ಸುದ್ದಿ 

ಮಾಲ್ ಆಫ್ ಏಷಿಯಾದ ಬಳಿ ದ್ವಿಚಕ್ರ ವಾಹನ ಕಳವು ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025:ಮಾಲ್ ಆಫ್ ಏಷಿಯಾ ಬಳಿ ವಾಹನ ಕಳವು ಪ್ರಕರಣವೊಂದು ವರದಿಯಾಗಿದೆ. ಮಲ್ಲೇಶ್ವರಂ ನಿವಾಸಿಯಾಗಿರುವ ದೂರುದಾರರು ತಮ್ಮ ಕೆಲಸಕ್ಕೆಂದು 24 ಜುಲೈ 2025 ರಂದು ಸಂಜೆ 4 ಗಂಟೆಗೆ ಮಾಲ್ ಆಫ್ ಏಷಿಯಾದ ಹೋಮ್ ಸೆಂಟರ್ ಕಂಪನಿಗೆ ಕಾರ್ಪೆಂಟರ್ ಕೆಲಸಕ್ಕಾಗಿ ತೆರಳಿದ್ದರು. ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಹೊರಬಂದಾಗ, ಅವರು ಪಾರ್ಕ್ ಮಾಡಿಕೊಂಡಿದ್ದ ಸ್ಥಳದಲ್ಲಿ ತಮ್ಮ ಹೆರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಕಾಣೆಯಾಗಿರುವುದನ್ನು ಗಮನಿಸಿದರು. ಕಳವಾದ ವಾಹನದ ವಿವರಗಳು ಹೀಗಿವೆ: ನಮೂದಿನ ಸಂಖ್ಯೆ: KA-03-JN-4161 ಚಸ್ಸಿಸ್ ಸಂಖ್ಯೆ: MBLHAR079HHH50529 ಎಂಜಿನ್ ಸಂಖ್ಯೆ: HA10AGHHH51753 ಬಣ್ಣ: ಕಪ್ಪು (VBK) ಮಾದರಿ: 2017 ವಿಮೆ: ಐಸಿಐಸಿಐ ಲೋಂಬಾರ್ಡ್ ಇನ್ಸೂರೆನ್ಸ್, ಪಾಲಿಸಿ ನಂ. 3005/2012698413/80/0000011768 ಮೌಲ್ಯ: ರೂ. 60,000 ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ…

ಮುಂದೆ ಓದಿ..
ಸುದ್ದಿ 

ಗಾಂಜಾ ಸೇವನೆ ಶಂಕೆ: ಯಲಹಂಕದಲ್ಲಿ ಮೂವರು ಯುವಕರು ಪೊಲೀಸರ ವಶಕ್ಕೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 29, 2025:ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತು ನಿಯಮಿತವಾಗಿ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಮೂವರು ಯುವಕರು ಸಿಕ್ಕಿಬಿದ್ದರು. ಪ್ರಕೃತಿ ಲೇಔಟ್ ಬಳಿ ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ರೀತಿಯಲ್ಲಿ ವರ್ತಿಸುತ್ತಿದ್ದ ಈ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಮೋಹನ್ ಕುಮಾರ್ ನಾಯ್ಕ್ ಅವರ ನಿರ್ದೇಶನದಂತೆ ಪೊಲೀಸರು ಗಸ್ತು ಕರ್ತವ್ಯದಲ್ಲಿದ್ದು, ಮಾದಕ ವಸ್ತುಗಳ ಸೇವನೆ ಕುರಿತು ಕಡ್ಡಾಯ ನಿಗಾವನ್ನು ವಹಿಸಲು ಸೂಚನೆ ನೀಡಲಾಗಿತ್ತು. ಮದ್ಯಾಹ್ನ 3:15ರ ಸುಮಾರಿಗೆ ಪ್ರಕೃತಿ ಲೇಔಟ್ ಬಳಿ ಗಸ್ತು ಮಾಡುತ್ತಿದ್ದ ವೇಳೆ, ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೊಂದರೆ ನೀಡುತ್ತಿದ್ದ ಮೂವರು ಯುವಕರ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆ ನಡೆಸಲಾಯಿತು. ಆಸಾಮಿಗಳು ಆರಂಭದಲ್ಲಿ ಸಹಕರಿಸದಿದ್ದರೂ, ಅವರಿಂದ ಖಚಿತ ಮಾದಕ ಸೇವನೆ ಪತ್ತೆಯಾಗಿಲ್ಲ. ಆದರೆ, ಅವರ ನಡೆ ಹಾಗೂ ಮಾತುಗಳಲ್ಲಿ ಗಾಂಜಾ…

