ಸುದ್ದಿ 

ಆಸ್ತಿ ವಿಷಯದಲ್ಲಿ ಹೆಂಡತಿಯ ಮೇಲೆ ಅನುಮಾನ ಮತ್ತು ಲೈಂಗಿಕ ಹಲ್ಲೆ ಯತ್ನ

Taluknewsmedia.com

Taluknewsmedia.comಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಪುಟ್ಟರಾಜ ಗವಾಯಿಗಳ ನಗರದಲ್ಲಿ ಸುಮಾರು ವರ್ಷದಿಂದ ಪುಷ್ಪಾ ಅಶೋಕ್ ಅಂಗಡಿ ಎನ್ನುವ ಮಹಿಳೆ ಅಲ್ಲೇ ಹಲವು ವರ್ಷದಿಂದ ಶಿಕ್ಷಕಿ ವೃತಿ ಮಾಡಿಕೊಂಡಿರುತ್ತಾಳೆ ಅವಳ ಗಂಡನಾದ ಅಶೋಕ್ ಕೊಟ್ರಪ್ಪ ಅಂಗಡಿ ಅವಳನ್ನು ಬಿಟ್ಟು ದೂರ ಇರುತ್ತಾನೆ ಆದ್ರೆ ದಿಡಿರ ಅಂತ ಆಗಸ್ಟ್ 15 ರ ರಾತ್ರಿ 8 ಗಂಟೆಗೆ ಬಂದು ಆಸ್ತಿ ವಿಷಯದ ಹಂಚಿಕೆಯಲ್ಲಿ ಆ ಮಹಿಳೆ ರಾಣೆಬೆನ್ನೂರು ಕೋರ್ಟ್ ನಲ್ಲಿ ಕೇಸ್ ಮಾಡಿರುತ್ತಾಳೆ ಅವನು ಅದೇ ಕಾರಣ ಮುಂದಿಟ್ಟುಕೊಂಡು ಅವಳನ್ನು ಹೊಡೆದು ನೀನು ಜಾತಿಗೆಟ್ಟವಳು ನಿನಗೂ ನನ್ನ ಜಾತಿಗೂ ಸರಿ ಹೋಗಲ್ಲ ನೀನು ನಿನ್ನ ಮತ್ತೆ ನಿನ್ನ ಊರಿಗೆ ಬೆಂಕಿ ಹಚ್ಚುತ್ತೇನೆ ಅಂತ ಬೆದರಿಕೆ ಹಾಕಿ ಬಂದಿದ್ದಾನೆ ಇದರ ಬಗ್ಗೆ ಪುಷ್ಪಾ ಅಂಗಡಿ ಎನ್ನುವ ಅವನ ಹೆಂಡತಿಯೂ ಪೊಲೀಸರಿಗೆ ಮಾಹಿತಿ ತಿಳಿಸಿ ದೂರು ನೀಡಿರುತ್ತಾಳೆ ಇದರ ಬಗ್ಗೆ ಹಾನಗಲ್ ನಗರದ ಪೊಲೀಸರು…

