ಧರ್ಮಸ್ಥಳ ಪ್ರಕರಣಗಳ ಸುತ್ತಲಿನ ನಿಗೂಢತೆ: ಎಸ್ಐಟಿ ವರದಿ ಬಹಿರಂಗಪಡಿಸಲು ಸರ್ಕಾರದ ನಿರಾಕರಣೆ ಏಕೆ?..
Taluknewsmedia.comಧರ್ಮಸ್ಥಳ ಪ್ರಕರಣಗಳ ಸುತ್ತಲಿನ ನಿಗೂಢತೆ: ಎಸ್ಐಟಿ ವರದಿ ಬಹಿರಂಗಪಡಿಸಲು ಸರ್ಕಾರದ ನಿರಾಕರಣೆ ಏಕೆ?.. ಧರ್ಮಸ್ಥಳ—ಲಕ್ಷಾಂತರ ಭಕ್ತರ ಪಾಲಿನ ಪರಮ ಪವಿತ್ರ ಕ್ಷೇತ್ರ, ನಂಬಿಕೆಯ ನೆಲೆವೀಡು. ಆದರೆ ಕಳೆದ ಹತ್ತು ವರ್ಷಗಳಿಂದ ಈ ಕ್ಷೇತ್ರದ ಆಸುಪಾಸಿನಲ್ಲಿ ಕೇಳಿಬರುತ್ತಿರುವ ಮಹಿಳೆಯರ ಮತ್ತು ಯುವತಿಯರ ನಿಗೂಢ ನಾಪತ್ತೆ ಹಾಗೂ ಅಸಹಜ ಸಾವುಗಳ ಸರಣಿ ಸುದ್ದಿಗಳು ನಾಡಿನಾದ್ಯಂತ ತಲ್ಲಣ ಮೂಡಿಸಿವೆ. ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆಗಳಂತಹ ಗಂಭೀರ ಆರೋಪಗಳ ಬೆನ್ನತ್ತಿದಾಗ ಸತ್ಯದ ದರ್ಶನವಾಗುತ್ತದೆ ಎಂಬ ನಿರೀಕ್ಷೆಯಿತ್ತು. ಅದಕ್ಕಾಗಿಯೇ ವಿಶೇಷ ತನಿಖಾ ತಂಡ (SIT) ಅಸ್ತಿತ್ವಕ್ಕೆ ಬಂದಿತು. ಆದರೆ, ಇಂದು ಆ ತನಿಖೆಯ ಫಲಿತಾಂಶ ಏನಾಯಿತು? ಸರ್ಕಾರ ವರದಿಯನ್ನು ಏಕೆ ಬಚ್ಚಿಡುತ್ತಿದೆ? ನ್ಯಾಯದ ಹಾದಿಯಲ್ಲಿ ಇಷ್ಟೊಂದು ಗುಪ್ತಗಾಮಿನಿತನ ಏಕೆ? ಈ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ. ಧರ್ಮಸ್ಥಳದ ಸುತ್ತಮುತ್ತ ನಡೆದ ಅಸಹಜ ಸಾವುಗಳ ಸತ್ಯಾಸತ್ಯತೆಯನ್ನು ಅರಿಯಲು ‘ದಿ ಫೈಲ್’ (The File)…
ಮುಂದೆ ಓದಿ..
