ಸುದ್ದಿ 

ಪಿಎಂ ಮಾತೃತ್ವ ರಕ್ಷೆ ಯೋಜನೆ ಫಲಕಾರಿತ್ವ: ಮೈಸೂರಿನಲ್ಲಿ 13,910 ತಾಯಂದಿರ ಜೀವ ರಕ್ಷಣೆ

ಪಿಎಂ ಮಾತೃತ್ವ ರಕ್ಷೆ ಯೋಜನೆ ಫಲಕಾರಿತ್ವ: ಮೈಸೂರಿನಲ್ಲಿ 13,910 ತಾಯಂದಿರ ಜೀವ ರಕ್ಷಣೆ ಮೈಸೂರು: ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಮೈಸೂರು ಜಿಲ್ಲೆಯಲ್ಲಿ ಈವರೆಗೆ 13,910 ಹೈರಿಸ್ಕ್‌ ಗರ್ಭಿಣಿಯರು ಜೀವಾಪಾಯದಿಂದ ಪಾರಾಗಿದ್ದಾರೆ. ಯೋಜನೆ ಆರಂಭದ ನಂತರ ಜಿಲ್ಲೆಯಲ್ಲಿ ಮಾತೃ ಮರಣ ಪ್ರಮಾಣ ಶೇ. 16ರಿಂದ 11.5ಕ್ಕೆ ಇಳಿಕೆಯಾಗಿ, ರಾಜ್ಯದ ಸರಾಸರಿ ಪ್ರಮಾಣವಾದ 19% ಕ್ಕಿಂತ ಉತ್ತಮ ಸಾಧನೆ ದಾಖಲಿಸಿದೆ. ಯೋಜನೆಯ ಉದ್ದೇಶಗರ್ಭಧಾರಣೆಯ ಅವಧಿಯಲ್ಲಿ ತಾಯಿ ಮತ್ತು ಶಿಶುವಿನ ಜೀವಕ್ಕೆ ಅಪಾಯ ಉಂಟುಮಾಡಬಹುದಾದ ತೊಡಕುಗಳನ್ನು ಮುಂಚಿತವಾಗಿ ಪತ್ತೆಹಚ್ಚಿ, ತಕ್ಷಣ ಚಿಕಿತ್ಸೆ ನೀಡುವುದು ಅಭಿಯಾನದ ಮುಖ್ಯ ಗುರಿ. ಪ್ರತಿ ತಿಂಗಳು 9ರಂದು ವಿಶೇಷ ತಪಾಸಣೆಜಿಲ್ಲೆಯಾದ್ಯಂತ ಪಿಎಚ್‌ಸಿಗಳಲ್ಲಿ ಪ್ರತಿ ತಿಂಗಳು 9ರಂದು ಗರ್ಭಿಣಿಯರ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹಿಂದೆ ಸಿಸೇರಿಯನ್‌, ಅವಳಿ ಗರ್ಭ, ಗಂಡಾಂತರ ಹೆರಿಗೆ ಸೇರಿದಂತೆ 18 ವಿಧದ ಅಪಾಯಕಾರಿ ಲಕ್ಷಣಗಳು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿನ ಶೆಲ್ಟರ್‌ಗಳಲ್ಲಿ ಇರುವ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಸಾರಿ ಚಿಕನ್–ರೈಸ್: ಯೋಜನೆಗೆ ವರ್ಷಕ್ಕೆ ₹8 ಕೋಟಿಯಷ್ಟಾದರೂ ವೆಚ್ಚದ ಅಂದಾಜು…

