬೈಕ್ ಸ್ಥಳದಲ್ಲಿಲ್ಲದೆ ಕಾಣೆಯಾಗಿರುವುದು ತಿಳಿದು ಬಂದಿದೆ. ಹಲವು ಕಡೆಗಳಲ್ಲಿ ಹುಡುಕಿದರೂ ಬೈಕ್ ಪತ್ತೆಯಾಗಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಕಳ್ಳತನಗೊಂಡ ದ್ವಿಚಕ್ರ ವಾಹನದ ವಿವರಗಳು ಹೀಗಿವೆ: ನೋಂದಣಿ ಸಂಖ್ಯೆ: KA-50-EF-8572 ಚಾಸಿಸ್ ಸಂಖ್ಯೆ: ME3U3S5F2MB130806 ಎಂಜಿನ್ ಸಂಖ್ಯೆ: U3S5F1MB746164 ಮಾಡೆಲ್: 2021, ಬುಲೆಟ್ ಕ್ಲಾಸಿಕ್ 350 EFI ಬಣ್ಣ: ಬೂದುಬಣ್ಣ (ಬ್ರೌನ್) ಈ ಕುರಿತು ಪಿರ್ಯಾದಿದಾರರು…

ಮುಂದೆ ಓದಿ..
ಸುದ್ದಿ 

ಯುವತಿಗೆ ಉದ್ಯೋಗವನ್ನೆಂದು ಕರೆಸಿ ಮಾನಸಿಕ ಹಿಂಸೆ: ಮಧ್ಯವಯಸ್ಕನ ವಿರುದ್ಧ ಪೊಲೀಸ್ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 31:2025ಉದ್ಯೋಗವನ್ನೆಂಬ ನೆಪದಲ್ಲಿ ಯುವತಿಗೆ ಸ್ನೇಹಸ್ಥಾಪನೆ ಮಾಡಿ, ನಂತರ ಅಸಭ್ಯ ಸಂದೇಶಗಳು ಹಾಗೂ ವಿಡಿಯೋ ಕಾಲ್‌ಗಳ ಮೂಲಕ ಮಾನಸಿಕ ಹಿಂಸೆ ನೀಡಿದ ಘಟನೆ ನಗರದ ಯಲಹಂಕ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ವಿವರಗಳ ಪ್ರಕಾರ, ಪಿರ್ಯಾದಿದಾರೆಯು ಕೇರ್‌ಟೇಕರ್ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಕವಿತಾ ಎಂಬ ಮಹಿಳೆ ಮೂಲಕ ಶವಿತಾ ಎಂಬ ಏಜೆನ್ಸಿ ನಿರ್ವಾಹಕೆಯ ಪರಿಚಯವಾಗಿದ್ದು, ಅವರು ಜಿಗಣಿಯಲ್ಲಿ ತೋಟದ ಮನೆಯಲ್ಲಿ ಉದ್ಯೋಗದ ಅವಕಾಶವಿದೆ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಶವಿತಾ ಅವರು ಪ್ರಸಾದ್ ಎಂಬ ವ್ಯಕ್ತಿಯ ಮೊಬೈಲ್ ಸಂಖ್ಯೆ ನೀಡಿ, ಅವರ ಸಂಪರ್ಕದಲ್ಲಿರಲು ಹೇಳಿದ್ದಾರೆ. ಪ್ರಸಾದ್ ನಂತರ ಯುವತಿಗೆ ಸಂಪರ್ಕಿಸಿ, ತೋಟದ ಮನೆಯಲ್ಲಿ ತಿಂಗಳಿಗೆ ₹30,000 ಸಂಬಳದ ಉದ್ಯೋಗ ನೀಡುತ್ತೇನೆ ಎಂದಿದ್ದರು. ಆದರೆ, ದಿನಾಂಕ 20.07.2025 ನಂತರ ಅವರು ಯುವತಿಗೆ ನಿರಂತರವಾಗಿ ಅಸಭ್ಯ ಸಂದೇಶಗಳು, ವಿಡಿಯೋ…

ಮುಂದೆ ಓದಿ..
ಸುದ್ದಿ 

ವಿಮಾನ ತರಬೇತಿ ಕಂಪನಿಯಲ್ಲಿ ಹೂಡಿಕೆ ಹೆಸರಲ್ಲಿ ಮೋಸ – ಮಹಿಳೆಯರಿಂದ ಲಕ್ಷಾಂತರ ಹಣ ವಂಚನೆ!

