ಅಂಕಣ 

ಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್……

Taluknewsmedia.com

Taluknewsmedia.comಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್…… ಬಹುಶಃ ಕೆಲವು ಜನರಿಗೆ ನೆಮ್ಮದಿಯೇ ಬೇಕಿಲ್ಲವೆನಿಸುತ್ತದೆ. ಜೊತೆಗೆ ಇತರರೂ ನೆಮ್ಮದಿಯಾಗಿರಬಾರದು ಎಂಬ ಮನೋಭಾವ. ಅತೃಪ್ತ ಆತ್ಮಗಳೇ ಅವರೊಳಗೆ ತುಂಬಿ ತುಳುಕುತ್ತಿರಬೇಕು ಎಂದೆನಿಸುತ್ತಿದೆ…… ಉಕ್ರೇನಿಯನ್ ಜನರು ಅನುಭವಿಸುತ್ತಿರುವ ನರಕಯಾತನೆಯಾಗಲಿ, ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಜನರಾಗಲಿ, ಆಫ್ರಿಕಾದ ಆಂತರಿಕ ಸಂಘರ್ಷದಿಂದ ಬಳಲುತ್ತಿರುವ ದೇಶಗಳಾಗಲಿ, ದಕ್ಷಿಣ ಅಮೆರಿಕ, ದಕ್ಷಿಣ ಏಷ್ಯಾದ ಕೆಲವು ದೇಶಗಳ ಹಿಂಸಾತ್ಮಕ ಘಟನೆಗಳಾಗಲಿ ಇನ್ನೂ ಜನರಿಗೆ ಬುದ್ಧಿ ಕಲಿಸಿದಂತೆ ಕಾಣುತ್ತಿಲ್ಲ.ಕೊರೋನ ಎಂಬ ವೈರಸ್ ಇಡೀ ಜಗತ್ತನ್ನು ಅಲುಗಾಡಿಸಿತು. ಆ ಸಮಯದಲ್ಲಿ ಬಹಳಷ್ಟು ಜನರಿಗೆ ಸನ್ಯಾಸ ವೈರಾಗ್ಯ ಉಂಟಾಯಿತು. ಜೀವನ ನಶ್ವರ, ಯಾವಾಗ ಬೇಕಾದರೂ, ಯಾವ ರೂಪದಲ್ಲಾದರೂ ಸಾವು ಬರಬಹುದು. ಆದ್ದರಿಂದ ಒಂದಷ್ಟು ತಾಳ್ಮೆಯಿಂದ, ಪ್ರೀತಿಯಿಂದ ದುರಾಸೆಗಳಿಲ್ಲದೆ ಬದುಕಬೇಕು ಎಂದು ಅಂದುಕೊಂಡರು. ಆದರೆ ಸಮಕಾಲಿನ ಜಗತ್ತು ಕೋವಿಡ್ ನಂತರ ಹೆಚ್ಚು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಸಾವೋ, ಬದುಕೋ ಒಟ್ಟಿನಲ್ಲಿ ಸಮಾಜಗಳು,…

ಮುಂದೆ ಓದಿ..
ಅಂಕಣ 

ಅಡುಗೆ…….

