ಸಿನೆಮಾ ಸುದ್ದಿ 

ದಿ ಡೆವಿಲ್’ ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ 5 ಅಚ್ಚರಿಯ ಸಂಗತಿಗಳು!

Taluknewsmedia.com

Taluknewsmedia.com‘ದಿ ಡೆವಿಲ್’ ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ 5 ಅಚ್ಚರಿಯ ಸಂಗತಿಗಳು! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ‘ದಿ ಡೆವಿಲ್’ ಚಿತ್ರದ ಬಗ್ಗೆ ಕನ್ನಡಿಗರಲ್ಲಿ ಕುತೂಹಲ ಹೆಚ್ಚಾಗಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಚಿತ್ರತಂಡವು ಈ ಸಿನಿಮಾದ ಸುದೀರ್ಘ ಪಯಣದ ಹಿಂದಿರುವ ಹಲವು ಅಚ್ಚರಿಯ ಮತ್ತು ಭಾವನಾತ್ಮಕ ಸಂಗತಿಗಳನ್ನು ಹಂಚಿಕೊಂಡಿದೆ. ಬನ್ನಿ, ಚಿತ್ರದ ತೆರೆಮರೆಯ ಆ ಐದು ರೋಚಕ ಕಥೆಗಳನ್ನು ಕೆದಕೋಣ. ಏಳು ವರ್ಷಗಳ ಹಿಂದಿನ ಕಥೆ, ಎರಡು ವರ್ಷಗಳ ನಿರ್ಮಾಣ!… ‘ದಿ ಡೆವಿಲ್’ ಚಿತ್ರದ ಪಯಣ ಬಹಳ ಸುದೀರ್ಘವಾದದ್ದು. ನಿರ್ದೇಶಕ ಪ್ರಕಾಶ್ ವೀರ್ ಮತ್ತು ನಟ ದರ್ಶನ್ ಅವರ ನಡುವೆ ಈ ಚಿತ್ರದ ಕಥೆಯ ಬಗ್ಗೆ ಮೊದಲ ಚರ್ಚೆ ನಡೆದಿದ್ದು 2018ರಲ್ಲಿ. ಆದರೆ, ಕೋವಿಡ್ ಸಾಂಕ್ರಾಮಿಕ ಮತ್ತು ‘ಕಾಟೇರ’ ಚಿತ್ರದ ನಿರ್ಮಾಣದ ಕಾರಣಗಳಿಂದ ಈ ಯೋಜನೆ ವಿಳಂಬವಾಯಿತು. ಅಂತಿಮವಾಗಿ, ಎರಡು ವರ್ಷಗಳ ಹಿಂದೆ ‘ದಿ ಡೆವಿಲ್’…

ಮುಂದೆ ಓದಿ..
ಸುದ್ದಿ 

“ಅಮ್ಮಾ, ನಾನ್ ಕಟ್ತಿರೋ ಮನೆ ಕಡೆ ಹೋಗ್ಬರ್ತೀನಿ”..