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ : ಒಬ್ಬರಿಗೆ ಗಾಯ

Taluknewsmedia.com

Taluknewsmedia.comಆಗಸ್ಟ್ 9 ನೆಯ ತಾರಿಕಿನಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸವಣೂರ ಪಟ್ಟಣದ ಹಳೆ ಪುರಸಭೆ ಕಾರ್ಯಾಲಯದ ಎದುರು ಎರಡು ಮೋಟಾರ್‌ಸೈಕಲ್‌ಗಳ ನಡುವೆ ಮಾರಾ ಮಾರಿ ಡಿಕ್ಕಿ ಸಂಭವಿಸಿದೆ. ಮಾಹಿತಿಯ ಪ್ರಕಾರ, ಮೊದಲನೆ ಬೈಕ್ ಸವಾರನಾದ ಮಂಜು ಕಲ್ಲಪ್ಪ ಸದರ್ ತನ್ನ ಕೆಎ-27/ಇಟಿ-6384 ನಂಬರಿನ ಬೈಕ್‌ನ್ನು ಸವಣೂರ ಮಾರುಕಟ್ಟೆಯಿಂದ ಪೊಲೀಸ್ ಠಾಣೆ ಕಡೆಗೆ ನಿರ್ಲಕ್ಷ್ಯವಾಗಿ ಹಾಗೂ ವೇಗವಾಗಿ ಚಲಾಯಿಸುತ್ತಿದ್ದಾನೆ. ಇದೇ ವೇಳೆ, ಎರಡನೇ ಬೈಕ್ ಸವಾರನಾದ ಸಿದ್ದಯ್ಯ ಹಬ್ಬುರ್ಮಟ್ ತನ್ನ ಕೆಎ-27/ವೈ-3811 ನಂಬರಿನ ಬೈಕ್‌ನ್ನು ಹಳೆ ಪುರಸಭೆ ಕಚೇರಿಯಿಂದ ರಸ್ತೆಯತ್ತ ನಿರ್ಲಕ್ಷ್ಯವಾಗಿ ಹಾಗೂ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ ಇಬ್ಬರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದರಿಂದ ರಸ್ತೆಯಲ್ಲಿ ಎರಡೂ ಬೈಕ್‌ಗಳ ನಡುವೆ ಮಾರ ಮಾರಿ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಿದ್ದಯ್ಯ ರಾಚಯ್ಯ ಗಬ್ಬರ್ಮಟ್ ಎನ್ನುವ ವ್ಯಕ್ತಿಗೆ ಗಾಡಿಡಿಕ್ಕಿ ಹೊಡೆದ ರಭಸಕ್ಕೆ ಪೆಟ್ಟುಗಳಾಗಿವೆಈ ಕುರಿತು ಅದನ್ನು ಪ್ರತ್ಯಕ್ಷವಾಗಿ ನೋಡಿದ್ದ ಶಿವಯ್ಯ…

ಮುಂದೆ ಓದಿ..
ಸುದ್ದಿ 

ಸವಣೂರಿನ ಬಳಿ ಬಿಕರ ಲಾರಿ ಡಿಕ್ಕಿ ಗಂಭೀರ ಅಪಘಾತ

Taluknewsmedia.com

Taluknewsmedia.comಹಾವೇರಿ ಜಿಲ್ಲೆ ಸವಣೂರಿನ ರಾಷ್ಟ್ರೀಯ ಹೆದ್ದಾರಿ (NH 48)ನಲ್ಲಿ ಆಗಸ್ಟ್ 13ರಂದು ಬೆಳಿಗ್ಗೆ ಸುಮಾರು 6.30 ಗಂಟೆಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಪೊಲೀಸರ ವರದಿ ಪ್ರಕಾರ ಲಾರಿ ಓಡಿಸುತ್ತಿದ್ದವರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸರು ಗ್ರಾಮದ ಮೂಲದ ಮುತ್ತಪ್ಪ ಹನುಮಂತಪ್ಪ ಹುಲ್ಯಾಳ ಎಂಬ ಲಾರಿ ಚಾಲಕ (KA 19 ED 9396, ಟಾಟಾ ಇಂಟಾ ಲಾರಿ) ಮತ್ತು ಇನ್ನಿತರ ಇಬ್ಬರೂ ಕಿನ್ನರಗಳು ಇದ್ದರು ಹಾವೇರಿಯಿಂದ ಹುಬ್ಬಳ್ಳಿಯ ದಿಕ್ಕಿನಲ್ಲಿ ಈ ವಾಹನ ಬರುತ್ತಿದ್ದಾಗ ಸವಣೂರಿನ ಸಮೀಪದಲ್ಲಿ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಸಿಮೆಂಟ್ ಬ್ಲಾಕ್ ಗಳ ಸಾಲಿಗೆ ತುಂಬಾ ವೇಗವಾಗಿ ಡಿಕ್ಕಿ ಹೊಡೆದಿದ್ದಾರೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಚಾಲಕನ ಕಿವಿಗೆ ಹೊಡೆತ ಬಿದ್ದು ಅಸ್ತವೆಸ್ತವಾಗಿದ್ದಾನೆ ಜೊತೆಗೆ ಅವನ ಜೊತೆಗೆ ಕಿರಣ ಹಾಗು ಸಿದ್ದರಾಮ ಎಂಬ ಇಬ್ಬರು…

