ಸುದ್ದಿ 

ವಿದ್ಯಾರಣ್ಯಪುರದಲ್ಲಿ ಗಾಂಜಾ ಮಾರಾಟಗಾರ ಬಂಧನ

ಬೆಂಗಳೂರು:22 ಆಗಸ್ಟ್ 2025ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪಿಎಸ್‌ಐ ಇಬ್ರಾಹಿಂ ಅವರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಖಾಲಿ ಜಾಗದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. 20 ಆಗಸ್ಟ್ 2025 ರಂದು ಸಂಜೆ 6 ಗಂಟೆಯ ಸುಮಾರಿಗೆ ನಡೆದ ದಾಳಿಯಲ್ಲಿ, ಮರೂನ್ ಶರ್ಟ್ ಧರಿಸಿದ್ದ ಕಿರಣ್ @ ಕಿರಣ್ ಬೇಡಿ (25) ಎಂಬ ವ್ಯಕ್ತಿಯನ್ನು ವಿದ್ಯಾರಣ್ಯಪುರ ಪೊಲೀಸರು ವಶಕ್ಕೆ ಪಡೆದರು. ಆರೋಪಿಯಿಂದ 821 ಗ್ರಾಂ ಗಾಂಜಾ, 8 ಚಿಕ್ಕ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಮತ್ತು ₹500 ಮುಖಬೆಲೆಯ ನೋಟು ವಶಪಡಿಸಿಕೊಳ್ಳಲಾಗಿದೆ. ಕಿರಣ್ ವಿಶಾಖಪಟ್ಟಣಂನಿಂದ ಗಾಂಜಾ ತಂದು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅವನು ಪ್ರತಿ ಪ್ಯಾಕೆಟ್ ಅನ್ನು ₹500ಕ್ಕೆ ಮಾರಾಟ ಮಾಡುತ್ತಿದ್ದನೆಂದು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಹಾಗೂ ವಶಪಡಿಸಿದ ಮಾಲುಗಳನ್ನು ಠಾಣೆಗೆ ಕರೆತರಲಾಗಿದ್ದು, ಮುಂದಿನ ಕಾನೂನು ಕ್ರಮಗಳು…

ಮುಂದೆ ಓದಿ..
ಸುದ್ದಿ 

ಯುವತಿ ಕಾಣೆಯಾಗಿರುವ ಘಟನೆ – ಯಲಹಂಕದಲ್ಲಿ ಪೋಷಕರ ಮನವಿ

ಬೆಂಗಳೂರು: 22 ಆಗಸ್ಟ್ 2025ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸರ ಮಾಹಿತಿಯ ಪ್ರಕಾರ, ಲಕ್ಷ್ಮಿಪತಿ ಅವರು ತಮ್ಮ ಕುಟುಂಬದೊಂದಿಗೆ ಯಲಹಂಕದಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ಮಗಳೊಂದಿಗೆ ಹಣಕಾಸಿನ ವಿಷಯವಾಗಿ ಮನೆಯಲ್ಲಿ ಕೆಲ ಮಾತುಕತೆ ನಡೆದಿತ್ತು. ದಿನಾಂಕ 13.08.2025 ರಂದು ಲಕ್ಷ್ಮಿಪತಿ ಅವರು ತಮ್ಮ ಊರಾದ ಮಾಲಗಡಿ ತೆರಳಿದ್ದರು. ಅವರ ಪತ್ನಿ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋದರು. ಆ ಸಮಯದಲ್ಲಿ ಮಗಳು ಮತ್ತು ಮಗ ಮನೆಯಲ್ಲೇ ಇದ್ದರು. ಮಧ್ಯಾಹ್ನ ಸುಮಾರು 12:30 ಗಂಟೆಗೆ, ಮಗಳು “ಹೊರಗಡೆ ಕೆಲಸವಿದೆ” ಎಂದು ಹೇಳಿ ಮನೆಯಿಂದ ಹೊರಟಿದ್ದು, ನಂತರ ವಾಪಾಸಾಗಲಿಲ್ಲ. ಸಂಜೆ 6 ಗಂಟೆಗೆ ಮನೆಗೆ ಬಂದ ಪೋಷಕರು ಮಗಳು ಮನೆಗೆ ವಾಪಾಸಾಗಿಲ್ಲವೆಂದು ಗಮನಿಸಿದರು. ಸ್ನೇಹಿತರು ಮತ್ತು ಸಂಬಂಧಿಕರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಕಾಣೆಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ದೊರಕದ ಹಿನ್ನೆಲೆಯಲ್ಲಿ,…