Taluknewsmedia.com

Taluknewsmedia.comಅಡುಗೆ……. ರುಚಿ – ತೃಪ್ತಿ – ಸಮಾನತೆ….. ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ…. ಮನುಷ್ಯ ಬದುಕಿನ ಜೀವದ್ರವ್ಯಗಳಲ್ಲಿ ಗಾಳಿ ಮತ್ತು ನೀರಿನ ನಂತರ ಆಹಾರವೇ ಅತ್ಯಂತ ಪ್ರಮುಖವಾದದ್ದು. ಹಿಂದೆ ಅನಾಗರಿಕ ಮಾನವ ಗೆಡ್ಡೆ, ಗೆಣಸು, ಹಣ್ಣು, ಹಂಪಲು, ಪ್ರಾಣಿ, ಪಕ್ಷಿ, ಕೀಟಗಳನ್ನು ತಿಂದು ಬದುಕುತ್ತಿದ್ದ. ದಿನಗಳೆದಂತೆ ಮನುಷ್ಯನ ಅನಿವಾರ್ಯತೆಗಳು, ಅಗತ್ಯಗಳು, ಆಸೆಗಳು, ದುರಾಸೆಗಳುಜೊತೆಗೆ ಆತನ ನಾಲಿಗೆ ರುಚಿಬಯಸತೊಡಗಿತು ಮತ್ತು ಅದಕ್ಕೆ ತಕ್ಕಂತೆ ಅವಕಾಶಗಳು ಒದಗಿ ಬಂದವು. ನಿರ್ದಿಷ್ಟವಾಗಿ ಹಣ್ಣು, ತರಕಾರಿ, ಪ್ರಾಣಿ, ಪಕ್ಷಿಗಳನ್ನು ಅನುಭವದ ಆಧಾರದ ಮೇಲೆಯೇ ಗುರುತಿಸಿ ಆಹಾರವನ್ನಾಗಿ ಉಪಯೋಗಿಸ ತೊಡಗಿದ. ಕೊನೆಗೆ ಈ 2025 ರಲ್ಲಿ ನಿಂತು ಹಿಂತಿರುಗಿ ನೋಡಿದಾಗ ಆಹಾರಗಳ ವೈವಿಧ್ಯತೆ ಕಲ್ಪನೆಗೂ ಮೀರಿ ಬೆಳೆದಿದೆ. ದಕ್ಷಿಣದಿಂದ ಉತ್ತರದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಇಡೀ ದೇಶದ ಆಹಾರ ವಿಭಿನ್ನತೆ ಚಕಿತಗೊಳಿಸುತ್ತದೆ. ನಮ್ಮ ದೇಶದಲ್ಲಿ ಹಳ್ಳಿ, ಪಟ್ಟಣ, ನಗರ,ಮೆಟ್ರೋಪಾಲಿಟಿನ್ ಸಿಟಿ ಸೇರಿ…

ಮುಂದೆ ಓದಿ..
ಅಂಕಣ 

ಸಹಾಯ ಮತ್ತು ಆತ್ಮಸಾಕ್ಷಿ……

Taluknewsmedia.com

Taluknewsmedia.comಸಹಾಯ ಮತ್ತು ಆತ್ಮಸಾಕ್ಷಿ…… ಸಹಾಯ – ಸೇವೆ – ನೆರವು – ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ……… ಮತ್ತು ಇದರಲ್ಲಿನ ವೈವಿಧ್ಯತೆ…………… ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ…. ಸಹಾಯ ಮಾಡಿಯೂ ಅದನ್ನು ಹೇಳಿಕೊಳ್ಳದೆ ತಮ್ಮ ಪಾಡಿಗೆ ತಾವಿರುವವರು ಇರುತ್ತಾರೆ… ಬೇರೆಯವರಿಗೆ ಸಹಾಯ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಸಹಾಯ ಮಾಡುವವರು ಇದ್ದಾರೆ…. ಈಗ ಸಹಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟದ ಸಮಯದಲ್ಲಿ ಬೇರೆಯವರು ನಮಗೆ ಸಹಾಯ ಮಾಡಬಹುದು ಎಂಬ ಮುಂದಾಲೋಚನೆಯಿಂದ ಸಹಾಯ ಮಾಡುವವರು ಇರುವರು……. ಪಾಪ, ಪುಣ್ಯ – ಸ್ವರ್ಗ, ನರಕದ ನಂಬಿಕೆಯಿಂದ ಸಹಾಯ ಮಾಡುವವರು ಕೆಲವರು….. ತಮ್ಮ ವಂಶದ ಅಥವಾ ಮನೆತನದ ಹೆಸರಿನ ಪ್ರತಿಷ್ಠೆಗಾಗಿ ಸಹಾಯ ಮಾಡುವವರು ಹಲವರು….. ಸಮಾಜದಲ್ಲಿ ದಾನಿಗಳು ಎಂಬ ಹೆಸರು ಪಡೆಯಲು ಸಹಾಯ ಮಾಡುವವರು ಇದ್ದಾರೆ….. ಪ್ರಚಾರ,ಪ್ರಶಸ್ತಿ ಮತ್ತು ಜನಪ್ರಿಯತೆಯ…

ಮುಂದೆ ಓದಿ..
ಅಂಕಣ 

ಆರೆಸ್ಸೆಸ್ ( RSS ) 100…..