Taluknewsmedia.com

Taluknewsmedia.comಬೆಂಗಳೂರು, ಜುಲೈ 31–2025ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಮಾನ ತರಬೇತಿ ಸಂಸ್ಥೆಯ ಹೂಡಿಕೆ ಹೆಸರಿನಲ್ಲಿ ಮಹಿಳೆಯೊಬ್ಬರು ಲಕ್ಷಾಂತರ ರೂ.ಗಳನ್ನು ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆ ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ದೂರುದಾರೆಯ ಪ್ರಕಾರ, ಜಲೀಲ್ ಮುಲಾ ಎಂಬವರು ವಿಮಾನ ತರಬೇತಿ ಕೋರ್ಸ್ ನಡೆಸಲು LLP ಸಂಸ್ಥೆಯು ಸ್ಥಾಪನೆ ಮಾಡಿದ್ದು, ಪ್ರತಿಯೊಬ್ಬ ಹೂಡಿಗಾರರಿಂದ ರೂ.2 ಲಕ್ಷ ಹಣ ಹೂಡಿಕೆ ಮಾಡುವ ಒಪ್ಪಂದವಿತ್ತು. ಆದರೆ, ಜಲೀಲ್ ಅವರು ಯಾವುದೇ ಹಣ ಹೂಡದೇ, ನಿರಂತರ ಭರವಸೆ ನೀಡಿ ದೂರುದಾರರಿಂದ ಎಲ್‌ಎಲ್‌ಪಿ ಖಾತೆಗೆ ರೂ.14,00,937/- ರಷ್ಟು ಹಣವನ್ನು ಹೂಡಿಕೆ ಮಾಡಿಸಿದ್ದಾರೆ. ಆರ್ಥಿಕ ಸಂಕಷ್ಟದ ಸಮಯದಲ್ಲಿ, ಆರ್ಥೋಪಚಾರಕ್ಕಾಗಿ ಹಣವನ್ನು ಹಿಂದಿರುಗಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ, ಆರೋಪಿಯು ಧಿಕ್ಕರಿಸಿ, ಅವಹೇಳನಕಾರಿ ಭಾಷೆಯಲ್ಲಿ (“ಫಕ್ ಆಫ್ ಬಿಚ್”) ನಿಂದಿಸಿ, ದೂರುದಾರರನ್ನು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ…

ಮುಂದೆ ಓದಿ..
ಸುದ್ದಿ 

ಅಕ್ರಮ ಮದ್ಯ ಮಾರಾಟ – ಬಾರ್ ಮಾಲೀಕರು ಮತ್ತು ಕೆಲಸಗಾರರ ವಿರುದ್ಧ ಕಾನೂನು ಕ್ರಮ

Taluknewsmedia.com

Taluknewsmedia.comಬೆಂಗಳೂರು ಜುಲೈ 31 – 2025ಯಲಹಂಕ ಓಲ್ಡ್ ಟೌನ್ ಪ್ರದೇಶದ ಡೌನ್ ಬಜಾರ್ ರಸ್ತೆ ಬಳಿ ಇರುವ ಸಿದ್ದ ಪ್ರಾಜಿ ಬಾರ್‌ನಲ್ಲಿ ನಿಯಮ ಉಲ್ಲಂಘನೆಯ ಮೂಲಕ ಮದ್ಯ ಮಾರಾಟ ನಡೆಯುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಹಳೆಯ ಕಳವು ಪ್ರಕರಣಗಳ ತನಿಖೆಗಾಗಿ ನೇಮಕಗೊಂಡಿದ್ದಪೊಲೀಸರು ಬೆಳಿಗ್ಗೆ ಸುಮಾರು 8:30 ಗಂಟೆಗೆ ಕೋಗಿಲು ಕ್ರಾಸ್ ಕಡೆಯಿಂದ ಗ್ರಾಮ ಕಡೆಗೆ ಗಸ್ತು ವಹಿಸುತ್ತಿದ್ದ ವೇಳೆ, ಬಾರ್ ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿ ಇದ್ದು, ಮುಂಭಾಗದ ತಗಡು ಶೆಡ್‌ನಲ್ಲಿ 3-4 ಮಂದಿ ನಿಂತಿರುವುದು ಗಮನಿಸಿದ್ದಾರೆ. ಪರಿಶೀಲನೆ ವೇಳೆ, ಬಾರ್‌ಗೆ ಹೊಂದಿಕೊಂಡಿರುವ ಶೆಡ್‌ನೊಳಗೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಬಾರ್ ಮಾಲೀಕರು ಮತ್ತು ಕೆಲಸಗಾರರು ಲೈಸನ್ಸ್ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಅವಧಿಗೆ ಮುಂಚೆಯೇ ಬಾರ್ ಬಾಗಿಲು ತೆರೆಯುತ್ತಿದ್ದರೆಂದು ತಿಳಿದುಬಂದಿದ್ದು, ಮದ್ಯ ಬಾಟಲಿಗಳನ್ನು ಶೆಡ್‌ನೊಳಗೆ ಇಟ್ಟು ಅಕ್ರಮ ಮಾರಾಟ ಮಾಡುತ್ತಿದ್ದ…

