ಸುದ್ದಿ 

ಪಿಎಚ್‌ಡಿ ನೀಡದ ವಿವಿ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಗೆ ಈಗ ಎರಡು ಶುಭ ಸುದ್ದಿ

Taluknewsmedia.com

Taluknewsmedia.comಪಿಎಚ್‌ಡಿ ನೀಡದ ವಿವಿ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಗೆ ಈಗ ಎರಡು ಶುಭ ಸುದ್ದಿ ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇತ್ತೀಚಿನ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿಗಾಗಿ ಅರ್ಹತೆಯಿದ್ದರೂ ತಮಗೆ ಪದವಿ ನೀಡಲಿಲ್ಲವೆಂದು ನೊಂದ ಸಂಶೋಧನಾ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಇದೀಗ ವಿದ್ಯಾರ್ಥಿನಿಗೆ ಪಿಎಚ್‌ಡಿ ಪ್ರದಾನ ಮಾಡಲು ಸಮ್ಮತಿ ನೀಡಿದೆ. ಜೊತೆಗೆ, ಆಕೆಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಪ್ರೊಫೆಸರ್‌ಗೆ ಕಡ್ಡಾಯ ನಿವೃತ್ತಿ ನೀಡಲು ಸಿಂಡಿಕೇಟ್ ತೀರ್ಮಾನಿಸಿದೆ. ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಎಂ. ತ್ಯಾಗರಾಜ್ ಅವರು ಡಿ.4ರಂದು ನಡೆದ ಸಿಂಡಿಕೇಟ್ ಸಭೆಯ ಬಳಿಕ ಮಾಹಿತಿ ಹಂಚಿಕೊಂಡಿದ್ದು, ವಿದ್ಯಾರ್ಥಿನಿಯ ದಾಖಲೆಗಳನ್ನು ಮರುಪರಿಶೀಲಿಸಿದಾಗ, ಆಕೆ ಪಿಎಚ್‌ಡಿ ಪದವಿಗೆ ಸಂಪೂರ್ಣ ಅರ್ಹಳಾಗಿರುವುದು ಸ್ಪಷ್ಟವಾಗಿದೆ. “ವಿದ್ಯಾರ್ಥಿನಿ ಹೊಸದಾಗಿ ಅರ್ಜಿ ಸಲ್ಲಿಸಿದಂತೆಯೇ ಪದವಿ ಪ್ರದಾನ ಮಾಡಲಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿನಿ ತನ್ನ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಮಾರ್ಗ : ಸಚಿವ ಎಂಬಿ ಪಾಟೀಲ್ರಿಂದ ಮಹತ್ವದ ಸುಳಿವು..

Taluknewsmedia.com

Taluknewsmedia.comಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಮಾರ್ಗ : ಸಚಿವ ಎಂಬಿ ಪಾಟೀಲ್ರಿಂದ ಮಹತ್ವದ ಸುಳಿವು.. ಬೆಂಗಳೂರಿನಿಂದ ವಿಜಯಪುರದವರೆಗೆ ಪ್ರಯಾಣಿಸುವ ರೈಲಿಗೆ ಈಗ ಸರಾಸರಿ 15 ಗಂಟೆಗಳ ಸಮಯ ಬೇಕಾಗುತ್ತದೆ. ಈ ದೀರ್ಘಾವಧಿಯನ್ನು 10 ಗಂಟೆಗಳ ಮಟ್ಟಕ್ಕೆ ಇಳಿಸಲು ಸರ್ಕಾರ ಮತ್ತು ನೈರುತ್ಯ ರೈಲ್ವೆ ಇಲಾಖೆ ಒಟ್ಟಾಗಿ ತೀವ್ರ ಪ್ರಯತ್ನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ಗದಗ ಬೈಪಾಸ್ ಮಾರ್ಗಗಳನ್ನು ಬಳಸಿಕೊಂಡು ಹೊಸ ರೈಲುಗಳನ್ನು ಸಂಚರಿಸಲು ನೈರುತ್ಯ ರೈಲ್ವೆ ಅಧಿಕಾರಿಗಳು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆ. ಮೂಲಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ, ಈ ಕುರಿತು ಬೆಂಗಳೂರಿನ ಖನಿಜ ಭವನದಲ್ಲಿ ರೈಲ್ವೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದ್ದಾರೆ. ಮುಖ್ಯ ಅಂಶಗಳು… ಬೆಂಗಳೂರು–ವಿಜಯಪುರ ರೈಲು ಪ್ರಯಾಣವನ್ನು 5 ಗಂಟೆಗಳಷ್ಟು ಕಡಿಮೆ ಮಾಡುವ ಗುರಿ. ಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ ರೈಲು ಓಡಿಸಲು ಹಸಿರು ನಿಶಾನೆ. ಹೊಸ…