ಮುಂದೆ ಓದಿ..
ಸುದ್ದಿ 

“ಸತ್ಯಕ್ಕೆ ನಿಂತವನಿಗೆ ಇಂಥ ಅಂತ್ಯವೇನಾ?” – ಹಾರಗದ್ದೆ

ಹಾರಗದ್ದೆ ಬ್ಯಾಂಕ್ ಮ್ಯಾನೇಜರ್ ಆತ್ಮಹ*ತ್ಯೆ: ಕಿರುಕುಳ, ವಂಚನೆ, ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾದ ಪ್ರಕಾಶ್ “ಸತ್ಯಕ್ಕೆ ನಿಂತವನಿಗೆ ಇಂಥ ಅಂತ್ಯವೇನಾ?” – ಹಾರಗದ್ದೆ ಗ್ರಾಮದಲ್ಲಿ ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆ ಇದು. 41 ವರ್ಷದ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಅವರು ಸಹೋದ್ಯೋಗಿಗಳ ಕಿರುಕುಳ ಹಾಗೂ ಬ್ಯಾಂಕಿನ ಆಂತರಿಕ ವಂಚನೆಯಿಂದ ನೊಂದು ತನ್ನ ಜೀವ ತ್ಯಜಿಸಿರುವುದು ನಿಜಕ್ಕೂ ಸಮಾಜವೇ ಆತ್ಮಾವಲೋಕನ ಮಾಡಬೇಕಾದ ಘಟನೆ. ಡೆತ್ ನೋಟ್‌ನಲ್ಲಿ ಬಿಚ್ಚಿಟ್ಟ ವಂಚನೆ ಪ್ರಕಾಶ್ ತಮ್ಮ ಡೆತ್ ನೋಟ್‌ನಲ್ಲಿ ಬ್ಯಾಂಕಿನ ಕೆಲ ಸಿಬ್ಬಂದಿಗಳೇ ತಮ್ಮ ಸಾವಿಗೆ ಕಾರಣ ಎಂದು ಬರೆದು ಹೋಗಿದ್ದಾರೆ. ಅಕೌಂಟೆಂಟ್ ನಾಗರಾಜ್ಕ್ಯಾಷಿಯರ್ ರೂಪಾಕಂಪ್ಯೂಟರ್ ಆಪರೇಟರ್ ಸಂದೀಪ್ರೂಪಾ ಅವರ ಸಂಬಂಧಿ ಶ್ರೀನಿವಾಸ್ ಈ ನಾಲ್ವರು ಸೇರಿ ₹1 ಕೋಟಿಗೂ ಅಧಿಕ ಹಣ ಲೂಟಿ ಮಾಡಿ, ತನ್ನನ್ನು ಬಲೆಗೆಳೆದು ಕಿರುಕುಳ ನೀಡಿದರು ಎಂದು ಪ್ರಕಾಶ್ ಬರೆದು ಹೋಗಿರುವುದು ನಿಜಕ್ಕೂ ಆಘಾತಕಾರಿಯ ಸಂಗತಿ. ಮಾನಸಿಕ ಹಿಂಸೆ –…

