ಸುದ್ದಿ 

ಚಿಕ್ಕಬಳ್ಳಾಪುರದಲ್ಲಿ ದಾರುಣ ಅಪಘಾತ: ಕೆಎಸ್ಆರ್ಟಿಸಿ ಬಸ್ ಬೈಕ್‌ಗೆ ಡಿಕ್ಕಿ – ಒಬ್ಬ ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

Taluknewsmedia.com

Taluknewsmedia.comಚಿಕ್ಕಬಳ್ಳಾಪುರದಲ್ಲಿ ದಾರುಣ ಅಪಘಾತ: ಕೆಎಸ್ಆರ್ಟಿಸಿ ಬಸ್ ಬೈಕ್‌ಗೆ ಡಿಕ್ಕಿ – ಒಬ್ಬ ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ತಳಗವಾರ ಕ್ರಾಸ್‌ ಬಳಿ ನಡೆದ ದಾರುಣ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ತಾಲ್ಲೂಕಿನ ಶಿವಮಣಿ (26) ಎಂದು ಗುರುತಿಸಲಾಗಿದೆ. ಸಾಯಿ ಎಂಬ ಯುವಕ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬೈಕ್‌ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದ್ದು, ಘಟನೆಯಿಂದ ಪ್ರದೇಶದಲ್ಲಿ ದುಃಖದ ಛಾಯೆ ಆವರಿಸಿದೆ. ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದ ಈ ಘಟನೆ ರಸ್ತೆ ಸುರಕ್ಷತೆಯ ಅಗತ್ಯತೆಯನ್ನು ಮತ್ತೆ ನೆನಪಿಸಿದೆ.

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಬೆಟ್ಟಿಂಗ್ ಹುಚ್ಚು – ವಿಶ್ವಾಸದ ಬೆಲೆ ಚಿನ್ನದ ಕಳ್ಳತನ!

Taluknewsmedia.com

Taluknewsmedia.comಆನ್‌ಲೈನ್ ಬೆಟ್ಟಿಂಗ್ ಹುಚ್ಚು – ವಿಶ್ವಾಸದ ಬೆಲೆ ಚಿನ್ನದ ಕಳ್ಳತನ! ಜೆ.ಪಿ. ನಗರ ಪೊಲೀಸರಿಂದ ‘ಮಂಗಳ’ ಬಂಧನ – ಮಾಲಕಿ ಆಶಾ ಜಾಧವ್ ವಿಶ್ವಾಸಕ್ಕೆ ತಿಕ್ಕಿದ ಘೋರ ಧಕ್ಕೆ! “ವಿಶ್ವಾಸವನ್ನು ಕಳವು ಮಾಡುವುದು ಅತಿದೊಡ್ಡ ಅಪರಾಧ” ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ ಘಟನೆ ಇದು. ಜೆ.ಪಿ ನಗರದಲ್ಲಿರುವ ಪ್ರತಿಷ್ಠಿತ ನಿವಾಸದಲ್ಲಿ ಕೇರ್‌ಟೇಕರ್ ಯುವತಿ ಮಂಗಳ ತನ್ನ ಮಾಲಕಿಯ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ಚಿನ್ನ, ಬೆಳ್ಳಿ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 15 ವರ್ಷಗಳ ಹಿಂದೆ ಆಶಾ ಜಾಧವ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ಮಂಗಳ — ನಿಷ್ಠೆಯುಳ್ಳವಳು, ವಿಶ್ವಾಸಾರ್ಹೆ ಎಂದು ಎಲ್ಲರೂ ಹೇಳಿಕೊಂಡಿದ್ದರು. ಆಶಾ ಜಾಧವ್ ಅವರ ತಾಯಿಗೆ ವಯಸ್ಸಾಗಿತ್ತು, ಹಾಸಿಗೆ ಹಿಡಿದಿದ್ದರೂ ಮಂಗಳಳೇ ಅವರ ನೋಡಿಕೊಳ್ಳುತ್ತಿದ್ದಳು. ಪತಿ ಮೃತಪಟ್ಟಿದ್ದ ಆಶಾ ಅವರಿಗೆ ಮಕ್ಕಳು ಇರಲಿಲ್ಲ. ಕೋಟ್ಯಧಿಪತಿಯ ಆದರೂ ಒಂಟಿ ಜೀವನ. ಅದರಲ್ಲಿ ಮಂಗಳಳೇ…

ಮುಂದೆ ಓದಿ..
ಸುದ್ದಿ 

ತಾಯಿಯನ್ನೇ ಕೊಂದ ಅಪ್ರಾಪ್ತ ಮಗಳು!