Taluknewsmedia.com

Taluknewsmedia.com“ಅಮ್ಮಾ, ನಾನ್ ಕಟ್ತಿರೋ ಮನೆ ಕಡೆ ಹೋಗ್ಬರ್ತೀನಿ”.. ಮನೆ ಕಟ್ಟುವ ಕನಸು ಟೆಕ್ಕಿಯ ದುರಂತ ಅಂತ್ಯ : ಬೆಂಗಳೂರಿನಲ್ಲಿ RTI ದಂಧೆಯ ಕರಾಳ ಮುಖ ಬೆಂಗಳೂರಿನಲ್ಲಿ ಸ್ವಂತ ಸೂರು ಹೊಂದುವುದು ಅನೇಕರ ಜೀವಮಾನದ ಕನಸು. ಹಗಲು ರಾತ್ರಿ ಶ್ರಮಿಸಿ, ಕೂಡಿಟ್ಟ ಹಣದಲ್ಲಿ ಒಂದು ಜಾಗ ಇಟ್ಟಿಗೆಯ ಮೇಲೆ ಇಟ್ಟಿಗೆ ಇಟ್ಟು ತಮ್ಮ ಕನಸಿನ ಮನೆಯನ್ನು ಕಟ್ಟುವುದು ಒಂದು ದೊಡ್ಡ ಸಾಧನೆ. ಆದರೆ, ಈ ಸುಂದರ ಕನಸು ಕೆಲವೊಮ್ಮೆ ದುಃಸ್ವಪ್ನವಾಗಿ ಬದಲಾಗುವುದೂ ಉಂಟು. ವೈಟ್‌ಫೀಲ್ಡ್‌ನ ನಲ್ಲೂರಹಳ್ಳಿಯ ಟೆಕ್ಕಿ ಮುರಳಿ ಅವರ ಕಥೆ ಇದಕ್ಕೆ ಒಂದು ದಾರುಣ ಸಾಕ್ಷಿ. ಇದು ಕೇವಲ ನೆರೆಹೊರೆಯವರ ಜಗಳದ ಕಥೆಯಲ್ಲ, ಬದಲಿಗೆ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಬ್ಬಿರುವ ‘RTI ದಂಧೆ’ ಎಂಬ ಸುಲಿಗೆ ಜಾಲಕ್ಕೆ ಅಮಾಯಕನೊಬ್ಬ ಬಲಿಯಾದ ಕರಾಳ ವಾಸ್ತವ. ತಮ್ಮ ಕನಸಿನ ಮನೆಯನ್ನು ಕಟ್ಟುವ ಹಾದಿಯಲ್ಲೇ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಮನೆ ಕಟ್ಟುವ…

ಮುಂದೆ ಓದಿ..
ಸುದ್ದಿ 

ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಪ್ರಕರಣ : ತನಿಖೆಗೆ ವೇಗ, ಪ್ರಮುಖ ಸಾಕ್ಷ್ಯಗಳು ಪೊಲೀಸರ ಕೈಗೆ

Taluknewsmedia.com

Taluknewsmedia.comನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಪ್ರಕರಣ : ತನಿಖೆಗೆ ವೇಗ, ಪ್ರಮುಖ ಸಾಕ್ಷ್ಯಗಳು ಪೊಲೀಸರ ಕೈಗೆ ಹಾಸನ ಜಿಲ್ಲೆಯಲ್ಲಿ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಅಚಲಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಪ್ರಕರಣದ ಹಿನ್ನಲೆಯಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಗೆ ಈಗ ಸಿಡಿಆರ್ (Call Detail Record) ರಿಪೋರ್ಟ್ ಸಿಕ್ಕಿರುವುದು ಮಹತ್ವದ ಸುಳಿವು ಒದಗಿಸಿದೆ. ಸಿಡಿಆರ್ ರಿಪೋರ್ಟ್‌ನಲ್ಲಿ ಪತ್ತೆಯಾದ ಅಚ್ಚರಿ ಮಾಹಿತಿ ಮೃತ ಅಚಲಾ ಮತ್ತು ಆರೋಪಿ ಮಯಾಂಕ್ ಗೌಡ ನಡುವೆ ಹಲವಾರು ಬಾರಿ ಫೋನ್ ಸಂಭಾಷಣೆ ನಡೆದಿರುವುದು ಸಿಡಿಆರ್ ರಿಪೋರ್ಟ್ ಮೂಲಕ ಹೊರಬಿದ್ದಿದೆ. ರಿಪೋರ್ಟ್ ಕೈಗೆ ಸಿಕ್ಕ ತಕ್ಷಣ ಆರೋಪಿ ಮಯಾಂಕ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ವಿಚಾರಣೆಗೆ ನೋಟಿಸ್ ನೀಡಬಹುದು ಎಂಬ ಭಯದಿಂದಲೆ ಮಯಾಂಕ್ ಓಡಿಹೋಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಹಾಸನ…

ಮುಂದೆ ಓದಿ..
ಸುದ್ದಿ 

ಕೆಂಗೇರಿ ಮೆಟ್ರೋ ದುರಂತ: ಒಂದು ಆತ್ಮಹತ್ಯೆ, ಸಾವಿರಾರು ಪ್ರಯಾಣಿಕರ ಪರದಾಟ – ನಗರದ ಜೀವನಾಡಿ ಸ್ತಬ್ಧ!