ಮುಂದೆ ಓದಿ..
ಸುದ್ದಿ 

ನಕಲಿ ಜಾತಿ ಪ್ರಮಾಣಪತ್ರ ಪ್ರಕರಣ: ಕೋಲಾರ MLA ಕೊತ್ತೂರು ಮಂಜುನಾಥ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ – ಮುಂದೇನು?

Taluknewsmedia.com

Taluknewsmedia.comನಕಲಿ ಜಾತಿ ಪ್ರಮಾಣಪತ್ರ ಪ್ರಕರಣ: ಕೋಲಾರ MLA ಕೊತ್ತೂರು ಮಂಜುನಾಥ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ – ಮುಂದೇನು? ಪರಿಶಿಷ್ಟ ಜಾತಿಗೆ ಮೀಸಲಾದ ಮುಳಬಾಗಿಲು ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಬಳಸಿದ್ದಾರೆ ಎಂಬ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋಲಾರದ ಶಾಸಕ ಕೊತ್ತూరు ಮಂಜುನಾಥ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ, ಈ ಪ್ರಕರಣದ ತನಿಖೆ ಮುಂದುವರಿಯಲು ದಾರಿ ಸುವ್ಯವಸ್ಥೆಯಾಗಿದೆ. ಮುಖ್ಯ ಅಂಶಗಳು.. ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಎಫ್‌ಐಆರ್‌ ರದ್ದುಪಡಿಸಬೇಕೆಂಬ ಮನವಿ ವಜಾ ಹೈಕೋರ್ಟ್‌ಗೆ – “ವಿಚಾರಣೆಯನ್ನು ಸಾಧ್ಯವಾದಷ್ಟು ಬೇಗ ಮುಗಿಸಿ” ಎನ್ನುವ ನಿರ್ದೇಶನ ಮುಂದಿನ ವಿಚಾರಣೆ 2026ರ ಜನವರಿ 14ಕ್ಕೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಏನು?.. ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ್ ಅರಾಧೆ ನೇತೃತ್ವದ ಪೀಠ ಶುಕ್ರವಾರ ನೀಡಿದ ಆದೇಶದಲ್ಲಿ:…

ಮುಂದೆ ಓದಿ..
ಸುದ್ದಿ 

ಟಿ.ಬಿ. ಡ್ಯಾಂನಲ್ಲಿ ಡಿ.20ರಿಂದ ಕ್ರಸ್ಟ್‌ ಗೇಟ್‌ ಬದಲಾವಣೆ ಕಾರ್ಯ ಆರಂಭ. 33 ಗೇಟ್‌ಗಳ ಅಳವಡಿಕೆಗೆ 3 ತಂಡಗಳ ನಿಯೋಜನೆ..

