ಸುದ್ದಿ 

ನಿರ್ಮಾಣ ನಿರ್ವಹಣೆಯಲ್ಲಿದ್ದ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆಬಳಿಕ ವೈಟ್‌ಫೀಲ್ಡ್‌ನಲ್ಲಿ ಪ್ರಕರಣ ದಾಖಲು

Taluknewsmedia.com

Taluknewsmedia.comನಿರ್ಮಾಣ ನಿರ್ವಹಣೆಯಲ್ಲಿದ್ದ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ವೈಟ್‌ಫೀಲ್ಡ್‌ನಲ್ಲಿ ಪ್ರಕರಣ ದಾಖಲು ಬೆಂಗಳೂರು: ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮುರಳಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ ಘಟನೆಯನ್ನು ಗಂಭೀರವಾಗಿಸಿದೆ. ನೋಟಿನಲ್ಲಿ, ಜಿಬಿಎ ಅಧಿಕಾರಿಗಳು ನೀಡಿದ್ದ ನೋಟಿಸ್ ಹಾಗೂ ಪಕ್ಕದ ಮನೆಯ ನಿವಾಸಿ ಉಷಾ ನಾಯರ್ ಅವರು ನೋಟಿಸ್ ನೀಡುವಲ್ಲಿ ಕಾರಣಕಾರಿಗಳಾಗಿದ್ದರೆಂದು ಮುರಳಿ ಆರೋಪಿಸಿರುವ ಮಾಹಿತಿ ಹೊರಬಿದ್ದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನೋಟಿಸಿನ ಒತ್ತಡ ಮತ್ತು ವೈಯಕ್ತಿಕ ಕಳವಳಗಳು ಆತ್ಮಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ತಿಳಿಯಲು ಮುಂದಿನ ತನಿಖೆ ಅವಶ್ಯಕವಾಗಿದೆ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಕೃಷ್ಣರಾಜನಗರದಲ್ಲಿ ಇಬ್ಬರು ಯುವಕರ ದಾರುಣ ಅಂತ್ಯ: ನಾಲೆಯಲ್ಲಿ ಸಿಕ್ಕಿದ ಮೃತದೇಹಗಳು

Taluknewsmedia.com

Taluknewsmedia.comಕೃಷ್ಣರಾಜನಗರದಲ್ಲಿ ಇಬ್ಬರು ಯುವಕರ ದಾರುಣ ಅಂತ್ಯ: ನಾಲೆಯಲ್ಲಿ ಸಿಕ್ಕಿದ ಮೃತದೇಹಗಳು ಕೃಷ್ಣರಾಜನಗರ ಪಟ್ಟಣದಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ಇಬ್ಬರು ಯುವಕರ ಮೃತದೇಹಗಳು ಚಾಮರಾಜ ಬಲದಂಡೆ ನಾಲೆಯಲ್ಲಿ ಪತ್ತೆಯಾಗಿವೆ. ಹಾಸನ ರಸ್ತೆಯಲ್ಲಿರುವ ನಾಲೆಯಿಂದ ಸೋಮವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನ ಕ್ರಮವಾಗಿ ಇಬ್ಬರ ದೇಹಗಳು ಮೇಲಕ್ಕೆತ್ತಲ್ಪಟ್ಟಿವೆ. ಮೃತರಾದವರು ಹುಣಸೂರು ತಾಲ್ಲೂಕಿನ ಚಿಕ್ಕಾಡಿಗನಹಳ್ಳಿ ಮೂಲದವರು. ಬಸವರಾಜು ಅವರ ಪುತ್ರ ಭರತ್ (20) ಹಾಗೂ ಹುಚ್ಚಪ್ಪ ಅವರ ಪುತ್ರ ಪ್ರತಾಪ್ (22) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಇಬ್ಬರೂ ಮನೆಯಿಂದ ಹೊರಟಿದ್ದರೂ ರಾತ್ರಿ ವಾಪಸ್ ಬಾರದ ಕಾರಣ ಕುಟುಂಬದವರಲ್ಲಿ ಆತಂಕ ಹುಟ್ಟಿಕೊಂಡಿತ್ತು. ಆತಂಕಗೊಂಡ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗದೇ, ಬಳಿಕ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಹುಡುಕಾಟದ ವೇಳೆ ಕುವೆಂಪು ಬಡಾವಣೆಯ ಸಮೀಪ ನಾಲೆಯ ಏರಿಯಲ್ಲಿ ಇವರ ಬೈಕ್ ಮತ್ತು ಚಪ್ಪಲಿಗಳು ಕಂಡುಬಂದವು. ಇದರಿಂದ ಘಟನೆಗೆ ಸಂಬಂಧಿಸಿದ ಸಂಶಯಗಳು ಹೆಚ್ಚಾಗಿದ್ದು, ಕುಟುಂಬದವರು ನೀರಾವರಿ…