ಬೆಂಗಳೂರು ನಗರದಲ್ಲಿನ ಶೆಲ್ಟರ್‌ಗಳಲ್ಲಿ ಇರುವ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಸಾರಿ ಚಿಕನ್–ರೈಸ್: ಯೋಜನೆಗೆ ವರ್ಷಕ್ಕೆ ₹8 ಕೋಟಿಯಷ್ಟಾದರೂ ವೆಚ್ಚದ ಅಂದಾಜು… ಬೆಂಗಳೂರು: ಸುಪ್ರೀಂ ಕೋರ್ಟ್‌ ನಿರ್ದೇಶನದ ನಂತರ, ನಗರದ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಸಾರಿಗೆ ಕೇಂದ್ರಗಳ ಸುತ್ತಲಿರುವ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸುವ ಕಾರ್ಯ ಗತಿಸುತಿದೆ. ಈ ಕ್ರಮದ ಅಂಗವಾಗಿ, ಗ್ರೇಟರ್‌ ಬೆಂಗಳೂರು ಆಡಳಿತ (GBA) ಶೆಲ್ಟರ್‌ಗಳಲ್ಲಿ ಇರಲಿರುವ ನಾಯಿಗಳಿಗೆ ಪ್ರತಿದಿನ ಎರಡು ಬಾರಿ ಚಿಕನ್–ರೈಸ್ ನೀಡಲು ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಯೋಜನೆಯು ಜಾರಿಗೆ ಬಂದರೆ ಪ್ರತಿ ನಾಯಿಯ ದಿನನಿತ್ಯದ ಪೋಷಣೆಗೆ ಸುಮಾರು ₹102 ವೆಚ್ಚವಾಗುವ ಸಾಧ್ಯತೆ ಇದೆ. ಒಟ್ಟಾರೆ, ವಾರ್ಷಿಕ ಖರ್ಚು ₹8 ಕೋಟಿಗೂ ಮೇಲಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ನಗರದಲ್ಲಿ ಸರ್ಕಾರಿ ಆವರಣಗಳಲ್ಲಿ ಗುರುತಿಸಲ್ಪಟ್ಟಿರುವ ಬೀದಿ ನಾಯಿಗಳ ಸಂಖ್ಯೆ ಸುಮಾರು 2,206. ಇದುವರೆಗೆ ಶೆಲ್ಟರ್‌ಗಳಲ್ಲಿ ನಾಯಿಗಳಿಗೆ…

ಮುಂದೆ ಓದಿ..
ಸುದ್ದಿ 

ದೇವನಹಳ್ಳಿ ಬಳಿ ಶಾಶ್ವತ ವಿಶೇಷ ಕೃಷಿ ವಲಯ: ಅಪಪ್ರಚಾರಕ್ಕೆ ಮಾರು ಹೋಗಬೇಡಿ — ಸರ್ಕಾರದ ಸ್ಪಷ್ಟನೆ

ದೇವನಹಳ್ಳಿ ಬಳಿ ಶಾಶ್ವತ ವಿಶೇಷ ಕೃಷಿ ವಲಯ: ಅಪಪ್ರಚಾರಕ್ಕೆ ಮಾರು ಹೋಗಬೇಡಿ — ಸರ್ಕಾರದ ಸ್ಪಷ್ಟನೆ ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಮಿಯನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ವಾಗಿ ಘೋಷಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೆಡೆ ಉಂಟಾಗಿರುವ ತಪ್ಪು ಕಲ್ಪನೆಗಳನ್ನು ರಾಜ್ಯ ಸರ್ಕಾರ ತಳ್ಳಿ ಹಾಕಿದೆ. ರೈತರಿಗೆ ತಮ್ಮ ಜಮೀನು ಮಾರಾಟದ ಹಕ್ಕುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರೈತರ ಜಮೀನು ಮಾರಾಟದ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂಬ ಅಭಿಪ್ರಾಯ ಕೆಲವು ವಲಯಗಳಲ್ಲಿ ಮೂಡಿರುವ ಹಿನ್ನೆಲೆಯಲ್ಲಿ ಅವರು ಪ್ರಕಟಣೆ ನೀಡುತ್ತಾ, “ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ. ಜಮೀನು ಮಾರಾಟದ ಮೇಲೆ ಸರ್ಕಾರ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ,” ಎಂದು ಹೇಳಿದರು. ರಿಯಲ್…