Taluknewsmedia.com

Taluknewsmedia.comಟಿ.ಬಿ. ಡ್ಯಾಂನಲ್ಲಿ ಡಿ.20ರಿಂದ ಕ್ರಸ್ಟ್‌ ಗೇಟ್‌ ಬದಲಾವಣೆ ಕಾರ್ಯ ಆರಂಭ. 33 ಗೇಟ್‌ಗಳ ಅಳವಡಿಕೆಗೆ 3 ತಂಡಗಳ ನಿಯೋಜನೆ – ಸಚಿವ ಶಿವರಾಜ ತಂಗಡಗಿ ಸೂಚನೆ ತುಂಗಭದ್ರಾ ಜಲಾಶಯದ 33 ಹಳೆಯ ಕ್ರಸ್ಟ್‌ ಗೇಟ್‌ಗಳನ್ನು ಹಂತ ಹಂತವಾಗಿ ಬದಲಾಯಿಸುವ ಮಹತ್ವದ ಕಾಮಗಾರಿ ಡಿಸೆಂಬರ್ 20ರಿಂದ ಆರಂಭವಾಗಲಿದೆ. 52 ಕೋಟಿ ರೂ. ವೆಚ್ಚದ ಈ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 33 ಕ್ರಸ್ಟ್‌ ಗೇಟ್‌ಗಳನ್ನು ಸಂಪೂರ್ಣ ಬದಲಾಯಿಸಲು ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಒಂದು ತಿಂಗಳಲ್ಲಿ 6 ಗೇಟ್‌ಗಳ ವೇಗದಲ್ಲಿ ಬದಲಾವಣೆ – 3 ವಿಶೇಷ ತಂಡಗಳ ರಚನೆರೈತರು ಎರಡನೇ ಬೆಳೆ ನೀರನ್ನು ತ್ಯಾಗ ಮಾಡಿರುವುದರಿಂದ ಕಾಮಗಾರಿಗೆ ಗತಿಮಾಡುವ ಸೂಚನೆ.. 2026ರ ಮುಂಗಾರು ವೇಳೆಗೆ ನೀರು ಸಂಗ್ರಹಕ್ಕೆ ತೊಂದರೆ ಆಗದಂತೆ ಸಮಯಕ್ಕೆ…

ಮುಂದೆ ಓದಿ..
ಸುದ್ದಿ 

ಯಾದಗಿರಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಗೆ ಕಪ್ಪು ನೆರಳು: 189 ಬಾಲಕಿಯರು ಬಾಲ್ಯ ವಿವಾಹದ ಗೂಡಿನಲ್ಲಿ ಸಿಲುಕಿದ ಮಾಹಿತಿ ಬಹಿರಂಗ..

Taluknewsmedia.com

Taluknewsmedia.comಯಾದಗಿರಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಗೆ ಕಪ್ಪು ನೆರಳು: 189 ಬಾಲಕಿಯರು ಬಾಲ್ಯ ವಿವಾಹದ ಗೂಡಿನಲ್ಲಿ ಸಿಲುಕಿದ ಮಾಹಿತಿ ಬಹಿರಂಗ.. ಯಾದಗಿರಿ ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ಬಾಂಡ್‌ ಪಡೆದಿದ್ದ 189 ಫಲಾನುಭವಿನಿಯರು ಬಾಲ್ಯ ವಿವಾಹಕ್ಕೆ ಒಳಗಾಗಿರುವ ಗಂಭೀರ ಸಂಗತಿ ಬೆಳಕಿಗೆ ಬಂದಿದೆ. ಇದರಿಂದಾಗಿ ಅವರಿಗೆ ಸಿಗಬೇಕಾಗಿದ್ದ ಬಲಗೈ ಸೌಲಭ್ಯ ಕೇವಲ ಕನಸಾಗುವ ಸಾಧ್ಯತೆ ಮೂಡಿದೆ. ಜೊತೆಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಗುರಿಯಾಗುವ ಭೀತಿ ಸಹ ಹೆಚ್ಚಿದೆ. ಯೋಜನೆಯ ನಿಬಂಧನೆಗಳು ಪಾಲಿಸದಿದ್ದರೆ ಲಾಭ ಪಡೆಯುವುದು ಸಂಶಯ..189 ಬಾಲಕಿಯರು ಬಾಲ್ಯ ವಿವಾಹಗೊಂಡಿರುವುದು ದಾಖಲೆ ಪರಿಶೀಲನೆಯಿಂದ ಗೊತ್ತಾದ ವಿಷಯ.. ಮೆಚುರಿಟಿ ಹಣ ಬಿಡುಗಡೆ ಪ್ರಕ್ರಿಯೆ ನಡುವೆ ಘಟನೆ ಹೊರಬಿದ್ದಿದೆ ಯೋಜನೆ ಮೆಚುರಿಟಿ ಪ್ರಕ್ರಿಯೆಯಲ್ಲಿ ಬಯಲಾದ ಸತ್ಯ 2006–07ರಲ್ಲಿ ಪ್ರಾರಂಭವಾದ ಭಾಗ್ಯಲಕ್ಷ್ಮೀ ಯೋಜನೆಯ ಮೊದಲ ಹಂತದ ಬಾಂಡ್‌ಗಳು ಈ ವರ್ಷ ಪರಿಪಕ್ವವಾಗುತ್ತಿದ್ದು, ಲಾಭ ಪಡೆಯಲು ಫಲಾನುಭವಿಗಳು ಕಡ್ಡಾಯ ದಾಖಲೆಗಳನ್ನು…

