ಸುದ್ದಿ 

ಉದ್ಯೋಗದ ಹೆಸರಿನಲ್ಲಿ ಸೈಬರ್ ವಂಚನೆ – 1.37 ಲಕ್ಷ ರೂ. ಸುಲಿಗೆ

Taluknewsmedia.com

Taluknewsmedia.comಬೆಂಗಳೂರು 20 ಆಗಸ್ಟ್ 2025ಬೆಂಗಳೂರು, ಜುಲೈ 21: ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ ಸೈಬರ್ ವಂಚಕರು ಮತ್ತೊಮ್ಮೆ ತಮ್ಮ ಬಲೆ ಬೀಸಿರುವ ಘಟನೆ ಬೆಳಕಿಗೆ ಬಂದಿದೆ. ತಿಲಕ್ ರೆಡ್ಡಿ ಅವರಿಗೆ ಕಂಪನಿಯಲ್ಲಿ ವರ್ಷಕ್ಕೆ 14 ಲಕ್ಷ ರೂ. ಪ್ಯಾಕೇಜ್ ಇರುವ ಹುದ್ದೆ ಕೊಡುತ್ತೇವೆ ಎಂದು ಭರವಸೆ ನೀಡಿದ ವಂಚಕರು, ಮೊದಲು ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ ₹1,37,000/- ಮೊತ್ತವನ್ನು PhonePe ಮತ್ತು ಬ್ಯಾಂಕ್ ಖಾತೆಗಳ ಮೂಲಕ ಕಳುಹಿಸಿದ್ದಾರೆ. ಆದರೆ ಉದ್ಯೋಗ ನೀಡುವುದಾಗಿ ಹೇಳಿ ವಂಚಕರು ದಿನಾಂಕವನ್ನು ಮುಂದೂಡುತ್ತಾ ಬಂದಿದ್ದಾರೆ. ಬಳಿಕ ಅವರ ಹಿನ್ನಲೆ ಪರಿಶೀಲಿಸಿದಾಗ, ಇವರು ಇದೇ ರೀತಿಯಲ್ಲಿ ಅನೇಕ ಮಂದಿಗೆ ಮೋಸ ಮಾಡಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ, ದೂರುದಾರರು “ಉದ್ಯೋಗ ಕೊಡಿಸುವ ಹೆಸರಿನಲ್ಲಿ ನನ್ನಿಂದ ಹಣ ಪಡೆದು ಸೈಬರ್ ವಂಚನೆ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನನ್ನ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಜಕ್ಕೂರು ಫ್ಲೈಓವರ್‌ನಲ್ಲಿ ಟ್ರಾಫಿಕ್ ಅಡಚಣೆ

Taluknewsmedia.com

Taluknewsmedia.com ಬೆಂಗಳೂರು ಜಕ್ಕೂರು ಫ್ಲೈಓವರ್‌ನಲ್ಲಿ ಟ್ರಾಫಿಕ್ ಅಡಚಣೆ ಬೆಂಗಳೂರು, 20 ಆಗಸ್ಟ್ 2025:ನಗರದಲ್ಲಿ ಭಾನುವಾರ ಸಂಜೆ ಜಕ್ಕೂರು ಫ್ಲೈಓವರ್ ಬಳಿ ವಾಹನ ಸಂಚಾರ ದಟ್ಟಣೆ ಉಂಟಾದ ಘಟನೆ ನಡೆದಿದೆ. ಬಿಬಿ ಮುಖ್ಯರಸ್ತೆಯಲ್ಲಿ ಸಂಚಾರ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದ ಯಲಹಂಕ ಸಂಚಾರ ಪೊಲೀಸ್ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ಒಂದು ಮಾರುತಿ ವ್ಯಾಗನ್‌ಆರ್ (KA-05-M-9406) ಕಾರು ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ಕಾರಣದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರಸ್ತೆಯಲ್ಲಿ ವಾಹನಗಳ ಉದ್ದ ಸಾಲು ನಿರ್ಮಾಣಗೊಂಡಿತ್ತು. ಸ್ಥಳೀಯ ಸಾರ್ವಜನಿಕರ ಪ್ರಕಾರ, ಕಾರು ಸುಮಾರು 45 ನಿಮಿಷಗಳ ಕಾಲ ಅಲ್ಲೇ ನಿಂತಿತ್ತು. ಪೊಲೀಸರು ತಕ್ಷಣವೇ ಹಸ್ತಕ್ಷೇಪಿಸಿ ಕಾರಿನ ಹಿಂಭಾಗದಲ್ಲಿ ಎಚ್ಚರಿಕೆ ಬೋರ್ಡ್ ಇಟ್ಟು ಸಂಚಾರವನ್ನು ಸುಗಮಗೊಳಿಸಿದರು. ಸುಮಾರು 40 ನಿಮಿಷಗಳ ಬಳಿಕ ಕಾರಿನ ಚಾಲಕ ಸ್ಥಳಕ್ಕೆ ಆಗಮಿಸಿದನು. ಆತನು ಅಶ್ರಫ್ ಅಲೇ ವಿ ಕೆ ಬಿನ್ ಅಬ್ದುಲ್…