ಮುಂದೆ ಓದಿ..
ಅಂಕಣ 

ಕಳ್ಳ ಬೆಕ್ಕುಗಳು ಸಿಕ್ಕಿವೆ,ಗಂಟೆ ಕಟ್ಟೋಣ………

ಕಳ್ಳ ಬೆಕ್ಕುಗಳು ಸಿಕ್ಕಿವೆ,ಗಂಟೆ ಕಟ್ಟೋಣ……… 83 ವರ್ಷಗಳ ಹಿಂದೆ…… 1942 – ಆಗಸ್ಟ್ 9,ಬ್ರಿಟೀಷರೇ ಭಾರತ ಬಿಟ್ಟು ತೊಲಗಿ…..ಕ್ವಿಟ್ ಇಂಡಿಯಾ…… 2024 – ಆಗಸ್ಟ್ 9, ( ಇಂದು ಆಗಸ್ಟ್ 22 ಸ್ವಲ್ಪ ತಡವಾಗಿ)ಭ್ರಷ್ಟಾಚಾರಿಗಳೇ – ಜಾತಿವಾದಿಗಳೇ, ಧರ್ಮಾಂಧರೇ,ಮತಾಂಧರೇ,ಸಂವಿಧಾನ ವಿರೋಧಿಗಳೇ..‌ ನೀವು ಬದಲಾಗಿ – ಐಕ್ಯವಾಗಿ, ಇಲ್ಲವೇ ದೇಶ ಬಿಟ್ಟು ತೊಲಗಿ.ದಯವಿಟ್ಟು ಯಾವುದೇ ಕಾರಣಕ್ಕೂ ನಮಗೆ ತೊಂದರೆ ಕೊಡಬೇಡಿ. ನಾವು ಸಾಮಾನ್ಯ ಜನ. ನೀವು ಬದುಕಿ ನಮ್ಮನ್ನು ಬದುಕಲು ಬಿಡಿ…… ಹಾಗಾದರೆ ಯಾರು ಬದಲಾಗಬೇಕು ಮತ್ತು ಹೇಗೆ ಬದಲಾಗಬೇಕು…… 1) ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಅಧಿಕಾರಿಗಳು ಮೊದಲು ಬದಲಾಗಬೇಕಿದೆ…. ಅದರಲ್ಲೂ ಮುಖ್ಯವಾಗಿ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯಗಳ ಲೋಕಸೇವಾ ಆಯೋಗದಿಂದ ಆಯ್ಕೆಯಾಗಿ ಉನ್ನತ ಅಧಿಕಾರದಲ್ಲಿರುವವರು, ಎಲ್ಲಾ ಗೆಜೆಟೆಡ್ ಶ್ರೇಣಿಯ ಅಧಿಕಾರಿಗಳು ಭ್ರಷ್ಟ ಮುಕ್ತರಾಗಿ ಸಂವಿಧಾನಾತ್ಮಕ ಅಧಿಕಾರ ಬಳಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದು ಕ್ರಾಂತಿಯೇ…