Taluknewsmedia.com

Taluknewsmedia.comಆರೆಸ್ಸೆಸ್ ( RSS ) 100….. ಈ ಶತಮಾನೋತ್ಸವದ ಸಂದರ್ಭದಲ್ಲಿ……… ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂದು ಹೆಸರಾಗಿರುವ, ಭಾರತದಲ್ಲಿ ವ್ಯಾಪಕವಾಗಿ ತನ್ನ ಸೈದ್ಧಾಂತಿಕ ನಿಲುವುಗಳು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುವ ಆರೆಸ್ಸೆಸ್ ಸಂಘಟನೆ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಒಂದು ಅನಿಸಿಕೆ………. ಎಲ್ಲಾ ವಿಷಯಗಳಿಗೂ ಇರುವಂತೆ ಈ ವಿಷಯಕ್ಕೂ ಸಹಜವಾಗಿಯೇ ಎರಡು ಮುಖಗಳಿರುತ್ತದೆ. ಆರ್ ಎಸ್ ಎಸ್ ಅನ್ನು ಬೆಂಬಲಿಸುವವರು ಅದಕ್ಕೆ ಪೂರಕ ಅಂಶಗಳನ್ನು ಹೇಳಿದರೆ, ಅದನ್ನು ವಿರೋಧಿಸುವವರು ಅದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸುತ್ತಾರೆ. ಆ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಒಂದು ಸರಳ ವಿವರಣೆ……. ರಾಷ್ಟ್ರೀಯ ಸ್ವಯಂ ಸೇವಕ ಸಂಘ ( RSS ) ಇಂದಿನ ಭಾರತದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಅತಿಹೆಚ್ಚು ಪರ ವಿರೋಧಗಳ ಚರ್ಚೆಗೆ ಒಳಪಡುತ್ತಿರುವ ಮತ್ತು ವಿಶ್ವದ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ.…

ಮುಂದೆ ಓದಿ..
ಅಂಕಣ 

ಸಾಮಾನ್ಯ ಗಾಂಧಿ…….

Taluknewsmedia.com

Taluknewsmedia.comಸಾಮಾನ್ಯ ಗಾಂಧಿ……. ನಾಳೆ ಅಕ್ಟೋಬರ್ 2,ಮೋಹನದಾಸ್ ಕರಮಚಂದ್ ಗಾಂಧಿ ಅವರ 156ನೇ ಹುಟ್ಟುಹಬ್ಬ. ಈಗ ಬಹುಶಃ ಅವರನ್ನು ಮಹಾತ್ಮ ಪಟ್ಟದಿಂದ ಇಳಿಸುವ ಸಂದರ್ಭ ಬಂದಿದೆ ಅಥವಾ ಈಗಾಗಲೇ ಇಳಿಸಿಯಾಗಿದೆ ಅಥವಾ ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅನರ್ಹರಾಗಿದ್ದಾರೆ ಅಥವಾ ಅವರನ್ನು ಮಹಾತ್ಮ ಎಂದು ಕರೆಯುವ ಅರ್ಹತೆಯನ್ನು ಜನಸಾಮಾನ್ಯರು ಕಳೆದುಕೊಂಡಿದ್ದಾರೆ. ಸತ್ಯ – ಅಹಿಂಸೆ – ಸರಳತೆ – ಪ್ರಾಮಾಣಿಕತೆ – ಪಾರದರ್ಶಕತೆ ಯಾರಿಗೆ ಬೇಕಾಗಿದೆ. ಎಲ್ಲವೂ ಎಲ್ಲರೂ ಹಣ – ಅಧಿಕಾರ – ಪ್ರಶಸ್ತಿ – ಜನಪ್ರಿಯತೆ – ಸುಖಲೋಲುಪತೆಯ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಮೌಲ್ಯಗಳು, ಪ್ರಾಕೃತಿಕ ಮೌಲ್ಯಗಳು, ಮಾನವೀಯ ಮೌಲ್ಯಗಳು, ನೈತಿಕ ಮೌಲ್ಯಗಳು ಕುಸಿದಿರುವುದು ಮಾತ್ರವಲ್ಲ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆದಿರುವ ಸಂದರ್ಭದಲ್ಲಿ ಈ ದೇಶದ ಸದ್ಯದ ಮಹಾತ್ಮರ ಪಟ್ಟಿ ಬದಲಾಗಿದೆ. ಆ ಸ್ಥಾನದಲ್ಲಿ ಬೇರೆಯವರು ಕುಳಿತಿದ್ದಾರೆ. ಮಹಾತ್ಮ ನರೇಂದ್ರ ಮೋದಿ,ಮಹಾತ್ಮ ರಾಹುಲ್ ಗಾಂಧಿ,ಮಹಾತ್ಮ ಸಿದ್ದರಾಮಯ್ಯ,ಮಹಾತ್ಮ…