ಮುಂದೆ ಓದಿ..
ಸುದ್ದಿ 

ಯಲಹಂಕ ಅಲಾಳಸಂದ್ರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅಡಚಣೆ

Taluknewsmedia.com

Taluknewsmedia.comಯಲಹಂಕ ಅಲಾಳಸಂದ್ರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅಡಚಣೆಯಲಹಂಕ 20 ಆಗಸ್ಟ್ 2025ಯಲಹಂಕ ಅಲಾಳಸಂದ್ರ ಕೆರೆ ಪಕ್ಕದ ಮುಖ್ಯರಸ್ತೆಯಲ್ಲಿ 17-08-2025ರಂದು ಬೆಳಗಿನ 2:54 ಗಂಟೆಗೆ ಗಸ್ತು ಕರ್ತವ್ಯದಲ್ಲಿದ್ದ ಯಲಹಂಕ ಸಂಚಾರಿ ಪೊಲೀಸ್ ಸಿಬ್ಬಂದಿ ಒಬ್ಬರು, ಕಎವಿ.50.ಬಿ.6739 ನಂಬರ್‌ನ ಖಾಸಗಿ ಬಸ್‌ನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ನಿಲ್ಲಿಸಿರುವುದನ್ನು ಗಮನಿಸಿದರು. ಸದರಿ ಬಸ್ ಚಾಲಕರನ್ನು ವಿಚಾರಿಸಿದಾಗ, ಆತನು ತನ್ನನ್ನು ಜಗದೀಶ ಜಿ.ಸಿ. (ವಿಳಾಸ: 2013, 28, 5, 15 ..-561211, ಮೊಬೈಲ್: 9945449632) ಎಂದು ಪರಿಚಯಿಸಿಕೊಂಡಿದ್ದಾನೆ. ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಕಾರಣ, ಯಲಹಂಕ ಸಂಚಾರಿ ಪೊಲೀಸರು ಬಸ್‌ನ್ನು ಠಾಣೆಗೆ ಕರೆದುಕೊಂಡು ಬಂದು, ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಂಚಾರ ಅಡಚಣೆ ಉಂಟಾಗುವಂತ ವಿಧವಾಗಿ ವಾಹನ ನಿಲುವಿಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ…