Taluknewsmedia.com

Taluknewsmedia.comತಾಯಿಯನ್ನೇ ಕೊಂದ ಅಪ್ರಾಪ್ತ ಮಗಳು! ಬೆಂಗಳೂರು ನಗರದಲ್ಲಿ ನಂಬಲಸಾಧ್ಯವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯಪುರ ಸರ್ಕಲ್‌ನ ಮಾರಮ್ಮ ದೇವಸ್ಥಾನದ ಬಳಿಯಲ್ಲಿ ಅಪ್ರಾಪ್ತ ಬಾಲಕಿ ತನ್ನ ಸ್ನೇಹಿತರ ಸಹಾಯದಿಂದ ತಾಯಿಯನ್ನೇ ಬರ್ಬರವಾಗಿ ಕೊಂದಿರುವ ಘಟನೆ ಅಕ್ಟೋಬರ್ 25ರಂದು ನಡೆದಿದೆ. ಆತ್ಮಹತ್ಯೆ ಎಂಬ ನಾಟಕದ ಹಿಂದೆ ಕೊಲೆ! ಮೃತೆಯಾಗಿರುವವರು 35 ವರ್ಷದ ನೇತ್ರಾವತಿ. ಪ್ರಾಥಮಿಕ ತನಿಖೆಯ ವೇಳೆ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿದ್ದರು, ಏಕೆಂದರೆ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ, ಆಳವಾದ ವಿಚಾರಣೆ ವೇಳೆ ಭಯಾನಕ ಸತ್ಯ ಬಹಿರಂಗವಾಗಿದೆ — ಬಾಲಕಿ ಹಾಗೂ ಆಕೆಯ ಐವರು ಸ್ನೇಹಿತರು ಸೇರಿ ತಾಯಿಯನ್ನ ಮೊದಲು ಉಸಿರುಗಟ್ಟಿಸಿ ಕೊಂದು ಬಳಿಕ ಆತ್ಮಹತ್ಯೆ ಎಂದು ತೋರಿಸಲು ನೇಣು ಹಾಕಿದರೆಂಬುದು ಶಂಕೆ. ಅಕ್ಕನ ಅನುಮಾನದಿಂದ ಬೆಳಕಿಗೆ ಪ್ರಕರಣ.. ಮೃತ ನೇತ್ರಾವತಿಯ ಅಕ್ಕ ಅನಿತಾ ತಂಗಿ ಸಾವಿನ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು…

ಮುಂದೆ ಓದಿ..
ಸುದ್ದಿ 

ಅಕ್ರಮ ಮಾದಕ ವಸ್ತು ಸಾಗಾಟ ಬಯಲು: ಬೀದರ್ ನಿಲ್ದಾಣದಲ್ಲಿ ರೈಲ್ವೆ ಪೊಲೀಸರ ಸ್ಫೋಟಕ ಪತ್ತೆ!

Taluknewsmedia.com

Taluknewsmedia.comಬೀದರ್: ಹೈದರಾಬಾದ್ – ಪೂರ್ಣ ಎಕ್ಸ್ ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.5 ಲಕ್ಷ ರೂ. ಮೌಲ್ಯದ 15 ಕೆ.ಜಿ ಗಾಂಜಾವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೈಲು ಬೀದರ್ ರೈಲ್ವೆ ನಿಲ್ದಾಣಕ್ಕೆ ಬಂದಾಗ, ಪೊಲೀಸರು ರೂಟೀನ್ ತಪಾಸಣೆ ವೇಳೆ ರೈಲಿನ ಹಿಂದಿನ ಜನರಲ್ ಬೋಗಿಗಳಲ್ಲಿ ಶಂಕಾಸ್ಪದ ಬ್ಯಾಗ್‌ಗಳನ್ನು ಪತ್ತೆ ಹಚ್ಚಿದರು. ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪ್ಯಾಕೆಟ್‌ಗಳು ದೊರಕಿದ್ದು, ಪ್ರಕರಣ ದಾಖಲಾಗಿದೆಯೆಂದು ಮೂಲಗಳು ತಿಳಿಸಿವೆ. ಈ ಕುರಿತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದು, ಗಾಂಜಾ ಸಾಗಾಟದ ಹಿಂದೆ ಯಾರ ಕೈವಾಡವಿದೆ ಎಂಬುದು ಪತ್ತೆ ಹಚ್ಚಲು ಕಾರ್ಯಚರಣೆ ಮುಂದುವರಿಸಿದ್ದಾರೆ. ಸಿಪಿಐ ಬಸವರಾಜ್ ತೇಲಿ, ಪಿಎಸ್‌ಐ ಮಹಮ್ಮದ್ ಪಾಷಾ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಈ ಯಶಸ್ವಿ ದಾಳಿ ನಡೆಸಿದ್ದಾರೆ. ಅಕ್ರಮ ಮಾದಕ ವಸ್ತು ಸಾಗಾಟದ ವಿರುದ್ಧ ರೈಲ್ವೆ ಪೊಲೀಸರು ಕೈಗೊಂಡ ಈ ಕ್ರಮ ಶ್ಲಾಘನೀಯವಾಗಿದೆ ಎಂದು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 🚆