ಮುಂದೆ ಓದಿ..
ಅಂಕಣ 

ಅಂತರರಾಷ್ಟ್ರೀಯ ಕಾಫಿ ದಿನ ಅಕ್ಟೋಬರ್ 1…

Taluknewsmedia.com

Taluknewsmedia.comಕಾಫಿ…….. ಅಂತರರಾಷ್ಟ್ರೀಯ ಕಾಫಿ ದಿನಅಕ್ಟೋಬರ್ 1… ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು…… ಕಾಫಿ ಇಲ್ಲದೆ ಹಾಸಿಗೆಯಿಂದ ಏಳದ ಎಷ್ಟೋ ಜನರಿದ್ದಾರೆ.” ಕಾಫಿ ” ಎಂಬ ವಿಷಯವನ್ನು ಇಟ್ಟುಕೊಂಡು ಬರೆದ ಎಷ್ಟೋ ಲಲಿತ ಪ್ರಬಂಧಗಳು ನಗುವಿನ ಅಲೆಯನ್ನೇ ಉಕ್ಕಿಸುತ್ತದೆ. ಆತಿಥ್ಯದ ಆಪ್ತಮಿತ್ರ ಕಾಫಿ. ಬಾಂಧವ್ಯದ ಬೆಸುಗೆ ಕಾಫಿ, ಸ್ನೇಹ, ಪ್ರೀತಿ ಪ್ರೇಮದ ಕೊಂಡಿ ಕಾಫಿ, ವ್ಯವಹಾರದ ಸೇತುವೆ ಕಾಫಿ, ಮನೋಲ್ಲಾಸದ ಔಷಧಿ ಕಾಫಿ, ಬೇಸರ ಕಳೆಯುವ ಸಾಧನ ಕಾಫಿ, ಕಾಲ ಹರಟೆಯ ಖುಷಿ ಕಾಫಿ…. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜೊತೆಗಾರ ಕಾಫಿ…. ಯಾರಾದರೂ ಪ್ರಬಂಧ ಬರೆಯುವ ಕಲೆಯನ್ನು ಮೈಗೂಡಿಸಿಕೊಳ್ಳುವ ಆಸಕ್ತಿ ಇದ್ದರೆ ಕಾಫಿ ಎಂಬುದು ಹೇಗೆ ನಮ್ಮೆಲ್ಲರ ಬದುಕಿನ ಭಾಗ ಎಂಬ…

ಮುಂದೆ ಓದಿ..
ಅಂಕಣ 

ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್……

Taluknewsmedia.com

Taluknewsmedia.comಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್…… ಕಾಲ್ತುಳಿತ ಎಂಬ ಸಾಮಾಜಿಕ – ಸಾಂಕ್ರಾಮಿಕ ರೋಗ ಮತ್ತು ಈ ವರ್ಷದ ದಸರಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ…….. ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮಾಜಿಕ ಸಾಂಕ್ರಾಮಿಕ ರೋಗ ಪ್ರಾಕೃತಿಕ ವಿಕೋಪದಂತೆ ದಿಢೀರನೆತೊಂದರೆ ಕೊಡುತ್ತಿದೆ. ಅದುವೇ ಕಾಲ್ತುಳಿತಗಳು ಎಂಬ ಭಯಂಕರ ದುರ್ಘಟನೆಗಳು….. ಈ ಕಾಲ್ತುಳಿತ ಪ್ರಕರಣಗಳು ಭಾರತಕ್ಕೆ ಹೊಸದೇನು ಅಲ್ಲ. ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತುಂಬಾ ಹೆಚ್ಚು ಹೆಚ್ಚು ಈ ರೀತಿಯ ಘಟನೆಗಳು ನಡೆಯುತ್ತಿವೆ. ಆಗೆಲ್ಲಾ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಟಿಕೆಟ್ ಪಡೆಯುವ ಕ್ಯೂನಲ್ಲಿ ಕಾಲ್ತುಳಿತಗಳಾಗುತ್ತಿದ್ದವು. ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಹಂಚುವ ಸೀರೆ, ಪಂಚೆ, ಹಣ ಮುಂತಾದ ಸಮಯದಲ್ಲಿ, ಇನ್ನು ಕೆಲವು ಸಲ ಆಹಾರ ಪದಾರ್ಥಗಳ ಹಂಚಿಕೆಯ ಸಂದರ್ಭದಲ್ಲಿ ಅದನ್ನು ಪಡೆಯಲು ಕಾಲ್ತುಳಿತ ಉಂಟಾಗುತ್ತಿತ್ತು. ಪ್ರಖ್ಯಾತ ದೇವಸ್ಥಾನದ ಪ್ರವೇಶಕ್ಕಾಗಿ ಅಥವಾ ವಿಶೇಷ ಸಂದರ್ಭದಲ್ಲಿಯೂ ಕಾಲ್ತುಳಿತಗಳು ಉಂಟಾಗುತ್ತಿದೆ. ತಿರುಪತಿ, ಶಬರಿಮಲೆ,…