ಮುಂದೆ ಓದಿ..
ಸುದ್ದಿ 

ಯಲಹಂಕ: ಐಟಿ ಉದ್ಯೋಗಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಯಲಹಂಕ 20 ಆಗಸ್ಟ್ 2025ಯಲಹಂಕ ಪೊಲೀಸರು ದಾಖಲಿಸಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, 33 ವರ್ಷದ ಐಟಿ ಉದ್ಯೋಗಿ ರಾಮ್ ಮೋಹನ್ ರೆಡ್ಡಿ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಉಮಾ ಮಹೇಶ್ವರಿ ಅವರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುವುದೇನೆಂದರೆ, ಅವರು ತಮ್ಮ ಗಂಡ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಗಂಡನಾದ ರಾಮ್ ಮೋಹನ್ ರೆಡ್ಡಿ ಅವರು ಕಳೆದ 3 ತಿಂಗಳುಗಳಿಂದ ವೈಟೀಲ್‌ನ ಕ್ಯಾಪೆಮಿನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಆಗಸ್ಟ್ 17ರಂದು ಮಧ್ಯಾಹ್ನ 12 ಗಂಟೆಗೆ ಕೆಲಸಕ್ಕಾಗಿ ಮನೆಯಿಂದ ಹೊರಟ ಅವರು ಇದುವರೆಗೆ ಮನೆಗೆ ಹಿಂದಿರುಗದೆ ಕಾಣೆಯಾಗಿದ್ದಾರೆ. ಮೊಬೈಲ್‌ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದರಿಂದ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಈ ಪ್ರಕರಣವನ್ನು ಪೊಲೀಸರು ತನಿಖೆ…

ಮುಂದೆ ಓದಿ..
ಸುದ್ದಿ 

ಜಾನುವಾರುಗಳ ಅಕ್ರಮ ಸಾಗಣೆ – ಇಬ್ಬರು ಆರೋಪಿ ಬಂಧನ

Taluknewsmedia.com

Taluknewsmedia.comಬೆಂಗಳೂರು 20 ಆಗಸ್ಟ್ 2025ಬೆಂಗಳೂರು ಗ್ರಾಮಾಂತರದಲ್ಲಿ ಪೊಲೀಸರು ಜಾನುವಾರುಗಳ ಅಕ್ರಮ ಸಾಗಾಣಿಕೆ ನಡೆಸುತ್ತಿದ್ದ ವಾಹನವನ್ನು ಪತ್ತೆಹಚ್ಚಿದ್ದಾಆಗಸ್ಟ್ 16ರಂದು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊಯ್ಸಳ–184 ಸಿಬ್ಬಂದಿಗೆ ಬೆಳಿಗ್ಗೆ 6:30ರ ಸುಮಾರಿಗೆ ಮಾಹಿತಿ ಸಿಕ್ಕಿತು. ಚಪ್ಪರದಕಲು ರಸ್ತೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬುಲೋರೋ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದು, ಅದರ ಹಿಂದೆ ಕೆಂಪು ಬಣ್ಣದ ಕಾರು ಹಿಂಬಾಲಿಸುತ್ತಿದೆ ಎಂಬ ಸುಳಿವು ದೊರಕಿತು. ತಕ್ಷಣ ಚಿಕ್ಕಜಾಲ ಪೊಲೀಸರು ನೆಕ್ಸ್ಟ್ ಚಾಪ್ಟರ್ ಹೋಟೆಲ್ ಬಳಿ ವಾಹನಗಳನ್ನು ತಡೆದಾಗ, ಬುಲೋರೋ ಡ್ರೈವರ್ ಮತ್ತು ಒಬ್ಬ ಅಸಾಮಿ ಓಡಿಹೋದರು. ವಾಹನ ಪರಿಶೀಲನೆ ಮಾಡಿದಾಗ ಅದರಲ್ಲಿ ಅನೇಕ ಜಾನುವಾರುಗಳು ಹಿಂಸೆ ಅನುಭವಿಸುತ್ತಿದ್ದವು. ನಂತರ ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿ ವಾಹನ ಹಾಗೂ ಜಾನುವಾರುಗಳನ್ನು ಚಿಕ್ಕಜಾಲ ಪೊಲೀಸ್ ಠಾಣೆಗೆ ಕಳುಹಿಸಲಾಯಿತು. ಇದಾದ ಬಳಿಕ ಹೋಟೆಲ್ ಹಿಂಭಾಗದಲ್ಲಿ ಕೆಂಪು ಕಾರನ್ನು ತಡೆದಾಗ ಅದರಲ್ಲಿ ಇದ್ದ 4–5 ಜನ ಆರೋಪಿ…

ಮುಂದೆ ಓದಿ..
ಸುದ್ದಿ 

ವಾಟ್ಸಪ್ ವಂಚನೆ – ಸ್ನೇಹಿತನ ಫೋಟೋ ಬಳಸಿಕೊಂಡು 42,500 ರೂ. ಮೋಸ!