ಮುಂದೆ ಓದಿ..
ಸುದ್ದಿ 

80 ಲಕ್ಷ ಚಿನ್ನ–ಬೆಳ್ಳಿ ಕಳವು ಪ್ರಕರಣಕ್ಕೆ 6 ಗಂಟೆಯಲ್ಲಿ ತೆರೆ; ಮಹಾರಾಷ್ಟ್ರ ಗಡಿಯಲ್ಲೇ ಕಳ್ಳನಿಗೆ ಬಲೆ

Taluknewsmedia.com

Taluknewsmedia.com80 ಲಕ್ಷ ಚಿನ್ನ–ಬೆಳ್ಳಿ ಕಳವು ಪ್ರಕರಣಕ್ಕೆ 6 ಗಂಟೆಯಲ್ಲಿ ತೆರೆ; ಮಹಾರಾಷ್ಟ್ರ ಗಡಿಯಲ್ಲೇ ಕಳ್ಳನಿಗೆ ಬಲೆ ಗದಗದ ತೋಂಟದಾರ್ಯ ಮಠದ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಶಾಂತಾದುರ್ಗಾ ಜ್ಯುವೆಲರ್ಸ್ ಅಂಗಡಿಯಲ್ಲಿ ನಡೆದ ಭಾರಿ ಕಳ್ಳತನ ಪ್ರಕರಣಕ್ಕೆ ಕೇವಲ ಆರು ಗಂಟೆಯಲ್ಲೇ ಪೊಲೀಸರು ತೆರೆ ಎಳೆದಿದ್ದಾರೆ. ಅಹ್ಮದಾಬಾದ್ ಮೂಲದ ದರೋಡೆಕೋರನನ್ನು ಮಹಾರಾಷ್ಟ್ರ ಗಡಿಯಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಒಟ್ಟಾರೆ 80.47 ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿ, ವಜ್ರ ಮತ್ತು ನಗದು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಅಂಶಗಳು.. ಕೇವಲ 6 ಗಂಟೆಗಳಲ್ಲಿ ಪ್ರಕರಣ ಭೇದನೆ ಮಹಾರಾಷ್ಟ್ರ ಪೊಲೀಸರು–ಗದಗ ಪೊಲೀಸರು ಜಂಟಿ ಕಾರ್ಯಾಚರಣೆ ಲಾಡ್ಜ್‌ನಲ್ಲಿ ಒಂದು ವಾರ ವಾಸ್ತವ್ಯದಿಂದ ಅಂಗಡಿಯ ಮೇಲೆ ಕಣ್ಣಿಟ್ಟಿದ್ದ ಖದೀಮರು ಗ್ಯಾಸ್ ಕಟರ್ ಬಳಸಿ ಮೂರನೇ ಮಹಡಿಯ ಕಿಟಕಿಯಿಂದ ಪ್ರವೇಶ ಕೃತ್ಯ ಹೇಗೆ ನಡೆದಿದೆ? ಬಂಧಿತ ಮಹಮ್ಮದ ಹುಸೇನ ಸಿದ್ಧಕಿ (ಗುಜರಾತ್ ಮೂಲ) ಜ್ಯುವೆಲರ್ಸ್ ಅಂಗಡಿಯ ಪಕ್ಕದ…