ಮುಂದೆ ಓದಿ..
ಸುದ್ದಿ 

ಶಿಗ್ಗಾಂವಿಯಲ್ಲಿ ಕಾರ್ ಗೆ ಬೈಕ್ ಡಿಕ್ಕಿ

Taluknewsmedia.com

Taluknewsmedia.comಆಗಸ್ಟ್ 12 ನೆ ತಾರಿಕಿನಂದು ಶಿಗ್ಗಾಂವಿಯ ಜೆಎಂಜೆ ಕಾಲೇಜಿನ ಹತ್ತಿರ ಸಲೀಂ ನರೇಗಲ್ ಇವರ ಮನೆಯ ಹತ್ತಿರ ಶಿಗ್ಗಾಂವಿ ಸವಣೂರು ರಸ್ತೆಯಲ್ಲಿ ಘಟನೆಯೊಂದು ಬೆಳಕಿಗೆ ಬಂದಿದೆನಾಗರಾಜ್ ಪುಟ್ಟಪ್ಪ ವನಹಳ್ಳಿ ಎಂಬುವವರು ಶಿಗ್ಗಾಂವಿ ಸವಣೂರು ರಸ್ತೆಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಸವಣೂರು ಕಡೆಯಿಂದ ಶಿಗ್ಗಾಂವಿ ಕಡೆ ಹೋಗುತ್ತಿರುವಾಗ ನಿರ್ಲಕ್ಷ್ಯದಿಂದ ಗಾಡಿ ಚಲಾಯಿಸುತ್ತಿದ್ದನು ಅದೇ ಸಮಯದಲ್ಲಿ ರಾಂಗ್ ರೋಡ್ ನಲ್ಲಿ ಗಾಡಿ ಚಲಾಯಿಸುತ್ತಿದ್ದನು ಅದೇ ರೋಡ್ ನ ಎಡಬದಿಯಲ್ಲಿ ಶಿಗ್ಗಾಂವಿ ನಿಂದಾ ಸವಣೂರು ಕಡೆಗೆ ಹೋಗುತ್ತಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ಲಾರಿಗೆ ಎಡಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ ಡಿಕ್ಕಿ ಹೊಡೆದ ಪರಿಣಾಮ ಡ್ರೈವರ್ ನಾಗರಾಜ್ ವನಹಲ್ಲಿ ಅವರ ಕೈ ಕಾಲು ಕೆತ್ತಿಹೋಗಿವೆ ಎಡಗೈ ಭುಜಕ್ಕೆ ಎಡಗಾಲು ಮೊಣಕಾಲಿಗೆ ತುಂಬಾ ಪೆಟ್ಟು ಬಿದ್ದಿವೆ ಅವನು ಕುಡಿದು ವಾಹನ ಚಲಾಯಿಸುತ್ತಿದ್ದ ಅನ್ನೋ ಸಂಶಯವೂ ಮೂಡಿವೆ ಇದನ್ನು ಪಕ್ಕಿರೇಶ್ ರಾಧಾಯಿ ಎನ್ನುವವರು ತಕ್ಷಣ…

ಮುಂದೆ ಓದಿ..
ಸುದ್ದಿ 

ಉದ್ಯೋಗದ ಹೆಸರಿನಲ್ಲಿ ಸೈಬರ್ ವಂಚನೆ – 1.37 ಲಕ್ಷ ರೂ. ಸುಲಿಗೆ

Taluknewsmedia.com

Taluknewsmedia.comಬೆಂಗಳೂರು 20 ಆಗಸ್ಟ್ 2025ಬೆಂಗಳೂರು, ಜುಲೈ 21: ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ ಸೈಬರ್ ವಂಚಕರು ಮತ್ತೊಮ್ಮೆ ತಮ್ಮ ಬಲೆ ಬೀಸಿರುವ ಘಟನೆ ಬೆಳಕಿಗೆ ಬಂದಿದೆ. ತಿಲಕ್ ರೆಡ್ಡಿ ಅವರಿಗೆ ಕಂಪನಿಯಲ್ಲಿ ವರ್ಷಕ್ಕೆ 14 ಲಕ್ಷ ರೂ. ಪ್ಯಾಕೇಜ್ ಇರುವ ಹುದ್ದೆ ಕೊಡುತ್ತೇವೆ ಎಂದು ಭರವಸೆ ನೀಡಿದ ವಂಚಕರು, ಮೊದಲು ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ ₹1,37,000/- ಮೊತ್ತವನ್ನು PhonePe ಮತ್ತು ಬ್ಯಾಂಕ್ ಖಾತೆಗಳ ಮೂಲಕ ಕಳುಹಿಸಿದ್ದಾರೆ. ಆದರೆ ಉದ್ಯೋಗ ನೀಡುವುದಾಗಿ ಹೇಳಿ ವಂಚಕರು ದಿನಾಂಕವನ್ನು ಮುಂದೂಡುತ್ತಾ ಬಂದಿದ್ದಾರೆ. ಬಳಿಕ ಅವರ ಹಿನ್ನಲೆ ಪರಿಶೀಲಿಸಿದಾಗ, ಇವರು ಇದೇ ರೀತಿಯಲ್ಲಿ ಅನೇಕ ಮಂದಿಗೆ ಮೋಸ ಮಾಡಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ, ದೂರುದಾರರು “ಉದ್ಯೋಗ ಕೊಡಿಸುವ ಹೆಸರಿನಲ್ಲಿ ನನ್ನಿಂದ ಹಣ ಪಡೆದು ಸೈಬರ್ ವಂಚನೆ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನನ್ನ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಜಕ್ಕೂರು ಫ್ಲೈಓವರ್‌ನಲ್ಲಿ ಟ್ರಾಫಿಕ್ ಅಡಚಣೆ