ಮುಂದೆ ಓದಿ..
ಸುದ್ದಿ 

ಡೆಲಿವರಿ ಸಿಬ್ಬಂದಿಗೆ ಲಿಫ್ಟ್ ನಿಷೇಧ ವಿವಾದ: ಮೇಘನಾ ಫುಡ್ಸ್ ಕ್ಷಮೆ ಕೇಳಿ ಹಿಂದೆ ಸರಿತು

ಡೆಲಿವರಿ ಸಿಬ್ಬಂದಿಗೆ ಲಿಫ್ಟ್ ನಿಷೇಧ ವಿವಾದ: ಮೇಘನಾ ಫುಡ್ಸ್ ಕ್ಷಮೆ ಕೇಳಿ ಹಿಂದೆ ಸರಿತು ಬೆಂಗಳೂರು: ನಗರದಲ್ಲಿನ ಪ್ರಸಿದ್ಧ ಆಹಾರ ಸರಣಿ ಮೇಘನಾ ಫುಡ್ಸ್‌ ಒಂದು ಶಾಖೆಯಲ್ಲಿ ಡೆಲಿವರಿ ಏಜೆಂಟ್‌ಗಳು ಲಿಫ್ಟ್ ಬಳಸಬಾರದೆಂದು ಸೂಚಿಸಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಯಿತು. ನೆಟ್ಟಿಗರ ಆಕ್ರೋಶದ ನಡುವೆ ಸಂಸ್ಥೆ ಅಧಿಕೃತವಾಗಿ ಕ್ಷಮೆಯಾಚಿಸಿ, ಆ ಪೋಸ್ಟರ್ ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಘಟನೆಯ ಮೂಲ, ಒಬ್ಬ ಬಳಕೆದಾರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿದ ಪೋಸ್ಟರ್ ಚಿತ್ರ. ದಿನವಿಡೀ ಶ್ರಮಿಸುವ ಡೆಲಿವರಿ ಕಾರ್ಮಿಕರ ಮೇಲೆ ಇಂಥ ನಿರ್ಬಂಧ ಮಾನವೀಯವಲ್ಲ ಎಂದು ಅನೇಕರು ಪ್ರಶ್ನೆ ಎತ್ತಿದರು. ಕ್ಷಣಾರ್ಧದಲ್ಲಿ ಪೋಸ್ಟ್ ವೈರಲ್ ಆಗಿ, ಸಂಸ್ಥೆಯ ವಿರುದ್ಧ ನಕಾರಾತ್ಮಕ ಪ್ರತಿಕ್ರಿಯೆಗಳು ಹೆಚ್ಚಿದವು. ಟೀಕೆಯನ್ನು ಗಮನಿಸಿದ ಮೇಘನಾ ಫುಡ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ, “ಗಂಟೆಗಳ ಪೀಕ್ ಅವಧಿಯಲ್ಲಿ ಗ್ರಾಹಕರಿಗೆ ಲಿಫ್ಟ್‌ಗಳಲ್ಲಿ ಆಗುವ ಬಿಕ್ಕಟ್ಟನ್ನು ತಪ್ಪಿಸಲು ಮಾತ್ರ ಈ…

ಮುಂದೆ ಓದಿ..
ಸುದ್ದಿ 

ಬಾಯ್‌ಫ್ರೆಂಡ್‌ಗಾಗಿ ರೇಪ್‌ ಕಥೆ ಕಟ್ಟಿದ ನರ್ಸಿಂಗ್ ವಿದ್ಯಾರ್ಥಿನಿ — ಪೊಲೀಸರ ತನಿಖೆಯಲ್ಲಿ ಸತ್ಯ ಹೊರಬಂತು