ಮುಂದೆ ಓದಿ..
ಸುದ್ದಿ 

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಹಳ್ಳಿ ಹತ್ತಿರ ಶಾಲಾ ಬಸ್‌ಗೆ ಯುವಕರಿಬ್ಬರು ತೊಂದರೆ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

Taluknewsmedia.com

Taluknewsmedia.comಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಹಳ್ಳಿ ಹತ್ತಿರ ಶಾಲಾ ಬಸ್‌ಗೆ ಯುವಕರಿಬ್ಬರು ತೊಂದರೆ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ. ಬೈಕ್ ಅನ್ನು ಬಸ್‌ ಎದುರು ಅಡ್ಡ ನಿಲ್ಲಿಸಿ ಚಾಲಕನೊಂದಿಗೆ ಗದ್ದಲಕ್ಕೆ ಮುಂದಾದ ಯುವಕರ ವರ್ತನೆ ಗ್ರಾಮಸ್ಥರನ್ನೂ ಬೆಚ್ಚಿಬೀಳಿಸಿದೆ. ಮದ್ಯದ ನಶೆಯಲ್ಲಿ ಬೈಕ್‌ನಲ್ಲಿ ಬಂದ ಕಿರಣ್ ಹಾಗೂ ಗಿರೀಶ್ ಎಂಬವರು, ಖಾಸಗಿ ಶಾಲೆಯೊಂದರ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕೆಳಗಿಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಬಸ್ ಚಾಲಕನು ಆರೋಪಿಸಿದ್ದಾನೆ. ವಿದ್ಯಾರ್ಥಿನಿಯನ್ನು ಇಳಿಸದಿದ್ದಕ್ಕಾಗಿ ಚಾಲಕನ ಮೆಚ್ಚೆ ಧಿಕ್ಕಾರದ ಶೈಲಿಯಲ್ಲಿ ಆವಾಜ್ ಹಾಕಿದ ಘಟನೆ ಬಸ್ಸಿನಲ್ಲಿದ್ದವರನ್ನೂ ಆತಂಕಕ್ಕೆ ತಳ್ಳಿತು. ಘಟನೆಯ ಸಂಪೂರ್ಣ ವಿಡಿಯೋ ಸಹಿತವಾಗಿ ಶಾಲಾ ಬಸ್ ಚಾಲಕ ಪೊಲೀಸರು ಬಳಿ ದೂರು ಸಲ್ಲಿಸಿದ್ದಾನೆ. ದೂರು ಸ್ವೀಕರಿಸಿದ ಕಿಕ್ಕೇರಿ ಪೊಲೀಸ್ ಅಧಿಕಾರಿಗಳು ತಕ್ಷಣವೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ. ಈ ಘಟನೆ ಶಾಲೆಯ ಮಕ್ಕಳ ಸುರಕ್ಷತೆಯ ಬಗ್ಗೆ…

ಮುಂದೆ ಓದಿ..
ಸುದ್ದಿ 

ಚಿಕ್ಕಬಳ್ಳಾಪುರ – ಪ್ರೇಮಿಗಳಿಗೆ ದಾಂಪತ್ಯ ಬದುಕಿನ ಹೊಸ ಆರಂಭ: ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ವಿವಾಹ