ಮುಂದೆ ಓದಿ..
ಸುದ್ದಿ 

ಹಾನಗಲ್ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ

ಇತ್ತೀಚಿಗೆ ಆಗಸ್ಟ್ 19ನೆ ತಾರೀಕಿನಂದು ಹಾನಗಲ್ ನಗರದ ಪ್ರಮುಖ ಧಾಬಾ ಒಂದರಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಿನಾಂಕ 19/08/2025 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಹಾನಗಲ್ ತಾಲೂಕಿನ ಒಬ್ಬ ಹೋಟೆಲ್ ಬಿಸಿನೆಸ್ ವ್ಯಾಪಾರಿಯಾದ ಮಂಜುನಾಥ್ ನಾರಯಣ ಕಲಾಲ್ ಎಂಬಾತ ವ್ಯಕ್ತಿ (ವಯಸ್ಸು 32 ವರ್ಷ) ಹಾನಗಲ್ ನಗರದ APMC ಸಮೀಪದ ತನ್ನ ಸ್ವಂತ ಧಾಭಾ ನಿಸರ್ಗ ದಾಬಾ ನಲ್ಲಿ ಮದ್ಯಪಾನ ನಿಷೇಧ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಇವರು 650 ಎಂ ಎಲ್ ದ 02 ರಾಯಲ್ ಚಾಲೆಂಜರ್ಸ್ ಸ್ಟ್ರಾಂಗ್ ಬಿಯರ್ ಬಾಟಲ್ಗಳ ಹಾಗು ಇನ್ನಿತರ ದೊಡ್ಡ ದೊಡ್ಡ ಬ್ರಾಂಡ್ ಬಿಯರ್ ಬಾಟಲ್ಗಳನ್ನು ಶೇಖರಿಸಿ ಮಾರುತ್ತಿದ್ದದ್ದು ಕಂಡು ಬಂದಿರುವುದು ಇದನ್ನು ತಿಳಿದ ಹಾನಗಲ್ ನಗರದ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಅವರ ಮೇಲೆ ಹಾನಗಲ್ ನಗರ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಎಂ.ಡಿ.ಎಂ.ಎ ವಶ – ಮನೆಮಾಲಕಿಗೆ ಪ್ರಕರಣ ದಾಖಲಾತಿ

ಬೆಂಗಳೂರು, 21 ಆಗಸ್ಟ್ 2025ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಸ್ತೆಗಿರಿ ಕಾರ್ಯಾಚರಣೆಯಲ್ಲಿ ವಿದೇಶಿ ಪ್ರಜೆಗಳಿಂದ ಭಾರಿ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿ ಪ್ರಕಾರ, ವಿದ್ಯಾರಣ್ಯಪುರ ಅಂಚೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬ್ರಿಟ್ ಮತ್ತು ಕೋಡು ಎಂಬ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಇವರ ಬಳಿಯಿಂದ 700 ಗ್ರಾಂ ತೂಕದ, ಸುಮಾರು 70 ಲಕ್ಷ ರೂ. ಮೌಲ್ಯದ ಎಂ.ಡಿ.ಎಂ.ಎ (ಎಕ್ಸ್ಟಸಿ) ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧವಾಗಿ NDPS ಕಾಯ್ದೆ 1985ರ ಸೆಕ್ಷನ್‌ಗಳು 8(c), 21, 22(c) ಹಾಗೂ Foreigners Act 1946ರ ಸೆಕ್ಷನ್ 14 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ವಿದೇಶಿ ಪ್ರಜೆಗಳಿಗೆ ಬಾಡಿಗೆ ಮನೆಯನ್ನು ನೀಡಿದ ಮನೆಮಾಲಕಿ ಜಯಶ್ರೀ ಅಲಿಯಾಸ್ ಜಯಮ್ಮ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಅವರು FRRO ಅಧಿಕಾರಿಗಳಿಂದ ಪಡೆದ ಸಿ-ಫಾರ್ಮ್ ಮಾಹಿತಿಯನ್ನು ಸ್ಥಳೀಯ…