ಮುಂದೆ ಓದಿ..
ಅಂಕಣ 

ಜಗತ್ತಿನ ಚಾಲನಾ ಇಂಧನವೇ ಪ್ರೀತಿ, ಪ್ರೇಮ, ಪ್ರಣಯ……….

Taluknewsmedia.com

Taluknewsmedia.comಜಗತ್ತಿನ ಚಾಲನಾ ಇಂಧನವೇ ಪ್ರೀತಿ, ಪ್ರೇಮ, ಪ್ರಣಯ………. ಅಕ್ಷರವೆಂಬುದು ಸಂಶೋಧನೆಯಾಗಿ, ಅದು ಕಲಿತ ಮೇಲೆ ಭಾವನೆಗಳು ಧ್ವನಿ ತರಂಗಗಳ ಜೊತೆಗೆ ಪದಗಳಲ್ಲಿಯೂ ಮೂಡುತ್ತದೆ. ಅಂತಹ ಒಂದು ಭಾವ ಲಹರಿ, ಹಾಗೇ ಸುಮ್ಮನೆ……. ಅಕ್ಷರಗಳನ್ನು ಯೋಚಿಸಿ ಯೋಚಿಸಿ ಬರೆದೆ,….. ಪದಗಳನ್ನು ಕೂಡಿಸಿ ಕೂಡಿಸಿ ಬರೆದೆ,….. ವಾಕ್ಯಗಳನ್ನು ಜೋಡಿಸಿ ಜೋಡಿಸಿ ಬರೆದೆ,…… ಭಾವನೆಗಳನ್ನು ಸೇರಿಸಿ ಸೇರಿಸಿ ಬರೆದೆ,….. ಕಲ್ಪನೆಗಳನ್ನು ಸೃಷ್ಟಿಸಿ ಸೃಷ್ಟಿಸಿ ಬರೆದೆ,…… ಅನುಭವಗಳನ್ನು ಗ್ರಹಿಸಿ ಗ್ರಹಿಸಿ ಬರೆದೆ,…… ಆಗ ಮೂಡಿತೊಂದು ಸುಂದರ ಕವಿತೆ,….. ಪ್ರೀತಿ, ಪ್ರೇಮ, ಪ್ರಣಯಗಳು ಅದ್ಭುತ ರಮ್ಯತೆ,……. ಹೆಣ್ಣು ಗಂಡುಗಳ ಸೃಷ್ಟಿಯ ಮೋಹಕತೆ,…. ವರ್ಣಿಸಲಾಗದ ಅತ್ಯದ್ಭುತ ರೋಚಕತೆ,…… ಆದರೆ,ಜೀವ,ರಕ್ತ ಮೂಳೆ ಮಾಂಸದ ತಡಿಕೆ,……. ದೇಹ,ಅದರ ಮೇಲಿನ ಚರ್ಮದ ಹೊದಿಕೆ,….. ಬದುಕು,ಇದೆಲ್ಲದರ ಮಡಿಕೆ,….. ಇದೇ ವಾಸ್ತವತೆ…… ಕಾಡ ಅಂಚಿನ ಮನೆ……. ಆಗ ತಾನೆ ಭೋರ್ಗರೆವ ಮಳೆ ಬಂದು ನಿಂತು ಈಗ ತುಂತುರು ಹನಿಗಳು ಚಿಮುಕಿಸುತ್ತಿದೆ…….. ಮನೆಯ ಮುಂದೆ…

ಮುಂದೆ ಓದಿ..
ಅಂಕಣ 

ಜನಗಣತಿ ಪ್ರಹಸನ. ಓದಿ ನಗು ಬಂದರೆ ಸುಮ್ಮನೆ ಒಮ್ಮೆ ನಕ್ಕು ಮರೆತುಬಿಡಿ…..

