ಮಹಿಳೆಯೊಬ್ಬರಿಗೆ ಅಸಭ್ಯ ವರ್ತನೆ ಹಾಗೂ ಜೀವ ಬೆದರಿಕೆ: ಇಬ್ಬರ ವಿರುದ್ಧ ಪೊಲೀಸ್ ದೂರು..
Taluknewsmedia.comಸಾರ್ವಜನಿಕ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿ ಮಹಿಳೆಯೊಬ್ಬರ ಮಾನಕ್ಕೆ ಧಕ್ಕೆಯುಂಟುಮಾಡಿದ ಆರೋಪ ಮತ್ತು ಬಳಿಕ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಮಹಿಳೆಯೊಬ್ಬರು ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಅಶೋಕ್ ಹಾಗೂ ಆಶಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶ್ರೀಮತಿ ರಾಜೇಶ್ವರಿ ಅವರು ನೀಡಿದ ದೂರಿನ ಪ್ರಕಾರ, 18 ಜೂನ್ 2025 ರಂದು ಬೆಳಿಗ್ಗೆ ಸುಮಾರು 6:00 ಗಂಟೆಗೆ, ಅವರ ತಂಗಿ ವನಜಾಕ್ಷಿ ಅವರು ಅಂಜನಾಪುರದ 80 ಅಡಿ ರಸ್ತೆಯ ಡಿಪೋದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಅಶೋಕ್ ಎಂಬಾತನು ತನ್ನ ಡಿಯೋ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಂಗಿಯನ್ನು ತಡೆದು “ಎಲ್ಲಿ ಹೋಗುತ್ತಿದ್ದೀಯಾ?” ಎಂದು ಕೇಳಿದ್ದನು. ತದನಂತರ, ಆಕೆಯ ಕೈ ಹಿಡಿದು ಎಳೆದಾಡಿ, “ನನ್ನ ಜೊತೆಗೆ ಬಾ” ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ವನಜಾಕ್ಷಿ ಶಬ್ದ ಮಾಡಿದಾಗ, ಅಶೋಕ್ ಸ್ಥಳದಿಂದ ಪರಾರಿಯಾದನು.…
ಮುಂದೆ ಓದಿ..