Taluknewsmedia.com

Taluknewsmedia.com ಬೆಂಗಳೂರು ಜಕ್ಕೂರು ಫ್ಲೈಓವರ್‌ನಲ್ಲಿ ಟ್ರಾಫಿಕ್ ಅಡಚಣೆ ಬೆಂಗಳೂರು, 20 ಆಗಸ್ಟ್ 2025:ನಗರದಲ್ಲಿ ಭಾನುವಾರ ಸಂಜೆ ಜಕ್ಕೂರು ಫ್ಲೈಓವರ್ ಬಳಿ ವಾಹನ ಸಂಚಾರ ದಟ್ಟಣೆ ಉಂಟಾದ ಘಟನೆ ನಡೆದಿದೆ. ಬಿಬಿ ಮುಖ್ಯರಸ್ತೆಯಲ್ಲಿ ಸಂಚಾರ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದ ಯಲಹಂಕ ಸಂಚಾರ ಪೊಲೀಸ್ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ಒಂದು ಮಾರುತಿ ವ್ಯಾಗನ್‌ಆರ್ (KA-05-M-9406) ಕಾರು ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ಕಾರಣದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರಸ್ತೆಯಲ್ಲಿ ವಾಹನಗಳ ಉದ್ದ ಸಾಲು ನಿರ್ಮಾಣಗೊಂಡಿತ್ತು. ಸ್ಥಳೀಯ ಸಾರ್ವಜನಿಕರ ಪ್ರಕಾರ, ಕಾರು ಸುಮಾರು 45 ನಿಮಿಷಗಳ ಕಾಲ ಅಲ್ಲೇ ನಿಂತಿತ್ತು. ಪೊಲೀಸರು ತಕ್ಷಣವೇ ಹಸ್ತಕ್ಷೇಪಿಸಿ ಕಾರಿನ ಹಿಂಭಾಗದಲ್ಲಿ ಎಚ್ಚರಿಕೆ ಬೋರ್ಡ್ ಇಟ್ಟು ಸಂಚಾರವನ್ನು ಸುಗಮಗೊಳಿಸಿದರು. ಸುಮಾರು 40 ನಿಮಿಷಗಳ ಬಳಿಕ ಕಾರಿನ ಚಾಲಕ ಸ್ಥಳಕ್ಕೆ ಆಗಮಿಸಿದನು. ಆತನು ಅಶ್ರಫ್ ಅಲೇ ವಿ ಕೆ ಬಿನ್ ಅಬ್ದುಲ್…