ಮುಂದೆ ಓದಿ..
ಸುದ್ದಿ 

ಕಾಮಗಾರಿ ಬಿಲ್‌ಗಳ ಜಾರಿಯ ವಿಚಾರವಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಆತ್ಮಹತ್ಯೆಗೆ ಯತ್ನಿಸಿದ ಗಂಭೀರ ಘಟನೆ..

Taluknewsmedia.com

Taluknewsmedia.comಕಾಮಗಾರಿ ಬಿಲ್‌ಗಳ ಜಾರಿಯ ವಿಚಾರವಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಆತ್ಮಹತ್ಯೆಗೆ ಯತ್ನಿಸಿದ ಗಂಭೀರ ಘಟನೆ ದಾವಣಗೆರೆಯ ಜಗಳೂರು ತಾಲೂಕು ಪಂಚಾಯತ್ ಕಚೇರಿ ಸಮೀಪ ನಡೆದಿದೆ. ಭರಮಸಮುದ್ರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅವರು ಅಚಾನಕ್ ತಮ್ಮ ಮೇಲೆ ಪೆಟ್ರೋಲ್‌ ಸುರಿದು ಜೀವ ಕೊಡುವ ಪ್ರಯತ್ನ ಮಾಡಿದ್ದಾರೆ. ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್‌ಗಳನ್ನು ಪಾವತಿಸದೇ ಅಧಿಕಾರಿಗಳು ತಿಪ್ಪೇಸ್ವಾಮಿಯನ್ನು ಆಗಾಗ ಚಕ್ರ ಹಾಕುತ್ತಿದ್ದರೆಂದು ತಿಳಿದುಬಂದಿದೆ. ಈ ಬಗ್ಗೆ PDO ಹಾಗೂ ಇತರೆ ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಹೆಚ್ಚಿನ ಗಮನ ಕೊಡದೇ ನಿರ್ಲಕ್ಷ್ಯ ತೋರಿದ್ದರಿಂದ ಉಪಾಧ್ಯಕ್ಷರು ತೀವ್ರ ಬೇಸರಗೊಂಡಿದ್ದರು. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಮಾನಸಿಕ ಒತ್ತಡಕ್ಕೆ ಒಳಗಾದ ತಿಪ್ಪೇಸ್ವಾಮಿ ಅಂತಿಮವಾಗಿ ಆತ್ಮಹತ್ಯೆಗೆ ಮುಂದಾಗಿದ್ದು, ಸ್ಥಳೀಯರು ತಕ್ಷಣ ನೀರು ಹಾಕಿ ಅವರನ್ನು ಉಳಿಸಿದ್ದಾರೆ. ಈ ಘಟನೆಯ ನಂತರ PDO ಕೊಟ್ರೇಶ್ ಹಾಗೂ EO ವಿರುದ್ಧ…

ಮುಂದೆ ಓದಿ..
ಸುದ್ದಿ 

ಎಸ್ಟಿಆರ್‌ಆರ್‌ ರಾಷ್ಟ್ರೀಯ ಹೆದ್ದಾರಿ ಯೋಜನೆ: 2021ರಿಂದ ಭೂಮುಕ್ತಾಯ ಸಿಕ್ಕಿಲ್ಲ — ರೈತರ ಕಣ್ಣೀರನ್ನು ಒರೆಸಲು ಕೇಂದ್ರಕ್ಕೆ ಮನವಿ