Taluknewsmedia.com

Taluknewsmedia.comವಾಟ್ಸಪ್ ವಂಚನೆ – ಸ್ನೇಹಿತನ ಫೋಟೋ ಬಳಸಿಕೊಂಡು 42,500 ರೂ. ಮೋಸ!ಬೆಂಗಳೂರು 20 ಆಗಸ್ಟ್ 2025ಬೆಂಗಳೂರು ಹೆಬ್ಬಾಳದ ಕೆಂಪಾಪುರದಲ್ಲಿ ಸ್ನೇಹಿತನ ಫೋಟೋ ಬೆಳೆಸಿ ವಾಟ್ಸಪ್‌ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ದೂರುದಾರರು ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ 15820100064397 ಹೊಂದಿದ್ದು, ದಿನಾಂಕ 30/06/2025 ರಂದು ಅಪರಿಚಿತ ವ್ಯಕ್ತಿಯೊಬ್ಬನು ಅವರ ಸ್ನೇಹಿತನ ಫೋಟೋವನ್ನು ತನ್ನ ವಾಟ್ಸಪ್ ಡಿ.ಪಿ.ಯಾಗಿ ಇಟ್ಟುಕೊಂಡು ಮೊಬೈಲ್ ಸಂಖ್ಯೆ 9389659802ರಿಂದ ಸಂದೇಶ ಕಳುಹಿಸಿದ್ದಾನೆ. ಆ ಸಂದೇಶದಲ್ಲಿ ತುರ್ತು ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದರಿಂದ, ದೂರುದಾರರು ನಿಜವಾಗಿಯೂ ತಮ್ಮ ಸ್ನೇಹಿತನೇ ಎಂದು ಭಾವಿಸಿ, ಆ ವ್ಯಕ್ತಿಗೆ ಒಟ್ಟು ₹42,500 ಹಣವನ್ನು ವರ್ಗಾಯಿಸಿದ್ದಾರೆ. ನಂತರ ವಂಚನೆ ನಡೆದಿರುವುದು ಗೊತ್ತಾಗಿ, ಅವರು ಅಮೃತಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ಅಪರಿಚಿತ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಬ್ರಿಗೇಡ್ ಎಲ್ಲೋರಾಡೋ ಪಾರ್ಕ್‌ನಲ್ಲಿ ಗೃಹ ಹಿಂಸೆ ಪ್ರಕರಣ

Taluknewsmedia.com

Taluknewsmedia.comಬ್ರಿಗೇಡ್ ಎಲ್ಲೋರಾಡೋ ಪಾರ್ಕ್‌ನಲ್ಲಿ ಗೃಹ ಹಿಂಸೆ ಪ್ರಕರಣ ಬೆಂಗಳೂರು:20 ಆಗಸ್ಟ್ 2025ನಗರದ ಬ್ರಿಗೇಡ್ ಎಲ್ಲೋರಾಡೋ ಇರೋ ಸ್ಪೇಸ್ ಪಾರ್ಕ್‌ನಲ್ಲಿ ವಾಸಿಸುತ್ತಿರುವ ಮಹಿಳೆ ತಮ್ಮ ಗಂಡ ಹಾಗೂ ಅತ್ತೆ-ಮಾವನ ವಿರುದ್ಧ ಗೃಹ ಹಿಂಸೆ ಮತ್ತು ಮಾನಸಿಕ ಕಿರುಕುಳದ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೀಡಿತ ಮಹಿಳೆಯ ಹೇಳಿಕೆಯ ಪ್ರಕಾರ, ಅವರು 2019ರಲ್ಲಿ ಕುಮಾರಸೌರಭ ಎಂಬವರೊಂದಿಗೆ ವಿವಾಹವಾಗಿದ್ದು, ಮದುವೆಯಾದ ನಂತರದಿಂದಲೇ ಅತ್ತೆ-ಮಾವ ಹಾಗೂ ಗಂಡನಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದಾರೆ. ಮಕ್ಕಳಿಲ್ಲದ ಕಾರಣದಿಂದ ಪೋಷಕರ ಆರೈಕೆಗಾಗಿ ತಮ್ಮ ಗಂಡ ಒಪ್ಪಿಕೊಂಡಿದ್ದರೂ, ನಂತರ ಅತ್ತೆ-ಮಾವರು ಅದನ್ನು ವಿರೋಧಿಸಿ, ಗಂಡನಿಗೆ ತನ್ನ ವಿರುದ್ಧ ಪ್ರಚೋದನೆ ನೀಡುತ್ತಿದ್ದರೆಂದು ದೂರಿನಲ್ಲಿ ಹೇಳಲಾಗಿದೆ. 2025ರ ಆಗಸ್ಟ್ 17ರಂದು ಬೆಳಗ್ಗೆ ಸುಮಾರು 8.30ಕ್ಕೆ ನಡೆದ ಜಗಳದ ವೇಳೆ ಗಂಡನು ಪತ್ನಿಯ ಕೂದಲು ಎಳೆದು ತಲೆಗೆ ಹಾಗೂ ಮುಖಕ್ಕೆ ಕೈಯಿಂದ ಹೊಡೆದಿದ್ದಾನೆ. ಮಧ್ಯಾಹ್ನ 2 ಗಂಟೆಯವರೆಗೂ ಜಗಳ ಮುಂದುವರಿದ…