Taluknewsmedia.com

Taluknewsmedia.comಕೆಂಗೇರಿ ಮೆಟ್ರೋ ದುರಂತ: ಒಂದು ಆತ್ಮಹತ್ಯೆ, ಸಾವಿರಾರು ಪ್ರಯಾಣಿಕರ ಪರದಾಟ – ನಗರದ ಜೀವನಾಡಿ ಸ್ತಬ್ಧ! ಬೆಂಗಳೂರಿನ ಮೆಟ್ರೋ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಆಘಾತಕಾರಿ ಸುದ್ದಿ ಬೆಂಗಳೂರಿನಲ್ಲಿ ಪ್ರತಿದಿನ ಬೆಳಿಗ್ಗೆ ಲಕ್ಷಾಂತರ ಮಂದಿ ತಮ್ಮ ದಿನವನ್ನು ಆರಂಭಿಸುವುದು ಮೆಟ್ರೋ ರೈಲಿನ ಸದ್ದಿನೊಂದಿಗೆ. ಎಂದಿನಂತೆ ತಮ್ಮ ಕೆಲಸಗಳಿಗೆ, ಕಾಲೇಜುಗಳಿಗೆ ಹೊರಟಿದ್ದ ಸಾವಿರಾರು ಪ್ರಯಾಣಿಕರಿಗೆ, ನಗರದ ಜೀವನಾಡಿಯಾದ ‘ನಮ್ಮ ಮೆಟ್ರೋ’ ಇಂದು ಬೆಳಿಗ್ಗೆ ದಿಢೀರ್ ನಿಂತುಹೋಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬಂದ ಒಂದು ಆಘಾತಕಾರಿ ಸುದ್ದಿ, ಇಡೀ ನೇರಳೆ ಮಾರ್ಗದ ಸಂಚಾರವನ್ನು ಸ್ಥಗಿತಗೊಳಿಸಿ, ನಗರವನ್ನೇ ಒಂದು ಕ್ಷಣ ಬೆಚ್ಚಿಬೀಳಿಸಿತು. ಈ ದುರಂತ ಕೇವಲ ಒಂದು ಜೀವದ ಅಂತ್ಯವಲ್ಲ, ಬದಲಿಗೆ ನಗರದ ಸಾರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೆಳಗಿನ ಜಾವದ ದುರಂತ: ಒಂದು ಜೀವ ಬಲಿ ಇಂದು ಬೆಳಿಗ್ಗೆ ಸುಮಾರು…

ಮುಂದೆ ಓದಿ..
ಸುದ್ದಿ 

ಪೊಲೀಸ್ ಇಲಾಖೆಗೆ ಮತ್ತೊಂದು ಕಳಂಕ — ವಿಚಾರಣೆಗೆ ಕರೆತಂದ ಆರೋಪಿ ಕಾರಿನಿಂದ ₹11 ಲಕ್ಷ ‘ಗಾಯಬ್’; ಹೆಡ್ ಕಾನ್ಸ್‌ಟೇಬಲ್ ಉಲ್ಲಾ ಅರೇಸ್ಟ್

Taluknewsmedia.com

Taluknewsmedia.comಪೊಲೀಸ್ ಇಲಾಖೆಗೆ ಮತ್ತೊಂದು ಕಳಂಕ — ವಿಚಾರಣೆಗೆ ಕರೆತಂದ ಆರೋಪಿ ಕಾರಿನಿಂದ ₹11 ಲಕ್ಷ ‘ಗಾಯಬ್’; ಹೆಡ್ ಕಾನ್ಸ್‌ಟೇಬಲ್ ಉಲ್ಲಾ ಅರೇಸ್ಟ್ ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಗೆ ಮತ್ತೊಂದು ಗಂಭೀರ ಚ್ಯುತಿ ಬಿದ್ದಿದೆ. ಜನರ ಸುರಕ್ಷತೆಯನ್ನು ಕಾಪಾಡಬೇಕಾದವರ ಕೈಯಿಂದಲೇ ಮತ್ತೆ ಕಳ್ಳತನದ ಘಟನೆ ಬಯಲಾಗಿದ್ದು, ಪೊಲೀಸ್ ಇಲಾಖೆಯ ಗೌರವಕ್ಕೆ ದೊಡ್ಡ ಹೊಡೆತ ನೀಡಿದೆ. ಸೈಬರ್ ಕ್ರೈಮ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಪರಿಶೀಲನೆಗೆ ಕರೆತಂದ ಆರೋಪಿ ಕಾರಿನಲ್ಲಿದ್ದ ₹11 ಲಕ್ಷ ಮೊತ್ತವನ್ನು ಲಪ್ತ ಮಾಡಿರುವುದು ಸಿಸಿಟಿವಿ ದೃಶ್ಯಾವಳಿ ಹಾಗೂ ಮುಂದಿನ ತನಿಖೆಯಿಂದ ದೃಢಪಟ್ಟಿದೆ. ಇತ್ತೀಚೆಗೆ ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಬಂಧನಕ್ಕೆ ಒಳಗಾಗಿದ್ದದ್ದು ಜನರ ನೆನಪಿನಲ್ಲಿ ಉಳಿಯುವ ಮುನ್ನವೇ, ಮತ್ತೊಂದು ಪೊಲೀಸ್ ಸಿಬ್ಬಂದಿ ನೇರವಾಗಿ ಹಣಕಾಸು ಕಳ್ಳತನಕ್ಕೆ ಕೈ ಹಾಕಿರುವ ಬೆಳವಣಿಗೆ ಹೊರಬಂದಿದೆ. ಆರೋಪಿಯೆದುರಿನ ಹೊಸ ಪ್ರಕರಣದಲ್ಲಿ ಹೆಡ್ ಕಾನ್ಸ್‌ಟೇಬಲ್…