Taluknewsmedia.com

Taluknewsmedia.comಚಿಕ್ಕಬಳ್ಳಾಪುರ – ಪ್ರೇಮಿಗಳಿಗೆ ದಾಂಪತ್ಯ ಬದುಕಿನ ಹೊಸ ಆರಂಭ: ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ವಿವಾಹ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪೋಷಕರ ವಿರೋಧದ ನಡುವೆಯೇ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿರಿಸಿರುವ ಘಟನೆ ಗಮನ ಸೆಳೆದಿದೆ. ನಗರದ ಸಿದ್ದಾರ್ಥ ಬಡವಾಣೆಯ ನಿವಾಸಿಗಳಾದ ಗಣೇಶ್ (25) ಮತ್ತು ಅಕ್ಷಯಾ (19) ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರೂ, ಕುಟುಂಬದ ಒಪ್ಪಿಗೆ ಇಲ್ಲದೆ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಅಕ್ಷಯಾಳ ಪೋಷಕರು ಅವಳಿಗೆ ಸೋದರಮಾವನೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರೂ, ಆ ಸಂಬಂಧ ಅವಳಿಗೆ ಇಷ್ಟವಿರಲಿಲ್ಲ. ಪ್ರೀತಿಸಿದವನೊಂದಿಗೆ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಯುವತಿ ಮನೆ ಬಿಟ್ಟು ಗಣೇಶ್ ಜೊತೆ ಓಡಿಹೋಗಿ ಧರ್ಮಸ್ಥಳದಲ್ಲಿ ಮದುವೆಯಾದಳು. ಮಗಳು ಕಾಣೆಯಾಗಿರುವ ಕುರಿತು ಆತಂಕಗೊಂಡ ಕುಟುಂಬದವರು ಶಿಡ್ಲಘಟ್ಟ ನಗರ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದರು. ತನಿಖೆಯ ಅಂಗವಾಗಿ ಪೊಲೀಸರು ಜೋಡಿಯನ್ನು ಠಾಣೆಗೆ ಕರೆತರಿದರು. ಸಮಚಾರ ವಿಚಾರಿಸಿದ ನಂತರ, ಇಬ್ಬರೂ ಪರಸ್ಪರರೊಂದಿಗೇ ಬದುಕಲು…

ಮುಂದೆ ಓದಿ..
ಸುದ್ದಿ 

ಹಾವೇರಿ – ರಾಣೇಬೆನ್ನೂರು ಕೊಲೆ ಪ್ರಕರಣ: ಮಹಿಳೆಯ ಅಮಾನವೀಯ ಹತ್ಯೆ, ಪ್ರೇಮ–ಅವಿಶ್ವಾಸ ದುರಂತ ಅಂತ್ಯ

