ಕಾರವಾರ ಜಿಲ್ಲಾಕಾರಾಗೃಹದಲ್ಲಿ ಗಲಾಟೆ ತೀವ್ರಗೊಂಡ ಘಟನೆ: ವಿಚಾರಣಾಧೀನ ಕೈದಿಗಳಿಂದ ಸಿಬ್ಬಂದಿಗೆ ದೌರ್ಜನ್ಯ
Taluknewsmedia.comಕಾರವಾರ ಜಿಲ್ಲಾಕಾರಾಗೃಹದಲ್ಲಿ ಗಲಾಟೆ ತೀವ್ರಗೊಂಡ ಘಟನೆ: ವಿಚಾರಣಾಧೀನ ಕೈದಿಗಳಿಂದ ಸಿಬ್ಬಂದಿಗೆ ದೌರ್ಜನ್ಯ ಕಾರವಾರ: ಇಲ್ಲಿನ ಜಿಲ್ಲಾಕಾರಾಗೃಹದಲ್ಲಿ ಶನಿವಾರ ನಡೆದ ಅಸಭ್ಯ ಘಟನೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ವಿಚಾರಣಾಧೀನ ಕೈದಿಗಳಿಬ್ಬರು ಇಲಾಖೆ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ಮೂಲದ ರೌಡಿ ಶೀಟರ್ಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಎಂಬವರು ಈ ದಾಳಿಗೆ ಕಾರಣಕರ್ತರೆಂದು ತಿಳಿದು ಬಂದಿದೆ. ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಇವರನ್ನು, ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾದ ಕಾರಣ ಕೆಲವು ದಿನಗಳ ಹಿಂದೆ ಕಾರವಾರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. 🔹 ಗಲಾಟೆಯ ಹಿನ್ನಲೆ ಕಾರಾಗೃಹ ಮೂಲಗಳ ಪ್ರಕಾರ, ಮಾದಕ ವಸ್ತುಗಳನ್ನು ಕಾರಾಗೃಹದೊಳಗೆ ಕಳ್ಳಸಾಗಣೆ ಮಾಡುವ ಪ್ರಯತ್ನಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಈ ಕ್ರಮದಿಂದ ಅಸಹನೀಯಗೊಂಡ ಕೈದಿಗಳಿಬ್ಬರು ಸಿಬ್ಬಂದಿಯನ್ನು ಓರಗಿಸಲು ಗಲಾಟೆಗೆ ಮುಂದಾಗಿದ್ದಾರೆ…
ಮುಂದೆ ಓದಿ..
