ಸುದ್ದಿ 

ಬೆಂಗಳೂರು: ಮಂಗಳಮುಖಿಯರ ಅಟ್ಟಹಾಸ — ತಂಡ ಬದಲಾಯಿಸಿದಕ್ಕೆ ಕ್ರೂರ ಹಲ್ಲೆ!

Taluknewsmedia.com

Taluknewsmedia.comಬೆಂಗಳೂರು: ಮಂಗಳಮುಖಿಯರ ಅಟ್ಟಹಾಸ — ತಂಡ ಬದಲಾಯಿಸಿದಕ್ಕೆ ಕ್ರೂರ ಹಲ್ಲೆ! ಬೆಂಗಳೂರು ನಗರದ ಬೊಮ್ಮನಹಳ್ಳಿಯ ವಿರಾಟ್ ನಗರದಲ್ಲಿ ಮಂಗಳಮುಖಿಯರ ಗ್ಯಾಂಗ್ ನಡುವೆ ನಡೆದ ಘಟನೆ ಈಗ ಸಂಚಲನ ಸೃಷ್ಟಿಸಿದೆ. ಕೆಆರ್‌ಪುರದ ಗ್ಯಾಂಗ್‌ಗೆ ಸೇರಿದ್ದ ಸುಕನ್ಯಾ ಎಂಬ ಮಂಗಳಮುಖಿ ಮೇಲೆ, ಬೊಮ್ಮನಹಳ್ಳಿಯ ಪ್ರೀತಿ ಮತ್ತು ಚಿನ್ನಿ ನೇತೃತ್ವದ ಮಂಗಳಮುಖಿಯರ ತಂಡ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ. ಮಂಗಳಮುಖಿ ಸುಕನ್ಯಾ ತಮ್ಮ ಹಳೆಯ ತಂಡ ಬಿಟ್ಟು ಹೊಸ ತಂಡ ಸೇರಿದ್ದಕ್ಕೆ ಕೋಪಗೊಂಡ ಪ್ರೀತಿ ಹಾಗೂ ಸಹಚರರು ಸುಕನ್ಯಾಳನ್ನು ಕೆಆರ್‌ಪುರದಿಂದ ಕಿಡ್ನ್ಯಾಪ್ ಮಾಡಿ ಬೊಮ್ಮನಹಳ್ಳಿಗೆ ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಹಿಟ್ಟಿನ ದೊಣ್ಣೆ, ಸೌಟು ಹಾಗೂ ಕೈಗೆ ಸಿಕ್ಕ ವಸ್ತುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ತಲೆಯನ್ನು ಬೋಳಿಸಿ, ಕಾಲಿನಿಂದ ತಳ್ಳಿ, ಮನಸೋ ಇಚ್ಚೆ ಹೊಡೆದಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ಹಲ್ಲೆಯ ವೇಳೆ ಮತ್ತೊಬ್ಬ ಮಂಗಳಮುಖಿಗೆ…

ಮುಂದೆ ಓದಿ..
ಸಿನೆಮಾ ಸುದ್ದಿ 

ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ

Taluknewsmedia.com

Taluknewsmedia.comವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ. ಭಜರಂಗ ಸಿನೆಮಾ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ಅವರ ನಿರ್ಮಾಣದಲ್ಲಿ, ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ. ಧಾರವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿತು. ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ವಿರೇನ್ ಸಾಗರ್ ಬಗಾಡೆ, “ಇದು ಮಕ್ಕಳ ಚಿತ್ರವಾದರೂ ಎಲ್ಲ ವಯಸ್ಸಿನವರಿಗೂ ಹತ್ತಿರವಾಗುವಂತಹ ಸಾಮಾಜಿಕ ಸಂದೇಶ ಹೊಂದಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಷ್ಟೇ ಅಲ್ಲ, ಆ ಶಾಲೆಗಳಲ್ಲಿ ಕಲಿತವರೂ ಮುಂದಾಗಿ ನೆರವಾಗಬೇಕು ಎಂಬ ಆಶಯವನ್ನು ಕಥೆಯಲ್ಲಿ ತೋರಿಸಿದ್ದೇವೆ” ಎಂದರು. ಕಥೆಯ ಹಿನ್ನಲೆ ಕುರಿತು ವಿವರಿಸುತ್ತಾ, “ರೈಟ್ ಬ್ರದರ್ಸ್ ಫ್ಲೈಟ್ ಇಂಜಿನಿಯರಿಂಗ್‌ನಲ್ಲಿ ಸಾಧನೆ ಮಾಡಿದಂತೆ, ನಮ್ಮ ಕಥೆಯ…