Taluknewsmedia.com

Taluknewsmedia.comಹಾವೇರಿ – ರಾಣೇಬೆನ್ನೂರು ಕೊಲೆ ಪ್ರಕರಣ: ಮಹಿಳೆಯ ಅಮಾನವೀಯ ಹತ್ಯೆ, ಪ್ರೇಮ–ಅವಿಶ್ವಾಸ ದುರಂತ ಅಂತ್ಯ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದಲ್ಲಿ ತೀವ್ರ ದುಃಖ ಹಾಗೂ ಅಸಹನೆಯನ್ನು ಮೂಡಿಸಿದ ಭೀಕರ ಘಟನೆ ವರದಿಯಾಗಿದೆ. ಮನೆಗೆಲಸ ಮಾಡಿಕೊಂಡು ಬದುಕನ್ನು ಸಾಗಿಸುತ್ತಿದ್ದ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಸ್ಥಳೀಯರಲ್ಲಿ ಆಘಾತದ ಅಲೆ ಎಬ್ಬಿಸಿದೆ. ▪️ಚಾಕುವಿನಿಂದ ಕತ್ತು ಕತ್ತರಿಸಿ ಕೊಲೆಪೋಲಿಸ್ ತನಿಖೆ ಪ್ರಾಥಮಿಕ ಮಾಹಿತಿಯ ಪ್ರಕಾರ, ದೀರ್ಘಕಾಲದಿಂದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನೇ ಈ ಕೃತ್ಯಕ್ಕೆ ಕಾರಣನೆಂದು ಶಂಕಿಸಲಾಗಿದೆ. ಮೊಬೈಲ್‌ ಫೋನ್ ಬ್ಯುಸಿ ತೋರಿಸುತ್ತಿದೆ ಎಂಬ ಕಾರಣಕ್ಕೆ ಶೀಲ ಶಂಕೆ ಹುಟ್ಟಿಕೊಂಡು ವಾಗ್ವಾದ ಶುರುವಾಗಿದ್ದು, ಅದೇ ಕ್ಷಣದಲ್ಲಿ ಕೈಯಲ್ಲಿ ಹಿಡಿದಿದ್ದ ಚಾಕುವಿನಿಂದ ಮಹಿಳೆಯ ಕತ್ತು ಕತ್ತರಿಸಿ ಆರೋಪಿಯು ದಾರುಣ ಕೃತ್ಯ ಎಸಗಿದ್ದಾನೆ. ▪️ಮೃತ ಮಹಿಳೆಯ ವಿವರಲಲೀತಾ ಬ್ಯಾಡಗಿ (42) ಎಂಬವರು ಹತ್ಯೆಗೆ ಒಳಗಾದ ದುರ್ದೈವಿ. ಮೂಲತಃ ಬ್ಯಾಡಗಿ ತಾಲೂಕಿನ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ದುರಂತ: ಗೀಸರ್‌ ಗ್ಯಾಸ್‌ ಸೋರಿಕೆಯಿಂದ ತಾಯಿ–ಮಗುವಿನ ದುರ್ಮರಣ

Taluknewsmedia.com

Taluknewsmedia.comಬೆಂಗಳೂರು ದುರಂತ: ಗೀಸರ್‌ ಗ್ಯಾಸ್‌ ಸೋರಿಕೆಯಿಂದ ತಾಯಿ–ಮಗುವಿನ ದುರ್ಮರಣ ಬೆಂಗಳೂರಿನ ಗೋವಿಂದರಾಜನಗರದ ಪಂಚಶೀಲ ನಗರದಲ್ಲಿ ಗೀಸರ್‌ನಿಂದ ಗ್ಯಾಸ್‌ ಸೋರಿಕೆಯಾಗಿದ್ದು, ತಾಯಿ ಹಾಗೂ ಮಗುವಿನ ಪ್ರಾಣ ಕಳೆದುಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಗ್ಯಾಸ್‌ ಲೀಕ್‌ ಮಧ್ಯಾಹ್ನ ಸ್ನಾನಕ್ಕೆ ಹೋದಾಗ ಚಾಂದಿನಿ (26) ಮತ್ತು ನಾಲ್ಕು ವರ್ಷದ ಯುವಿ ಅಸ್ವಸ್ಥರಾಗಿದ್ದರು. ಅಸ್ವಸ್ಥರಾಗಿ ಬಿದ್ದಿದ್ದ ತಾಯಿ–ಮಗುವನ್ನು ಸ್ಥಳೀಯರು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಅಂತಿಮ ನಿಶ್ವಾಸ ಬಿಟ್ಟಿದ್ದಾರೆ. ಕಾರ್ಪೆಂಟರ್‌ ಉದ್ಯೋಗ ಮಾಡುತ್ತಿದ್ದ ಚಾಂದಿನಿಯ ಪತಿ ಕಿರಣ್ ಕೆಲಸದಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಕುರಿತು ತಿಳಿಯುತ್ತಿದ್ದಂತೆಯೇ ಗೋವಿಂದರಾಜನಗರ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತಾಯಿ ಮತ್ತು ಮಗುವಿನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿದು ಬಂದಿದೆ.

ಮುಂದೆ ಓದಿ..