ಮುಂದೆ ಓದಿ..
ಸುದ್ದಿ 

ನೆಂಚರೊಲು ಗ್ರಾಮದಲ್ಲಿ ಗೃಹಿಣಿ ಕಾಣೆಯಾದ ಘಟನೆ: ತನಿಖೆ ಆರಂಭಿಸಿದ ಪೊಲೀಸರು

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ ಜುಲೈ 29 –2025ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡ ತಾಲೂಕಿನ ನೆಂಚರೊಲು ಗ್ರಾಮದಲ್ಲಿ ಇತ್ತೀಚೆಗೆ ಗೃಹಿಣಿ ಮೌನಿಶಾ (ವಯಸ್ಸು ಸುಮಾರು 28) ಕಾಣೆಯಾಗಿರುವ ಘಟನೆ ನಡೆದಿದೆ. ಪತಿ ನೀಡಿದ ದೂರಿನ ಪ್ರಕಾರ, ಮೌನಿಶಾ ಅವರು ಜುಲೈ 13 ರಂದು ಸಂಜೆ 5 ಗಂಟೆಗೆ ಮನೆ ಬಿಟ್ಟು ಹೊರಡಿದ್ದು, ಜುಲೈ 16 ರಂದು ಬೆಳಿಗ್ಗೆ 10 ಗಂಟೆಯವರೆಗೆ ಯಾವ ಸುಳಿವು ಸಿಕ್ಕಿಲ್ಲ. ಮೌನಿಶಾ ಅವರು ಪೋತಲಪ್ಪ ಎಂಬುವರ ಪುತ್ರನ ಜೊತೆ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಗಂಡುಮಕ್ಕಳೂ, ಒಂದು ವರ್ಷದ ಹೆಣ್ಣುಮಕ್ಕಳೂ ಇದ್ದಾರೆ. ಪತ್ನಿಯು ಅನಿರೀಕ್ಷಿತವಾಗಿ ಮನೆ ಬಿಟ್ಟು ಹೋಗಿದ್ದು, ಸಂಬಂಧಿಕರು ಮತ್ತು ಪರಿಚಿತರ ಮನೆಗಳಲ್ಲಿ ಹುಡುಕಿದರೂ ಯಾರಿಗೂ ಸುಳಿವು ಸಿಕ್ಕಿಲ್ಲ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪತಿ ರಾಜನಕುಂಟೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಮರಣದ ಬಳಿಕ ಗಂಡನ ಆಸ್ತಿಗೆ ನಕಲಿ ದಾಖಲೆ – ಕುಟುಂಬದ ಮಹಿಳೆ ಪೊಲೀಸ್ ದೂರು ನೀಡಿದ ಪ್ರಕರಣ

