ಸಿಎಂ ಸಿದ್ದರಾಮಯ್ಯ ಕೈಯಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ — ಶೀಘ್ರದಲ್ಲೇ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿತ್ರನಗರಿ ನಿರ್ಮಾಣ
Taluknewsmedia.comಸಿಎಂ ಸಿದ್ದರಾಮಯ್ಯ ಕೈಯಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ — ಶೀಘ್ರದಲ್ಲೇ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿತ್ರನಗರಿ ನಿರ್ಮಾಣ ಮೈಸೂರು: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಘಟಿಕೋತ್ಸವ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ಚಿತ್ರತಾರೆಯರು ಕೇವಲ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಮಾದರಿಯಾಗಿರಬೇಕು. ಡಾ. ರಾಜ್ ಕುಮಾರ್ ಅವರ ಜೀವನವೇ ಅದಕ್ಕೆ ಉಜ್ವಲ ಉದಾಹರಣೆ. ಅವರು ಪರದೆ ಮತ್ತು ಜೀವನ ಎರಡರಲ್ಲೂ ಮೌಲ್ಯಗಳನ್ನು ಪಾಲಿಸಿದ ಕಾರಣ ಜನಮನದಲ್ಲಿ ಶಾಶ್ವತವಾಗಿ ಉಳಿದರು” ಎಂದು ಹೇಳಿದರು. ಅವರು ಮುಂದುವರಿದು, “ಸಿನಿಮಾ ಒಂದು ಅತ್ಯಂತ ಪ್ರಭಾವಿ ಮಾಧ್ಯಮ. ಅದು ಸಮಾಜದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಸಮಾಜ ತಿದ್ದುವ, ಮಾನವೀಯತೆ…
ಮುಂದೆ ಓದಿ..