Taluknewsmedia.com

Taluknewsmedia.comಎಸ್ಟಿಆರ್‌ಆರ್‌ ರಾಷ್ಟ್ರೀಯ ಹೆದ್ದಾರಿ ಯೋಜನೆ: 2021ರಿಂದ ಭೂಮುಕ್ತಾಯ ಸಿಕ್ಕಿಲ್ಲ — ರೈತರ ಕಣ್ಣೀರನ್ನು ಒರೆಸಲು ಕೇಂದ್ರಕ್ಕೆ ಮನವಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ, ರಾಮನಗರ, ಆನೇಕಲ್ ಮತ್ತು ಹರಳಹಳ್ಳಿ ಮಾರ್ಗವಾಗಿ ಸಾಗುವ ಗ್ರೀನ್‌ಫೀಲ್ಡ್ ಎಸ್ಟಿಆರ್‌ಆರ್‌ (Satellite Town Ring Road) ರಾಷ್ಟ್ರೀಯ ಹೆದ್ದಾರಿ ಯೋಜನೆಯ ಭೂಸ್ವಾಧೀನ ಸಂಬಂಧ ರೈತರು ಇನ್ನೂ ಪರಿಹಾರ ಪಡೆಯದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.2021ರಲ್ಲಿ 2,200 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದರೂ, ಇದುವರೆಗೆ ರೈತರಿಗೆ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ಈ ಕುರಿತು ಸಂಸದರು ಸಂಸತ್‌ ಸಭೆಯಲ್ಲಿ ವಿಷಯ ಎತ್ತಿ ರೈತರ ನೋವನ್ನು ವಿವರಿಸಿದ್ದಾರೆ. “ರೈತರು ಕಣ್ಣೀರಿನಲ್ಲಿ… ತಕ್ಷಣ ಪರಿಹಾರ ಬಿಡುಗಡೆ ಮಾಡಿ” — ಸಂಸದರ ಒತ್ತಾಯ… ಸಂಸದರು ಮಾತನಾಡುತ್ತಾ,..“ಭೂಮಿ ಪಡೆದು ಮೂರು ವರ್ಷಗಳು ಕಳೆದರೂ ರೈತರಿಗೆ ಒಂದು ರೂಪಾಯಿ ಪರಿಹಾರವೂ ಸಿಕ್ಕಿಲ್ಲ. ಜನರು ಸಂಕಷ್ಟದಲ್ಲಿ, ಕಣ್ಣೀರಿನಲ್ಲಿ ಇದ್ದಾರೆ. ರಸ್ತೆ ಸಾರಿಗೆ ಸಚಿವಾಲಯ ಹಾಗೂ ಪ್ರಧಾನ ಮಂತ್ರಿ…

ಮುಂದೆ ಓದಿ..
ರಾಜಕೀಯ ಸುದ್ದಿ 

ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷನ ಮೇಲೆ 67 ಲಕ್ಷ ವಂಚನೆ ಆರೋಪ — ಪೊಲೀಸ್ ಕ್ರಮ ಪ್ರಶ್ನಾರ್ಹ

