ಸಿಎಂ ಸಿದ್ದರಾಮಯ್ಯ ಮಹಿಳೆಯರ ವಿರುದ್ಧ ಅವಮಾನಕಾರಿ ಶೈಲಿ ಬಳಸುತ್ತಾರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ
Taluknewsmedia.comಸಿಎಂ ಸಿದ್ದರಾಮಯ್ಯ ಮಹಿಳೆಯರ ವಿರುದ್ಧ ಅವಮಾನಕಾರಿ ಶೈಲಿ ಬಳಸುತ್ತಾರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೇ ಮಹಿಳೆಯರ ಗೌರವ ಮರೆತ ಭಾಷೆಯನ್ನು ಬಳಸುತ್ತಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತೀವ್ರ ಟೀಕೆ ಮಾಡಿದ್ದಾರೆ. ಸಿಎಂ ಅವರು ಮಹಿಳೆಯರನ್ನು ಉದ್ದೇಶಿಸಿ “ಅವಳಿವಳು” ಎನ್ನುವ ಏಕವಚನದ ಶೈಲಿಯಲ್ಲಿ ಮಾತನಾಡುವ ನಡೆ ಸಂಪೂರ್ಣವಾಗಿ ಅವಮಾನಕಾರಿ ಎಂದು ಅವರು ಪ್ರಕಟಣೆಯೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೂಡ ಇದೇ ರೀತಿಯಲ್ಲಿ ಏಕವಚನದಲ್ಲಿ ಕರೆದು ಮಾತನಾಡಿರುವುದು ಅತಿ ಗಂಭೀರ ವಿಷಯ ಎಂದು ಜೋಶಿ ಹೇಳಿದ್ದಾರೆ. “ಕೇಂದ್ರ ಮಂತ್ರಿಯಾಗಿರುವ, ದೇಶದ ಗೌರವಾನ್ವಿತ ಸ್ಥಾನದಲ್ಲಿ ಇರುವ ವ್ಯಕ್ತಿಯನ್ನು ಹೀಗೆ ಕಡಿಮೆಮಟ್ಟದಲ್ಲಿ ಉದ್ದೇಶಿಸುವುದು ಸಿಎಂ ಹುದ್ದೆಗೆ ತಕ್ಕದ್ದು ಅಲ್ಲ” ಎಂದು ಅವರು ದೂರಿದ್ದಾರೆ. ಜೋಶಿ ಮುಂದುವರಿಸುತ್ತಾ, ಸಿದ್ದರಾಮಯ್ಯ…
ಮುಂದೆ ಓದಿ..