ಮುಂದೆ ಓದಿ..
ಸುದ್ದಿ 

ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ – ವಾಹನ ಚಾಲಕ ವಿರುದ್ಧ ಕ್ರಮ

ಬೆಂಗಳೂರು, 21 ಆಗಸ್ಟ್ 2025ನಗರದ ಮೇಜರ್ ಸಂದಿಹ ಉನ್ನಿಕೃಷ್ಣನ್ ಮುಖ್ಯರಸ್ತೆಯ ಮ್ಯಾಕ್‌ಡೊನಾಲ್ಡ್ ಸ್ಟೋರ್ ಮುಂಭಾಗದಲ್ಲಿ “ನೋ ಪಾರ್ಕಿಂಗ್” ಬೋರ್ಡ್ ಕೆಳಗೆ ಸರಕು ವಾಹನವನ್ನು ನಿಲ್ಲಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಸಂಜೆ ಸುಮಾರು 5.58ರ ಹೊತ್ತಿಗೆ ಕೋಬ್ರಾ ಗಸ್ತು ಕರ್ತವ್ಯದಲ್ಲಿದ್ದಯಲಹಂಕ ಸಂಚಾರಿ ಪೊಲೀಸರು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದುದನ್ನು ಗಮನಿಸಿ, ಟಾಟಾ ಇಂಟ್ರಾ ಗುಡ್ ವಾಹನ (ಕೆಎ-53-ವೈ-9734) ಅನ್ನು ಸ್ಥಳದಲ್ಲಿಯೇ ಪರಿಶೀಲಿಸಿದರು. ವಾಹನ ಚಾಲಕನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ, ಆತನು ನಾಗರಾಜು ಎಂ (29), ಮಗ ಮುನಿಸ್ವಾಮಿ, ನಿವಾಸಿ – 560049 ಎಂದು ಪತ್ತೆಯಾಯಿತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಕಾರಣ, ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ಪೀಕ್ ಅವರ್ಸ್ ವೇಳೆ ಲಾರಿ ಓಡಿಸಿದ ಚಾಲಕನ ವಿರುದ್ಧ ಕ್ರಮ

ಬೆಂಗಳೂರು: 21 ಆಗಸ್ಟ್ 2025ನಗರದೊಳಗಿನ ಪೀಕ್ ಅವರ್ಸ್ ಸಮಯದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವನ್ನು ಉಲ್ಲಂಘಿಸಿ ಲಾರಿ ಓಡಿಸಿದ ಪ್ರಕರಣದಲ್ಲಿಯಲಹಂಕ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾಹಿತಿಯ ಪ್ರಕಾರ, 19-08-2025 ಬೆಳಿಗ್ಗೆ ಸುಮಾರು 9 ಗಂಟೆಗೆ, ವಿದ್ಯಾಶಿಲ್ಪ ಕ್ರಾಸ್ ಜಂಕ್ಷನ್ ಬಳಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು, ನಿಷೇಧಿತ ಸಮಯದಲ್ಲಿ (ಬೆಳಿಗ್ಗೆ 4.00ರಿಂದ 9.00ರವರೆಗೆ) E-52-0-3816 ನಂಬರಿನ ಟಿಪ್ಪರ್ ಲಾರಿ ನಗರದಲ್ಲಿ ಸಂಚರಿಸುತ್ತಿದ್ದನ್ನು ಪತ್ತೆಹಚ್ಚಿದರು. ಚಾಲಕನು ಮುನಿರಾಜು (25), ಶಾನುಭೋಗನಹಳ್ಳಿ ಗ್ರಾಮ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ಮೂಲದವನು ಎಂದು ಗುರುತಿಸಲಾಗಿದೆ. ಈತನನ್ನು ಲಾರಿಯೊಂದಿಗೆಯಲಹಂಕ ಸಂಚಾರಿ ಠಾಣೆಗೆ ಕರೆತರಲಾಗಿದ್ದು, ನಗರ ಪೊಲೀಸ್ ಆಯುಕ್ತರ ಅಧಿಸೂಚನೆ (119/()/2014, ದಿನಾಂಕ 16-12-2014) ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪೀಕ್ ಅವರ್ಸ್ ಸಮಯದಲ್ಲಿ ಭಾರಿ ವಾಹನಗಳು ಸಂಚರಿಸುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಗಂಭೀರ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಪ್ರಕರಣಗಳಲ್ಲಿ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ವಿದ್ಯಾರ್ಥಿನಿ ಮನೆಯಿಂದ ಲ್ಯಾಪ್‌ಟಾಪ್, ಐಫೋನ್ ಕಳವು