ಮುಂದೆ ಓದಿ..
ಸುದ್ದಿ 

ಚಿರಾಗ್ ಎಂಬ ಯುವಕನ ಸಂಧರ್ಭದಲ್ಲಿ ಯುವತಿ ಪಾಯಲ್ ಕಾಣೆಯಾದ ಪ್ರಕರಣ – ಯಲಹಂಕ ಪೊಲೀಸ್ ಠಾಣೆಯಲ್ಲಿ ಮಿಸ್‌ಯಿಂಗ್ ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು, ಜುಲೈ 31 –2025ರಾಜಸ್ಥಾನ ಮೂಲದ ಪಾಯಲ್ ಎಂಬ 19 ವರ್ಷದ ಯುವತಿ ಬೆಂಗಳೂರಿನ ಯಲಹಂಕದಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪಾಯಲ್ ತಾಯಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಿಸ್ಸಿಂಗ್ ಪ್ರಕರಣವಾಗಿ ದಾಖಲಿಸಲಾಗಿದೆ. ಪಾಯಲ್ ತಮ್ಮ ತಾಯಿಯೊಂದಿಗೆ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಯಲಹಂಕ ಬಳಿ ಬಾಡಿಗೆ ಮನೆಯಲ್ಲಿದ್ದರೆಂದು ಹೇಳಲಾಗಿದೆ. ತಾಯಿ ಕಟ್ಟಿಗೇನಹಳ್ಳಿಯಲ್ಲಿ ಫ್ಯಾನಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಾಯಲ್ ತಂದೆ ಮದನ್ ಲಾಲ್ ಪ್ರಜಾಪತಿ ಅವರು 18 ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಪಾಯಲ್ ನಗರದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದರು. ಇತ್ತೀಚೆಗೆ ಪಾಯಲ್ ರಾಜಸ್ಥಾನ ಮೂಲದ ಚಿರಾಗ್ ಎಂಬ ಯುವಕನೊಂದಿಗೆ ಪರಿಚಯ ಹೊಂದಿದ್ದರು. ಈ ಸಂಬಂಧ ತಾಯಿ ಪಾಯಲ್‌ಗೆ ಬುದ್ಧಿವಾದ ಹೇಳಿದ್ದರು. 15 ದಿನಗಳ ಹಿಂದೆ ಚಿರಾಗ್ ಪಾಯಲ್ ಮನೆಯವರೆಗೂ ಬಂದು, “ನಿಮ್ಮ ಮಗಳನ್ನು ನನ್ನೊಂದಿಗೆ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಮಹಿಳೆ ಕಾಣೆಯಾದ ಘಟನೆ – ಕುಟುಂಬದಲ್ಲೇ ಆತಂಕದ ಸ್ಥಿತಿ

Taluknewsmedia.com

Taluknewsmedia.comಬೆಂಗಳೂರು ಜುಲೈ 31: 2025ಬೆಂಗಳೂರಿನ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ 40 ವರ್ಷದ ಮಹಿಳೆ ಲಕ್ಷಮ್ಮ ಅಲಿಯಾಸ್ ಗಂಗಮ್ಮ ದಿನಾಂಕ 19 ಜುಲೈ 2025ರಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಗಮ್ಮ ಅವರ ಪತಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಲಹಂಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಪತಿ ಹೀಗೆ ತಿಳಿಸಿದ್ದಾರೆ: “ನಾನು ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ವಾಸವಿದ್ದೇನೆ. ನಾನು ಕುರಿಸಾಕಾಣಿಕ ಕೆಲಸ ಮಾಡುತ್ತೇನೆ ಮತ್ತು ನನ್ನ ಹೆಂಡತಿ ಗಂಗಮ್ಮ ಕೂಲಿ ಕೆಲಸ ಮಾಡುತ್ತಾರೆ. ನಮಗೆ ಇಬ್ಬರು ಮಕ್ಕಳಿದ್ದು, ಮಗಳು ಗಂಗೋತ್ರಿ (15) ಕಟ್ಟಿಗೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಗ ಕಾರ್ತಿಕ್ (12) ಕೂಡ ಮದ್ಯವ್ಯಸನದ ಚಟಕ್ಕೆ ಒಳಗಾಗಿದ್ದಾನೆ.” ಹೆಂಡತಿ ಗಂಗಮ್ಮ ಅವರಿಗೆ ಮಕ್ಕಳ ಅಸಭ್ಯ ವರ್ತನೆಗಳ ಕುರಿತು ಮತ್ತು ಮದ್ಯ ಸೇವನೆ ಕುರಿತು ಬುದ್ಧಿವಾದ ಮಾಡುತ್ತಿದ್ದೆವು. ಆದರೆ, 19…

ಮುಂದೆ ಓದಿ..