ಮುಂದೆ ಓದಿ..
ಸುದ್ದಿ 

ಮದುವೆ ಮುನ್ನದ ದುರ್ಘಟನೆ: ಯುವತಿಯ ಅಕಾಲಿಕ ಸಾವು ಗ್ರಾಮದಲ್ಲಿ ಶೋಕದ ವಾತಾವರಣ

Taluknewsmedia.com

Taluknewsmedia.comಮದುವೆ ಮುನ್ನದ ದುರ್ಘಟನೆ: ಯುವತಿಯ ಅಕಾಲಿಕ ಸಾವು ಗ್ರಾಮದಲ್ಲಿ ಶೋಕದ ವಾತಾವರಣ ಚಿಕ್ಕಮಗಳೂರು: ಮದುವೆ ಸಂಭ್ರಮದ ತಯಾರಿಯಲ್ಲಿದ್ದ ಮನೆಗೆ ದುಃಖದ ಮೋಡ ಆವರಿಸಿದ ಘಟನೆ ಅಕ್ಟೋಬರ್ 30ರ ಗುರುವಾರ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಶೃತಿ (24) ಎಂಬ ಯುವತಿಯು ಅಕಾಲಿಕವಾಗಿ ಮೃತಪಟ್ಟಿದ್ದು, ಕುಟುಂಬ ಹಾಗೂ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ. ತರೀಕೆರೆಯ ದಿಲೀಪ್ ಎಂಬ ಯುವಕರೊಂದಿಗೆ ಶೃತಿಯ ಮದುವೆ ಅಕ್ಟೋಬರ್ 31ರಂದು ನಡೆಯಬೇಕಿತ್ತು. ಆದರೆ, ಮದುವೆಯ ಸಂಭ್ರಮದ ಮಧ್ಯೆ ಶೃತಿಗೆ ಅಕಸ್ಮಿಕವಾಗಿ ಲೋ ಬಿಪಿ ಹಾಗೂ ಹೃದಯಾಘಾತ ಉಂಟಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶೃತಿಯ ಸಾವು ಕುಟುಂಬದವರ ಮೇಲೆ ಭಾರೀ ಆಘಾತ ಮೂಡಿಸಿದ್ದು, ನಾಳೆ ಮದುವೆ ನಡೆಯಬೇಕಿದ್ದ ಮನೆಯಲ್ಲಿ ಈಗ ಕಣ್ಣೀರು ಮತ್ತು ನೋವಿನ ವಾತಾವರಣ ನಿರ್ಮಾಣವಾಗಿದೆ.

ಮುಂದೆ ಓದಿ..
ಸುದ್ದಿ 

ನಾಡಿನ ಹೆಮ್ಮೆಯ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿಮೆ!

Taluknewsmedia.com

Taluknewsmedia.comನಾಡಿನ ಹೆಮ್ಮೆಯ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿಮೆ! ಬೆಂಗಳೂರು: ನಾಡಿನ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿ ಎತ್ತಿದ ಗಣ್ಯರನ್ನು ಗುರುತಿಸಿ ರಾಜ್ಯ ಸರ್ಕಾರವು 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಿದೆ. ಸಾಹಿತ್ಯ, ಜಾನಪದ, ಸಂಗೀತ, ಶಿಕ್ಷಣ, ಕೃಷಿ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಶ್ರೇಷ್ಠ ಕೊಡುಗೆ ನೀಡಿದ ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ನವೆಂಬರ್‌ 1ರಂದು — ರಾಜ್ಯೋತ್ಸವ ದಿನದಂದು — ನಾಡಿನ ಹೆಮ್ಮೆಯ ಪ್ರತಿಭಾವಂತರಿಗೆ ನೀಡಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ಪ್ರಮಾಣಪತ್ರ, ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು. ಈ ವರ್ಷದ ಪ್ರಶಸ್ತಿಗಳ ಪಟ್ಟಿ ಪ್ರಕಟವಾದ ನಂತರ ರಾಜ್ಯದಾದ್ಯಂತ ಹರ್ಷ ವ್ಯಕ್ತವಾಗಿದ್ದು, ನಾಡಿನ ಕೀರ್ತಿಗೆ ತಕ್ಕ ರೀತಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಸಾಧಕರಿಗೂ ಜನತೆ…

ಮುಂದೆ ಓದಿ..
ಸುದ್ದಿ 

ರೈತನ ಆರ್ಥಿಕ ಬಿಕ್ಕಟ್ಟು: ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ..