Taluknewsmedia.com

Taluknewsmedia.comಲಗ್ಗೆರೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷನ ಮೇಲೆ 67 ಲಕ್ಷ ವಂಚನೆ ಆರೋಪ — ಪೊಲೀಸ್ ಕ್ರಮ ಪ್ರಶ್ನಾರ್ಹ ಬೆಂಗಳೂರು: ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ಪಾರ್ಥ ಅಲಿಯಾಸ್ ಪಾರ್ಥಗೌಡ ವಿರುದ್ಧ 67 ಲಕ್ಷ ರೂಪಾಯಿ ವಂಚನೆ ಪ್ರಕರಣದಲ್ಲಿ ನ್ಯಾಯಾಲಯವು NBW (Non-Bailable Warrant) ಹೊರಡಿಸಿದ್ದರೂ, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ವಿಳಂಬ ಮಾಡುತ್ತಿರುವುದು ಗಂಭೀರ ಪ್ರಶ್ನೆಗೆ ಗ್ರಾಸವಾಗಿದೆ. ರಾಜಕೀಯ ಒತ್ತಡ, ಲಂಚದ ಪ್ರಭಾವವೇ ಪೊಲೀಸರ ನಿರ್ಲಕ್ಷ್ಯಕ್ಕೆ ಕಾರಣ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಮслиನಾಗುತ್ತಿವೆ. ನಿವೃತ್ತ ಶಿಕ್ಷಣ ಉಪನಿರ್ದೇಶಕರಿಗೆ ಮೋಸ — ಕೋರ್ಟ್‌ನಲ್ಲಿ ಆರೋಪ ಸಾಬೀತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ನೀಲಯ್ಯ ಅವರಿಗೆ ಸಂಬಂಧಿಕನಾದ ಪಾರ್ಥ ಬಿಸಿನೆಸ್ ಮಾಡುವ ನೆಪದಲ್ಲಿ RTGS ಮೂಲಕ 30 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಬಡ್ಡಿ ಸೇರಿಸಿ ಹಣ ನೀಡುವುದಾಗಿ ಭರವಸೆ ಕೊಟ್ಟರೂ ವರ್ಷಗಳವರೆಗೆ…

ಮುಂದೆ ಓದಿ..
ಸುದ್ದಿ 

ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಟ್ರಯಲ್ ಗಂಭೀರ ಹಂತಕ್ಕೆ

Taluknewsmedia.com

Taluknewsmedia.comರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಟ್ರಯಲ್ ಗಂಭೀರ ಹಂತಕ್ಕೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ನ್ಯಾಯಾಂಗ ಪ್ರಕ್ರಿಯೆ ಈಗ ಅಧಿಕೃತವಾಗಿ ವೇಗ ಪಡೆದುಕೊಂಡಿದ್ದು, ಟ್ರಯಲ್ ಹಂತದಲ್ಲಿ ದೊಡ್ಡ ಮಟ್ಟದ ಸಾಕ್ಷಿಗಳ ಪರಿಶೀಲನೆ ಆರಂಭವಾಗಲಿದೆ. ಪ್ರಾಸಿಕ್ಯೂಷನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 272 ಸಾಕ್ಷಿಗಳ ಬೃಹತ್ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಹಂತ ಹಂತವಾಗಿ ಎಲ್ಲರ ಹೇಳಿಕೆಗಳನ್ನು ದಾಖಲಿಸುವ ಕಾರ್ಯ ಮುಂದುವರಿಯಲಿದೆ. ಸಾಕ್ಷಿಗಳ 10 ವಿಭಾಗಗಳ ವರ್ಗೀಕರಣ.. ಪ್ರಾಸಿಕ್ಯೂಷನ್ ಪುರಾವೆಗಳನ್ನು ಆಧರಿಸಿ ಸಾಕ್ಷಿಗಳನ್ನು ಕೆಳಗಿನ ಪ್ರಮುಖ ವಿಭಾಗಗಳಲ್ಲಿ ವಿಭಜಿಸಲಾಗಿದೆ: ಪ್ರೈವೇಟ್ ಸಾಕ್ಷಿಗಳು: 100ಐ witnessed: 2ಭಾಗಶಃ ಪ್ರತ್ಯಕ್ಷ/ಸಾಂದರ್ಭಿಕ ಸಾಕ್ಷಿಗಳು: 5ಮಹಜರ್ ಸಾಕ್ಷಿಗಳು: 62FSL/CFSL ಸಿಬ್ಬಂದಿ: 15ವೈದ್ಯರು: 1ತಾಂತ್ರಿಕ ಸಾಕ್ಷಿಗಳು: 4ಬ್ಯಾಂಕ್ ಅಧಿಕಾರಿಗಳು: 17ಮ್ಯಾಜಿಸ್ಟ್ರೇಟ್‌ಗಳು: 2ಪೊಲೀಸ್ ಅಧಿಕಾರಿಗಳು: 64 ಈ ಪಟ್ಟಿಯೇ ಪ್ರಕರಣದ ಗಂಭೀರತೆಯನ್ನು ಸೂಚಿಸುವಂತಿದ್ದು, ಪ್ರತಿ ವಿಭಾಗದಿಂದ…