Taluknewsmedia.com

Taluknewsmedia.comದೇವನಹಳ್ಳಿ, ಜುಲೈ 29– 2025ಕೋವಿಡ್-19 ರ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆಯೊಬ್ಬರು, ತನ್ನ ಗಂಡನ ಹೆಸರಿನ ಆಸ್ತಿಯನ್ನು ವಂಚನೆಯ ಮೂಲಕ ವಶಪಡಿಸಿಕೊಳ್ಳುವ ಯತ್ನ ನಡೆದಿದೆ ಎಂದು ದೂರು ನೀಡಿರುವ ಘಟನೆ ದೇವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಲಕ್ಷ್ಮಿದೇವಿ ಎಂಬವರು ನೀಡಿದ ದೂರಿನ ಪ್ರಕಾರ, ಅವರ ಗಂಡ ಕೆ.ಎಂ. ಚನ್ನಕೇಶವಯ್ಯ ಅವರು 03/05/2021 ರಂದು ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಅವರು ತನ್ನ ಮಕ್ಕಳಾದ ಮುಕ್ತಾ ಹಾಗೂ ತೇಜಸ್ ಜೊತೆ ವಾಸವಾಗಿದ್ದರು. ಗಂಡನ ಸಾವಿನ ನಂತರ, ಅವರು ಹೊಂದಿದ್ದ ಜಮೀನಿನ ಸ್ವಾಮ್ಯ ಹಕ್ಕು ಪಡೆಯಲು ನಿರ್ವಹಣಾ ಕಾನೂನು ಪ್ರಕ್ರಿಯೆ ಆರಂಭಿಸಿದ್ದರು. ಇದಿನಲ್ಲೇ, ಕೆ.ವಿ. ಗಿರೀಶ್ ಎಂಬ ಅವರ ಗಂಡನ ಅಣ್ಣನ ಮಗನು, 2016ರಲ್ಲಿ ರೂ.200 ಮೌಲ್ಯದ ಹಳೆಯ ಸ್ಟ್ಯಾಂಪ್ ಪೇಪರ್ ಮೇಲೆ ನಕಲಿ ಸಹಿ ಮಾಡಿ ಮರಣಶಾಸನ ಸೃಷ್ಟಿಸಿದ ಆರೋಪ ಕೇಳಿಬಂದಿದೆ. ಈ ಡಾಕ್ಯುಮೆಂಟ್‌ನಲ್ಲಿ ನೋಟರಿಯ ಮುದ್ರೆ ಇದ್ದರೂ ಸಹ ದಿನಾಂಕ,…