ಮುಂದೆ ಓದಿ..
ಸುದ್ದಿ 

ಜಲಮಂಡಳಿ ನಿರ್ಲಕ್ಷ್ಯ – ಮೂವರು ಕಾರ್ಮಿಕರ ಪ್ರಾಣಕ್ಕೆ ಆಟ ಆಡಿದ ಮ್ಯಾನ್‌ಹೋಲ್!

Taluknewsmedia.com

Taluknewsmedia.comಜಲಮಂಡಳಿ ನಿರ್ಲಕ್ಷ್ಯ – ಮೂವರು ಕಾರ್ಮಿಕರ ಪ್ರಾಣಕ್ಕೆ ಆಟ ಆಡಿದ ಮ್ಯಾನ್‌ಹೋಲ್! ಬೆಂಗಳೂರು ನೀಲಸಂಧ್ರದಲ್ಲಿ ನಡೆದ ದಾರುಣ ಘಟನೆ ಮತ್ತೊಮ್ಮೆ “ಮಾನವ ಜೀವದ ಮೌಲ್ಯ ಎಷ್ಟು?” ಎಂಬ ಪ್ರಶ್ನೆ ಎಬ್ಬಿಸಿದೆ. ವಿವೇಕನಗರ ಠಾಣೆ ವ್ಯಾಪ್ತಿಯ ಮ್ಯಾನ್‌ಹೋಲ್‌ನಲ್ಲಿ ಕ್ಲೀನಿಂಗ್ ಕೆಲಸ ನಡೆಸುತ್ತಿದ್ದ ಮೂವರು ಕಾರ್ಮಿಕರು ಪ್ರಜ್ಞೆ ತಪ್ಪಿ ಒಳಗೇ ಕುಸಿದು ಬಿದ್ದಿದ್ದಾರೆ. ಮ್ಯಾನ್‌ಹೋಲ್ ಒಳಗಿನ ವಿಷಕಾರಿ ಅನಿಲದಿಂದ ಕಾರ್ಮಿಕರು ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡರು. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ, ಆಮ್ಲಜನಕ ಮಾಸ್ಕ್ ಇಲ್ಲದೇ, ಕೇವಲ ಬಟ್ಟೆಯ ತೊಟ್ಟಿಯಲ್ಲಿ ಕೆಲಸ ಮಾಡಲು ಕಳಿಸಿದ ಈ ಕಾರ್ಮಿಕರು ನೇರವಾಗಿ ಜೀವದ ಹಂಗು ಹಾಕಿದ್ದಾರೆ.ಘಟನೆ ವೇಳೆ ಒದ್ದಾಡುತ್ತಿದ್ದ ಕಾರ್ಮಿಕರನ್ನು ಸ್ಥಳೀಯರು ಸಮಯಪ್ರಜ್ಞೆಯಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಅವರ ಶೌರ್ಯದಿಂದ ಮೂವರ ಜೀವ ಉಳಿದರೂ, ಜಲಮಂಡಳಿಯ ನಿರ್ಲಕ್ಷ್ಯದಿಂದ ಮತ್ತೆ ಕಾರ್ಮಿಕರ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ. ಅಡಿಗಟ್ಟಿ ಕೆಲಸ ಮಾಡುವವರ ಸುರಕ್ಷತೆಯ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಕಾಂಟ್ರಾಕ್ಟರ್‌ಗಳ…

ಮುಂದೆ ಓದಿ..
ರಾಜಕೀಯ ಸುದ್ದಿ 

ಸಿಎಂ ಕುರ್ಚಿಯಾಟ: ಹೈಕಮಾಂಡ್‌ಗೆ ತಲೆನೋವು – ಸಿದ್ದರಾಮಯ್ಯನ “ಅಸ್ತ್ರಗಳು” ಈಗ “ಬಾರಿಯಾದ ಹೊರೆ” ಆಗುತ್ತಿವೆಯೇ?