ಮುಂದೆ ಓದಿ..
ರಾಜಕೀಯ ಸುದ್ದಿ 

ಹಾಸನದ 3 ಮಂದಿ ಮಹಿಳಾ IAS ಅಧಿಕಾರಿಗಳ ಕೆಲಸ ಶ್ಲಾಘಿಸಿದ ಡಿಕೆಶಿ – ಕಾರಣವೇನು?

Taluknewsmedia.com

Taluknewsmedia.comಹಾಸನದ 3 ಮಂದಿ ಮಹಿಳಾ IAS ಅಧಿಕಾರಿಗಳ ಕೆಲಸ ಶ್ಲಾಘಿಸಿದ ಡಿಕೆಶಿ – ಕಾರಣವೇನು? “ಹಾಸನದಲ್ಲಿ ಕೆಲಸ ಮಾಡುತ್ತಿದ್ದ ಮೂರು ಮಂದಿ ಮಹಿಳಾ IAS ಅಧಿಕಾರಿ–ಎಸ್ಪಿ, ಡಿಸಿ ಮತ್ತು ಮತ್ತೊಬ್ಬರು–ಅದ್ಭುತ ಸಾಮರ್ಥ್ಯ ಹೊಂದಿರುವವರು. ಅವರಿಗೆ ನಾನು ಕೆಲವು ಸೂಚನೆಗಳನ್ನು ನೀಡಿದಾಗ, ಕೇವಲ ಒಂದೇ ತಿಂಗಳಲ್ಲಿ ಅವರು ಎತ್ತಿನಹೊಳೆ ನೀರಿನ ಸಮಸ್ಯೆಯನ್ನು ಬಗೆಹರಿಸಿ, ನೀರು ಮರುಪೂರೈಕೆ ಆಗುವಂತೆ ಮಾಡಿದ್ದಾರೆ. ಮೂರು ವರ್ಷಗಳಿಂದ ತೆರೆಯಲಾಗದೇ ಬಿಟ್ಟಿದ್ದ ಕೇವಲ 10 ಸಾವಿರ ಅಡಿ ಪೈಪ್‌ಲೈನ್ ಸಮಸ್ಯೆಯನ್ನು ಕೂಡ ಅವರು ಪರಿಹರಿಸಿದರು,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. “ಮಹಿಳೆಯರು ಪುರುಷರಿಗಿಂತ ಹೆಚ್ಚು ಶಿಸ್ತಿನಿಂದ ಕೆಲಸ ಮಾಡುತ್ತಾರೆ ಎಂಬುದು ನನ್ನ ನಂಬಿಕೆ. ಅವರಿಗೆ ಸರಿಯಾದ ದಿಕ್ಕುನಿರ್ಧೇಶ ಮತ್ತು ರಕ್ಷಣೆಯನ್ನು ನೀಡಿದರೆ, ಅವರು ಇನ್ನೂ ದೊಡ್ಡ ಸಾಧನೆಗಳನ್ನು ಮಾಡಬಹುದು. ಯಾರೂ ಮಹಿಳೆಯರನ್ನು ಶೋಷಿಸಬಾರದು, ಅಧಿಕಾರಿಗಳೇ ಆದರೂ ಕೂಡ ಅದಕ್ಕೆ ಅವಕಾಶ ಕೊಡಬಾರದು. ನಮ್ಮ ಸರ್ಕಾರ…