ಮುಂದೆ ಓದಿ..
ಸುದ್ದಿ 

ದಾಸರಹಳ್ಳಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ದೀಪಕ್ ಬಂಧನ

Taluknewsmedia.com

Taluknewsmedia.comಬೆಂಗಳೂರು, ಜುಲೈ 29:2025ದಾಸರಹಳ್ಳಿ ನಾರ್ಥ ಹೀಲ್ಡ್ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದೀಪಕ್ ಎಂದು ಗುರುತಿಸಲಾಗಿದೆ. ಅಮೃತಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಾ ಎಸ್ಐ ವಿದ್ಯಾಶ್ರೀ ಎಸ್.ಕೆ ಅವರು ನೀಡಿದ ದೂರಿನಂತೆ, 26 ಜುಲೈ 2025ರಂದು ಮುಂಜಾನೆ 3.15ರ ಸಮಯದಲ್ಲಿ ಒಂದು ಖಚಿತ ಮಾಹಿತಿಯ ಮೇರೆಗೆ ಅಮೃತಳ್ಳಿ ಪೊಲೀಸರು ದಾಸರಹಳ್ಳಿ ನಾರ್ಥ ಹೀಲ್ಡ್ ಖಾಲಿ ಜಾಗದ ಬಳಿ ದೀಪಕ್‌ನನ್ನು ವಶಕ್ಕೆ ಪಡೆದರು.ಅವನ ಬಳಿ ಇದ್ದ ಕಾಲೇಜ್ ಬ್ಯಾಗ್‌ನ್ನು ಪರಿಶೀಲಿಸಿದಾಗ, ಅದರೊಳಗೆ ನಿಷೇಧಿತ ಮಾದಕ ವಸ್ತು – ಗಾಂಜಾ ಪತ್ತೆಯಾಯಿತು. ದೀಪಕ್ ಈ ಗಾಂಜಾವನ್ನು ಸಾರ್ವಜನಿಕರು ಮತ್ತು ಯುವಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ವಿರುದ್ಧ ಮಾದಕವಸ್ತು ನಿಷೇಧಕ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಮೃತಳ್ಳಿ ಪೊಲೀಸರಿಂದ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಬಾಗ್ಮಾನ್ ಟೆಕ್ ಪಾರ್ಕ್ ಬಳಿ ಪಾರ್ಕ್ ಮಾಡಿದ ಬೈಕ್ ಕಳ್ಳತನ – 25 ಸಾವಿರ ಮೌಲ್ಯದ ವಾಹನ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು, ಜುಲೈ 29:2025ಅಮೃತಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನದ ಪ್ರಕರಣವೇಳೆ ಬೆಳಕಿಗೆ ಬಂದಿದೆ. ಸ್ನಾಪ್ಟ್‌ವೇರ್ ಇಂಜಿನಿಯರ್ ಆಗಿರುವ ಫಿರ್ಯಾದುದಾರರು, ಬಾಗ್ಮಾನ್ ಟೆಕ್ ಪಾರ್ಕ್ ಬಳಿ ತಮ್ಮ ಬಜೆಜ್ ಪಲ್ಸರ್ 150 (KA 03 HN 8272) ಬೈಕ್‌ನ್ನು 25 ಮೇ 2025 ರಂದು ಬೆಳಿಗ್ಗೆ 10 ಗಂಟೆಗೆ ಪಾರ್ಕ್ ಮಾಡಿದ್ದರು. ಪೂಜೆ ಮುಗಿಸಿ ಮಧ್ಯಾಹ್ನ 2 ಗಂಟೆಗೆ ವಾಪಸ್ ಬಂದು ನೋಡಿದಾಗ, ವಾಹನ ಸ್ಥಳದಲ್ಲಿರಲಿಲ್ಲ. ಹ್ಯಾಂಡ್ಲಾಕ್ ಮುರಿದು ಯಾರೋ ಕಳ್ಳರು ಬೈಕ್‌ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಫಿರ್ಯಾದಿಯಲ್ಲಿ ತಿಳಿಸಲಾಗಿದೆ. ವಾಹನ ವಿವರಗಳು: ಮಾದರಿ: Bajaj Pulser DTS 150 ನೋಂದಣಿ ಸಂಖ್ಯೆ: KA 03 HN 8272 ಮೌಲ್ಯ: ₹25,000 ಬಣ್ಣ: ಕಪ್ಪು ಮಾದರಿ ವರ್ಷ: 2012 ವಿಮೆ: ACKO – DBCR10270637384/00 ಬಿಎಚ್‌ಟಿ ನಂಬರ್, ಚಸ್ಸಿಸ್ ಹಾಗೂ ಎಂಜಿನ್ ವಿವರಗಳ ಸಹಿತ ಮಾಹಿತಿ…