ಬಾಯ್‌ಫ್ರೆಂಡ್‌ಗಾಗಿ ರೇಪ್‌ ಕಥೆ ಕಟ್ಟಿದ ನರ್ಸಿಂಗ್ ವಿದ್ಯಾರ್ಥಿನಿ — ಪೊಲೀಸರ ತನಿಖೆಯಲ್ಲಿ ಸತ್ಯ ಹೊರಬಂತು ಬೆಂಗಳೂರು: ಪ್ರೇಮಿಯ ವಿಶ್ವಾಸ ಗೆಲ್ಲುವ ಉದ್ದೇಶದಿಂದ ನರ್ಸಿಂಗ್‌ ವಿದ್ಯಾರ್ಥಿನಿಯೊಬ್ಬಳು ಸಾಮೂಹಿಕ ಅತ್ಯಾಚಾರದ ನಕಲಿ ಕಥೆ ಹೆಣೆದು ಕ್ಯಾಬ್ ಚಾಲಕನ ಮೇಲೆ ಸುಳ್ಳು ದೂರು ನೀಡಿದ ಘಟನೆ ಬಹಿರಂಗವಾಗಿದೆ. ಬಾಣಸವಾಡಿ ಠಾಣೆ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಘಟನೆಗೆ ನಿಜ ಸ್ವರೂಪ ಪತ್ತೆಯಾಗಿದೆ. ಸುಳ್ಳು ದೂರು ನೀಡಿದ ಹಿನ್ನೆಲೆಯಲ್ಲಿ ಈಗ ವಿದ್ಯಾರ್ಥಿನಿಯ ಮೇಲೂ ಪ್ರಕರಣ ದಾಖಲಿಸಲಾಗಿದೆ. ಡಿ.6ರಂದು 22 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ಬಾಯ್‌ಫ್ರೆಂಡ್‌తో ಸೇರಿ ಮಡಿವಾಳ ಠಾಣೆಗೆ ತೆರಳಿ, ಡಿ.2ರ ರಾತ್ರಿ ಕ್ಯಾಬ್ ಚಾಲಕ ಹಾಗೂ ಆತನಿಬ್ಬರು ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ಬರೆದು ದೂರು ನೀಡಿದ್ದಳು. ದೂರು ದಾಖಲಿಸಿದ ಪೊಲೀಸರು ಪ್ರಕರಣವನ್ನು ಬಾಣಸವಾಡಿ ಠಾಣೆಗೆ ವರ್ಗಾಯಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಕ್ಯಾಬ್‌ ಚಾಲಕನನ್ನು ಬಂಧಿಸಿ ಐದು ದಿನಗಳ…

ಮುಂದೆ ಓದಿ..
ಸುದ್ದಿ 

ಕ್ರಿಸ್‌ಮಸ್–ಹೊಸ ವರ್ಷದ ಸಂಭ್ರಮಕ್ಕೆ ಕೊಂಕಣ ರೈಲ್ವೆಯಲ್ಲಿ ಹೆಚ್ಚುವರಿ ರೈಲುಗಳು; ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