Taluknewsmedia.com

Taluknewsmedia.comರೈತನ ಆರ್ಥಿಕ ಬಿಕ್ಕಟ್ಟು: ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ.. ಕೆಂಭಾವಿ : ಸಮೀಪದ ತಳ್ಳಳ್ಳಿ (ಬಿ) ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ, ಸಾಲಬಾಧೆಯಿಂದ ಕಂಗೆಟ್ಟ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ತಳ್ಳಳ್ಳಿ (ಬಿ) ಗ್ರಾಮದ ನಿವಾಸಿ ಹಣಮಂತ್ರಾಯ ಯಮನಪ್ಪ ಬಿರೆದಾರ್ (41) ಎನ್ನುವವರು ಬದುಕಿನ ಕಷ್ಟ ತಾಳಲಾರದೆ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ರೈತನಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆಂಭಾವಿ ಶಾಖೆಯಿಂದ ಸುಮಾರು ₹2.13 ಲಕ್ಷ ಸಾಲ ಬಾಕಿಯಾಗಿದ್ದು, ಜೊತೆಗೆ ಕೈಗಡ ಸಾಲದ ಒತ್ತಡವೂ ಇದ್ದು, ಇದರಿಂದ ಮಾನಸಿಕ ತೊಂದರೆಯಲ್ಲಿ ಸಿಲುಕಿದ್ದರು ಎಂಬ ಮಾಹಿತಿ ದೊರೆತಿದೆ. ಈ ಘಟನೆ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿಯುತ್ತಿದೆ. ಗ್ರಾಮದಲ್ಲಿ ಈ ಘಟನೆ ದುಃಖದ ವಾತಾವರಣ ನಿರ್ಮಿಸಿದೆ. ಸಹಗ್ರಾಮಸ್ಥರು ಸರ್ಕಾರವು ರೈತರ ಸಾಲಮನ್ನಾ ನೀತಿಯನ್ನು ಬಲಪಡಿಸಿ, ಇಂತಹ ದುರಂತಗಳು…

ಮುಂದೆ ಓದಿ..
ಸುದ್ದಿ 

PDO ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ಆತ್ಮಹತ್ಯೆ – ಆಡಳಿತದ ಮಾನವೀಯತೆ ಪ್ರಶ್ನೆ!

Taluknewsmedia.com

Taluknewsmedia.comPDO ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ಆತ್ಮಹತ್ಯೆ – ಆಡಳಿತದ ಮಾನವೀಯತೆ ಪ್ರಶ್ನೆ! ಬೆಂಗಳೂರು: ಅಧಿಕಾರಿಗಳ ಕಿರುಕುಳ ಮತ್ತೊಮ್ಮೆ ಜೀವ ಬಲಿತೆಗೆದುಕೊಂಡಿದೆ. ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ PDO ಗೀತಾಮಣಿ ನೀಡಿದ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ರಾಮಚಂದ್ರಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 25 ವರ್ಷಗಳಿಂದ ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರಯ್ಯ, ಕಳೆದ ಮೂರು ತಿಂಗಳಿಂದ ಸಂಬಳ ಕೊಡದೇ, ಅನಗತ್ಯ ಒತ್ತಡ ಹೇರಿದ PDO ಗೀತಾಮಣಿಯ ಕಿರುಕುಳದಿಂದ ಕಂಗೆಟ್ಟು ಜೀವ ತ್ಯಜಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಂಥಾಲಯದ ಬಯೋಮೆಟ್ರಿಕ್ ಹಾಜರಾತಿ ಹಾಕದೇ ಹೋದ ಆರೋಪದ ಹೆಸರಲ್ಲಿ ಸತತ ಕಿರುಕುಳ ನೀಡುತ್ತಿದ್ದ PDO ಯ ವರ್ತನೆ ಮಾನವೀಯ ಮಿತಿಗಳನ್ನು ದಾಟಿದ್ದಂತೆ ಆರೋಪಗಳು ವ್ಯಕ್ತವಾಗಿವೆ. ದಿನದಿನಕ್ಕೂ ಹೀನಾಯ ಕಿರುಕುಳವನ್ನು ಎದುರಿಸಲು ಸಾಧ್ಯವಾಗದೆ, ರಾಮಚಂದ್ರಯ್ಯ ವಿಷ ಸೇವಿಸಿ ಬದುಕು ಮುಗಿಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಬೆಳಗಾವಿ: ಲಂಚ ಪ್ರಕರಣದಲ್ಲಿ ನಗರ ನೀರು ಸರಬರಾಜು ಮಂಡಳಿಯ ಇಂಜಿನಿಯರ್ ಅಶೋಕ್ ಶಿರೂರ ಬಂಧನ