ಮುಂದೆ ಓದಿ..
ಸುದ್ದಿ 

15 ವರ್ಷದ ಬಾಲಕಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು 20 ಆಗಸ್ಟ್ 2025ಬೆಂಗಳೂರು: ಜಡಿಗೇನಹಳ್ಳಿಯ ನಿವಾಸಿ ಮಹಿಳೆಯೊಬ್ಬರು ತಮ್ಮ 15 ವರ್ಷದ ಮಗಳು ಕಾಣೆಯಾದ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಅರುಣಾ ಅವರ ಗಂಡ ರವಿಕುಮಾರ್ ಹಾಗೂ ಇಬ್ಬರು ಮಕ್ಕಳಾದ ಪ್ರೀತಿ ಆರ್ (15 ವರ್ಷ), ಆಕಾಶ್ (12 ವರ್ಷ) ಅವರೊಂದಿಗೆ ವಾಸವಾಗಿದ್ದಾರೆ. ಮಗಳು ಪ್ರೀತಿ ರವರು ಆಗಾಗ ಅತ್ತೆ ಚೆನ್ನಮ್ಮ ಅವರ ಹೂವಿನಾಯಕನಹಳ್ಳಿಯ ಮನೆಯಲ್ಲಿ ತಂಗಿ ಅವರ ಚಿಲ್ಲರೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಳು. ಆಗಸ್ಟ್ 14ರಂದು ರಾತ್ರಿ ಸುಮಾರು 8:45ಕ್ಕೆ ಮಗಳು ಮನೆವರ ಜೊತೆ ವಿಡಿಯೋ ಕಾಲ್ ಮಾಡಿ, ನಂತರ 9:15ರ ವೇಳೆಗೆ ಹೊರಗಿನ ವಾಷ್ ರೂಮ್‌ಗೆ ಹೋಗುವುದಾಗಿ ಹೇಳಿ ಹೊರಟು ಹೋಗಿದ್ದಳು. ಆದರೆ ಬಳಿಕ ಮನೆಗೆ ಮರಳದೆ ಕಾಣೆಯಾಗಿದ್ದಾಳೆ. ಕುಟುಂಬದವರು ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಮೊಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಆತ್ರೆಯಿಂದ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಆಂಜನೇಯ ದೇವಸ್ಥಾನ ಹುಂಡಿ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು 20 ಆಗಸ್ಟ್ 2025 ಬೆಂಗಳೂರು: ಆಂಜನೇಯ ದೇವಸ್ಥಾನ ಹುಂಡಿ ಕಳ್ಳತನ ಬೆಂಗಳೂರು 20 ಆಗಸ್ಟ್ 2025ನಗರ ಅಗ್ರಹಾರ ಗ್ರಾಮದಲ್ಲಿ ಇರುವ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಅಶ್ವಥ್ ಎ ಪಿ ಅವರ ಹೇಳಿಕೆ ಪ್ರಕಾರ, ಅವರು ಪ್ರತಿದಿನ ದೇವಸ್ಥಾನದ ಸ್ವಚ್ಛತೆ ಮಾಡುವುದರ ಜೊತೆಗೆ ಲೈಟ್ ಹಚ್ಚುವ ಕೆಲಸ ಮಾಡುತ್ತಿದ್ದರು. 17 ಆಗಸ್ಟ್ 2025 ಸಂಜೆ 6:30ಕ್ಕೆ ದೇವಸ್ಥಾನ ಪರಿಶೀಲನೆ ಮಾಡಿದಾಗ ಎಲ್ಲವೂ ಸರಿಯಾಗಿತ್ತು. ಆದರೆ 18 ಆಗಸ್ಟ್ 2025 ಬೆಳಿಗ್ಗೆ 8:00ಕ್ಕೆ ದೇವಸ್ಥಾನದ ಲೈಟ್ ಆಫ್ ಮಾಡಲು ಹೋದಾಗ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಹುಂಡಿಯನ್ನು ಒಡೆದು ಅದರೊಳಗಿದ್ದ ರೂ. 20,000 ನಗದು ಹಣವನ್ನು ಕದ್ದೊಯ್ದಿರುವುದು ಪತ್ತೆಯಾಗಿದೆ. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಳ್ಳರನ್ನು ಶೀಘ್ರವೇ ಪತ್ತೆ ಮಾಡಿ ದೇವಸ್ಥಾನದ ಹಣವನ್ನು ವಾಪಸು ಪಡೆಯಲು…