ಮುಂದೆ ಓದಿ..
ಸುದ್ದಿ 

ಯಲಹಂಕ ಅಲಾಳಸಂದ್ರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅಡಚಣೆ

Taluknewsmedia.com

Taluknewsmedia.comಯಲಹಂಕ ಅಲಾಳಸಂದ್ರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅಡಚಣೆಯಲಹಂಕ 20 ಆಗಸ್ಟ್ 2025ಯಲಹಂಕ ಅಲಾಳಸಂದ್ರ ಕೆರೆ ಪಕ್ಕದ ಮುಖ್ಯರಸ್ತೆಯಲ್ಲಿ 17-08-2025ರಂದು ಬೆಳಗಿನ 2:54 ಗಂಟೆಗೆ ಗಸ್ತು ಕರ್ತವ್ಯದಲ್ಲಿದ್ದ ಯಲಹಂಕ ಸಂಚಾರಿ ಪೊಲೀಸ್ ಸಿಬ್ಬಂದಿ ಒಬ್ಬರು, ಕಎವಿ.50.ಬಿ.6739 ನಂಬರ್‌ನ ಖಾಸಗಿ ಬಸ್‌ನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ನಿಲ್ಲಿಸಿರುವುದನ್ನು ಗಮನಿಸಿದರು. ಸದರಿ ಬಸ್ ಚಾಲಕರನ್ನು ವಿಚಾರಿಸಿದಾಗ, ಆತನು ತನ್ನನ್ನು ಜಗದೀಶ ಜಿ.ಸಿ. (ವಿಳಾಸ: 2013, 28, 5, 15 ..-561211, ಮೊಬೈಲ್: 9945449632) ಎಂದು ಪರಿಚಯಿಸಿಕೊಂಡಿದ್ದಾನೆ. ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಕಾರಣ, ಯಲಹಂಕ ಸಂಚಾರಿ ಪೊಲೀಸರು ಬಸ್‌ನ್ನು ಠಾಣೆಗೆ ಕರೆದುಕೊಂಡು ಬಂದು, ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಂಚಾರ ಅಡಚಣೆ ಉಂಟಾಗುವಂತ ವಿಧವಾಗಿ ವಾಹನ ನಿಲುವಿಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ…

ಮುಂದೆ ಓದಿ..
ಸುದ್ದಿ 

ಯಲಹಂಕ: ಐಟಿ ಉದ್ಯೋಗಿ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಯಲಹಂಕ 20 ಆಗಸ್ಟ್ 2025ಯಲಹಂಕ ಪೊಲೀಸರು ದಾಖಲಿಸಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, 33 ವರ್ಷದ ಐಟಿ ಉದ್ಯೋಗಿ ರಾಮ್ ಮೋಹನ್ ರೆಡ್ಡಿ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಉಮಾ ಮಹೇಶ್ವರಿ ಅವರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುವುದೇನೆಂದರೆ, ಅವರು ತಮ್ಮ ಗಂಡ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಗಂಡನಾದ ರಾಮ್ ಮೋಹನ್ ರೆಡ್ಡಿ ಅವರು ಕಳೆದ 3 ತಿಂಗಳುಗಳಿಂದ ವೈಟೀಲ್‌ನ ಕ್ಯಾಪೆಮಿನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಆಗಸ್ಟ್ 17ರಂದು ಮಧ್ಯಾಹ್ನ 12 ಗಂಟೆಗೆ ಕೆಲಸಕ್ಕಾಗಿ ಮನೆಯಿಂದ ಹೊರಟ ಅವರು ಇದುವರೆಗೆ ಮನೆಗೆ ಹಿಂದಿರುಗದೆ ಕಾಣೆಯಾಗಿದ್ದಾರೆ. ಮೊಬೈಲ್‌ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದರಿಂದ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಈ ಪ್ರಕರಣವನ್ನು ಪೊಲೀಸರು ತನಿಖೆ…

