ಸಿಎಂ ಕಾರ್ಯಕ್ರಮಕ್ಕೆ ಹಣ ವಸೂಲಿ ಆರೋಪ – ಗೋಪಾಲಸ್ವಾಮಿ ತೀವ್ರ ಪ್ರತಿಕ್ರಿಯೆ, ರೇವಣ್ಣ ಹೇಳಿಕೆಗೆ ಕಟು ಟೀಕೆ..
Taluknewsmedia.comಸಿಎಂ ಕಾರ್ಯಕ್ರಮಕ್ಕೆ ಹಣ ವಸೂಲಿ ಆರೋಪ – ಗೋಪಾಲಸ್ವಾಮಿ ತೀವ್ರ ಪ್ರತಿಕ್ರಿಯೆ, ರೇವಣ್ಣ ಹೇಳಿಕೆಗೆ ಕಟು ಟೀಕೆ.. ಹಾಸನ: ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಮೇಲೆ ನಾಲ್ಕು ಕೋಟಿಯಷ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಆರೋಪ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ ಈ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಸ್ವಾಮಿ,“ಯಾವುದೇ ಆರೋಪ ಮಾಡೋದಕ್ಕೂ ಮೊದಲು ಲೆಕ್ಕಪತ್ರ ಮತ್ತು ದಾಖಲೆ ಹೊಂದಿರಬೇಕು. ನಾಲ್ಕು ಕೋಟಿಯಷ್ಟು ದೊಡ್ಡ ಮೊತ್ತವನ್ನು ವಸೂಲಿ ಮಾಡಲಾಗಿದೆ ಎಂದು ಹೇಳುವವರು — ಯಾರು ಹಣ ನೀಡಿದ್ದಾರೆ? ಎಲ್ಲಿ ವಸೂಲಿ ನಡೆದಿದೆ? ಇದರ ದೃಢವಾದ ಸಾಕ್ಷಿ ಇದ್ದರೆ ತೋರಿಸಲಿ,” ಎಂದು ಪ್ರಶ್ನೆ ಮಾಡಿದರು. ತಮ್ಮ ಪ್ರತಿಕ್ರಿಯೆಯನ್ನು ಇನ್ನಷ್ಟು ಕಠಿಣಗೊಳಿಸಿದ ಅವರು, “ಇಂತಹ ಮಾತುಗಳು ಗಾಳಿಯಲ್ಲಿ ಗುಂಡು ಹಾರಿಸುವಂತದ್ದು. ರಾಜಕೀಯ…
ಮುಂದೆ ಓದಿ..
