ಕಾಂಗ್ರೆಸ್ನಲ್ಲಿ ಶಿಸ್ತುಕ್ರಮದ ಬಿರುಗಾಳಿ: ‘ದೊರೆ’ಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯವೇ?…
Taluknewsmedia.comಕಾಂಗ್ರೆಸ್ನಲ್ಲಿ ಶಿಸ್ತುಕ್ರಮದ ಬಿರುಗಾಳಿ: ‘ದೊರೆ’ಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯವೇ?… ಕಾಂಗ್ರೆಸ್ನ ಕಾರಿಡಾರ್ಗಳಲ್ಲಿ ಈಗ ‘ಶಿಸ್ತು’ ಎನ್ನುವುದು ಎರಡು ಅಲಗಿನ ಕತ್ತಿಯಂತಾಗಿದೆ. ಅದು ಕೆಲವರ ಪಾಲಿಗೆ ಹರಿತವಾಗಿ ತಲೆದಂಡ ಪಡೆಯುವ ಆಯುಧವಾದರೆ, ಮತ್ತೆ ಕೆಲವರ ಪಾಲಿಗೆ ಕೇವಲ ನಾಮಕಾವಸ್ತೆ ಪ್ರದರ್ಶಿಸುವ ಮೊಂಡು ಕತ್ತಿಯಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಂತರ ಕೈಪಾಳಯದಲ್ಲಿ ಎದ್ದಿರುವ ಈ ಆಂತರಿಕ ಕದನ ಕೇವಲ ಮೇಲ್ನೋಟದ ಅಸಮಾಧಾನವಲ್ಲ; ಇದು ಪಕ್ಷದ ಅಡಿಪಾಯವನ್ನೇ ನಡುಗಿಸುತ್ತಿರುವ ಶಕ್ತಿ ಪ್ರದರ್ಶನ. ಅಧಿಕಾರದಲ್ಲಿರುವ ‘ದೊರೆ’ಗಳಿಗೆ ಒಂದು ನ್ಯಾಯ, ನಂಬಿ ಬಂದ ‘ಸಾಮಾನ್ಯ’ ನಾಯಕರಿಗೆ ಮತ್ತೊಂದು ನ್ಯಾಯವೇ ಎಂಬ ಪ್ರಶ್ನೆ ಈಗ ಹಿರಿಯ ಪತ್ರಕರ್ತರ ವಲಯದಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರನ್ನೂ ಕಾಡುತ್ತಿದೆ. ಪಕ್ಷದ ಶಿಸ್ತು ಕ್ರಮದ ಮೊದಲ ಬಲಿಪಶುಗಳಾಗಿರುವುದು ಕಾಂಗ್ರೆಸ್ನ ಪರಂಪರಾಗತ ವೋಟ್ ಬ್ಯಾಂಕ್ ಎಂದೇ ನಂಬಲಾದ ಮುಸ್ಲಿಂ ಸಮುದಾಯದ ನಾಯಕರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್…
ಮುಂದೆ ಓದಿ..