ಮುಂದೆ ಓದಿ..
ರಾಜಕೀಯ ಸುದ್ದಿ 

ಡಾ. ಜಿ. ಪರಮೇಶ್ವರರ ಹೇಳಿಕೆ – ದ್ವೇಷ ಭಾಷಣ ವಿರೋಧಿ ವಿಧೇಯಕದ ಬಗ್ಗೆ ಸ್ಪಷ್ಟನೆ

Taluknewsmedia.com

Taluknewsmedia.comಡಾ. ಜಿ. ಪರಮೇಶ್ವರರ ಹೇಳಿಕೆ – ದ್ವೇಷ ಭಾಷಣ ವಿರೋಧಿ ವಿಧೇಯಕದ ಬಗ್ಗೆ ಸ್ಪಷ್ಟನೆ ಸರ್ಕಾರ ಈಗ ದ್ವೇಷ ಭಾಷಣ ಮತ್ತು ದ್ವೇಷ ಹರಡುವ ವರ್ತನೆಗಳನ್ನು ನಿಯಂತ್ರಿಸಲು ಹೊಸ ‘ದ್ವೇಷ ಭಾಷಣ ತಡೆ ವಿಧೇಯಕ 2025’ನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಈ ಬಿಲ್‌ ಬಗ್ಗೆ ಮೊದಲು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಚರ್ಚೆಯ ನಂತರ ಕ್ಯಾಬಿನೆಟ್ ಅನುಮೋದನೆ ನೀಡಿದರೆ, ಸರ್ಕಾರ ಈ ವಿಧೇಯಕವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಿದೆ. ಡಾ. ಜಿ. ಪರಮೇಶ್ವರ ಅವರು ಮಾತನಾಡುವಾಗ, ಈ ಬಿಲ್ ಈಗಾಗಲೇ ಕ್ಯಾಬಿನೆಟ್ ಮುಂದೆ ಬಂದಿದೆ ಎಂದು ತಿಳಿಸಿದ್ದಾರೆ. ದ್ವೇಷ ಭಾಷಣ ಮತ್ತು ಅದಕ್ಕೆ ಸಂಬಂಧಿಸಿದ ಅನಾರೋಗ್ಯಕರ ವರ್ತನೆಗಳನ್ನು ತಡೆಯಲು ಇದು ಒಂದು ಮುಖ್ಯ ಹೆಜ್ಜೆ ಎಂದು ಅವರು ಒತ್ತಿ ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ಚರ್ಚೆ ಮುಗಿದ ನಂತರ, ಪಾಸಿಟಿವ್ ನಿರ್ಧಾರ ಕೈಗೊಳ್ಳಲಾದರೆ, ಬಿಲ್‌ನ್ನು ನೇರವಾಗಿ ವಿಧಾನಮಂಡಲದಲ್ಲಿ ಮಂಡಿಸುವ ಎಲ್ಲಾ…

ಮುಂದೆ ಓದಿ..
ರಾಜಕೀಯ ಸುದ್ದಿ 

ವಾಟಾಳ ನಾಗರಾಜ್ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಗಂಭೀರ ಎಚ್ಚರಿಕೆ ನೀಡಿದ್ದಾರೆ..