ಬೆಂಗಳೂರು: 21 ಆಗಸ್ಟ್ 2025ಯಲಹಂಕದ ಕಟ್ಟಿಗೆನಹಳ್ಳಿಯ ಯುವತಿಯೊಬ್ಬಳ ಮನೆಯಲ್ಲಿ ನುಗ್ಗಿ ದುಷ್ಕರ್ಮಿಗಳು ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪೀಡಿತೆಯ ಮನೆಯಲ್ಲಿ 18/08/2025 ರಂದು ಬೆಳಗ್ಗೆ ಸುಮಾರು 7:35ರಿಂದ 7:50ರ ವೇಳೆಯಲ್ಲಿ ಕಳವು ನಡೆದಿದೆ. ಆಕೆಯ ಸ್ನೇಹಿತೆಯೊಬ್ಬಳು ಹಿಂದಿನ ರಾತ್ರಿ ಮನೆಗೆ ಬಂದು ತಂಗಿದ್ದಳು. ಬೆಳಗ್ಗೆ ಆಕೆ ವಾಶ್‌ರೂಮ್‌ಗೆ ಹೋಗಿದ್ದಾಗ, ಸ್ನೇಹಿತೆಯ ಸ್ನೇಹಿತೆ ಬಾಗಿಲು ಹಾಕದೆ ಹೊರಗೆ ಹೋಗಿರುವುದನ್ನು ರೂಮ್‌ಮೇಟ್ ಗಮನಿಸಿದ್ದಾಳೆ. ಈ ನಡುವೆ ಅಪರಿಚಿತರು ಮನೆಗೆ ನುಗ್ಗಿ, ಆಪಲ್ ಮ್ಯಾಕ್‌ಬುಕ್ ಏರ್ M3 (ಮಾದರಿ A3113, ಸೀರಿಯಲ್ ಸಂಖ್ಯೆ: L2PW60DJQM, ಮೌಲ್ಯ ₹2.40 ಲಕ್ಷ) ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ (IMEI: 352348743348606, 352348743120567) ಕಳವು ಮಾಡಿದ್ದಾರೆ. ಕಳವು ನಂತರ ಪೀಡಿತೆ ಯಲಹಂಕ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ ಕಳವು…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ದ್ವಿಚಕ್ರ ವಾಹನ ಕಳ್ಳತನ

ಬೆಂಗಳೂರು: 21ಆಗಸ್ಟ್ 2025ಯಲಹಂಕ ಪ್ರದೇಶದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಯಲಹಂಕ ಪೊಲೀಸರ ಬಳಿ ನೀಡಿದ ದೂರಿನ ಪ್ರಕಾರ, ರೀಟಾ ಎಸ್ ಅವರು ತಮ್ಮ ಗಂಡ ಹಾಗೂ ಮಕ್ಕಳೊಂದಿಗೆ ಯಲಹಂಕದಲ್ಲಿ ವಾಸವಾಗಿದ್ದು, ದಿನಾಂಕ 18-08-2025 ರಾತ್ರಿ ಸುಮಾರು 9 ಗಂಟೆಗೆ ತಮ್ಮ ಗಂಡನವರು ಸ್ಕೂಟರ್ ಅನ್ನು ಮನೆಯಿಂದ ಹೊರಗೆ ನಿಲ್ಲಿಸಿದ್ದರು. ನಂತರ 19-08-2025 ಬೆಳಿಗ್ಗೆ 7:30 ಗಂಟೆಗೆ ಪರಿಶೀಲಿಸಿದಾಗ, ವಾಹನ ಅಲ್ಲಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಪೀಡಿತರು ಸುತ್ತಮುತ್ತ ಹುಡುಕಿದರೂ ಸ್ಕೂಟರ್ ಪತ್ತೆಯಾಗದ ಕಾರಣ, ಯಾರೋ ಅಜ್ಞಾತ ಕಳ್ಳರು ತಮ್ಮ ರೂ. 86,000 ಮೌಲ್ಯದ ಸ್ಕೂಟರ್ ಕಳವು ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳತನವಾದ ವಾಹನ ಪತ್ತೆ ಹಾಗೂ ಆರೋಪಿಗಳ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ

ಮುಂದೆ ಓದಿ..