ಮುಂದೆ ಓದಿ..
ಸುದ್ದಿ 

ಜಾನುವಾರುಗಳ ಅಕ್ರಮ ಸಾಗಣೆ – ಇಬ್ಬರು ಆರೋಪಿ ಬಂಧನ

Taluknewsmedia.com

Taluknewsmedia.comಬೆಂಗಳೂರು 20 ಆಗಸ್ಟ್ 2025ಬೆಂಗಳೂರು ಗ್ರಾಮಾಂತರದಲ್ಲಿ ಪೊಲೀಸರು ಜಾನುವಾರುಗಳ ಅಕ್ರಮ ಸಾಗಾಣಿಕೆ ನಡೆಸುತ್ತಿದ್ದ ವಾಹನವನ್ನು ಪತ್ತೆಹಚ್ಚಿದ್ದಾಆಗಸ್ಟ್ 16ರಂದು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊಯ್ಸಳ–184 ಸಿಬ್ಬಂದಿಗೆ ಬೆಳಿಗ್ಗೆ 6:30ರ ಸುಮಾರಿಗೆ ಮಾಹಿತಿ ಸಿಕ್ಕಿತು. ಚಪ್ಪರದಕಲು ರಸ್ತೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬುಲೋರೋ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದು, ಅದರ ಹಿಂದೆ ಕೆಂಪು ಬಣ್ಣದ ಕಾರು ಹಿಂಬಾಲಿಸುತ್ತಿದೆ ಎಂಬ ಸುಳಿವು ದೊರಕಿತು. ತಕ್ಷಣ ಚಿಕ್ಕಜಾಲ ಪೊಲೀಸರು ನೆಕ್ಸ್ಟ್ ಚಾಪ್ಟರ್ ಹೋಟೆಲ್ ಬಳಿ ವಾಹನಗಳನ್ನು ತಡೆದಾಗ, ಬುಲೋರೋ ಡ್ರೈವರ್ ಮತ್ತು ಒಬ್ಬ ಅಸಾಮಿ ಓಡಿಹೋದರು. ವಾಹನ ಪರಿಶೀಲನೆ ಮಾಡಿದಾಗ ಅದರಲ್ಲಿ ಅನೇಕ ಜಾನುವಾರುಗಳು ಹಿಂಸೆ ಅನುಭವಿಸುತ್ತಿದ್ದವು. ನಂತರ ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿ ವಾಹನ ಹಾಗೂ ಜಾನುವಾರುಗಳನ್ನು ಚಿಕ್ಕಜಾಲ ಪೊಲೀಸ್ ಠಾಣೆಗೆ ಕಳುಹಿಸಲಾಯಿತು. ಇದಾದ ಬಳಿಕ ಹೋಟೆಲ್ ಹಿಂಭಾಗದಲ್ಲಿ ಕೆಂಪು ಕಾರನ್ನು ತಡೆದಾಗ ಅದರಲ್ಲಿ ಇದ್ದ 4–5 ಜನ ಆರೋಪಿ…

ಮುಂದೆ ಓದಿ..
ಸುದ್ದಿ 

ವಾಟ್ಸಪ್ ವಂಚನೆ – ಸ್ನೇಹಿತನ ಫೋಟೋ ಬಳಸಿಕೊಂಡು 42,500 ರೂ. ಮೋಸ!

Taluknewsmedia.com

Taluknewsmedia.comವಾಟ್ಸಪ್ ವಂಚನೆ – ಸ್ನೇಹಿತನ ಫೋಟೋ ಬಳಸಿಕೊಂಡು 42,500 ರೂ. ಮೋಸ!ಬೆಂಗಳೂರು 20 ಆಗಸ್ಟ್ 2025ಬೆಂಗಳೂರು ಹೆಬ್ಬಾಳದ ಕೆಂಪಾಪುರದಲ್ಲಿ ಸ್ನೇಹಿತನ ಫೋಟೋ ಬೆಳೆಸಿ ವಾಟ್ಸಪ್‌ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ದೂರುದಾರರು ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ 15820100064397 ಹೊಂದಿದ್ದು, ದಿನಾಂಕ 30/06/2025 ರಂದು ಅಪರಿಚಿತ ವ್ಯಕ್ತಿಯೊಬ್ಬನು ಅವರ ಸ್ನೇಹಿತನ ಫೋಟೋವನ್ನು ತನ್ನ ವಾಟ್ಸಪ್ ಡಿ.ಪಿ.ಯಾಗಿ ಇಟ್ಟುಕೊಂಡು ಮೊಬೈಲ್ ಸಂಖ್ಯೆ 9389659802ರಿಂದ ಸಂದೇಶ ಕಳುಹಿಸಿದ್ದಾನೆ. ಆ ಸಂದೇಶದಲ್ಲಿ ತುರ್ತು ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದರಿಂದ, ದೂರುದಾರರು ನಿಜವಾಗಿಯೂ ತಮ್ಮ ಸ್ನೇಹಿತನೇ ಎಂದು ಭಾವಿಸಿ, ಆ ವ್ಯಕ್ತಿಗೆ ಒಟ್ಟು ₹42,500 ಹಣವನ್ನು ವರ್ಗಾಯಿಸಿದ್ದಾರೆ. ನಂತರ ವಂಚನೆ ನಡೆದಿರುವುದು ಗೊತ್ತಾಗಿ, ಅವರು ಅಮೃತಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ಅಪರಿಚಿತ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಆರಂಭಿಸಿದ್ದಾರೆ.

ಮುಂದೆ ಓದಿ..