Taluknewsmedia.com

Taluknewsmedia.comವಾಟಾಳ ನಾಗರಾಜ್ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. “ಸಿಎಂ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ದುಡುಕಬಾರದು” ಎಂದು ಅವರು ಸ್ಪಷ್ಟವಾಗಿ ಹೇಳಿದರು. ಸಿದ್ದರಾಮಯ್ಯರನ್ನು ಬದಲಾಯಿಸುವ ಯಾವ ನಿರ್ಧಾರವೂ ರಾಜ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ರಾಜ್ಯದಲ್ಲಿ ದಂಗೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಹೈಕಮಾಂಡ್ ಯಾವುದೇ ತುರ್ತು ನಿರ್ಧಾರ ಕೈಗೊಳ್ಳದೆ, ವಿಚಾರವನ್ನು ಅಳೆದು ತೂಗಿ, ಯೋಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. “ಅಧಿಕಾರಿಗಳನ್ನು ಟ್ರಾನ್ಸ್‌ಫರ್ ಮಾಡುವಂತೆ ಮುಖ್ಯಮಂತ್ರಿಯನ್ನು ಬದಲಾಯಿಸುವುದು ಸರಿಯಲ್ಲ,” ಎಂಬುದೂ ಅವರ ಎಚ್ಚರಿಕೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿರುವ ನಾಯಕರು, ಅವರ ಮೇಲೆ ಯಾವುದೇ ಗಂಭೀರ ಆರೋಪಗಳಿಲ್ಲ. ಅವರ ವಯಸ್ಸಿನಲ್ಲೂ ಈ ಮಟ್ಟದಲ್ಲಿ ಕೆಲಸ ಮಾಡುವ ಮಟ್ಟದ ನಾಯಕರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷದಲ್ಲಿಯೂ ಇಲ್ಲ ಎಂದು ನಾಗರಾಜ್ ಪ್ರಶಂಸೆ ಮಾಡಿದ್ದಾರೆ.…

ಮುಂದೆ ಓದಿ..
ಸುದ್ದಿ 

ರಾಜಕೀಯ ನಾಯಕರ ವರ್ತನೆಗೆ ಕಿಡಿಕಾರಿರುವ ಜಿ. ಜನಾರ್ಧನ ರೆಡ್ಡಿ, “ಜನರ ಕಷ್ಟ ಯಾರಿಗೂ ಕಾಣುತ್ತಿಲ್ಲ,

Taluknewsmedia.com

Taluknewsmedia.comರಾಜಕೀಯ ನಾಯಕರ ವರ್ತನೆಗೆ ಕಿಡಿಕಾರಿರುವ ಜಿ. ಜನಾರ್ಧನ ರೆಡ್ಡಿ, “ಜನರ ಕಷ್ಟ ಯಾರಿಗೂ ಕಾಣುತ್ತಿಲ್ಲ, ಮಂತ್ರಿಗಳಿಗೆ ತಮ್ಮ ಸ್ಥಾನ ಮಾತ್ರ ಮುಖ್ಯ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, “ರೈತರು ಇಂದು ಪ್ರವಾಹ, ಅತಿವೃಷ್ಠಿ, ಬೆಳೆ ನಾಶ — ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಆದರೆ ಮಂತ್ರಿಗಳು ಟಿಫನ್‌ ಮೇಜಿನಲ್ಲೇ ಕುಳಿತು ತಮ್ಮ ‘ಸೀಟಿಂಗ್’ ರಾಜಕಾರಣ ಮಾಡ್ತಾ ಇದ್ದಾರೆ. ಸಿಎಂ–ಡಿಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದರೂ, ಕನಿಷ್ಠ ಈ ಜಿಲ್ಲೆಗೆ ಸಂಬಂಧಪಟ್ಟ ಮಂತ್ರಿಗಳು ಇದ್ದಾರೆ ಅಲ್ವಾ? ಯಾರಾದರೂ ಒಂದು ದಿನ ಮುಂಚೆಯೇ ಬಂದು ರೈತರ ಜೊತೆ ಮಾತಾಡಬಹುದಿತ್ತು,” ಎಂದು ಆರೋಪಿಸಿದರು. ಅವರು ಮುಂದುವರಿಸಿದರು:“ರೈತರು ಹೋರಾಟಕ್ಕೆ ಬರ್ತಿದ್ದಾರೆ ಅಂತ ದಿನಾಂಕ ನಿಗದಿ ಪಡಿಸಿದ್ದೇವೆ ಅಂತ ಹೇಳಿದಾಗಲೇ ಸರ್ಕಾರ ಜಾಗೃತಿಯಾಗಬೇಕಾಗಿತ್ತು. ಒಂದು ದಿನ ಮುಂಚೆ ಬಂದಿದ್ದರೆ, ‘ಬೆಂಬಲ ಬೆಲೆ ಕೊಡ್ತೀವಿ, ಖರೀದಿ…

ಮುಂದೆ ಓದಿ..