ಕ್ರಿಸ್‌ಮಸ್–ಹೊಸ ವರ್ಷದ ಸಂಭ್ರಮಕ್ಕೆ ಕೊಂಕಣ ರೈಲ್ವೆಯಲ್ಲಿ ಹೆಚ್ಚುವರಿ ರೈಲುಗಳು; ಸಂಪೂರ್ಣ ವೇಳಾಪಟ್ಟಿ ಬಿಡುಗಡೆ ಉಡುಪಿ: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜಾ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ, ಕೊಂಕಣ ರೈಲ್ವೇ ಸಂಸ್ಥೆ ಹಲವು ವಿಶೇಷ ರೈಲುಗಳನ್ನು ಚಾಲನೆ ಮಾಡಲು ನಿರ್ಧರಿಸಿದೆ. ಯಶವಂತಪುರ–ವಾಸ್ಕೋ ಡ ಗಾಮ ಹಾಗೂ ಬೆಂಗಳೂರು ಕಂಟೋನ್ಮೆಂಟ್–ವಾಸ್ಕೋ ಡ ಗಾಮ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸಲಿದ್ದು, ಒಂದು ರೈಲಿನ ಮಾರ್ಗವ್ಯಾಪ್ತಿ ಮಡಗಾಂವ್ ಜಂಕ್ಷನ್‌ವರೆಗೆ ವಿಸ್ತರಿಸಲಾಗಿದೆ. ತಿರುವನಂತಪುರಂ–ಚಂಡೀಗಢ ಮಾರ್ಗದಲ್ಲೂ ವಿಶೇಷ ಏಕಮುಖ ರೈಲು ಚಲಿಸಲಿವೆ. ಯಶವಂತಪುರ–ವಾಸ್ಕೋ ಡ ಗಾಮ ವಿಶೇಷ ರೈಲು (06505 / 06506) 06505 – ಯಶವಂತಪುರ → ವಾಸ್ಕೋ ಡ ಗಾಮ ದಿನಾಂಕ: ಡಿಸೆಂಬರ್ 25 ಮತ್ತು 31 ಹೊರಟ ಸಮಯ: ರಾತ್ರಿ 12:20 ತಲುಪುವ ಸಮಯ: ಮಧ್ಯಾಹ್ನ 1:50 ನಿಲ್ದಾಣಗಳು: ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ,…

ಮುಂದೆ ಓದಿ..
ಸುದ್ದಿ 

ಜನಾರ್ದನ ರೆಡ್ಡಿ ಪುತ್ರನ ವಿರುದ್ಧ ₹100 ಕೋಟಿಯ ಆಸ್ತಿ ಕಬಳಿಕೆ ಆರೋಪ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಜನಾರ್ದನ ರೆಡ್ಡಿ ಪುತ್ರನ ವಿರುದ್ಧ ₹100 ಕೋಟಿಯ ಆಸ್ತಿ ಕಬಳಿಕೆ ಆರೋಪ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಬಳ್ಳಾರಿ ನಗರದ ಹೃದಯಭಾಗದಲ್ಲಿರುವ ₹100 ಕೋಟಿ ಮೌಲ್ಯದ ಜಾಗ ಕಬಳಿಕೆಗೆ ಯತ್ನಿಸಿದ ಆರೋಪ ಎದುರಿಸುತ್ತಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿಯ ಪುತ್ರ ಜಿ. ಕಿರೀಟಿ ರೆಡ್ಡಿ ಹಾಗೂ ಅವರ ಸಹವರ್ತಿಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್, ಈ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಅಸ್ತಿಯ ಮೂಲ ಮಾಲೀಕರಾದ ಎಂ. ಗೋವರ್ಧನ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಧಾರವಾಡದಲ್ಲಿ ನಡೆಯಿತು. ವಾದವನ್ನು ಆಲಿಸಿದ ನ್ಯಾಯಾಲಯ, ಅರ್ಜಿದಾರರ ಮೇಲೆ ಜೀವಭೀತಿ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ವಿಚಾರಣೆಯನ್ನು ಮುಂದಿನ 15ರ ತನಕ ಮುಂದೂಡಲಾಗಿದೆ. ಹೈಕೋರ್ಟ್ ವಕೀಲ ಪಿ. ಪ್ರಸನ್ನಕುಮಾರ್ ತಿಳಿಸಿದಂತೆ,2005ರಲ್ಲಿ ಜಿಪಿಎ ಹಾಗೂ…

ಮುಂದೆ ಓದಿ..
ಸುದ್ದಿ 

ತನ್ನದೇ ಶಾಲೆಯ ಬಸ್ ಡಿಕ್ಕಿಯಿಂದ 9 ವರ್ಷದ ಬಾಲಕಿ ದುರ್ಮರಣ: ಚಾಲಕನ ಅಜಾಗರೂಕತೆಯೇ ಕಾರಣ?