Taluknewsmedia.com

Taluknewsmedia.comಸಿಎಂ ಕುರ್ಚಿಯಾಟ: ಹೈಕಮಾಂಡ್‌ಗೆ ತಲೆನೋವು – ಸಿದ್ದರಾಮಯ್ಯನ “ಅಸ್ತ್ರಗಳು” ಈಗ “ಬಾರಿಯಾದ ಹೊರೆ” ಆಗುತ್ತಿವೆಯೇ? ಕರ್ನಾಟಕದ ರಾಜಕೀಯ ರಂಗ ಮತ್ತೆ ಕಾವುಗೊಂಡಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಬಲಗಟ್ಟಿದ್ದರೆ, ಡಿ.ಕೆ.ಶಿವಕುಮಾರ್ ಶಿಬಿರವೂ ಅಧಿಕಾರ ಹಸ್ತಾಂತರದ ನೋಟದಲ್ಲಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಿದ್ದರಾಮಯ್ಯನವರು ತೋರಿಸುತ್ತಿರುವ ಐದು “ಅಸ್ತ್ರಗಳು” ಈಗ ಅವರಿಗೇ ತಿರುಗಿ ಬರುವ ಸಾಧ್ಯತೆಗಳು ಹೆಚ್ಚು ಎನ್ನುವ ಮಾತು ರಾಜಕೀಯದಲ್ಲಿ ಕೇಳಿಬರುತ್ತಿದೆ. ಅಹಿಂದ ಮತಬ್ಯಾಂಕ್‌ನ ನಾಯಕತ್ವ – ಈಗ ಶಕ್ತಿ ಅಲ್ಲ, ಒತ್ತಡ! ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕ ಎಂಬುದು ಸತ್ಯ. ಆದರೆ ಅದೇ ಮತಬ್ಯಾಂಕ್ ಅವರ ವೈಯಕ್ತಿಕ ಪ್ರಭಾವದಡಿ ಸಿಲುಕಿದ್ದು ಕಾಂಗ್ರೆಸ್‌ಗೆ ಹಿತಕರವಾಗಿಲ್ಲ. ಪಕ್ಷದ ಪರಿಗಣನೆಯಿಗಿಂತ “ಸಿದ್ದರಾಮಯ್ಯ ಪರ ಮತ” ಎಂಬ ಚಿತ್ರಣ ಹೆಚ್ಚಾಗಿದ್ದು, ಇದು ಮುಂದಿನ ಚುನಾವಣೆಯಲ್ಲಿ ಒಳಗೊಳಹು ಉಂಟುಮಾಡಬಹುದು ಎನ್ನುವುದು ಹೈಕಮಾಂಡ್‌ನ ಭಯ. ದಾವಣಗೆರೆಯ “ಸಿದ್ದರಾಮೋತ್ಸವ” ಪಕ್ಷಕ್ಕಿಂತ ವ್ಯಕ್ತಿಪೂಜೆಯ ಪ್ರದರ್ಶನವಾಗಿತ್ತು ಎಂದು…

ಮುಂದೆ ಓದಿ..
ಸುದ್ದಿ 

ಅಕ್ರಮ ಹಣದ ದುರ್ಬಳಕೆ ವಿಚಾರದಲ್ಲಿ ಉಮೇಶ ಮುದ್ನಾಳ ಆಕ್ರೋಶ ಪಿಡಿಒ ಅಮಾನತಿಗೆ ಆಗ್ರಹ – ಸರ್ಕಾರಕ್ಕೆ ಹಣ ವಾಪಸ್ ನೀಡುವಂತೆ ಒತ್ತಾಯ

Taluknewsmedia.com

Taluknewsmedia.comಅಕ್ರಮ ಹಣದ ದುರ್ಬಳಕೆ ವಿಚಾರದಲ್ಲಿ ಉಮೇಶ ಮುದ್ನಾಳ ಆಕ್ರೋಶ ಪಿಡಿಒ ಅಮಾನತಿಗೆ ಆಗ್ರಹ – ಸರ್ಕಾರಕ್ಕೆ ಹಣ ವಾಪಸ್ ನೀಡುವಂತೆ ಒತ್ತಾಯ ಯಾದಗಿರಿ: ಮುದ್ನಾಳ ಗ್ರಾಮ ಪಂಚಾಯಿತಿಯ ಪಿಡಿಒ ನೀಲಕಂಠ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರ ಅಕ್ರಮ ಚಟುವಟಿಕೆಗೆ ಬೆಂಬಲ ನೀಡಿದ ಇಒ ಹಾಗೂ ಜಿಲ್ಲಾ ಪಂಚಾಯಿತಿ ಪಿಡಿ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಬೇಡಿಕೆ ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “2021-22ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಗೋದಾಮಿನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ, ₹18.64 ಲಕ್ಷ ಪಾವತಿಸಿ ಭಾರೀ ಅವ್ಯವಹಾರ ನಡೆದಿದೆ,” ಎಂದು ಆರೋಪಿಸಿದರು. ಅವರು ಮುಂದುವರಿದು, “ಜಿಲ್ಲಾ ಪಂಚಾಯಿತಿ ಸಿಇಒ ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಇಒ ನಿರ್ಲಕ್ಷ್ಯ ತೋರಿದ್ದಾರೆ. ಈ ಮೂಲಕ ಅಧಿಕಾರಿಗಳೂ ಅಕ್ರಮಕ್ಕೆ…