ಮುಂದೆ ಓದಿ..
ಸುದ್ದಿ 

ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿ–48ರ ಮಾದನಾಯಕನಹಳ್ಳಿ ಬಳಿ ಸಂಭವಿಸಿದ ದುರಂತ ರಸ್ತೆ

Taluknewsmedia.com

Taluknewsmedia.comಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿ–48ರ ಮಾದನಾಯಕನಹಳ್ಳಿ ಬಳಿ ಸಂಭವಿಸಿದ ದುರಂತ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾನೆ. ಮೃತನನ್ನು ಸುಮಂತ್ ಜೆ. ಗೌಡ (21) ಎಂದು ಗುರುತಿಸಲಾಗಿದೆ .ಸ್ನೇಹಿತನನ್ನು ಭೇಟಿಯಾಗಲು ಬೈಕ್‌ನಲ್ಲಿ ತೆರಳುತ್ತಿದ್ದ ಸುಮಂತ್, ಮುಂದೆ ಸಾಗುತ್ತಿದ್ದ ಖಾಸಗಿ ಬಸ್ اچಾನಕ್ ನಿಲ್ಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬಸ್ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿ. ಭಾರೀ ಹೊಡೆತಕ್ಕೆ ಗುರಿಯಾದ ಸುಮಂತ್ ತಕ್ಷಣವೇ ಪ್ರಾಣಪಕ್ಷಿ ಬಿಟ್ಟಿದ್ದಾನೆ.ಘಟನೆಯ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮುಂದೆ ಓದಿ..
ಸುದ್ದಿ 

ತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; 1 ಲಕ್ಷ ಸಾಲದ ವಿಚಾರಕ್ಕೆ ಕೊಲೆ ಶಂಕೆ, ಆರೋಪಿ ಮಧು ಮೇಲೆ ದೂರು

Taluknewsmedia.com

Taluknewsmedia.comತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; 1 ಲಕ್ಷ ಸಾಲದ ವಿಚಾರಕ್ಕೆ ಕೊಲೆ ಶಂಕೆ, ಆರೋಪಿ ಮಧು ಮೇಲೆ ದೂರು ತೋಟದ ಮನೆಯಲ್ಲಿ ಮಂಜುಳಾ ಎಂಬ ರೈತ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆಗೆ ಹಣಕಾಸಿನ ವಿವಾದವೇ ಮುಖ್ಯ ಕಾರಣ ಎಂದು ಕುಟುಂಬಸ್ಥರು ಬಲವಾಗಿ ಶಂಕಿಸಿದ್ದಾರೆ. ಮಂಜುಳಾ ಅವರು ತೋಟದ ಮನೆಯಲ್ಲಿ ರಾತ್ರಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ. ಮಂಜುಳಾ ಅವರ ಕುಟುಂಬದವರು ಮತ್ತು ಮಕ್ಕಳು ಅಡಿಕೆ ಕಾಯಿಗಳನ್ನು ಒಣಗಿಸಲು ಜಾಗವಿಲ್ಲದ ಕಾರಣ ಚಿಕ್ಕೋನಹಳ್ಳಿಯಲ್ಲಿ ತಂಗಿದ್ದರು. ಮಂಜುಳಾ ಅವರು ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾ, ಸ್ವಲ್ಪ ಕೂಲಿ ಕೆಲಸಗಳಿಗೆ ಹೋಗುತ್ತಿದ್ದರು. ಮಂಜುಳಾ ಅವರನ್ನು ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ಮೊದಲು ಅವರ ಚಿಕ್ಕಪ್ಪನ ಮಗ (ಚಿಕನ್ ಪಾಯಸ್ ಅಣ್ಣ) ನೋಡಿದ್ದು, ನಂತರ ಅವರು ಕೂಗಿದ್ದರಿಂದ ಘಟನೆ ಬೆಳಕಿಗೆ ಬಂದಿತು. ಮಂಜುಳಾ ಅವರ…