Taluknewsmedia.com

Taluknewsmedia.comಒಂದು ಪ್ರಹಸನ……. ಜನಗಣತಿ ಪ್ರಹಸನ. ಓದಿ ನಗು ಬಂದರೆ ಸುಮ್ಮನೆ ಒಮ್ಮೆ ನಕ್ಕು ಮರೆತುಬಿಡಿ….. ಪಟ್ಟಿ ರೂಪದಲ್ಲಿ ಪ್ರಶ್ನೆಗಳು ಈ ಕೆಳಗಿನಂತಿವೆ…….. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,ಮನಸ್ಸುಗಳ ಅಂತರಂಗದ ಚಳವಳಿ,ವಿವೇಕಾನಂದ. ಎಚ್. ಕೆ.9663750451……9844013068……

ಮುಂದೆ ಓದಿ..
ಅಂಕಣ 

ಕುವೆಂಪು ಮತ್ತು ಬೈರಪ್ಪ…….

Taluknewsmedia.com

Taluknewsmedia.comಕುವೆಂಪು ಮತ್ತು ಬೈರಪ್ಪ……. ಶ್ರೀ ಕುವೆಂಪು ಮತ್ತು ಶ್ರೀ ಬೈರಪ್ಪ ಎಂಬ ಸೈದ್ಧಾಂತಿಕ ಸಾಹಿತ್ಯದ ಭಿನ್ನತೆಗಳು, ಎರಡು ವಿರುದ್ಧ ಧ್ರುವಗಳು ಮತ್ತು ಬದಲಾದ ಕಾಲಘಟ್ಟದಲ್ಲಿ ಅವರ ಸಾಹಿತ್ಯಿಕ ಭಾಷೆ ಮತ್ತು ಅವರವರ ಅಭಿಮಾನಿಗಳ ಮನಸ್ಥಿತಿಗಳು…….. ಕನ್ನಡ ಸಾಹಿತ್ಯದ ಮೇರು ಪರ್ವತದಂತೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು, ಹಾಗೆಯೇ ಸಾಹಿತ್ಯ ಕ್ಷೇತ್ರದ ಮತ್ತೊಬ್ಬ ದಿಗ್ಗಜರಾದ ಎಸ್ ಎಲ್ ಭೈರಪ್ಪ ಅವರ ಪ್ರಾರಂಭಿಕ ಸಾಹಿತ್ಯ ರಚನೆಗಳು ಮತ್ತು ನಂತರದಲ್ಲಿ ಅವರಿಗೆ ಬಂದ ಪರ ವಿರೋಧದ ಕಾರಣದಿಂದಾಗಿ ಬದಲಾದ ನಿಲುವುಗಳ ಬಗ್ಗೆ ಮತ್ತೊಂದಿಷ್ಟು ಅನಿಸಿಕೆಗಳು…….. ಕುವೆಂಪು ಅವರ ಕಾಲಮಾನ 1904/1994, ಭೈರಪ್ಪನವರ ಕಾಲಮಾನ 1931/2025. ಇಬ್ಬರೂ ದೀರ್ಘಾಯುಷಿಗಳು. ಅಂದರೆ ಹತ್ತಿರ ಹತ್ತಿರ ಸುಮಾರು ಒಂದು ಶತಮಾನಗಳ ಕಾಲ ಈ ಸಮಾಜದಲ್ಲಿ ಬದುಕಿದ್ದವರು. ಪ್ರಾದೇಶಿಕವಾಗಿ ಅವರ ಭಾಷೆ ಕನ್ನಡ ಮತ್ತು ಭೌಗೋಳಿಕವಾಗಿ ಮೂಲ ಬೇರೆ ಊರಾದರೂ ಮೈಸೂರಿನ ನಿವಾಸಿಗಳು. ಅಲ್ಲೇ ಹೆಚ್ಚು…

ಮುಂದೆ ಓದಿ..