ದಳಪತಿ ವಿಜಯ್ ಅವರನ್ನು ದೇವರೇ ಕಾಪಾಡಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ದಳಪತಿ ವಿಜಯ್ ಅವರನ್ನು ದೇವರೇ ಕಾಪಾಡಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. “ಕೊಟ್ಟಿರುವ ಉಚಿತ ಗ್ಯಾರಂಟಿಗಳನ್ನು ಮುಂದುವರಿಸುವುದೇ ದೊಡ್ಡ ಸವಾಲು. ಅದಕ್ಕಾಗಿಯೇ ದೇವರು ಕಾಪಾಡಬೇಕು ಎಂದು ಹೇಳಿದ್ದೇನೆ. ಅವರು ಈಗ ಘೋಷಿಸಿರುವ ಫ್ರೀಬೀಸ್ಗಳ ಪರಿಣಾಮ ಏನು ಎನ್ನುವುದು ಗೊತ್ತಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಅವರ ರಾಜ್ಯದ ವಾರ್ಷಿಕ ಬಜೆಟ್ ಸುಮಾರು ಮೂರುವರೆ ಲಕ್ಷ ಕೋಟಿ ರೂಪಾಯಿ ಇದೆ. ಆದರೆ ಅವರು ಘೋಷಿಸಿರುವ ಉಚಿತ ಯೋಜನೆಗಳಿಗೆ ವರ್ಷಕ್ಕೆ ಆರುರಿಂದ ಏಳು ಲಕ್ಷ ಕೋಟಿ ರೂಪಾಯಿ ಬೇಕಾಗಬಹುದು. ಆ ಮಟ್ಟದ ಹಣವನ್ನು ಅವರು ಹೇಗೆ ಹೊಂದಿಸುತ್ತಾರೆ ಎಂಬುದನ್ನು ನೋಡಬೇಕು,” ಎಂದು ಹೇಳಿದರು. ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ ಅವರು, “ಈ ಫಲಿತಾಂಶಗಳನ್ನು ಹಲವರು ನಿರೀಕ್ಷಿಸಿದ್ದರು. ಕೇರಳದ ಫಲಿತಾಂಶದ ಬಗ್ಗೆ ಮಾಧ್ಯಮಗಳಲ್ಲಿ ಮೊದಲೇ ಚರ್ಚೆಗಳು ನಡೆಯುತ್ತಿದವು. ಪಶ್ಚಿಮ ಬಂಗಾಳದಲ್ಲೂ ಇದೇ ರೀತಿ ಬಿಜೆಪಿ ಬರುತ್ತದೆ ಎಂದು ಹಲವು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದರು.…
ಮುಂದೆ ಓದಿ..
