ಪಿಎಚ್ಡಿ ನೀಡದ ವಿವಿ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಗೆ ಈಗ ಎರಡು ಶುಭ ಸುದ್ದಿ
Taluknewsmedia.comಪಿಎಚ್ಡಿ ನೀಡದ ವಿವಿ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಗೆ ಈಗ ಎರಡು ಶುಭ ಸುದ್ದಿ ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇತ್ತೀಚಿನ ಘಟಿಕೋತ್ಸವದಲ್ಲಿ ಪಿಎಚ್ಡಿ ಪದವಿಗಾಗಿ ಅರ್ಹತೆಯಿದ್ದರೂ ತಮಗೆ ಪದವಿ ನೀಡಲಿಲ್ಲವೆಂದು ನೊಂದ ಸಂಶೋಧನಾ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಇದೀಗ ವಿದ್ಯಾರ್ಥಿನಿಗೆ ಪಿಎಚ್ಡಿ ಪ್ರದಾನ ಮಾಡಲು ಸಮ್ಮತಿ ನೀಡಿದೆ. ಜೊತೆಗೆ, ಆಕೆಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಪ್ರೊಫೆಸರ್ಗೆ ಕಡ್ಡಾಯ ನಿವೃತ್ತಿ ನೀಡಲು ಸಿಂಡಿಕೇಟ್ ತೀರ್ಮಾನಿಸಿದೆ. ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಎಂ. ತ್ಯಾಗರಾಜ್ ಅವರು ಡಿ.4ರಂದು ನಡೆದ ಸಿಂಡಿಕೇಟ್ ಸಭೆಯ ಬಳಿಕ ಮಾಹಿತಿ ಹಂಚಿಕೊಂಡಿದ್ದು, ವಿದ್ಯಾರ್ಥಿನಿಯ ದಾಖಲೆಗಳನ್ನು ಮರುಪರಿಶೀಲಿಸಿದಾಗ, ಆಕೆ ಪಿಎಚ್ಡಿ ಪದವಿಗೆ ಸಂಪೂರ್ಣ ಅರ್ಹಳಾಗಿರುವುದು ಸ್ಪಷ್ಟವಾಗಿದೆ. “ವಿದ್ಯಾರ್ಥಿನಿ ಹೊಸದಾಗಿ ಅರ್ಜಿ ಸಲ್ಲಿಸಿದಂತೆಯೇ ಪದವಿ ಪ್ರದಾನ ಮಾಡಲಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿನಿ ತನ್ನ…
ಮುಂದೆ ಓದಿ..