Taluknewsmedia.com

Taluknewsmedia.comಬೆಳಗಾವಿ: ಲಂಚ ಪ್ರಕರಣದಲ್ಲಿ ನಗರ ನೀರು ಸರಬರಾಜು ಮಂಡಳಿಯ ಇಂಜಿನಿಯರ್ ಅಶೋಕ್ ಶಿರೂರ ಬಂಧನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಭೂಮಿ ಪರಿಹಾರ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಸುವಾಸನೆ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಶಿರೂರ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಖೇಮಲಾಪುರದ ಯಾಸಿನ್ ಪೇಂಢಾರಿ ಎಂಬ ರೈತರ 14 ಗುಂಟೆ ಜಮೀನು ಮುಗಲಖೋಡ್ ಮತ್ತು ಹಾರೂಗೇರಿ ಪಟ್ಟಣಗಳ ಅಮೃತ ಯೋಜನೆಗೆ ಸರ್ಕಾರದಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಭೂಮಿಗೆ ಸರ್ಕಾರದಿಂದ ರೂ.18 ಲಕ್ಷ ಪರಿಹಾರ ಮಂಜೂರಾಗಿತ್ತು. ಆದರೆ, ಆ ಮೊತ್ತದ ಚೆಕ್ ನೀಡುವ ಮುನ್ನ ಅಶೋಕ್ ಶಿರೂರ ಅವರು ರೂ.1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಠಾಣೆ ಬೆಳಗಾವಿಯಲ್ಲಿ…

ಮುಂದೆ ಓದಿ..
ಸುದ್ದಿ 

ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಗ್ಯಾಂಗ್ ಅಟ್ಯಾಕ್ – ಯುವಕನ ಮೇಲೆ ದುಷ್ಕರ್ಮಿಗಳ ಅಮಾನುಷ ಹಲ್ಲೆ

Taluknewsmedia.com

Taluknewsmedia.comಚಿತ್ರದುರ್ಗದಲ್ಲಿ ಮಧ್ಯರಾತ್ರಿ ಗ್ಯಾಂಗ್ ಅಟ್ಯಾಕ್ – ಯುವಕನ ಮೇಲೆ ದುಷ್ಕರ್ಮಿಗಳ ಅಮಾನುಷ ಹಲ್ಲೆ ನಗರದ ನಡು ರಸ್ತೆಯಲ್ಲೇ ಪುಂಡರ ಗುಂಪೊಂದು ಯುವಕನ ಮೇಲೆ ಅಟ್ಟಹಾಸ ನಡೆಸಿದ ಘಟನೆ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ 5ನೇ ಕ್ರಾಸ್‌ನಲ್ಲಿ ನಡೆದಿದೆ. ಗಾಂಧೀನಗರದ ನಿವಾಸಿ ಯಶವಂತ್ ಎಂಬ ಯುವಕನ ಮೇಲೆ ಗುರುವಾರ ಮಧ್ಯರಾತ್ರಿ ಸುಮಾರು 8ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆಯ ದೃಶ್ಯಗಳು ಸಮೀಪದ CCTV ಕ್ಯಾಮೆರಾದಲ್ಲಿ ಸೆರೆ ಆಗಿವೆ. ಸ್ನೇಹಿತನ ಮನೆಗೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ಯಶವಂತನನ್ನು, ಆಟೋ ಹಾಗೂ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಅಡ್ಡಗಟ್ಟಿ, ನಡುರಸ್ತೆಯಲ್ಲೇ ಏಲೆದಾಡಿ ಲಾಠಿ, ಕಡ್ಡಿಗಳಿಂದ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಹಳೆಯ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣವೇ ಹಲ್ಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.ಹಲ್ಲೆ ನಡೆಸಿದವರಾಗಿ ಕೃಷ್ಣ, ತರುಣ್ @ ತುಂಟ, ರಾಮ್ @ ಕಲ್ಕಿ, ರೇಣುಕಾ, ದಯಾ,…

ಮುಂದೆ ಓದಿ..