ಕೆಪಿಸಿಸಿ ಕಚೇರಿ ಈಗ ರಣರಂಗ: ಯೂತ್ ಕಾಂಗ್ರೆಸ್ ಸಭೆಯಲ್ಲಿ ನಡೆದ ಅಚ್ಚರಿಯ ವಿದ್ಯಮಾನಗಳು…
ಕೆಪಿಸಿಸಿ ಕಚೇರಿ ಈಗ ರಣರಂಗ: ಯೂತ್ ಕಾಂಗ್ರೆಸ್ ಸಭೆಯಲ್ಲಿ ನಡೆದ ಅಚ್ಚರಿಯ ವಿದ್ಯಮಾನಗಳು… ರಾಜ್ಯ ರಾಜಕಾರಣದ ಅಧಿಕಾರ ಕೇಂದ್ರವಾದ ಬೆಂಗಳೂರಿನ ಕೆಪಿಸಿಸಿ ಕಚೇರಿ ಅಂದರೆ ಅದು ಕೇವಲ ಒಂದು ಕಟ್ಟಡವಲ್ಲ; ಅದು ಸಿದ್ಧಾಂತಗಳ ಚರ್ಚೆ ಮತ್ತು ಸಂಘಟನಾ ಶಿಸ್ತಿನ ಪಾಠಶಾಲೆಯಾಗಬೇಕು. ಆದರೆ ಇತ್ತೀಚೆಗೆ ಅಲ್ಲಿ ನಡೆದ ವಿದ್ಯಮಾನಗಳು ಈ ಪಾವಿತ್ರ್ಯತೆಯನ್ನು ಅಣಕಿಸುವಂತಿದ್ದವು. ಸಂಘಟನೆಯ ಬಲವರ್ಧನೆಗೆ ಮತ್ತು ಮುಂದಿನ ಹೋರಾಟಗಳ ರೂಪುರೇಷೆ ಸಿದ್ಧಪಡಿಸಲು ಕರೆದಿದ್ದ ಸಭೆಯು, ಅನಿರೀಕ್ಷಿತವಾಗಿ ‘ಕೈ’ ಕಾರ್ಯಕರ್ತರ ಅಸಂಯಮದ ರಣರಂಗವಾಗಿ ಮಾರ್ಪಟ್ಟಿದ್ದು ಪಕ್ಷದ ಆಂತರಿಕ ಶಿಸ್ತಿನ ಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯ ಯೂತ್ ಕಾಂಗ್ರೆಸ್ನಲ್ಲಿ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅವರ ಕಾಲಘಟ್ಟ ಮುಗಿದು, ನೂತನ ಅಧ್ಯಕ್ಷ ಮಂಜುನಾಥ್ ಅವರು ಜವಾಬ್ದಾರಿ ವಹಿಸಿಕೊಂಡ ನಂತರ ನಡೆದ ಈ ಸಭೆ ಅತ್ಯಂತ ನಿರ್ಣಾಯಕವಾಗಿತ್ತು. ಆದರೆ ಇದು ಕೇವಲ ಸಭೆಯಾಗಿರದೆ, ‘ಹಳೆಯ ಗುಂಪು’ ಮತ್ತು ‘ಹೊಸ ನಾಯಕತ್ವ’ದ ನಡುವಿನ ಅಧಿಕಾರ…
ಮುಂದೆ ಓದಿ..
