ಆನೇಕಲ್ದಲ್ಲಿ ಕುಟುಂಬಗಳ ನಡುವಿನ ಗಲಾಟೆ: ನಾಲ್ವರಿಗೆ ಗಾಯ, ಪ್ರಕರಣ ದಾಖಲು
Taluknewsmedia.comಆನೇಕಲ್ ಪಟ್ಟಣದ ನಿವಾಸವೊಂದರಲ್ಲಿ ಜೂನ್ 29ರ ಬೆಳಿಗ್ಗೆ ಎರಡು ಕುಟುಂಬಗಳ ನಡುವೆ ಉದ್ಭವಿಸಿದ ಗಲಾಟೆ ಹಿಂಸಾತ್ಮಕ ತಿರುವು ಪಡೆದು, ನಾಲ್ವರಿಗೆ ಗಾಯವಾಗಿರುವ ಘಟನೆ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಹಿರಿಯರೂ ಸೇರಿದ್ದಾರೆ. ಪೊಲೀಸ್ ಠಾಣೆಗೆ ಹಾಜರಾದ ಕುಮಾರಿ ಶುಭಾಶ್ರೀ ಬಿನ್ ರಾಜು ನೀಡಿದ ದೂರಿನ ಪ್ರಕಾರ, ಬೆಳಿಗ್ಗೆ 8 ಗಂಟೆ ಸುಮಾರಿಗೆ ಭರತ್, ಹರೀಶ್ ಮತ್ತು ಶ್ರೀಧರ್ ರವರ ಕುಟುಂಬದವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ. ಈ ವೇಳೆ ಪ್ರಸಾದ್, ಮುರಳಿ ಮತ್ತು ಸೀನಾ ಅವರು ಸೇರಿಕೊಂಡು, ಅಲ್ಲಿಯ ಬಿದ್ದ ದೊಣ್ಣೆಯಿಂದ ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಹರೀಶ್ ಪ್ರಜ್ಞೆ ತಪ್ಪಿಸಿ ನೆಲಕ್ಕೆ ಬಿದ್ದಿದ್ದಾರೆ. ಘಟನೆಯನ್ನು ಗಮನಿಸಿದ ಶುಭಾಶ್ರೀ ಅವರ ತಂದೆ ರಾಜು ಅವರು ಹರೀಶ್ ರವರಿಗೆ ಸಹಾಯ ಮಾಡಲು ಹೋಗಿದಾಗ, ಶ್ರೀಧರ್, ಕಾರ್ತಿಕ್ ವೇನಿ, ಶ್ರೀನಾಥ, ವಿಜಯಾ, ಪ್ರಸಾದ್, ಕವಿತಾ, ಮುರಳಿ…
ಮುಂದೆ ಓದಿ..