ಮುಂದೆ ಓದಿ..
ಸುದ್ದಿ 

ಪತ್ನಿ ಮತ್ತು ಅತ್ತೆಗೆ ಚಾಕು ತೋರಿಸಿ ಹಲ್ಲೆ – ಗಂಡನ ವಿರುದ್ಧ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 29:ಕುಟುಂಬ ಕಲಹದ ಮಧ್ಯೆ ಪತ್ನಿ ಹಾಗೂ ಅತ್ತೆಗೆ ಹಲ್ಲೆ ಮಾಡಿ, ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ ಘಟನೆ ನೆಲಮಂಗಲ ಬಳಿಯ ಆರಿಶಿಣಕುಂಟೆ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಗಂಡನ ವಿರುದ್ಧ ಅಮೃತಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಮೂಲದ ಯುವತಿ 2017ರ ಫೆಬ್ರವರಿಯಲ್ಲಿ ಪ್ರದೀಪ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಾರಂಭದಲ್ಲಿ ಇಬ್ಬರೂ ಶಿವಮೊಗ್ಗದಲ್ಲಿದ್ದರೆ, ಬಳಿಕ ಕೆಲಸದ ನಿಮಿತ್ತ ಬೆಂಗಳೂರು ಹೊರವಲಯದ ನೆಲಮಂಗಲಕ್ಕೆ ಸ್ಥಳಾಂತರವಾಗಿದ್ದರು. ಇದುವರೆಗೆ ಸುಖವಾಗಿದ್ದ ದಾಂಪತ್ಯ ಜೀವನ, ಗಂಡನ ಮನೆಯವರ ಹಸ್ತಕ್ಷೇಪದಿಂದ ಸಮಸ್ಯೆ ಎದುರಿಸತೊಡಗಿತು. ಪತ್ನಿಯ ಹೇಳಿಕೆ ಪ್ರಕಾರ, ಗಂಡ ತೀವ್ರ ಕುಡಿತದ ಅಭ್ಯಾಸ ಹೊಂದಿದ್ದು, ನಿರಂತರ ಅನುಮಾನದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಒಂದು ಸಲ ಪೊಲೀಸ್ ದೂರು ದಾಖಲಾದ ಬಳಿಕ ಸಹ ಗಂಡ ತನ್ನ ವರ್ತನೆ ಬದಲಾಯಿಸದೆ, ಮತ್ತೊಮ್ಮೆ ಹಲ್ಲೆಗೆ ಮುಂದಾದ. ಜುಲೈ 24ರಂದು ಸಂಜೆ…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯೋಗಿಗೆ ಮಾರಣಾಂತಿಕ ಹಲ್ಲೆ: ಏಳು ಮಂದಿ ವಿರುದ್ಧ ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು, ಜುಲೈ 29:2025ನಗರದ ಹೊರವಲಯದಲ್ಲಿ ಬೆಳಗಿನ ವಾಕ್‌ಗೆ ತೆರಳಿದ್ದ ರಿಯಲ್ ಎಸ್ಟೇಟ್ ಉದ್ಯೋಗಿಯೊಬ್ಬರ ಮೇಲೆ ಕುಡಿದ ಅಮಲಿನಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯ ಬಳಿಕ ಗಾಯಾಳು ಮಾರುತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿಯ ಪ್ರಕಾರ, ಜುಲೈ 26ರಂದು ಬೆಳಗ್ಗೆ ಸುಮಾರು 7:45ರ ವೇಳೆಗೆ ದೂರುದಾರರು ಊಟ ಮುಗಿಸಿ ವಾಕಿಂಗ್‌ಗೆ ತೆರಳಿದ್ದಾಗ ಪಕ್ಕದ ಶೆಡ್‌ನಲ್ಲಿದ್ದ ಶಿವಕುಮಾರ್ ಮತ್ತು ರವಿಚಂದ್ರನ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಅವರ ಮೇಲೆ ಪ್ರಾಣ ಬೆದರಿಕೆಯ ಉದ್ದೇಶದಿಂದ ಹಲ್ಲೆ ನಡೆಸಲಾಗಿದೆ. ಘಟನೆಯ ಬಳಿಕ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾರುತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಮರುದಿನದಂದು (ಜುಲೈ 27) ಬೆಳಗ್ಗೆ ಸುಮಾರು 8:30ರ ಹೊತ್ತಿಗೆ ಕಿರಣ್, ಹರೀಶ, ಮನೋಜ್ ಸೇರಿದಂತೆ ಏಳು ಮಂದಿ ಆಸ್ಪತ್ರೆಗೆ ಬಂದು, ಚಿಕಿತ್ಸೆ ಪಡೆಯುತ್ತಿದ್ದ ದೂರುದಾರರ ಮೇಲೆ ಪುನಃ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ…