ಮುಂದೆ ಓದಿ..
ಸುದ್ದಿ 

ಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ?

Taluknewsmedia.com

Taluknewsmedia.comಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ? ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು — “ಪೊಲೀಸರು ಲಂಚ ಸ್ವೀಕರಿಸುವುದು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುತ್ತದೆ” ಎಂದು ಹೇಳಿಕೆ ನೀಡಿರುವುದು ಜನರ ಗಮನ ಸೆಳೆದಿದೆ. ಆದರೆ ಜನಸಾಮಾನ್ಯರ ಮನದಲ್ಲಿ ಎದ್ದಿರುವ ಪ್ರಶ್ನೆ — ಲಂಚ ಕೊಡುವ ವ್ಯವಸ್ಥೆ, ಲಂಚಕ್ಕೆ ಕಾರಣವಾಗುವ ಪೋಸ್ಟಿಂಗ್ ಮಾಫಿಯಾ ಬಗ್ಗೆ ಯಾರು ಮಾತನಾಡುತ್ತಾರೆ? ಸಾಮಾನ್ಯ ಪೋಲೀಸ್ ಅಧಿಕಾರಿ ಅಥವಾ ಪಿಡಿಓ ಮಟ್ಟದ ನೌಕರರು ಅಧಿಕಾರಕ್ಕೆ ಬಂದ ಕೂಡಲೇ ಲಕ್ಷಾಂತರ ರೂಪಾಯಿ ನೀಡಿ ಪೋಸ್ಟಿಂಗ್ ಪಡೆಯಬೇಕಾಗುತ್ತದೆ ಎಂಬುದು ಮುಚ್ಚಿದ ರಹಸ್ಯವಲ್ಲ. ಹೀಗಾಗಿ ಆ ಹಣವನ್ನು ವಾಪಸ್ ಪಡೆಯಲು ಕೆಲವರು ಜನರಿಂದ ಲಂಚ ತಗೊಳ್ಳುತ್ತಾರೆ. ನಂತರ ಸರ್ಕಾರದವರು “ಲಂಚ ತಗೊಳ್ಳಬೇಡಿ” ಎಂಬ ನೈತಿಕ ಪಾಠ ಹೇಳುವುದು ಜನರ ಕಿವಿಗೆ ವ್ಯಂಗ್ಯವಾಗಿ ಕೇಳುತ್ತದೆ. ಜನರ ಕೋಪದ ಧ್ವನಿಯೇ ಹೀಗಿದೆ..…