ಮುಂದೆ ಓದಿ..
ಸುದ್ದಿ 

ಮಂಗಳೂರು ಕಾರಾಗೃಹದಲ್ಲಿ ಗಲಾಟೆ: ವಿಚಾರಣಾಧೀನ ಕೈದಿಯಿಂದ ಹಲ್ಲೆ – ಅಧಿಕಾರಿಗಳ ಸೇವೆಗೆ ಅಡ್ಡಿ; ಎರಡು ಪ್ರತ್ಯೇಕ FIR

Taluknewsmedia.com

Taluknewsmedia.comಮಂಗಳೂರು ಕಾರಾಗೃಹದಲ್ಲಿ ಗಲಾಟೆ: ವಿಚಾರಣಾಧೀನ ಕೈದಿಯಿಂದ ಹಲ್ಲೆ – ಅಧಿಕಾರಿಗಳ ಸೇವೆಗೆ ಅಡ್ಡಿ; ಎರಡು ಪ್ರತ್ಯೇಕ FIR ನಗರದ ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಂದ ಗಲಾಟೆ, ಹಲ್ಲೆ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡು ಪ್ರತ್ಯೇಕ ಘಟನೆಗಳು ಹೊರಬಿದ್ದಿವೆ. ಈ ಸಂಬಂಧ ಪೊಲೀಸರಿಗೆ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣ – ಸಹ ಕೈದಿಗಳ ಮೇಲೆ ಹಲ್ಲೆನವೆಂಬರ್ 29ರಂದು ವಿಚಾರಣಾಧಿಕೀನ ಕೈದಿ ಮುಹಮ್ಮದ್ ಆಸಿಫ್ ಜೈಲಿನ ಅಧೀಕ್ಷಕ ಶರಣಬಸಪ್ಪರ ಕಚೇರಿಯ ಮುಂದೆ ಜೋರಾಗಿ ಗದ್ದಲ ಸೃಷ್ಟಿಸಿ, ‘ಎ’ ವಿಭಾಗದ ಕೈದಿಗಳನ್ನು ಹೊರಗೆ ಬರಲು ಪ್ರಚೋದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ಇದೇ ವೇಳೆ ಅಡುಗೆಮನೆಯಲ್ಲಿ ಕೆಲಸಮಾಡುತ್ತಿದ್ದ ಮೂವರು ಸಹ ಕೈದಿಗಳ ಮೇಲೆ ಆಸಿಫ್ ಹಲ್ಲೆ ನಡೆಸಿದ್ದಾನೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ. ಎರಡನೇ ಪ್ರಕರಣ – ಐವರ ಗಲಾಟೆಡಿಸೆಂಬರ್ 2ರಂದು ಕೈದಿಗಳಾದ…

ಮುಂದೆ ಓದಿ..
ಸುದ್ದಿ 

ತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; 1 ಲಕ್ಷ ಸಾಲದ ವಿಚಾರಕ್ಕೆ ಕೊಲೆ ಶಂಕೆ, ಆರೋಪಿ ಮಧು ಮೇಲೆ ದೂರು