ತನ್ನದೇ ಶಾಲೆಯ ಬಸ್ ಡಿಕ್ಕಿಯಿಂದ 9 ವರ್ಷದ ಬಾಲಕಿ ದುರ್ಮರಣ: ಚಾಲಕನ ಅಜಾಗರೂಕತೆಯೇ ಕಾರಣ? ಬೀದರ್ ಜಿಲ್ಲೆಯ ಜನವಾಡ ಗ್ರಾಮದಲ್ಲಿ ನಡೆದ ದುರಂತದಲ್ಲಿ ಶಾಲಾ ಬಸ್‌ನಿಂದಲೇ 9 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಓಡಿಸುತ್ತಿದ್ದ ವಾಹನದ ಬಗ್ಗೆ ನಿರ್ಲಕ್ಷ್ಯ ತೋರಿದ ಚಾಲಕನ ವರ್ತನೆಯೇ ಈ ಅನಾಹುತಕ್ಕೆ ಕಾರಣ. ಮಂಗಳವಾರ ಸಂಜೆ ಶಾಲೆಯಿಂದ ಮನೆ ಕಡೆ ಇಳಿದಿದ್ದ ಮೂರನೇ ತರಗತಿಯ ವಿದ್ಯಾರ್ಥಿನಿ ಋತ್ವಿಕಾ ಸುನಿಲಕುಮಾರ (9) ಬಸ್‌ನ ಮುಂಭಾಗದಲ್ಲಿ ನಿಂತಿದ್ದಾಗ, ಚಾಲಕ ಗಮನಿಸದೇ ವಾಹನವನ್ನು ಚಲಾಯಿಸಿದ ಪರಿಣಾಮ ಬಾಲಕಿ ಬಸ್‌ಗೆ ತಗುಲಿ ಗಂಭೀರವಾಗಿ ಗಾಯಗೊಂಡಳು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಮಾರ್ಗ ಮಧ್ಯೆಯೇ ಋತ್ವಿಕಾ ಪ್ರಾಣಬಿಟ್ಟಿದ್ದಾಳೆ. ಮೃತ ಬಾಲಕಿಯ ತಾಯಿ ರೇಣುಕಾ ಅವರು ಜನವಾಡ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದು, ಕುಟುಂಬ ಕ್ವಾಟರ್ಸ್ ಪ್ರದೇಶದಲ್ಲಿ ವಾಸಿಸುತ್ತಿದೆ. ಘಟನೆ ನಡೆದ ತಕ್ಷಣ ಡಿವೈಎಸ್‌ಪಿ ಸನದಿ, ಸಿಪಿಐ…

ಮುಂದೆ ಓದಿ..
ಸುದ್ದಿ 

ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಜಾತ್ರೆ – 2026ರ ಮಹಾ ರಥೋತ್ಸವಕ್ಕೆ ದಿನಾಂಕ ನಿಗದಿ; ಉದ್ಘಾಟನೆ ನೆರವೇರಿಸುವವರು ಯಾರು?

ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಜಾತ್ರೆ – 2026ರ ಮಹಾ ರಥೋತ್ಸವಕ್ಕೆ ದಿನಾಂಕ ನಿಗದಿ; ಉದ್ಘಾಟನೆ ನೆರವೇರಿಸುವವರು ಯಾರು? ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಹಾ ರಥೋತ್ಸವವು 2026ರ ಜನವರಿ 5 ರಂದು ಭಕ್ತಿಭಾವದ ವಾತಾವರಣದಲ್ಲಿ ಆಯೋಜನೆಗೊಳ್ಳಲಿದೆ. ಈ ಬೃಹತ್ ಧಾರ್ಮಿಕ ಸಮಾರಂಭಕ್ಕೆ ಈ ಬಾರಿ ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರು ಶುಭಾರಂಭದ ಘಂಟೆ ಮೊಳಗಿಸಲಿದ್ದಾರೆ. ಗವಿಮಠವು ವರ್ಷಾಂತರದಿಂದ ದೇಶದ ಗಣ್ಯ ಸಾಧಕರನ್ನು ರಥೋತ್ಸವ ಉದ್ಘಾಟನೆಗೆ ಆಹ್ವಾನಿಸುವ ಸಂಪ್ರದಾಯವನ್ನು ಪಾಲಿಸುತ್ತಿದೆ. ಇತಿಹಾಸದಲ್ಲಿ ಪೇಜಾವರ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆ, ಸದ್ಗುರು ಜಗ್ಗಿ ವಾಸುದೇವ್, ಪತಂಜಲಿ ಸಂಸ್ಥಾಪಕರಾದ ಗುರುಗಳು, ಸುತ್ತೂರು ಮಠದ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಪ್ರಮುಖರಿಂದ ರಥೋತ್ಸವಕ್ಕೆ ಚಾಲನೆ ದೊರೆತಿದೆ. ಮಠದಿಂದ ಪ್ರಕಟವಾದ ಮಾಹಿತಿಯ ಪ್ರಕಾರ, ಸಿ.ಎಚ್. ವಿಜಯಶಂಕರ್ ಅವರು ನೈತಿಕತೆ, ಸರಳತೆ, ಚಿಂತನೆಗಳಲ್ಲಿಯ…

ಮುಂದೆ ಓದಿ..
ಸುದ್ದಿ 

ರಾಯಚೂರು ಬಳಿ KSRTC ಬಸ್ ದುರಂತ — ಕಂಡಕ್ಟರ್ ಮೃತಪಟ್ಟರು, 23ಕ್ಕೂ ಹೆಚ್ಚು ಮಂದಿ ಗಾಯಗೊಂಡರು..

ರಾಯಚೂರು ಬಳಿ KSRTC ಬಸ್ ದುರಂತ — ಕಂಡಕ್ಟರ್ ಮೃತಪಟ್ಟರು, 23ಕ್ಕೂ ಹೆಚ್ಚು ಮಂದಿ ಗಾಯಗೊಂಡರು ರಾಯಚೂರು: ದೇವದುರ್ಗ ತಾಲೂಕಿನ ಅಂಚೇಸುಗೂರು ಸಮೀಪ ಸಂಭವಿಸಿದ ದಾರುಣ ರಸ್ತೆ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ, ಕಂಡಕ್ಟರ್ ಬಸವರಾಜ್ (36) ಮೃತಪಟ್ಟ ದುರ್ಘಟನೆ ನಡೆದಿದೆ. ಇದಲ್ಲದೆ, 23ಕ್ಕೂ ಹೆಚ್ಚು ಪ್ರಯಾಣಿಕರು ವಿವಿಧ ಮಟ್ಟದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಕೈ ಮೂಳೆಗಳು ಮುರಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನಾ ಸಮಯದಲ್ಲಿ ಬಸ್‌ನಲ್ಲಿ ಸುಮಾರು 35 ಮಂದಿ ಇದ್ದರು. ಅಂಜಳ ಗ್ರಾಮದಿಂದ ದೇವದುರ್ಗ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್, ಅಂಚೇಸುಗೂರು ಕಾಲುವೆ ಸೇತುವೆ ದಾಟುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಬದಿಗೆ ಉರುಳಿದಿದೆ. ಬಸ್‌ನ ಪಟ್ಟಿಬೀಮ್ ಪೆಕಿದಿರುವುದು ಪ್ರಾಥಮಿಕ ಕಾರಣ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕಂಡಕ್ಟರ್ ಬಸವರಾಜ್ ಅವರನ್ನು ತಕ್ಷಣ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರಿಗೆ ನೀಡಿದ ಚಿಕಿತ್ಸೆ…

ಮುಂದೆ ಓದಿ..