ಮುಂದೆ ಓದಿ..
ಸುದ್ದಿ 

ಡಂಬಲ್ಸ್ ಹೊಡೆತದಿಂದ ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ

Taluknewsmedia.com

Taluknewsmedia.comಡಂಬಲ್ಸ್ ಹೊಡೆತದಿಂದ ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ಬೆಂಗಳೂರು: ನಗರದಲ್ಲಿ ಡಂಬಲ್ಸ್‌ನಿಂದ ಹೊಡೆದು ವ್ಯಕ್ತಿಯೊಬ್ಬನ ಹತ್ಯೆ ಮಾಡಿದ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದವರು ಭೀಮೇಶ್ ಬಾಬು (41) ಎಂದು ಗುರುತಿಸಲಾಗಿದೆ. ಆರೋಪಿಯು ಸೋಮಲ ವಂಶಿ, ಆಂಧ್ರದ ವಿಜಯವಾಡ ಮೂಲದವನಾಗಿದ್ದಾನೆ. ಮಾಹಿತಿ ಪ್ರಕಾರ, ಇಬ್ಬರೂ ಒಂದು ಡೇಟಾ ಸಂಗ್ರಹ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪನಿಯು ಸಿನಿಮಾ ಚಿತ್ರೀಕರಣದ ವಿಡಿಯೋ ಶೇಖರಣೆ ಮತ್ತು ಸಂಪಾದನೆ ಕಾರ್ಯಗಳಲ್ಲಿ ತೊಡಗಿಕೊಂಡಿತ್ತು. ದಿನನಿತ್ಯ ಆಧಾರದ ಮೇಲೆ ವಿಡಿಯೋ ಸಂಗ್ರಹ ಮಾಡುವ ಕೆಲಸದಲ್ಲಿ ನಿರತರಾಗಿದ್ದ ಇಬ್ಬರೂ ಕಂಪನಿಯಲ್ಲೇ ರಾತ್ರಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದ ದಿನ ರಾತ್ರಿ ಸುಮಾರು 1.30ರ ಸುಮಾರಿಗೆ, ಇಬ್ಬರ ನಡುವೆ ಅಲ್ಪ ವಿಷಯಕ್ಕೆ ವಾದ-ವಿವಾದ ಉಂಟಾಗಿದೆ. ಕೋಪದ ರಭಸದಲ್ಲಿ ವಂಶಿ ಡಂಬಲ್ಸ್‌ನಿಂದ ಭೀಮೇಶ್‌ನ ತಲೆಗೆ ಹೊಡೆದು, ಸ್ಥಳದಲ್ಲೇ ಹತ್ಯೆ ಮಾಡಿದ್ದಾನೆ. ಘಟನೆಯ…

ಮುಂದೆ ಓದಿ..
ಸಿನೆಮಾ ಸುದ್ದಿ 

“I Am God” : ಗುರು-ಶಿಷ್ಯ ಬಂಧವನ್ನು ನೆನಪಿಸಿದ ರವಿ ಗೌಡ ನಿರ್ದೇಶನದ ಹೊಸ ಸಿನಿಮಾ

Taluknewsmedia.com

Taluknewsmedia.com“I Am God” : ಗುರು-ಶಿಷ್ಯ ಬಂಧವನ್ನು ನೆನಪಿಸಿದ ರವಿ ಗೌಡ ನಿರ್ದೇಶನದ ಹೊಸ ಸಿನಿಮಾ ನಿರ್ದೇಶಕ, ನಟ ಹಾಗೂ ನಿರ್ಮಾಪಕನಾಗಿ ಮೂವರು ಪಾತ್ರಗಳಲ್ಲಿ ಮಿಂಚಿರುವ ರವಿ ಗೌಡ ಅವರ “I Am God” ಸಿನಿಮಾ ಈಗ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾದ ಎರಡು ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ ಈ ಸಿನಿಮಾ, ಟ್ರೇಲರ್ ಬಿಡುಗಡೆಗೊಂಡ ನಂತರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಶೀರ್ಷಿಕೆ ಕೇಳುತ್ತಿದ್ದಂತೆಯೇ ಯಾರಿಗಾದರೂ ನೆನಪಾಗುವುದು ರಿಯಲ್‌ ಸ್ಟಾರ್ ಉಪೇಂದ್ರ. ಇದೇ ಉಪ್ಪಿ ಅವರ ಶಿಷ್ಯನಾದ ರವಿ ಗೌಡ, ಅವರ ಪಾಠದಿಂದ ಪ್ರೇರಿತನಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಪೇಂದ್ರ ಅವರ “ಉಪ್ಪಿ 2” ಸಿನಿಮಾದಲ್ಲಿ ಸಹಾಯಕನಾಗಿ ಕೆಲಸಮಾಡಿದ ನಂತರ, “ಸ್ವಂತ ಚಿತ್ರ ನಿರ್ದೇಶನ” ಎಂಬ ಕನಸನ್ನು ಸಾಕಾರಗೊಳಿಸಿರುವುದು ಈ ಸಿನಿಮಾ ಮೂಲಕ. ಮೈಸೂರಿನಲ್ಲಿ ನಡೆದ ಟ್ರೇಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಕೈಯಿಂದಲೇ…

ಮುಂದೆ ಓದಿ..
ಸುದ್ದಿ 

ಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ

Taluknewsmedia.com

Taluknewsmedia.comಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ ನಂಜನಗೂಡು: ಪತಿಯನ್ನ ಕೊಲ್ಲಲು ಪತ್ನಿಯೇ ಸ್ಕೆಚ್ ಹಾಕಿ, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ನಂಜನಗೂಡು ಪೊಲೀಸರ ಸೂಕ್ಷ್ಮ ತನಿಖೆಯಿಂದ ಸಿಕ್ಕಿಬಿದ್ದ ಈ ಕಿಲಾಡಿ ಪತ್ನಿಯ ಆಟ ಇದೀಗ ಎಲ್ಲರ ಚರ್ಚೆಗೆ ಕಾರಣವಾಗಿದೆ. ಪತಿಯನ್ನ ಮುಗಿಸಲು ಪತ್ನಿ ತನ್ನ ಸಹೋದರನ ಸಹಾಯದಿಂದ ಸಂಚು ರೂಪಿಸಿದ್ದಾಳೆ. ಆದರೆ ನಂಜನಗೂಡು ಠಾಣೆ ಪೊಲೀಸರು ಬಲವಾದ ಸುಳಿವುಗಳ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ಸಂಗೀತಾ, ಆಕೆಯ ಸಹೋದರ ಸಂಜಯ್, ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕ — ಈ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಪತಿಯನ್ನ ಕೊಲ್ಲಲು ಸಂಚು ರೂಪಿಸಿದರೂ, ಯೋಜನೆ ಪೂರ್ಣವಾಗಿ ಸಫಲವಾಗಲಿಲ್ಲ. ಗಾಯಗೊಂಡ ಪತಿ ರಾಜೇಂದ್ರ ಪ್ರಸ್ತುತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

ಮುಂದೆ ಓದಿ..
ಸುದ್ದಿ 

ಎರಡು ದಿನಗಳ ಬಳಿಕವೂ ಪತ್ತೆಯಾಗದ ಗೃಹಿಣಿಯ ಸಾವು ಪ್ರಕರಣದ ಆರೋಪಿಗಳು — ಕುಟುಂಬದ ಕಣ್ಣೀರಿನಲ್ಲಿ ತೇಲುತ್ತಿರುವ ತೀರ್ಥಹಳ್ಳಿ ಗ್ರಾಮ

Taluknewsmedia.com

Taluknewsmedia.comಎರಡು ದಿನಗಳ ಬಳಿಕವೂ ಪತ್ತೆಯಾಗದ ಗೃಹಿಣಿಯ ಸಾವು ಪ್ರಕರಣದ ಆರೋಪಿಗಳು — ಕುಟುಂಬದ ಕಣ್ಣೀರಿನಲ್ಲಿ ತೇಲುತ್ತಿರುವ ತೀರ್ಥಹಳ್ಳಿ ಗ್ರಾಮ ಶಿವಮೊಗ್ಗ: ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗೃಹಿಣಿಯ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಬಂದಿದೆ. ಕಳೆನಾಶಕ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಕಳೆದುಕೊಂಡ ಪೂಜಾ (30) ಎಂಬ ಮಹಿಳೆಯ ಸಾವು ಪ್ರಕರಣದ ಆರೋಪಿಗಳು — ಪತಿ ಶರತ್, ಅತ್ತೆ, ಮಾವ ಮತ್ತು ನಾದಿನಿ — ಇಬ್ಬರು ದಿನ ಕಳೆದರೂ ಇನ್ನೂ ಪೊಲೀಸರ ಬಲೆಗೆ ಸಿಕ್ಕಿಲ್ಲ. ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಹತ್ತಿರದ ಶಂಕರಳ್ಳಿ ಈಶ್ವರಪ್ಪ ಅವರ ಪುತ್ರಿ ಪೂಜಾಳಿಗೆ, ಮೂರು ವರ್ಷಗಳ ಹಿಂದೆ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬುವನೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಗಂಡು ಮಗು ಇದೆ. ಆದರೆ ಮದುವೆಯ ಬಳಿಕ ಪೂಜಾಳಿಗೆ ಗಂಡ ಹಾಗೂ ಅತ್ತೆಮಾವಂದಿರಿಂದ ನಿರಂತರ ಕಿರುಕುಳ ಎದುರಾಗುತ್ತಿತ್ತು…

ಮುಂದೆ ಓದಿ..