Taluknewsmedia.com

Taluknewsmedia.comತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; 1 ಲಕ್ಷ ಸಾಲದ ವಿಚಾರಕ್ಕೆ ಕೊಲೆ ಶಂಕೆ, ಆರೋಪಿ ಮಧು ಮೇಲೆ ದೂರು ತೋಟದ ಮನೆಯಲ್ಲಿ ಮಂಜುಳಾ ಎಂಬ ರೈತ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆಗೆ ಹಣಕಾಸಿನ ವಿವಾದವೇ ಮುಖ್ಯ ಕಾರಣ ಎಂದು ಕುಟುಂಬಸ್ಥರು ಬಲವಾಗಿ ಶಂಕಿಸಿದ್ದಾರೆ. ಮಂಜುಳಾ ಅವರು ತೋಟದ ಮನೆಯಲ್ಲಿ ರಾತ್ರಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ. ಮಂಜುಳಾ ಅವರ ಕುಟುಂಬದವರು ಮತ್ತು ಮಕ್ಕಳು ಅಡಿಕೆ ಕಾಯಿಗಳನ್ನು ಒಣಗಿಸಲು ಜಾಗವಿಲ್ಲದ ಕಾರಣ ಚಿಕ್ಕೋನಹಳ್ಳಿಯಲ್ಲಿ ತಂಗಿದ್ದರು. ಮಂಜುಳಾ ಅವರು ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾ, ಸ್ವಲ್ಪ ಕೂಲಿ ಕೆಲಸಗಳಿಗೆ ಹೋಗುತ್ತಿದ್ದರು. ಮಂಜುಳಾ ಅವರನ್ನು ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ಮೊದಲು ಅವರ ಚಿಕ್ಕಪ್ಪನ ಮಗ (ಚಿಕನ್ ಪಾಯಸ್ ಅಣ್ಣ) ನೋಡಿದ್ದು, ನಂತರ ಅವರು ಕೂಗಿದ್ದರಿಂದ ಘಟನೆ ಬೆಳಕಿಗೆ ಬಂದಿತು. ಮಂಜುಳಾ ಅವರ…

ಮುಂದೆ ಓದಿ..
ಸುದ್ದಿ 

ಹುಣಸೂರಿನಲ್ಲಿ ಡಾ. ಲೋಹಿತ್ ವಿರುದ್ಧ ಆರೋಪಗಳ ಸರಮಾಲೆ

Taluknewsmedia.com

Taluknewsmedia.comಹುಣಸೂರಿನಲ್ಲಿ ಡಾ. ಲೋಹಿತ್ ವಿರುದ್ಧ ಆರೋಪಗಳ ಸರಮಾಲೆ A.B.A.R.K ಯೋಜನೆಯಡಿ ಉಚಿತ ಚಿಕಿತ್ಸೆ ನೀಡಬೇಕಿದ್ದರೂ, ಬಡ ರೋಗಿ ಕುಟುಂಬದಿಂದ 45 ಸಾವಿರ ರೂಪಾಯಿ ವಸೂಲಿ ಮಾಡಿದ ಬಗ್ಗೆ ಆಕ್ರೋಶ ಹುಣಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಲೋಹಿತ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ A.B.A.R.K ಯೋಜನೆಯಡಿ ಬಡವರ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡಬೇಕಿದ್ದರೂ, ಒಂದು ರೋಗಿಯ ಕುಟುಂಬದಿಂದ ₹45,000 ಹಣ ವಸೂಲಿ ಮಾಡಲಾಗಿದೆಯೆಂಬ ದೂರು ಹೊರಬಿದ್ದಿದೆ. ಈ ಕುರಿತು ವಿಚಾರಿಸಲು ಹೋದ ಮಹಿಳಾ ಸಿಬ್ಬಂದಿಗೆ ಮಾನಸಿಕ ಒತ್ತಡ ಮತ್ತು ಕಿರುಕುಳ ನೀಡಲಾಗಿದೆ ಎಂಬ ಮತ್ತೊಂದು ಆರೋಪವೂ ಬೆಳಕಿಗೆ ಬಂದಿದೆ. ವೈದ್ಯರ ವರ್ತನೆ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯರು ಆಸ್ಪತ್ರೆಗೆ ಆಗಮಿಸಿ ತೀವ್ರವಾಗಿ ಕಿಡಿಕಾರಿದ್ದಾರೆ. “ಬಡವರ ಹಕ್ಕಿನ ಮೇಲಿನ ದೌರ್ಜನ್ಯವನ್ನು ಸಹಿಸಲಾಗದು. ಸರ್ಕಾರದ ಯೋಜನೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಗಂಭೀರ…

ಮುಂದೆ ಓದಿ..