ಮುಂದೆ ಓದಿ..
ಸುದ್ದಿ 

ಟೆಲಿಗ್ರಾಂ ವಂಚನೆ – ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಲಿಯಾದ ದೂರು

Taluknewsmedia.com

Taluknewsmedia.comಟೆಲಿಗ್ರಾಂ ವಂಚನೆ – ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಲಿಯಾದ ದೂರು ಬೆಂಗಳೂರು:20 ಆಗಸ್ಟ್ 2025ನಗರದಲ್ಲಿ ಬಿಇಎಲ್ ಲೇಔಟ್ ವಿದ್ಯಾರಣ್ಯಪುರ ದಲಿ ಮತ್ತೊಮ್ಮೆ ಟೆಲಿಗ್ರಾಂ ಮೂಲಕ ಹಣ ಗಳಿಸುವ ಕೆಲಸದ ಹೆಸರಿನಲ್ಲಿ ವಂಚನೆ ನಡೆದಿದೆ. ಶ್ರೀನಿವಾಸ್ ಅವರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಅಪರಿಚಿತ ವ್ಯಕ್ತಿ “Athira” (Telegram ID: @Athira582) ಎಂಬ ಹೆಸರಿನಲ್ಲಿ ಸಂಪರ್ಕಿಸಿಕೊಂಡು, Godrej Properties Promotional Job ಎನ್ನುವ ಸುಳ್ಳು ಕೆಲಸ ನೀಡುವ ಮೂಲಕ ಬಲಿತೆಗೆದುಕೊಂಡಿದ್ದಾರೆ. ಅವರ ಮಾತಿಗೆ ನಂಬಿಕೊಂಡ ದೂರುದಾರರು ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ ಪರಿಣಾಮವಾಗಿ ಒಟ್ಟು ₹2,11,635 ಹಣ ಕಳೆದುಕೊಂಡಿದ್ದಾರೆ. ಪಾವತಿಗಳು ವಿವಿಧ ಬ್ಯಾಂಕ್ ಖಾತೆಗಳು ಹಾಗೂ UPI ಐಡಿಗಳಿಗೆ ಮಾಡಲಾಗಿದೆ: ಇಂಡಿಯನ್ ಬ್ಯಾಂಕ್ ಖಾತೆ ಸಂಖ್ಯೆ: 8092829124 – ₹25,000/- & ₹50,000/- ಸಿಟಿ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ: 500101014308390 UPI ID: rahul1005prasad@okhdfcbank UPI…

ಮುಂದೆ ಓದಿ..