ಮುಂದೆ ಓದಿ..
ಸುದ್ದಿ 

ಪಾನಿಪುರಿ ಅಂಗಡಿಯ ಬಳಿ ಯುವಕನಿಗೆ ಮಾರಣಾಂತಿಕ ಹಲ್ಲೆ: ಜಮೀನಿನ ವೈಷಮ್ಯವೇ ಕಾರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 29:2025ನಗರದ ಬಾಗಲೂರು ಕಾಲೋನಿಯಲ್ಲಿ ಜಮೀನಿನ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ಮೂವರು ವಿರುದ್ಧ ಬಾಗಲೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಶಿವಕುಮಾರ್ ಅವರು ಮತ್ತು ಅವರ ಸ್ನೇಹಿತರು ಜುಲೈ 26 ರಂದು ಸಂಜೆ 7:45ರ ಸಮಯದಲ್ಲಿ ಬಾಗಲೂರು ಕಾಲೋನಿಯ ಪಾನಿಪುರಿ ಅಂಗಡಿಯಲ್ಲಿ ನಿಂತು ತಿಂಡಿಗೆ ತೊಡಗಿದ್ದಾಗ, ಮುನಿಕೃಷ್ಣ, ವೆಂಕಟೇಶ್ ಮತ್ತು ಮತ್ತೊಬ್ಬ ಆರೋಪಿಯು ಹಿಂಭಾಗದಿಂದ ಬಂದು ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿಂದ ತಲೆ ಮತ್ತು ಕೈಕಾಲಿಗೆ ಬಾರಿಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಸ್ಥಳೀಯ ಧನಂಜಯ ಎಂಬುವವರು ತಕ್ಷಣ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೆಚ್ಚಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗಳ ತೀವ್ರತೆ ಹೆಚ್ಚಿದ್ದರಿಂದ ಅವರು ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಮನೆಗೆ ಮರಳಿದ್ದಾರೆ. ಘಟನೆಯ ಮುಂದುವರಿದ ಭಾಗವಾಗಿ, ಇದೇ ದಿನದ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಿವಾಸಿ ಮೇಲೆ ಹಲ್ಲೆ: ಚಾಕು ಇರಿತ, ಮಹಿಳೆಯರಿಗೂ ದೌರ್ಜನ್ಯ

Taluknewsmedia.com

Taluknewsmedia.comಬೆಂಗಳೂರು, ಜುಲೈ 29:2025ನಗರದ ನಿವಾಸಿೊಬ್ಬರ ಮನೆ ಮುಂದೆ ಜಗಳವಾಡಿದ ಅರ್ಹತೆಯಿಲ್ಲದ ಯುವಕರ ಗುಂಪು, ಒಂದೇ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಹಲ್ಲೆಗೂ ಮುಂದಾಗಿದೆ. ದಿನಾಂಕ 27/07/2025 ರಂದು ಸಂಜೆ 5:15ರ ಸುಮಾರಿಗೆ, ಮನೆಯ ಮುಂದೆ ಕೃಷ್ಣಾ ಎಂಬಾತನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ಮನೆಯವರು ವಿರೋಧಿಸಿದಾಗ, ಕೃಷ್ಣಾ, ಆಕಾಶ್, ನವೀನ್, ವಿನಯ್ ಹಾಗೂ ಇತರರು ಸೇರಿ ಮನೆಯವರ ಮೇಲೆ ದಾಳಿ ನಡೆಸಿದರು. ಆಕಾಶ್ ಎಂಬಾತನು ಚಾಕು ತೆಗೆದು ವ್ಯಕ್ತಿಯ ಬಲ ಕೈಗೆ ಇರಿದಿದ್ದು, ಮಹಿಳೆಯರ ಮೇಲೂ ಹಲ್ಲೆ ನಡೆಸಲಾಗಿದೆ. ಇವರ ಪೈಕಿ ಲಕ್ಷ್ಮಿ ಎಂಬ ಮಹಿಳೆಯ ಮೇಲೆ ಅಪಮಾನಕಾರಿ ವರ್ತನೆ ಕೂಡ ನಡೆದಿದೆ. ಜಗಳ ತಪ್ಪಿಸಲು ಬಂದ ಕುಟುಂಬದ ಇತರರಿಗೂ ಹಲ್ಲೆ ಮಾಡಲಾಗಿದ್ದು, ಕೊನೆಗೆ “ನಿಮ್ಮೊಂದಿಗೆ ಮತ್ತೆ ತಕರಾರು ಮಾಡಿದರೆ ಸಾಯಿಸುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ಕರೆ ಮಾಡಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸಂಪಿಗೆಹಳ್ಳಿ…

ಮುಂದೆ ಓದಿ..