ಉಚಿತ ಅಂದ್ರೆ ಇವರಿಗೆ ‘ಲಂಚ’ವಷ್ಟೇ ಪ್ರೀತಿ! ಪೋಡಿಮುಕ್ತ ಯೋಜನೆಗೆ ಭ್ರಷ್ಟಾಚಾರದ ಕಳಂಕ: ಲೋಕಾಯುಕ್ತ ಬಲೆಗೆ ಬಿದ್ದ ಕಿರಾತಕರು..
Taluknewsmedia.comಉಚಿತ ಅಂದ್ರೆ ಇವರಿಗೆ ‘ಲಂಚ’ವಷ್ಟೇ ಪ್ರೀತಿ! ಪೋಡಿಮುಕ್ತ ಯೋಜನೆಗೆ ಭ್ರಷ್ಟಾಚಾರದ ಕಳಂಕ: ಲೋಕಾಯುಕ್ತ ಬಲೆಗೆ ಬಿದ್ದ ಕಿರಾತಕರು.. ಸರ್ಕಾರದ ‘ಉಚಿತ’ ಯೋಜನೆಗಳು ಅಂದಾಕ್ಷಣ ಬಡ ರೈತರಿಗೆ ಅಲ್ಪಸ್ವಲ್ಪ ನೆಮ್ಮದಿ ಸಿಗಬಹುದು ಎಂಬ ಆಸೆ ಮೂಡುವುದು ಸಹಜ. ಆದರೆ, ಈ ವ್ಯವಸ್ಥೆಯೊಳಗಿನ ಕೆಲವು ಭ್ರಷ್ಟ ನಾಲಿಗೆಗಳಿಗೆ ಜನರ ಸಂಕಷ್ಟಕ್ಕಿಂತ ಲಂಚದ ಹಣದ ರುಚಿಯೇ ಹೆಚ್ಚಾಗಿಬಿಟ್ಟಿದೆ. ಉಚಿತವಾಗಿ ಸಿಗಬೇಕಾದ ಸೇವೆಯನ್ನೂ ಹಣಕ್ಕೆ ಹರಾಜು ಹಾಕುವ ವ್ಯವಸ್ಥಿತ ಜಾಲವೊಂದು ಸರ್ಕಾರಿ ಕಚೇರಿಗಳಲ್ಲಿ ಬೇರೂರಿದೆ. ಗದಗ ಜಿಲ್ಲೆಯ ಭೂದಾಖಲೆಗಳ ಕಚೇರಿಯಲ್ಲಿ ನಡೆದ ಈ ತಾಜಾ ಪ್ರಕರಣವು, ಭ್ರಷ್ಟಾಚಾರವು ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಒಂದು ಕಟು ಉದಾಹರಣೆಯಾಗಿದೆ. ‘ಉಚಿತ’ ಹೆಸರಷ್ಟೇ, ಕೆಲಸಕ್ಕೆ ಮಾತ್ರ ಹಣ ಬೇಕು!… ಸಣ್ಣ ಹಿಡುವಳಿದಾರ ರೈತರಿಗೆ ಅನುಕೂಲವಾಗಲೆಂದು ಜಾರಿಗೆ ತಂದ ‘ಉಚಿತ ಪೋಡಿಮುಕ್ತ ಯೋಜನೆ’ಯಲ್ಲೂ ಲಂಚದ ಕಳಂಕ ಮೆತ್ತಿಕೊಂಡಿದೆ. ಹರ್ಲಾಪುರ ಗ್ರಾಮದ ನಿವಾಸಿ ಗಣೇಶ ಅಂದಪ್ಪ ಮುಂಡರಗಿ ಅವರು…
ಮುಂದೆ ಓದಿ..
